tag:blogger.com,1999:blog-9179446247045599442024-03-13T19:04:49.428-07:00ಬುಡಬುಡಿಕೆchelayyahttp://www.blogger.com/profile/07284069495860642375noreply@blogger.comBlogger53125tag:blogger.com,1999:blog-917944624704559944.post-29102143863930102022015-08-14T02:46:00.002-07:002015-08-14T02:46:58.665-07:00ಭಾರತ ರಮ್ ರಾಜ್ಯವಾಗಲಿ....<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-7POpPGINTi4/Vc247OSFXqI/AAAAAAAAAR0/ZjtTfGjb6IQ/s1600/anna.jpg" imageanchor="1" style="margin-left: 1em; margin-right: 1em;"><img border="0" height="222" src="http://4.bp.blogspot.com/-7POpPGINTi4/Vc247OSFXqI/AAAAAAAAAR0/ZjtTfGjb6IQ/s320/anna.jpg" width="320" /></a></div>
<b style="color: purple; font-size: x-large;">ಯುಪಿಎ ಸರಕಾರದ ಅವಧಿಯಲ್ಲಿ ಅಣ್ಣಾ ಹಝಾರೆ ಅವರ ಸತ್ಯಾಗ್ರಹ ತಾರಕಕ್ಕೇರಿದೆ ಸಂದರ್ಭ. ಇದೇ ಸಮಯದಲ್ಲಿ ಅವರ ಗಾಂಧಿವಾದದ ಸತ್ಯಾಸತ್ಯತೆಯೂ ಚರ್ಚೆಗೆ ಒಳಗಾಗಿತ್ತು. ಕುಡುಕರನ್ನು ಮರಕ್ಕೆ ಕಟ್ಟಿ ಥಳಿಸ ಬೇಕು ಎನ್ನುವ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಗಾಯಿತು. ಈ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ನವೆಂಬರ್ -27-2011ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>‘‘ಕುಡುಕರನ್ನು ಮರಕ್ಕೆ ಕಟ್ಟಿ ಥಳಿಸಬೇಕು...ನನ್ನ ದೇಶವಾಗಿರುವ ರಾಲೆಗಾಂವ್ನಲ್ಲಿ ನಾನು ಹಾಗೆಯೇ ಮಾಡುವುದು’’ ಅಹಿಂಸಾವಾದಿ, ಗಾಂಧಿವಾದಿ ಅಣ್ಣಾ ಹಝಾರೆಯವರು ಹೀಗೊಂದು ಹೇಳಿಕೆ ನೀಡಿದ್ದೇ, ಅವರ ಸುತ್ತಮುತ್ತ ಹಗಲು ರಾತ್ರಿ ಓಡಾಡುತ್ತಿದ್ದ ಪತ್ರಕರ್ತರೆಲ್ಲ ಓಡ ತೊಡಗಿದರು. ಯಾಕೆಂದರೆ ಅದಾಗಲೇ ಸಂಜೆಯಾಗು ತ್ತಿದ್ದಂತೆಯೇ, ಬಾರ್ಗೆ ಹೋಗಿ ಒಂದೊಂದು ಪೆಗ್ ಏರಿಸಿ ಬಂದಿದ್ದರು. ‘ಅರೇ, ಹಗಲು ರಾತ್ರಿ ಅವರು ಉಪವಾಸ ಕೂತಾಗ ನಾವೆಲ್ಲ, ಗುಂಡು ಹಾಕಿ ಅವರ ಸುತ್ತಮುತ್ತ ಓಡಾಡಿ ವರದಿ ಮಾಡಿದ್ದರೆ, ಈಗ ನಮ್ಮ ವಿರುದ್ಧವೇ ಕಾನೂನು ತರಲು ಹೊರಟಿದ್ದಾರಲ್ಲ....ಇದು ಪತ್ರಿಕಾ ಸ್ವಾತಂತ್ರದ ಮೇಲೆ ನಡೆಸುವ ಹಲ್ಲೆ’ ಎಂದು ಪತ್ರಕರ್ತರು ಚೀರಾಡತೊಡಗಿದರು.</b></span><br />
<span style="color: blue; font-size: large;"><b>ಅಂದು ಸಂಜೆಯೇ ದಿಲ್ಲಿಯ ಕುಖ್ಯಾತ ಬಾರ್ನಲ್ಲಿ ಸಭೆ ಸೇರಿದ ಪತ್ರಕರ್ತರು ‘‘ಹೆಂಡ ಮತ್ತು ಶಾಯಿ ಒಂದೇ. ಅದರ ಮೇಲೆ ನಡೆಯುವ ಹಲ್ಲೆ, ಪತ್ರಕರ್ತರ ಸ್ವಾತಂತ್ರದ ಮೇಲೆ ನಡೆಯುವ ಹಲ್ಲೆ. ಆದುದರಿಂದ ಅಣ್ಣಾ ಹಝಾರೆಯವರು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು’’ ಎಂದು ಗುಟ್ಟಾಗಿ ನಿರ್ಣಯವನ್ನು ಮಾಡಿ, ಅದನ್ನು ಆರೆಸ್ಸೆಸ್ನ ಸಂಚಾಲಕರಿಗೆ ತಲುಪಿಸಿ ಹಲ್ಲು ಕಿರಿದರು.</b></span><br />
<span style="color: blue; font-size: large;"><b>ಜನಲೋಕಪಾಲದಲ್ಲಿ ಮಠಗಳನ್ನು ಹೊರಗಿಟ್ಟಂತೆ, ಕುಡುಕರಿಗೆ ಥಳಿಸುವ ವಿಷಯದಲ್ಲಿ ಪತ್ರಕರ್ತರನ್ನು ಹೊರಗಿಟ್ಟರೂ ಸಾಕು ಎಂದು ಆರೆಸ್ಸೆಸ್ ಮುಖಂಡರಲ್ಲಿ ಅಲವತ್ತುಕೊಳ್ಳ ತೊಡಗಿದರು. ತಮ್ಮ ಚೆಡ್ಡಿ ಸರಿಪಡಿಸಿಕೊಂಡ ಆರೆಸ್ಸೆಸ್ ಸಂಚಾಲಕರು ‘ಈ ಬಗ್ಗೆ ಅಣ್ಣಾ ಹಝಾರೆಗೆ ಮನವರಿಕೆ ಮಾಡಲಾಗುವುದು. ಪತ್ರಕರ್ತರಿಗೆ ಕುಡಿಯುವದಕ್ಕಾಗಿ ವಿಶೇಷ ಐಡೆಂಟಿಟಿ ಕಾರ್ಡ್ನ್ನು ಅಣ್ಣಾಹಝಾರೆಯವರ ಸಹಿ ಯೊಂದಿಗೆ ನೀಡಲಾಗುವುದು... ಥಳಿಸುವಾಗ ಈ ಕಾರ್ಡ್ ತೋರಿಸಿದರೆ ಅವರು ನಿಮ್ಮನ್ನು ಬಿಟ್ಟು ಬಿಡುತ್ತಾರೆ’’ ಎಂದರು.</b></span><br />
<span style="color: blue; font-size: large;"><b>ಆರೆಸ್ಸೆಸ್ ಸಂಚಾಲಕರಿಗೆ ಪತ್ರಿಕಾಸ್ವಾತಂತ್ರದ ಕುರಿತಂತೆ ಇರುವ ಗೌರವವನ್ನು ಕಂಡು ಪತ್ರಕರ್ತರೆಲ್ಲ ಹಿರಿ ಹಿರಿ ಹಿಗ್ಗಿ, ಮತ್ತೆ ಬಾರ್ನಲ್ಲಿ ಸಭೆ ಸೇರಿ, ಪತ್ರಿಕಾ ಸ್ವಾತಂತ್ರವನ್ನು ಗುಂಡು, ತುಂಡಿನ ಜೊತೆಗೆ ಆಚರಿಸತೊಡಗಿದರು.</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ಇತ್ತ ದೇಶಾದ್ಯಂತ ಕುಡುಕರು ರಾಮ್ಲೀಲಾ ಮೈದಾನದಲ್ಲಿ ಒಂದಾದರು. ಕಿಂಗ್ಫಿಶರ್ ಅಮಲು ಇಳಿದ ಮಲ್ಯ, ಗಾಂಧಿವಾದದ ಟೋಪಿಯನ್ನು ತಲೆಗೇರಿಸಿಕೊಂಡು ಪ್ರವೇಶಿಸಿದರು. ಅವರೆಲ್ಲ ಅಣ್ಣಾ ಹಝಾರೆಯವರ ಗೂಂಡಾಗಿರಿಯ ವಿರುದ್ಧ ಅಹಿಂಸಾ ಸತ್ಯಾಗ್ರಹಕ್ಕೆ ಇಳಿದಿದ್ದರು. ಕರ್ನಾಟಕದಿಂದ ಮಲ್ಯ ಬಂದಿರುವುದರಿಂದ ಅವರನ್ನು ಪತ್ರಕರ್ತ ಎಂಜಲು ಕಾಸಿಯೂ ಹಿಂಬಾಲಿಸಿದ್ದ.</b></span><br />
<span style="color: blue; font-size: large;"><b>ನೋಡಿದರೆ ವಿವಿಧ ರಾಜ್ಯಗಳ ಅಬಕಾರಿ ಸಚಿವರುಗಳು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ರೇಣುಕಾಚಾರ್ಯರು ಹಲ್ಲುಗಿರಿದು ‘‘ಕಾಸಿಯವ್ರೇ...ಒಂದು ಫೋಟೋ ತೆಗೆದು ಕರ್ನಾಟಕದ ಎಲ್ಲ ಪತ್ರಿಕೆಗಳಿಗೆ ಕಲ್ಸಿ ಬಿಡಿ...’’ ಎಂದರು.</b></span><br />
<span style="color: blue; font-size: large;"><b>ಅಷ್ಟರಲ್ಲಿ ಮಲ್ಯರವರ ನೇತೃತ್ವದಲ್ಲಿ ರಘುಪತಿ ರಾಘವ ರಾಜ ರಮ್ ಎಂದು ಹಾಡು ಆರಂಭವಾಯಿತು. ಬಳಿಕ ಮಲ್ಯ ಅವರು ಎದ್ದು ನಿಂತರು. ಅವರ ಹಿಂದು ಮುಂದು, ಎಡ, ಬಲಗಳಲ್ಲಿ ಅಬಲೆಯರು, ಕಿರುಪ್ರಾಯದ ಮಾತೆಯರು ನಿಂತಿದ್ದರು. ಗಾಂಧೀಜಿಯಂತೆಯೇ ಅವರ ಹೆಗಲನ್ನು ಆಧರಿಸಿ ನಿಂತ ಮಲ್ಯ ಮಾತನಾಡತೊಡಗಿದರು.</b></span><br />
<span style="color: blue; font-size: large;"><b>‘‘ಕುಡುಕರೆಲ್ಲರೂ ಮೂಲಭೂತವಾಗಿ ಗಾಂಧಿವಾದಿಗಳು. ಯಾಕೆಂದರೆ ಗಾಂಧೀಜಿಯವರು ತಾವು ಸಾಯುವಾಗ ಕೊನೆಯದಾಗಿ ‘ಹೇ ರಮ್’ ಎಂದರು. ಅದರರ್ಥ ಅವರು ಸಾಯುವಾಗ ನೀರು ಕೇಳಲಿಲ್ಲ, ಬದಲಿಗೆ ರಮ್ ಕೇಳಿದರು...ಆದರೆ ಕುಟಿಲ ರಾಜಕಾರಣಿಗಳು ರಮ್ ಶಬ್ದವನ್ನು ರಾಮ್ ಎಂದು ಅಪಭ್ರಂಶಗೊಳಿಸಿ ಕೋಟ್ಯಂತರ ಗಾಂಧಿವಾದಿ ಕುಡುಕರಿಗೆ ಅನ್ಯಾಯ ಮಾಡಿದ್ದಾರೆ....</b></span><br />
<span style="color: blue; font-size: large;"><b>ಇಷ್ಟೇ ಅಲ್ಲ, ಪ್ರತಿದಿನ ಸಂಜೆ ಅವರು ರಮ್ನ ಆರಾಧಕರಾಗಿದ್ದರು. ರಘುಪತಿ ರಾಘವ ರಾಜಾ ರಮ್ ಎಂದು ಹಾಡುತ್ತಿದ್ದರು. ಆದುದರಿಂದ ನಿಜವಾದ ಗಾಂಧಿವಾದಿಗಳು ನಾವು. ಅಣ್ಣಾ ಹಜಾರೆ ಕಪಟ ಗಾಂಧೀವಾದಿಗಳು...’’</b></span><br />
<span style="color: blue; font-size: large;"><b>ಎಲ್ಲ ಕುಡುಕರೂ ಜೋರಾಗಿ ಚಪ್ಪಾಳೆ ತಟ್ಟಿದರು. ರಾಮ್ಲೀಲಾ ಮೈದಾನದಲ್ಲಿ ‘‘ಹೇ ರಮ್’’ ಘೋಷ ಮುಗಿಲು ಮುಟ್ಟಿತು.</b></span><br />
<span style="color: blue; font-size: large;"><b>‘‘ನಾವಿಂದು ಸತ್ಯಾಗ್ರಹಕ್ಕೆ ಕುಳಿತಿರುವ ಈ ಮೈದಾನದ ಹೆಸರು ಕೂಡ ರಮ್ಲೀಲಾ ಎಂದಾಗಿದೆ. ರಮ್ಲೀಲೆಯ ಕುರಿತಂತೆ ನಮಗೆ ತಿಳಿದಿರುವಷ್ಟು ಇನ್ಯಾರಿಗೂ ತಿಳಿದಿಲ್ಲ...ಈ ದೇಶವನ್ನು ರಮ್ರಾಜ್ಯವನ್ನಾಗಿ ಮಾಡಲು ಗಾಂಧೀಜಿ ಕನಸು ಕಂಡಿದ್ದರು.</b></span><br />
<span style="color: blue; font-size: large;"><b>ಆದರೆ ಇಂದು ಅಣ್ಣಾ ಹಝಾರೆಯವರು ಕುಡುಕರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಬೇಕು ಎಂದು ಹೇಳುವ ಮೂಲಕ ಗಾಂಧೀಜಿಯ ರಮ್ರಾಜ್ಯಕ್ಕೆ ಕಲ್ಲು ಹಾಕಿದ್ದಾರೆ....ಆದುದರಿಂದ ಗಾಂಧೀ ವಿರೋಧಿ, ಉಗ್ರವಾದಿ ಅಣ್ಣಾ ಹಝಾರೆಯನ್ನು ಬಂಧಿಸಬೇಕು. ಕುಡುಕರಿಗೆ ರಕ್ಷಣೆ ನೀಡಬೇಕು. ಕುಡಿಯಲು ಸಬ್ಸಿಡಿಯಲ್ಲಿ ಸಾಲ ನೀಡಬೇಕು....ಅದಕ್ಕಾಗಿ ಇಂದಿನಿಂದ ನಾವು ಕೇವಲ ಮದ್ಯ ಕುಡಿದು, ಆಮರಣಾಂತ ಉಪವಾಸ ಮಾಡಬೇಕೆಂದು ತೀರ್ಮಾನಿಸಿದ್ದೇವೆ...ನಾಡಿನ ಎಲ್ಲ ಸಿನೆಮಾ ನಟರು ಇದಕ್ಕೆ ಬೆಂಬಲ ನೀಡಿದ್ದಾರೆ...’’</b></span><br />
<span style="color: blue; font-size: large;"><b>ಮತ್ತೆ ರಮ್ಲೀಲಾದಲ್ಲಿ ‘ಹೇ ರಮ್’ ಘೋಷಣೆ ಮುಗಿಲು ಮುಟ್ಟಿತು. ಎಂಜಲು ಕಾಸಿ ಆ ಘೋಷಣೆಗೆ ರೋಮಾಂಚನ ಗೊಂಡು ತೂರಾಡತೊಡಗಿದ. ಕಿಂಗ್ ಫಿಶರ್ ವಿಮಾನ ಹಾರಾಡದಿದ್ದರೂ, ತಮ್ಮ ಭಾಷಣದಲ್ಲಿ ಚೆನ್ನಾಗಿಯೇ ವಿಮಾನ ಹಾರಿಸುತ್ತಿದ್ದಾರೆ ಎಂದು ಖುಷಿ ಪಟ್ಟ.</b></span><br />
<span style="color: blue; font-size: large;"><b>ಸಭೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಜಿನ್ ಲೋಕಪಾನ ಸಮಿತಿಯೊಂದನ್ನು ರಚಿಸಲಾಯಿತು. ಮಲ್ಯ, ಸಲ್ಮಾನ್ ಖಾನ್, ರೇಣುಕಾಚಾರ್ಯ ಮೊದಲಾದ ಗುಂಡು ಪ್ರವೀಣರನ್ನೆಲ್ಲ ಸದಸ್ಯರನ್ನಾಗಿ ಸೇರಿಸಲಾಯಿತು. ತಕ್ಷಣ ಜನಲೋಕಪಾನ ಮಸೂದೆಯೊಂದನ್ನು ಜಾರಿಗೊಳಿಸಲು ಒತ್ತಾಯಪಡಿಸಲಾಯಿತು.</b></span><br />
<span style="color: blue; font-size: large;"><b>ಜನಲೋಕಪಾನ ಮಸೂದೆಯ ಮುಖ್ಯಾಂಶ ಕೆಳಗಿನಂತಿವೆ.</b></span><br />
<span style="color: blue; font-size: large;"><b>1. ಗಾಂಧಿ ವಿರೋಧಿ ಅಣ್ಣಾ ಹಜಾರೆ ಮತ್ತು ಅವರ ಬಳಗವನ್ನು ಬಂಧಿಸಬೇಕು.</b></span><br />
<span style="color: blue; font-size: large;"><b>2. ಅಣ್ಣಾ ಹಜಾರೆಯವರ ಆಡಳಿತದಲ್ಲಿ ನಡೆಯುತ್ತಿರುವ ರಾಳೇಗಾಂವ್ ಸಿದ್ದಿಯನ್ನು ಅವರ ನಿರಂಕುಶ ಆಡಳಿತದಿಂದ ಬಿಡುಗಡೆಗೊಳಿಸಿ, ಅಲ್ಲಿನ ಕುಡುಕರನ್ನು ರಕ್ಷಿಸಬೇಕು. ರಾಳೇಗಾಂವ್ ಭಾರತಕ್ಕೆ ಸೇರಿದ್ದು ಎಂದು ಘೋಷಿಸಿ, ಅಲ್ಲಿ ಪ್ರತಿ ವರ್ಷ ಗುಂಡು ಪಾರ್ಟಿಯ ಜೊತೆಗೆ ಸ್ವಾತಂತ್ರ ಆಚರಣೆ ಮಾಡಲು ಅವಕಾಶ ನೀಡಬೇಕು. ಗಾಂಧಿಯ ರಮ್ ರಾಜ್ಯ ಅಲ್ಲಿ ಸ್ಥಾಪನೆಯಾಗಬೇಕು.</b></span><br />
<span style="color: blue; font-size: large;"><b>3. ತಕ್ಷಣ ರಾಮ್ ಲೀಲಾ ಮೈದಾನವನ್ನು ರಮ್ ಲೀಲಾ ಮೈದಾನ ಎಂದು ಘೋಷಿಸಬೇಕು.</b></span><br />
<span style="color: blue; font-size: large;"><b>4. ಗಾಂಧಿ ಹೇಳಿದ್ದು ‘ಹೇ ರಮ್’ ಎಂದು ಇತಿಹಾಸವನ್ನು ತಿದ್ದುಪಡಿ ಮಾಡಬೇಕು.</b></span><br />
<span style="color: blue; font-size: large;"><b>5. ಕುಡುಕರಿಗೆ ಕುಡಿಯುವುದಕ್ಕೆ ಸಬ್ಸಿಡಿಯಲ್ಲಿ ಸಾಲ ನೀಡಬೇಕು. ವರ್ಷಕ್ಕೊಮ್ಮೆ ಕಿಂಗ್ ಫಿಶರ್ ವಿಮಾನದಲ್ಲಿ ಪುಕ್ಕಟೆ ಪ್ರಯಾಣ ಮಾಡುವ ವ್ಯವಸ್ಥೆ ಮಾಡಿ, ಮಲ್ಯರವರ ಕುಡುಕೋದ್ಯಮವನ್ನು ಮೇಲೆತ್ತಬೇಕು.</b></span><br />
<span style="color: blue; font-size: large;"><b>6. ಕುಡುಕರಿಗೆ ಎಲ್ಲ ರೀತಿಯಲ್ಲೂ ರಕ್ಷಣೆ ನೀಡಬೇಕು. ಪೊಲೀಸ್ ದೌರ್ಜನ್ಯದಿಂದ ಅವರನ್ನು ಕಾಪಾಡಬೇಕು. 7. ಕುಡುಕರ ಮೇಲೆ ಈವರೆಗೆ ನಡೆದ ದೌರ್ಜನ್ಯವನ್ನು ತನಿಖೆ ನಡೆಸಿ, ಒಂದು ವರದಿಯನ್ನು ತಯಾರಿಸಬೇಕು. ಅನ್ಯಾಯಕ್ಕೊಳಗಾದ ಕುಡುಕರಿಗೆ ಪರಿಹಾರವನ್ನು ನೀಡಬೇಕು. </b></span><br />
<span style="color: blue; font-size: large;"><b>8. ರೇಷನ್ ಅಂಗಡಿಯಲ್ಲಿ ತಿಂಗಳಿಗೊಮ್ಮೆ ಅಕ್ಕಿ, ಬೇಳೆಯ ಜೊತೆಗೆ ವಿಸ್ಕಿ, ರಮ್ ಇತ್ಯಾದಿಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ವಿಶೇಷ ಕಾರ್ಡೊಂದನ್ನು ವ್ಯವಸ್ಥೆ ಮಾಡಬೇಕು.</b></span><br />
<span style="color: blue; font-size: large;"><b>9. ಕುಡುಕರ ಮೇಲೆ ದಾಳಿ ನಡೆಸಿದವರನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಆರೋಪಿಗಳಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದು.</b></span><br />
<span style="color: blue; font-size: large;"><b>10. ಕುಡುಕರಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯ ಮೀಸಲಾತಿ ನೀಡಬೇಕು.</b></span><br />
<span style="color: blue; font-size: large;"><b>ರಾಮ್ಲೀಲಾ ಮೈದಾನದಲ್ಲಿ ಕುಡುಕರೆಲ್ಲ ಆಮರಣಾಂತ ಉಪವಾಸ ಕೂತದ್ದು ಗೊತ್ತಾದದ್ದೇ....ಪ್ರಧಾನಮಂತ್ರಿಗಳು ಓಡೋಡಿ ಬಂದರು. ತಕ್ಷಣ ಸಭೆ ಸೇರಿ ಜನ ಲೋಕಪಾನ ಮಸೂದೆಯನ್ನು ಜಾರಿಗೆ ತರಲು ಒಪ್ಪಲಾಯಿತು.</b></span><br />
<span style="color: blue; font-size: large;"><b>ಮಲ್ಯ ಸೇರಿದಂತೆ ಎಲ್ಲ ಗಾಂಧಿವಾದಿಗಳಿಗೆ ಪ್ರಧಾನಿಯವರೇ ಕೈಯಾರೆ ಬಿಯರ್ ಕುಡಿಸಿ, ಉಪವಾಸವನ್ನು ತೊರೆಯುವಂತೆ ಮಾಡಿದರು.</b></span><br />
<span style="color: purple; font-size: large;"><b>ನವೆಂಬರ್ -27-2011</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-46408469884086722952015-07-25T02:50:00.000-07:002015-07-25T02:50:01.434-07:00ಎಂಜಲು ಕಾಸಿಗೆ ಸಿಕ್ಕಿತು ರಾಜ್ಯೋತ್ಸವ ಪ್ರಶಸ್ತಿ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-R7IhB5GEO6A/VbNbnomtRPI/AAAAAAAAARk/qORTDx7_09k/s1600/rajya.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-R7IhB5GEO6A/VbNbnomtRPI/AAAAAAAAARk/qORTDx7_09k/s1600/rajya.jpg" /></a></div>
<b style="font-size: x-large;"><span style="color: purple;">ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ವ್ಯಾಪಕ ಹಸ್ತಕ್ಷೇಪ ನಡೆದ ಸಂದರ್ಭದಲ್ಲಿ ಬರೆದ ಬುಡಬುಡಿಕೆ. ವಾರ್ತಾಭಾರತಿ ದೈನಿಕದ ಅಕ್ಟೋಬರ್ -31-2010 ರ ಸಂಚಿಕೆಯಲ್ಲಿ ಪ್ರಕಟವಾಗಿದೆ . </span></b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕೊನೆಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಯಿತು. ಎಂಜಲು ಕಾಸಿ ಹಿರಿ ಹಿರಿ ಹಿಗ್ಗಿದ. ಯಾಕೆಂದರೆ ಈ ಬಾರಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಎಂಜಲು ಕಾಸಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಪತ್ರಕರ್ತನಾಗಿ ಎಂಜಲು ಕಾಸಿ ರಾಜಕಾರಣಿಗಳಿಗೆ ಸಲ್ಲಿಸಿದ ಸೇವೆ ಮತ್ತು ಜನರನ್ನು ರಂಜಿಸಿದ ರೀತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಉಳಿದಂತೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.</b></span><br />
<span style="color: purple; font-size: large;"><b>ಕೃಷಿ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರು:</b></span><br />
<span style="color: blue; font-size: large;"><b>ಎಚ್. ಡಿ. ಕುಮಾರಸ್ವಾಮಿ: ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಬಿತ್ತಿ, ಇಂದು ಅದರ ಫಲವನ್ನು ರಾಜ್ಯದ ಜನರು ಉಣ್ಣುವಂತೆ ಮಾಡಿದ ಅಗ್ರಮಾನ್ಯ ಕಷಿಕ ಮಣ್ಣಿನ ಮೊಮ್ಮಗ ಕುಮಾರಸ್ವಾಮಿಯವರಿಗೆ ಈ ಬಾರಿ ಕೃಷಿ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.</b></span><br />
<span style="color: blue; font-size: large;"><b>ಎಸ್. ಎಲ್. ಭೈರಪ್ಪ: ಸಾಹಿತ್ಯ ಕೃಷಿಯಲ್ಲಿ ದ್ವೇಷದ ಬೆಳೆಯನ್ನು ಬೆಳೆದು ಅದನ್ನು ಇಂದು ರಾಜ್ಯಾದ್ಯಂತ ಜನರಿಗೆ ಹಂಚಿರುವ ಸಾಧನೆಗಾಗಿ ಕಷಿ ಕ್ಷೇತ್ರದಲ್ಲಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.</b></span><br />
<span style="color: blue; font-size: large;"><b>ಬಂಗಾರಪ್ಪ: ರಾಜಕೀಯ ಕೃಷಿ ಕ್ಷೇತ್ರದಲ್ಲಿ ವಿವಿಧ ಪಕ್ಷಗಳನ್ನು ಪ್ರಾಯೋಗಿಕವಾಗಿ ಬೆಳೆದು, ಅದರ ಫಲವನ್ನು ತಾನೊಬ್ಬನೇ ಉಂಡು, ಇಂದು ನಿವತ್ತರಾಗಿರುವ ಮಾಜಿ ರೈತ ಬಂಗಾರಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.</b></span><br />
<span style="color: blue; font-size: large;"><b>ಬಿಬಿಎಂಪಿಯ ಅಧಿಕಾರಿಗಳಿಗೆ: ರಾಜ್ಯಾದಾದ್ಯಂತ ಕೊಳೆಗೇರಿ ಗಟಾರಗಳಲ್ಲಿ, ಕುಡಿಯುವ ನೀರುಗಳಲ್ಲಿ ವಿವಿಧ ರೀತಿಯಲ್ಲಿ ಸೊಳ್ಳೆಗಳನ್ನು, ಕ್ರಿಮಿಗಳನ್ನು ಸಾಕಿ ಪೋಷಿಸಿ, ಅದನ್ನು ಮನೆ ಮನೆಗೆ ಹಂಚಿದ್ದಕ್ಕಾಗಿ.</b></span><br />
<span style="color: blue; font-size: large;"><b>ರಾಜ್ಯದ ಎಲ್ಲಾ ಬ್ಯಾಂಕ್ ಮತ್ತು ಫೈನಾನ್ಸ್ಗಳಿಗೆ: ರೈತರ ಆತ್ಮಹತ್ಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಕ್ಕಾಗಿ.</b></span><br />
<span style="color: blue; font-size: large;"><b>ರೇಣುಕಾಚಾರ್ಯ: ಭಿನ್ನಮತಗಳನ್ನು ಬಿತ್ತಿ, ಅದನ್ನು ರಾಜ್ಯದ ಎಲ್ಲಾ ಪಕ್ಷಗಳಿಗೆ ಹಂಚಿದ ಸಾಧನೆಗಾಗಿ.</b></span><br />
<span style="color: purple; font-size: large;"><b>ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶಸ್ತಿ:</b></span><br />
<span style="color: blue; font-size: large;"><b>ಜನಾರ್ದನ ರೆಡ್ಡಿ: ಹತ್ತು ಹಲವು ಆಪರೇಷನ್ಗಳನ್ನು ಮಾಡಿ ಬಿಜೆಪಿಯೆಂಬ ರೋಗಿಯನ್ನು ಉಳಿಸಿದ ಸಾಧನೆಗಾಗಿ.</b></span><br />
<span style="color: purple; font-size: large;"><b>ಸಮಾಜ ಸೇವೆ:</b></span><br />
<span style="color: blue; font-size: large;"><b>ಆರ್. ವಿ. ದೇಶಪಾಂಡೆ: ರಾಜ್ಯಕ್ಕೆ ಹೆಣಭಾರವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ ಸಾಧನೆಗಾಗಿ.</b></span><br />
<span style="color: blue; font-size: large;"><b>ಮಾಜಿ ಸಚಿವ ಸುಧಾಕರ್: ಭಿಕ್ಷುಕರ ಪುನರ್ವಸತಿ ಶಿಬಿರದಲ್ಲಿ ಮಾರಕ ರೋಗ ಹಬ್ಬಿಸಿ ಅಲ್ಲಿನ ಭಿಕ್ಷುಕರನ್ನು ಸಾಮೂಹಿಕವಾಗಿ ಸಾಯಿಸಿ, ರಾಜ್ಯದಲ್ಲಿ ಭಿಕ್ಷುಕರ ಕಾಟವನ್ನು ಕಮ್ಮಿ ಮಾಡಿದ್ದಕ್ಕಾಗಿ.</b></span><br />
<span style="color: blue; font-size: large;"><b>ಸಂಶೋಧಕ ಚಿದಾನಂದಮೂರ್ತಿ: ಹೊಸದಾಗಿ ಯಾವುದೇ ಸಂಶೋಧನೆ ಮಾಡದೇ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿದ್ದಕ್ಕಾಗಿ.</b></span><br />
<span style="color: blue; font-size: large;"><b>ಎಲ್ಲ ದಲಿತ ಸಂಘಟನೆಗಳಿಗೆ: ದಲಿತರ ಒಗ್ಗಟ್ಟನ್ನು ಮುರಿದು, ಅವರನ್ನು ಮತ್ತೆ ಮನುವಿನ ಬಾಯಿಗೆ ತಳ್ಳಿದ್ದಕ್ಕಾಗಿ. ಈ ಮೂಲಕ ದಲಿತರ ನಿವಾರಣೆಗೆ ಕೊಡುಗೆ ನೀಡಿದ್ದಕ್ಕಾಗಿ.</b></span><br />
<span style="color: purple; font-size: large;"><b>ಸಾಂಸ್ಕೃತಿಕ ಕ್ಷೇತ್ರ:</b></span><br />
<span style="color: blue; font-size: large;"><b>ಸಿ. ಎಂ. ಇಬ್ರಾಹೀಂ: ರಾಜಕೀಯದಲ್ಲಿ ಜೋಕರ್ ಪಾತ್ರವನ್ನು ನಿರ್ವಹಿಸಿ ಹಾಸ್ಯದ ಹೊನಲನ್ನು ಹರಿಸಿ, ಜನರನ್ನು ರಂಜಿಸಿದ್ದಕ್ಕಾಗಿ.</b></span><br />
<span style="color: blue; font-size: large;"><b>ಸಿದ್ದರಾಮಯ್ಯ ಮತ್ತು ಮೋಟಮ್ಮ: ಬಳ್ಳಾರಿ ಪಾದಯಾತ್ರೆಯ ಸಂದರ್ಭದಲ್ಲಿ ಅಮೋಘವಾಗಿ ನರ್ತಿಸಿದ್ದಕ್ಕಾಗಿ.</b></span><br />
<span style="color: blue; font-size: large;"><b>ಪ್ರಮೋದ್ ಮುತಾಲಿಕ್: ದರೋಡೆ, ಹಲ್ಲೆ, ಕೊಲೆ ಇತ್ಯಾದಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು, ಅದಕ್ಕಾಗಿ ಹಗಲು ರಾತ್ರಿ ದುಡಿದದ್ದಕ್ಕಾಗಿ. ಹಾಗೂ ಮುಖಕ್ಕೆ ಮಸಿ ಬಳಿಸಿಕೊಂಡದ್ದಕ್ಕಾಗಿ.</b></span><br />
<span style="color: purple; font-size: large;"><b>ನೀರಾವರಿ ಕ್ಷೇತ್ರ:</b></span><br />
<span style="color: blue; font-size: large;"><b>ಮುಖ್ಯಮಂತ್ರಿ ಯಡಿಯೂರಪ್ಪ: ಸದಾ ಅಳುತ್ತಾ ರಾಜ್ಯದ ಹಳ್ಳ ಕೊಳ್ಳಗಳನ್ನು ತುಂಬಿಸಿದ್ದಕ್ಕಾಗಿ.</b></span><br />
<span style="color: blue; font-size: large;"><b>ಎಲ್ಲ ಟಿ. ವಿ. ಧಾರಾವಾಹಿಗಳಿಗೆ: ಸ್ತ್ರೀ ಪ್ರಧಾನ ಧಾರಾವಾಹಿಗಳನ್ನು ಮಾಡಿ, ಎಲ್ಲ ಮಹಿಳೆಯರ ಕಣ್ಣಲ್ಲಿ ಸದಾ ನೀರು ತುಂಬಿ ತುಳುಕುವಂತೆ ಮಾಡಿದುದಕ್ಕಾಗಿ. ರಾಜ್ಯದ ನೀರಿನ ಬರವನ್ನು ಕಡಿಮೆ ಮಾಡಿದುದಕ್ಕಾಗಿ.</b></span><br />
<span style="color: purple; font-size: large;"><b>ಸಾಹಿತ್ಯಕ್ಷೇತ್ರ:</b></span><br />
<span style="color: blue; font-size: large;"><b>ವೀರಪ್ಪ ಮೊಯ್ಲಿ: ಇತ್ತೀಚೆಗೆ ಯಾವುದೇ ಕಾದಂಬರಿಗಳನ್ನು ಬರೆಯದೇ ದಿಲ್ಲಿ ರಾಜಕೀಯದಲ್ಲಿ ಮಗ್ನರಾಗಿರುವುದಕ್ಕಾಗಿ.</b></span><br />
<span style="color: purple; font-size: large;"><b>ವಿಜ್ಞಾನ ಕ್ಷೇತ್ರ:</b></span><br />
<span style="color: blue; font-size: large;"><b>ಜೋತಿಷ್ಯ, ಪುನರ್ಜನ್ಮ, ಭೂತ, ಪಿಶಾಚಿ ಮೊದಲಾದ ವೈಜ್ಞಾನಿಕ ಸಂಗತಿಗಳನ್ನು ಪಸರಿಸುತ್ತಿರುವುದಕ್ಕಾಗಿ ಎಲ್ಲ ಕನ್ನಡ ಚಾನೆಲ್ಗಳಿಗೆ.</b></span><br />
<span style="color: blue; font-size: large;"><b>ಮಾಟ ಮಂತ್ರಗಳನ್ನು ಮಾಡಿ ಈ ರಾಜ್ಯದ ಕ್ಷೇಮವನ್ನು ಕಾಪಾಡಿದ ಎಲ್ಲ ಮಂತ್ರವಾದಿಗಳಿಗೆ.</b></span><br />
<span style="color: purple; font-size: large;"><b>ರಾಜಕೀಯ ಕ್ಷೇತ್ರ:</b></span><br />
<span style="color: blue; font-size: large;"><b>ಕಟ್ಟಾ ಸುಬ್ರಹ್ಮಣ್ಯ ನಾಯ್ಡು: ಹಲವು ಭ್ರಷ್ಟಾಚಾರಗಳನ್ನು ಮಾಡಿಯೂ ಇನ್ನೂ ಸಚಿವ ಸಂಪುಟದಲ್ಲಿ ಉಳಿದು ರಾಜಕಾರಣಿಗಳಿಗೆ ಮಾದರಿಯಾದುದಕ್ಕೆ.</b></span><br />
<span style="color: blue; font-size: large;"><b>ಬಾಬಾಬುಡಾನ್ಗಿರಿಯ ಸೂಫಿ ಹಾಗೂ ದತ್ತ್ತಾತ್ರೇಯರಿಗೆ: ರಾಜಕೀಯದಲ್ಲಿ ಕೆಲವು ರಾಜಕಾರಣಿಗಳಿಗೆ ರಾಜಕೀಯ ಭವಿಷ್ಯವನ್ನು ರೂಪಿಸಿದ್ದಕ್ಕಾಗಿ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕಾರ್ಯಕ್ರಮದ ನೇತತ್ವವನ್ನು ವಹಿಸಿ ಇನ್ನಷ್ಟು ರಾಜಕಾರಣಿಗಳ ಹುಟ್ಟಿಗೆ ಕಾರಣವಾಗಲಿರುವುದಕ್ಕಾಗಿ.</b></span><br />
<span style="color: purple; font-size: large;"><b>ಉದ್ಯಮ ಕ್ಷೇತ್ರ:</b></span><br />
<span style="color: blue; font-size: large;"><b>ಎಲ್ಲ ಶಾಸಕರಿಗೆ: ರಾಜಕೀಯ ಕ್ಷೇತ್ರದಲ್ಲಿ ಹಲವು ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಮಾಡಿ, ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದುದಕ್ಕೆ.</b></span><br />
<span style="color: purple; font-size: large;"><b>ಸಿನಿಮಾ ಕ್ಷೇತ್ರ:</b></span><br />
<span style="color: blue; font-size: large;"><b>ನಿರ್ದೇಶಕ ಸಾಯಿ ಪ್ರಕಾಶ್: ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕಾಗಿ.</b></span><br />
<span style="color: blue; font-size: large;"><b>ದೇವೇಗೌಡ: ಅತ್ಯುತ್ತಮವಾಗಿ ವಿವಿಧ ರಾಜಕೀಯ ಚಿತ್ರಗಳಲ್ಲಿ ನಟಿಸಿದ್ದಕ್ಕಾಗಿ. ಹಿರಿಯ ಪೋಷಕ ನಟ ಎಂಬ ಕಾರಣಕ್ಕಾಗಿ.</b></span><br />
<span style="color: blue; font-size: large;"><b>ಪ್ರೇಕ್ಷಕ ವರ್ಗಕ್ಕೆ: ಕಳಪೆ ಕನ್ನಡ ಚಿತ್ರಗಳನ್ನು ನೋಡದೇ ಇದ್ದುದಕ್ಕೆ ಹಾಗೂ ಪೋಷಿಸದೇ ಇದ್ದುದಕ್ಕೆ.</b></span><br />
<span style="color: blue; font-size: large;"><b>ರಾಘವೇಂದ್ರ ರಾಜಕುಮಾರ್: ಚಿತ್ರಗಳಲ್ಲಿ ನಟಿಸದೇ ಇದ್ದುದಕ್ಕೆ.</b></span><br />
<span style="color: purple; font-size: large;"><b>ಯಕ್ಷಗಾನ ಕ್ಷೇತ್ರ:</b></span><br />
<span style="color: blue; font-size: large;"><b>ಕುಂಬಳೆ ಸುಂದರರಾವ್: ಸುರತ್ಕಲ್ ಗಲಭೆಯಲ್ಲಿ ರಾಕ್ಷಸ ವೇಷವನ್ನು ಧರಿಸಿ, ತಮ್ಮ ಅಪಾರ ಕಲಾ ಪ್ರೌಢಿಮೆಯನ್ನು ಮೆರೆದುದಕ್ಕೆ. ಉಳಿದ ಮರಿ ರಾಕ್ಷಸ ವೇಷಧಾರಿಗಳಿಗೆ ಮಾರ್ಗದರ್ಶಿಯಾದುದಕ್ಕೆ.</b></span><br />
<span style="color: purple; font-size: large;"><b>ಅಕ್ಟೋಬರ್ -31-2010</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-44609881732961895152015-07-23T02:24:00.001-07:002015-07-23T02:24:26.627-07:00ಮಿಡಿ ಸಿಕ್ಸರ್ಗಳ ಉಪ್ಪಿನಕಾಯಿ!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://2.bp.blogspot.com/-KwmH83Gc4WI/VbCysehIkYI/AAAAAAAAARU/lh8aklvid2E/s1600/Sharad-Pawar.jpg" imageanchor="1" style="margin-left: 1em; margin-right: 1em;"><img border="0" height="213" src="http://2.bp.blogspot.com/-KwmH83Gc4WI/VbCysehIkYI/AAAAAAAAARU/lh8aklvid2E/s320/Sharad-Pawar.jpg" width="320" /></a></div>
<b style="color: purple; font-size: x-large;">ಯುಪಿಎ ಸರಕಾರ ದೇಶವನ್ನು ಆಳುತ್ತಿದ್ದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗ ಬರೆದ ಬುಡಬುಡಿಕೆ. ಜುಲೈ -11-2010 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗದ್ದೆಯಲ್ಲಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರು. ಪತ್ನಿ ಮನಮೋಹಿನಿ ತಂಬಿಗೆ ತುಂಬಾ ಕೋಕಾಕೋಲಾ ಪಾನೀಯ ಮತ್ತು ನೆಂಜಿಕೊಳ್ಳುವುದಕ್ಕೆ ಪಾಪ್ಕಾರ್ನ್ ತಂದು ಕೊಟ್ಟರು.</b></span><br />
<span style="color: blue; font-size: large;"><b>ಮನಮೋಹಿನಿ ವಯ್ಯರದಿಂದ ಕೇಳಿದಳು ‘‘ಈ ಸರ್ತಿ ಯಾವ ಬೆಳೆ ಹಾಕಿದ್ದೀರಿ....’’</b></span><br />
<span style="color: blue; font-size: large;"><b> ‘‘ರಾಗಿ, ಗೋದಿ, ಟೋಮೆಟೋ, ಆಲುಗಡ್ಡೇ ಬೆಳೆದು ಸಾಕಾಯ್ತು. ಅದಕ್ಕೆ ಕೆಳಗಿನ ಗದ್ದೆಯಲ್ಲಿ ಬ್ಯಾಟ್ಗಳನ್ನು ನೆಟ್ಟಿದ್ದೇನೆ. ಮೇಲಿನ ಗದ್ದೆಯ ತುಂಬಾ ರನ್ಗಳ ಬೀಜವನ್ನು ಬಿತ್ತಿದ್ದೇನೆ...ಈ ಬಾರಿ ಒಳ್ಳೆಯ ಬೆಳೆ ಬರಬಹುದು ಎನ್ನುವುದು. ನಿರೀಕ್ಷೆ...’’ ಶರದ್ ಪವಾರ್ ಟವೆಲ್ನಿಂದ ಮುಖ ಒರೆಸಿ ಕೊಳ್ಳುತ್ತಾ ನುಡಿದರು.</b></span><br />
<span style="color: blue; font-size: large;"><b>ಮನಮೋಹಿನಿ ಕೇಳಿದಳು ‘‘ಬೆಳೆ ಬೆಳೆಸುವುದಕ್ಕೆ ಗೊಬ್ಬರಕ್ಕೇನು ಮಾಡ್ತೀರಿ...’’</b></span><br />
<span style="color: blue; font-size: large;"><b>ಪವಾರ್ ನುಡಿದರು.‘‘ಈಗಾಗಲೇ ಪೆಪ್ಸಿ, ಕೋಲಾ ಕಂಪೆನಿಗಳೊಂದಿಗೆ ಮಾತನಾಡಿದ್ದೇನೆ. ಒಂದೇ ತಿಂಗಳಲ್ಲಿ ಒಳ್ಳೆಯ ಬ್ಯಾಟ್ಗಳ ಫಸಲುಗಳನ್ನು ನೀಡುವ ಹಾಗೆ ಉತ್ತಮ ಗೊಬ್ಬರಗಳನ್ನು ಅವರು ಒದಗಿಸುತ್ತಾರಂತೆ....’’</b></span><br />
<span style="color: blue; font-size: large;"><b>‘‘ಹೊಲ ಉಳುವುದಕ್ಕೆ ಎತ್ತುಗಳು ಬೇಕಲ್ಲ...ಏನು ಮಾಡುತ್ತೀರಿ...’’ ಮನಮೋಹಿನಿ ಕೇಳಿದಳು.</b></span><br />
<span style="color: blue; font-size: large;"><b>ಶರದ್ ಪವಾರ್ ಯಾವುದೇ ಆತಂಕವಿಲ್ಲದೆ ನುಡಿದರು ‘‘ಅದಕ್ಕೇನಾಗಬೇಕು. ಎತ್ತುಗಳ ಬದಲಿಗೆ ದೇಶದ ರೈತರನ್ನೇ ಹೂಡಿ ಗದ್ದೆ ಉತ್ತರೆ ಆಯಿತು. ಬೇಕಾದಷ್ಟು ರೈತರು ಇನ್ನೂ ಆತ್ಮಹತ್ಯೆ ಮಾಡದೇ ಉಳಿದಿದ್ದಾರೆ. ಅವರನ್ನು ನೊಗಕ್ಕೆ ಕಟ್ಟಿ ಚಾಟಿಯಿಂದ ಎರಡು ಬಾರಿಸಿದರೆ, ಸಂಜೆಯೊಳಗೆ ಇಡೀ ಗದ್ದೆಯನ್ನು ಅಚ್ಚುಕಟ್ಟಾಗಿ ಉತ್ತು ಕೊಡುತ್ತಾರೆ...’’ ತನ್ನ ಗಂಡನ ಜಾಣತನಕ್ಕೆ ಮನಮೋಹನಿಗೆ ಸಂತೋಷ ಉಕ್ಕಿ ಬಂದು ಜಾನಪದ ಗೀತೆಯನ್ನು ಹಾಡುತ್ತಾ... ರಾಗಿ ಬೀಸುವ ಕಲ್ಲಿಗೆ ಒಂದಿಷ್ಟು ರನ್ನುಗಳನ್ನು ಹಾಕಿ ಬೀಸತೊಡಗಿದಳು...</b></span><br />
<span style="color: blue; font-size: large;"><b>‘‘ಮುಂಜಾನೆ ಎದ್ದು ಯಾರ್ಯಾರ ನೆನೆಯಲಿ</b></span><br />
<span style="color: blue; font-size: large;"><b>ತೆಂಡೂಲ್ಕರ ನಿನ್ನ ನೆನೆದೇನಾ! ತೆಂಡೂಲ್ಕರಾ ನಿನ್ನ</b></span><br />
<span style="color: blue; font-size: large;"><b>ನೆನೆದಾನ ನನ್ನೆಜಮಾನ ಐಸಿಸಿ ಅಧ್ಯಕ್ಷ ಆದಾನ...’’</b></span><br />
<span style="color: blue; font-size: large;"><b>ಎನ್ನುತ್ತಾ ಒರಳು ಕಲ್ಲಿಗೆ ಒಂದಿಷ್ಟು ಸಿಕ್ಸರ್ಗಳನ್ನು, ಫೋರ್ಗಳನ್ನು ಹಾಕಿ ಒನಕೆಯಿಂದ ಕುಟ್ಟುತ್ತಾ ಹಾಡತೊಡಗಿದಳು...</b></span><br />
<span style="color: blue; font-size: large;"><b>‘‘ಇವನೇ ನೋಡು ಅನ್ನದಾತ</b></span><br />
<span style="color: blue; font-size: large;"><b>ಹೊಲದಿ ದುಡಿದೇ ದುಡಿವನು...</b></span><br />
<span style="color: blue; font-size: large;"><b>ಈಗ ಮಾತ್ರ ಆಲದ ಮರದಲ್ಲಿ ನೇಣು ಹಾಕಿ ಮಡಿವನು...’’ ಹೀಗೆ ಜಾನಪದ ಗೀತೆಯನ್ನು ಹಾಡುತ್ತಾ ಅಡುಗೆಗೆ ತಯಾರು ಮಾಡಿದಳು.</b></span><br />
<span style="color: blue; font-size: large;"><b>ಹಿತ್ತಲಿಗೆ ಹೋಗಿ ಬೆಳೆಸಿದ್ದ ಬಗೆ ಬಗೆಯ ತರಕಾರಿಗಳನ್ನು ನೋಡಿದಳು. ಹಸನಾಗಿ ಬೆಳೆದ ಒಂದೆರಡು ಬೌಂಡರಿಗಳನ್ನು ಕಿತ್ತು ಅದನ್ನು ಚೆನ್ನಾಗಿ ತೊಳೆದು ಅಡುಗೆಗೆ ಸಾಂಬಾರು ಮಾಡಳು ಹೊರಟಳು. ಗಂಡ ಗದ್ದೆಯಲ್ಲಿ ದುಡಿದು ಬಂದಿದ್ದಾನೆ. ಆತನಿಗೆ ಬಿಸಿ ಬಿಸಿ ಅನ್ನ, ಸಾಂಬಾರು ನೀಡಬೇಕಲ್ಲ. ಅದಕ್ಕಾಗಿ ಬೌಂಡರಿಯನ್ನು ಚೆನ್ನಾಗಿ ಹಚ್ಚಿ ಅದನ್ನು ಮಡಕೆಗೆ ಹಾಕಿದಳು. ಪಲ್ಯಕ್ಕೆ ಏನು ಮಾಡುವುದು? ಎಂದು ಯೋಚಿಸಿದಳು. ಆಗಷ್ಟೇ ಮಾರುಕಟ್ಟೆಯಿಂದ ಕೊಂಡು ತಂದಿದ್ದ ಒಂದಿಷ್ಟು ಸ್ಪಿನ್ನರ್ಗಳಿದ್ದವು. ಅವುಗಳನ್ನು ಹಚ್ಚಿ, ಪಲ್ಯ ಮಾಡಿ ಬಡಿಸುವುದು ಎಂದು ಮನಮೋಹಿನಿ ಯೋಚಿಸಿದಳು. ಅಂತೂ ತುಸು ಹೊತ್ತಲ್ಲೇ, ರನ್ನುಗಳಿಂದ ಮಾಡಿದ ಬಿಸಿ ಬಿಸಿ ಅನ್ನ ಸಿದ್ಧವಾಯಿತು. ಬೌಂಡರಿಗಳಿಂದ ಮಾಡಿದ ಸಾಂಬಾರ್ ಮತ್ತು ಸ್ಪಿನ್ನರ್ಗಳಿಂದ ಮಾಡಿದ ಪಲ್ಯದ ಘಮಘಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿ, ಶರದ್ ಪವಾರ್ ಊಟಕ್ಕೆ ಅಣಿಯಾದರು.</b></span><br />
<span style="color: blue; font-size: large;"><b>ಗಂಡ ಊಟಕ್ಕೆ ಕುಳಿತಾಗ ಪತ್ನಿ ಮನಮೋಹಿನಿ ಮೆಲ್ಲ ಮಾತಿಗೆಳೆದಳು ‘‘ಮನೆಯಲ್ಲಿ ರನ್ಗಳ ಸಂಗ್ರಹ ಮುಗಿಯುತ್ತಾ ಬಂದಿದೆ...ಪೇಟೆಯಲ್ಲಿ ಒಳ್ಳೆಯ ಕ್ವಾಲಿಟಿಯ ರನ್ಗಳಿದ್ದರೆ ಎರಡು ಮುಡಿ ತೆಗೆದುಕೊಂಡು ಬನ್ನಿ...’’</b></span><br />
<span style="color: blue; font-size: large;"><b> ಘಮಘಮಿಸುವ ರನ್ಗಳನ್ನು ಉಣ್ಣುತ್ತಾ ಪವಾರ್ ನುಡಿದರು ‘‘ನೋಡು...ಕೃಷಿ ಸಚಿವರ ಮನೆಯಲ್ಲೇ ಊಟಕ್ಕೆ ರನ್ಗಳಿಲ್ಲ ಎಂದರೆ ದೇಶ ನಕ್ಕೀತು. ಸಚಿನ್ ತೆಂಡೂಲ್ಕರ್ ಕೈಯಲ್ಲಿ ಹೇಳಿದ್ದೇನೆ....ಅವನು ಈಗಾಗಲೇ ಸಂಗ್ರಹಿಸಿಟ್ಟಿರುವ ರನ್ಗಳಿಂದ ಒಂದು ಹತ್ತು ಮುಡಿ ರನ್ಗಳನ್ನು ಕಳುಹಿಸುತ್ತಾನಂತೆ... ಹಾಗೆಯೇ ಪದಾರ್ಥಕ್ಕೆ, ಗೊಜ್ಜಿಗೆ ಒಂದಿಷ್ಟು ಸ್ಪಿನ್ನುಗಳನ್ನು, ಗೂಗ್ಲಿಗಳನ್ನು ಕಳುಹಿಸುವುದಕ್ಕೆ ಕುಂಬ್ಳೆ, ಪಠಾಣ್ಗಳ ಕೈಯಲ್ಲಿ ಹೇಳಿದ್ದೇನೆ...ಅವರು ಕಳುಹಿಸಬಹುದು....’’</b></span><br />
<span style="color: blue; font-size: large;"><b>ಅಷ್ಟರಲ್ಲಿ ತಟ್ಟನೆ ನೆನಪಾಗಿ ಮನಮೋಹಿನಿ ನುಡಿದಳು ‘‘ಎಲ್ಲಾದರೂ ಸಿಕ್ಕಿದರೆ ಮಿಡಿ ಸಿಕ್ಸರ್ಗಳು ಸಿಕ್ಕಿದರೆ ತನ್ನಿ...ಉಪ್ಪಿನಕಾಯಿ ಹಾಕುವುದಕ್ಕೆ ಆದೀತು...ರನ್ಗಳ ಗಂಜಿ ಮಾಡಿದರೆ ಅದನ್ನು ಮಿಡಿ ಸಿಕ್ಸರ್ಗಳ ಉಪ್ಪಿನಕಾಯಿಯ ಜೊತೆ ಉಣ್ಣುವುದಕ್ಕೆ ಭಾರೀ ಚೆನ್ನಾಗಿರುತ್ತದೆ...ಸಾಂಬಾರ್, ಪಲ್ಯ ಯಾವುದೂ ಬೇಕಾಗಿಲ್ಲ...ಈ ಉಪ್ಪಿನ ಕಾಯಿ ಇದ್ದರೆ...’’</b></span><br />
<span style="color: blue; font-size: large;"><b>ಮಿಡಿ ಸಿಕ್ಸರ್ಗಳ ಉಪ್ಪಿನಕಾಯಿ! ಶರದ್ ಪವಾರ್ ಅವರ ಬಾಯಿಯಲ್ಲಿ ನೀರೂರಿತು ‘‘ಸರಿ..ಸರಿ...ಹರ್ಬಜನ್ ಸಿಂಗ್ಗೆ ಹೇಳುತ್ತೇನೆ...ಅವನತ್ರ ಒಂದಿಷ್ಟು ಸಿಕ್ಸರ್ಗಳು ಸ್ಟಾಕಿದೆ ಅಂತ ಕೇಳಿದ್ದೇನೆ.... ಕಳುಹಿಸಬಹುದು...’’</b></span><br />
<span style="color: blue; font-size: large;"><b>ಮನಮೋಹಿನಿ, ಮನೆಯ ವಿಷಯ ಬಿಟ್ಟು ದೇಶದ ವಿಷಯ ಮಾತನಾಡತೊಡಗಿದಳು ‘‘ಹಗಳಿರುಳೂ ನೀವು ಗದ್ದೆಯಲ್ಲಿ ದುಡಿಯುತ್ತೀರಿ. ಮನೆಯ ಹಿತ್ತಲಿನ ಗದ್ದೆಯಲ್ಲಿ ಬ್ಯಾಟ್ಗಳ ನಾಟಿ ಚೆನ್ನಾಗಿ ಆಗಿದೆ. ರನ್ಗಳು ಈಗಾಗಲೇ ಮೊಳಕೆ ಬರುವುದಕ್ಕೆ ಆರಂಭಿಸಿವೆ. ಆದರೂ ನೀವು ಕೃಷಿ ಸಚಿವ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಊರವರು ಆಡಿಕೊಳ್ಳುತ್ತಿದ್ದಾರಲ್ಲ....’’</b></span><br />
<span style="color: blue; font-size: large;"><b>ಶರದ್ ಪವಾರ್ ಒಮ್ಮೆಲೆ ಸಿಟ್ಟಾದರು. ‘‘ಊರವರ ಮಾತಿಗೆ ನೀನೇಕೆ ತಲೆಕೆಡಿಸಿ ಕೊಳ್ಳುತ್ತಿ. ಅವರು ಸಾವಿರ ಆಡುತ್ತಾರೆ....’’ ಎಂದವರೇ ಊಟ ಬಿಟ್ಟು ಎದ್ದರು. ಮನ ಮೋಹಿನಿ ಆತಂಕದಿಂದ ‘‘ಅರೇ! ಊರವರ ಸಿಟ್ಟನ್ನು ಊಟದ ಮೇಲೆ ಯಾಕೆ ತೀರಿಸಿ ಕೊಳ್ಳುತ್ತೀರಿ...ಜನ ಆಡುತ್ತಾರೆ ಎಂದೆ ಅಷ್ಟೇ...’’</b></span><br />
<span style="color: blue; font-size: large;"><b>ಶರದ್ ಪವಾರ್ ಗಂಭೀರವಾಗಿ ಹೇಳಿದರು ‘‘ಈ ರೈತರು ಕೃಷಿ ಸಚಿವ ಹೇಳಿದ್ದನ್ನು ಯಾವತ್ತಾದರೂ ಸರಿಯಾಗಿ ಪಾಲಿಸಿದ್ದಾರ? ದೂರು ಮಾತ್ರ ನನಗೆ. ಭತ್ತ, ಗೋದಿ, ಟೊಮೆಟೋ ಬೆಳೆಯುವುದನ್ನು ನಿಲ್ಲಿಸಲಿ. ನನ್ನ ಹಾಗೆ ರನ್ಗಳನ್ನು ಉತ್ಪಾದಿಸಲಿ. ಗದ್ದೆಗಳಲ್ಲಿ ಬ್ಯಾಟ್ ಗಳನ್ನು ನೆಟ್ಟು ಫಸಲುಗಳನ್ನು ತೆಗೆಯಲಿ. ಅಂತಾರಾಷ್ಟ್ರೀಯ ಮಾರುಕಟ್ಟೆ ಇರುವ ಬೆಳೆಗಳು ಇವು. ಅದು ಬಿಟ್ಟು ಇನ್ನೂ ಓಬಿರಾಯನ ಕಾಲದ ಭತ್ತ, ಗೋದಿ ಬೆಳೆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿ ಯಾಗದೆ ಇನ್ನೇನಾಗುತ್ತದೆ? ಹಳ್ಳಿಗಳಲ್ಲಿ ರೈತರ ಕೈಯಲ್ಲಿ ಭೂಮಿ ನಿಷ್ಪ್ರಯೋಜಕವಾಗಿ ಕೊಳೆಯುತ್ತಾ ಇದೆ....ಇಂದು ನಮ್ಮ ಯುವಕರು ಕ್ರಿಕೆಟ್ ಆಡಬೇಕೆಂದರೆ ಒಂದು ಸರಿಯಾದ ಮೈದಾನ ಇಲ್ಲ. ಅವರಿಗೆ ಅನುಕೂಲ ವಾಗುವಂತೆ ಮೈದಾನಗಳನ್ನು ಒದಗಿಸಿಕೊಡುವ ಎಂದರೆ ಅದಕ್ಕೆ ಈ ರೈತರು ಭೂಮಿಯನ್ನು ಕೊಡಬೇಕಲ್ಲ...ದೇಶದ ಹಿತಕ್ಕಾಗಿ...ದೇಶದ ಕೃಷಿಯ ಹಿತಕ್ಕಾಗಿ ಈ ರೈತರ ಕೈಯಿಂದ ಭೂಮಿಯನ್ನು ನಾವು ಪೊಲೀಸರನ್ನು ಮುಂದಿಟ್ಟುಕೊಂಡು ಮನವೊಲಿಸಿ ತೆಗೆದು ಕೊಂಡರೆ ಅದಕ್ಕೆ ಈ ನಕ್ಸಲೈಟರು ಅಡ್ಡಿ ಮಾಡುತ್ತಾರೆ. ನಡು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಹೋಗಲಿ...ಈ ರೈತರ ಕೈಯಲ್ಲಿ ಇಷ್ಟು ಅಮೂಲ್ಯವಾದ ಮೈದಾನಗಳಿವೆಯಲ್ಲ... ತಾವಾದರೂ ಕ್ರಿಕೆಟ್ ಆಡುತ್ತಾರ... ಅದೂ ಇಲ್ಲ. ಹೀಗಾದರೆ ಈ ದೇಶದಲ್ಲಿ ರನ್ಗಳ ಉತ್ಪಾದನೆ ಹೆಚ್ಚುವುದು ಹೇಗೆ? ನಿನಗೆ ಗೊತ್ತಾ? ಈ ದೇಶದಲ್ಲಿ ಪ್ರತಿ ದಿನ ಐದು ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ...ನಮ್ಮ ರೈತರು ಸೋಮಾರಿಗಳ ಹಾಗೆ ಟೊಮೆಟೋ, ಭತ್ತ ಬೆಳೆಯುತ್ತಿರುವುದೇ ಇದಕ್ಕೆ ಕಾರಣ. ಅವರು ಈ ಭೂಮಿಯನ್ನೆಲ್ಲ ನಮಗೆ ಕೊಟ್ಟರೆ ನಾವಾದರೂ ರನ್ಗಳ ಬೆಳೆ ಬೆಳೆಯುತ್ತಿದ್ದೆವು. ಈ ದೇಶದ ಹಸಿವನ್ನು ನಿವಾರಿಸುತ್ತಿದ್ದೆವು....’’ ಎಂದು ಒಂದೇ ಸಮನೆ ಮಾತನಾಡತೊಡಗಿದರು</b></span><br />
<span style="color: blue; font-size: large;"><b>ಕೃಷಿಯ ಕುರಿತಂತೆ ತನ್ನ ಗಂಡನ ಕಾಳಜಿಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಮನಮೋಹಿನಿಯ ಎದೆ ತುಂಬಿ ಬಂತು. ಕೃಷಿಯ ಕುರಿತಂತೆ ಇಷ್ಟೆಲ್ಲ ತಲೆಕೆಡಿಸಿ ಕೊಂಡರೂ ತನ್ನ ಗಂಡನ ಕುರಿತಂತೆ ಬೇಡದ ಮಾತುಗಳನ್ನಾಡುತ್ತಾರಲ್ಲ ಊರಜನರು ಎಂದು ಸಿಟ್ಟು ಉಕ್ಕಿ ಬಂತು. ಆಕೆ ಗಂಡನನ್ನು ಸಮಾಧಾನಿಸಿದರು. ‘‘ಹೋಗಲಿ...ಊರ ಜನರ ಮಾತು ಕೇಳಿ ನೀವು ತಲೆ ಬಿಸಿ ಮಾಡುವುದು ಬೇಡ...ನಾನು ರಾತ್ರಿ ಅಡುಗೆಗೆ ಸಿದ್ಧತೆ ಮಾಡುತ್ತೇನೆ...ರಾತ್ರಿ ರನ್ಗಳ ಬಿರಿಯಾನಿ ಮಾಡೋಣ....’’ ಎಂದರು.</b></span><br />
<span style="color: purple; font-size: large;"><b> ಜುಲೈ -11-2010</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-89587543536251928022015-07-22T10:59:00.001-07:002015-07-22T10:59:36.084-07:00ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://3.bp.blogspot.com/-dDsvtFyyfE0/Va_Z8TVPyWI/AAAAAAAAARE/AtdiLe_37Is/s1600/Green-revolution.jpg" imageanchor="1" style="margin-left: 1em; margin-right: 1em;"><img border="0" height="216" src="http://3.bp.blogspot.com/-dDsvtFyyfE0/Va_Z8TVPyWI/AAAAAAAAARE/AtdiLe_37Is/s320/Green-revolution.jpg" width="320" /></a></div>
<b style="color: purple; font-size: x-large;">ಪ್ರಧಾನಿ ನರೇಂದ್ರ ಮೋದಿಯವರು "ಎರಡನೇ ಹಸಿರು ಕ್ರಾಂತಿ ತುರ್ತಾಗಿ ಆಗಬೇಕಾಗಿದೆ" ಎಂದು ಕರೆ ಕೊಟ್ಟ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ಜುಲೈ -05-2015ರ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>‘‘ಗ್ರೀನ್ ರೆವಲ್ಯೂಷನ್ ಚಾಹಿಯೇ...ಹಸಿರು ಕ್ರಾಂತಿ ನಡೆಯಲಿ...ತುರ್ತಾಗಿ ಹಸಿರುಕ್ರಾಂತಿ ನಡೆಯಲಿ...’’</b></span><br />
<span style="color: blue; font-size: large;"><b>ನರೇಂದ್ರ ಮೋದಿಯವರು ದಿಲ್ಲಿಯಲ್ಲಿ ಕರೆ ಕೊಟ್ಟಿದ್ದೇ ತ್ರಿಶೂಲ ಹಿಡಿದು ನಿಂತಿದ್ದ ಸಂಘಪರಿವಾರದ ಜನರ ಕಿವಿ ನಿಮಿರಿತು. ಅದ್ಯಾವುದೋ ರಕ್ತಕ್ರಾಂತಿಗೆ ಕರೆ ಕೊಡುತ್ತಿದ್ದಾರೆ ಎಂದು ಭಾವಿಸಿ ಅವರು ತಮ್ಮ ತಮ್ಮ ತ್ರಿಶೂಲಗಳನ್ನು ಹರಿತ ಮಾಡಿಕೊಳ್ಳತೊಡಗಿದರು. ಅದ್ಯಾವುದೋ ‘‘ಹಸಿರು..ಹಸಿರು...’’ ಎನ್ನುತ್ತಿರುವುದು ಮುಸ್ಲಿಮರನ್ನುದ್ದೇಶಿಸಿ ಹೇಳುತ್ತಿದ್ದಾರೆ...ಎಂದು ಅವರು ಭಾವಿಸಿದರು. ಹಸಿರು ಮುಸ್ಲಿಮರ ಬಣ್ಣವಾಗಿದ್ದು, ಅವರ ವಿರುದ್ಧ ಕ್ರಾಂತಿ ಮಾಡಿರಿ ಎಂದು ಕರೆ ನೀಡುತ್ತಿದ್ದಾರೆ ಎಂದು ಭಾವಿಸಿದರು. ಆದುದರಿಂದ ಅವರು ತಮ್ಮ ಪೆಟ್ರೋಲ್, ತ್ರಿಶೂಲ, ಕತ್ತಿ ಇತ್ಯಾದಿಗಳ ಜೊತೆಗೆ ಹಸಿರು ಕ್ರಾಂತಿ ಸಿದ್ಧತೆ ನಡೆಸತೊಡಗಿದರು.</b></span><br />
<span style="color: blue; font-size: large;"><b>ಅಷ್ಟರಲ್ಲಿ ಯಾರೋ ಹೇಳಿದರು ‘‘ಅದು ನಮ್ಮನ್ನುದ್ದೇಶಿಸಿ ಹೇಳಿದ್ದಲ್ಲವಂತೆ...ಅದು ಬೇರೆ ಕ್ರಾಂತಿಯಂತೆ....’’</b></span><br />
<span style="color: blue; font-size: large;"><b>‘‘ಬೇರೆ ಕ್ರಾಂತಿಯೆಂದರೆ’’...? ಇನ್ನೊಬ್ಬ ಕೇಸರಿ ಕ್ರಾಂತಿಕಾರಿ ಕೇಳಿದ.</b></span><br />
<span style="color: blue; font-size: large;"><b>‘‘ಅದು ಹೊಲದಲ್ಲಿ ಮಾಡುವ ಕ್ರಾಂತಿಯಂತೆ...ಹೊಲದಲ್ಲಿ ಅಕ್ಕಿ ಬೆಳೀಬೇಕಂತೆ...’’ ಮಗದೊಬ್ಬ ಉತ್ತರಿಸಿದ.</b></span><br />
<span style="color: blue; font-size: large;"><b>ಸ್ವಯಂ ಸೇವಕರಿಗೆ ತಲೆ ಧಿಂ ಅಂದಿತು ‘ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿ ಹೊಲದಲ್ಲಿ ಅಕ್ಕಿ ಬೆಳೆಯುವುದೇ? ಅದೂ ನಾವು? ಹಿಂದುತ್ವದ ಶೌರ್ಯ, ವೀರ ಪರಾಕ್ರಮಗಳಿಗೆ ಇದು ಅವಮಾನವಲ್ಲವೇ?’’’ ಒಬ್ಬ ಕೇಳಿದ.</b></span><br />
<span style="color: blue; font-size: large;"><b>‘ಮೊಘಲರ ವಿರುದ್ಧ ಹೋರಾಡಿದ ಶಿವಾಜಿ ಅಕ್ಕಿ ಬೆಳೆದು ಕ್ರಾಂತಿ ಮಾಡಿರುವುದಲ್ಲ...ಹೀಗಿರುವಾಗ ನಾವು ಅಕ್ಕಿ ಬೆಳೆದು ಕ್ರಾಂತಿ ಮಾಡಿದರೆ ಶಿವಾಜಿಗೆ ಅವಮಾನ ಮಾಡಿದಂತಾಗುವುದಿಲ್ಲವೇ?’</b></span><br />
<span style="color: blue; font-size: large;"><b>‘ಇಷ್ಟಕ್ಕೂ ಅಕ್ಕಿ ಬೆಳೆಯುವುದು ಹೇಗೆ?’ ಮಗದೊಬ್ಬ ಬಜರಂಗಿ ಕೇಳಿದ.</b></span><br />
<span style="color: blue; font-size: large;"><b> ‘‘ಅಕ್ಕಿಯನ್ನು ನಾವು ಯಾಕೆ ಬೆಳೆಯಬೇಕು? ಕೋಮುಗಲಭೆ ನಡೆದಾಗ ಅಂಗಡಿಗಳಿಗೆ ನುಗ್ಗಿ ದೋಚಿದರಾಯಿತಲ್ಲವೇ? ಅನಗತ್ಯವಾಗಿ ಇಡೀ ವರ್ಷ ಗದ್ದೆಯಲ್ಲಿ ಕೆಲಸ ಮಾಡಿ ಮೈ ಕೈ ಕೊಳಕು ಮಾಡಿಕೊಳ್ಳುವುದು ಸರಿಯೇ?’’ ಇನ್ನೊಬ್ಬ ಕುಖ್ಯಾತ ತಲೆಕೆಡಿಸಿಕೊಂಡ. ಈತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.</b></span><br />
<span style="color: blue; font-size: large;"><b>‘‘ಇಷ್ಟಕ್ಕೂ ಈಗ ಅಕ್ಕಿ ಯಾಕೆ ಬೇಕು? ದೇಶಕ್ಕೆ ಬೇಕಾಗಿರುವುದು ಅಣುಬಾಂಬು, ಸ್ಫೋಟಕ ತ್ರಿಶೂಲ, ರಾಮಮಂದಿರ ಮೊದಲಾದವುಗಳಲ್ಲವೆ? ಇವೆಲ್ಲ ಇಲ್ಲದೇ ಇದ್ದುದರಿಂದ ಅಲ್ಲವೇ ಈ ದೇಶ ಇಷ್ಟು ಹಿಂದುಳಿದಿರುವುದು. ಅಕ್ಕಿ ಬೆಳೆಯಿರಿ ಎಂದು ಹೇಳುವುದಕ್ಕೆ ಹಿಂದುತ್ವ ಸರಕಾರ ಅಸ್ತಿತ್ವಕ್ಕೆ ಬರಬೇಕಾಗಿತ್ತೇ?’’ ಇನ್ನೊಬ್ಬ ಮುಖಂಡ ಅರ್ಥವಾಗದೆ ತಲೆಕೆರೆದುಕೊಂಡ.</b></span><br />
<span style="color: blue; font-size: large;"><b>‘‘ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುವುದನ್ನೇ ಪರೋಕ್ಷವಾಗಿ ಹಸಿರುಕ್ರಾಂತಿ ಕರೆದಿರಬಹುದೇ?’’ ಇನ್ನೊಬ್ಬ ಹಿರಿಯ ಬಜರಂಗಿ ತಲೆ ಓಡಿಸಿದ.</b></span><br />
<span style="color: blue; font-size: large;"><b>ಎಲ್ಲರಿಗೂ ಹೌದು ಹೌದೆನಿಸಿತು. ಬಹುಶಃ ಬಹಿರಂಗವಾಗಿ ‘ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ’’ ಎಂದು ಕರೆ ಕೊಟ್ಟರೆ ವಿದೇಶಾಂಗ ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆ. ಆದುದರಿಂದ ನರೇಂದ್ರ ಮೋದಿಯವರು ಜಾಣತನದಿಂದ ‘ಹಸಿರು’ ಕ್ರಾಂತಿಗೆ ಕರೆಕೊಟ್ಟು, ಭಾರತೀಯ ಯೋಧರನ್ನು ಬಡಿದೆಬ್ಬಿಸಿದ್ದಾರೆ. ಶೀಘ್ರದಲ್ಲೇ ಪಾಕಿಸ್ತಾನಕ್ಕೆ ನರೇಂದ್ರ ಮೋದಿಯವರು ಪಾಠ ಕಲಿಸಲಿದ್ದಾರೆ ಎಂದು ಸ್ವಯಂ ಸೇವಕರಲ್ಲ ಹಿರಿಹಿರಿ ಹಿಗ್ಗಿದರು.</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ಇತ್ತ ಎಲ್ಲ ಆರೆಸ್ಸೆಸ್ ಕಚೇರಿಗಳಲ್ಲೂ ಸಭೆ ಕರೆಯಲಾಯಿತು. ಸಾಕ್ಷಾತ್ ನರೇಂದ್ರ ಮೋದಿಯವರೇ ‘ಹಸಿರು ಕ್ರಾಂತಿ’ಗೆ ಕರೆ ಕೊಟ್ಟಿದ್ದಾರೆ ಎಂದ ಮೇಲೆ ಕೃಷಿಗೆ ತಯಾರು ನಡೆಸಲೇಬೇಕಲ್ಲವೆ? ಎಲ್ಲರೂ ತಮ್ಮ ತಮ್ಮ ಪ್ಯಾಂಟು, ಕಚ್ಚೆಗಳನ್ನು ಕಳಚಿಟ್ಟು ಲಂಗೋಟಿ ಕಾಣುವಂತೆ ದೊಗಳೆ ಚೆಡ್ಡಿಗಳನ್ನು ಧರಿಸಿ ಕೃಷಿ ಕಾರ್ಯಕ್ಕಿಳಿದರು. ಈವರೆಗೆ ಶಾಖೆಯಲ್ಲಿ ಕಬಡ್ಡಿ ಆಡಿ ಮಾತ್ರ ಗೊತ್ತಿದ್ದ ಸರಸಂಘಚಾಲಕರು ಅಕ್ಕಿ ಕ್ರಾಂತಿಯ ಕುರಿತಂತೆ ತಮ್ಮ ಗಣವೇಷಧಾರಿಗಳಿಗೆ ತರಬೇತಿ ನೀಡತೊಡಗಿದರು.</b></span><br />
<span style="color: blue; font-size: large;"><b>ಮೊದಲು ಗದ್ದೆಯನ್ನು ಉಳಬೇಕು...ಎನ್ನುವುದರಿಂದ ಅವರು ಆರಂಭಿಸಿದರು.</b></span><br />
<span style="color: blue; font-size: large;"><b>‘‘ಗದ್ದೆಯನ್ನು ಯಾವುದರಿಂದ ಉಳುವುದು?’’ ಎನ್ನುವುದೇ ಅವರ ಸಮಸ್ಯೆಯಾಯಿತು.</b></span><br />
<span style="color: blue; font-size: large;"><b>‘‘ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!’’ ಎಂದು ಲಾಠಿಯಿಂದ ಸರಸಂಘಚಾಲಕರು ತಲೆ ಚಚ್ಚಿಕೊಂಡರು.</b></span><br />
<span style="color: blue; font-size: large;"><b>‘‘ಈ ದೇಶದಲ್ಲಿ ಗೋವುಗಳನ್ನು ಪೂಜಿಸುವುದಕ್ಕೋಸ್ಕರ ಸಾಕುತ್ತಿದ್ದರು. ಯಾವಾಗ ಗೋವುಗಳನ್ನು ಇಂತಹ ಕೆಲಸಕ್ಕೆ ಬಳಸಿ ಹಿಂಸೆ ನೀಡಲಾಯಿತೋ ಅಲ್ಲಿಂದ ಭಾರತ ಪತನಗೊಳ್ಳತೊಡಗಿತು...’’ ಎಂದು ಶಾಖೆಯ ಮುಖಂಡರು ಭಾಷಣ ಮಾಡತೊಡಗಿದರು.</b></span><br />
<span style="color: blue; font-size: large;"><b>‘‘ಆದರೆ ನಮ್ಮ ತಾತ ಗೋವುಗಳಿಂದಲೇ ಗದ್ದೆ ಉಳುತ್ತಿದ್ದರು’’ ಶಾಖೆಗೆ ಸೇರಿದ ಹೊಸ ಹುಡುಗನೊಬ್ಬ ಅನುಮಾನದಿಂದ ಪ್ರಶ್ನಿಸಿದ.</b></span><br />
<span style="color: blue; font-size: large;"><b>‘‘ಅದೆಲ್ಲ ಮ್ಲೇಚ್ಛರ ಸಂಚು. ಹಿಂದೆಲ್ಲ ದಲಿತರನ್ನು ಬಳಸಿಕೊಂಡು ಗದ್ದೆ ಉಳುತ್ತಿದ್ದೆವು. ಆಗ ಇಡೀ ಭಾರತ ಸುಖ, ಸಂತೋಷದಿಂದ ತುಂಬಿ ತುಳುಕುತ್ತಿದ್ದವು. ದಲಿತರು ಸಂತೋಷದಿಂದ ನೇಗಿಲ ನೊಗವನ್ನು ಹೊತ್ತುಕೊಂಡು ಗದ್ದೆಯನ್ನು ಉಳುತ್ತಿದ್ದರು. ಆಗ ಅವರಿಗೆ ನಿರುದ್ಯೋಗ ಸಮಸ್ಯೆಯೇ ಇರಲಿಲ್ಲ. ಆದರೆ ಯಾವಾಗ ಮ್ಲೇಚ್ಛರು, ಬ್ರಿಟಿಷರು ಭಾರತಕ್ಕೆ ಬಂದರೋ ಅವರು ಉಪಾಯವಾಗಿ ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿದರು. ಅವರ ಉದ್ಯೋಗವನ್ನು ಕಿತ್ತುಕೊಂಡರು. ದೇವತೆಯಾಗಿದ್ದ ಗೋವುಗಳನ್ನು ಗದ್ದೆಯಲ್ಲಿ ಉಳುವುದಕ್ಕೆ ಬಳಸಿದರು. ಇದರಿಂದ ಭಾರತದಲ್ಲಿ ಕೃಷಿ ಇಳುವರಿ ಕಡಿಮೆ ಬರತೊಡಗಿತು. ಇದೀಗ ಹಸಿರುಕ್ರಾಂತಿ ಮಾಡಬೇಕಾದ ಸ್ಥಿತಿ ಬಂದಿದೆ...’’ ಎಂದು ಸರ ಸಂಘಚಾಲಕರು ಗೊಳೋ ಎಂದು ಅಳ ತೊಡಗಿದರು.</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ನರೇಂದ್ರ ಮೋದಿಯವರು ‘‘ಹಸಿರು ಕ್ರಾಂತಿ...ತಕ್ಷಣ ಹಸಿರು ಕ್ರಾಂತಿ...’’ ಬೊಬ್ಬಿಟ್ಟದ್ದೇ ತಡ, ಸಾಕ್ಷಾತ್ ಶ್ರೀಮತಿ ಇಂದಿರಾಗಾಂಧಿಯೇ ಮೋದಿಯ ರೂಪದಲ್ಲಿ ಅವತಾರ ಎತ್ತಿದ್ದಾರೆ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಮನವರಿಕೆಯಾಯಿತು. ರಾಜಪಥದಲ್ಲಿ ಯೋಗ ಮಾಡಿ ಮರಳುತ್ತಿರುವ ಮೋದಿಯನ್ನು ಅದು ಹೇಗೋ ಅವನು ಭೇಟಿ ಮಾಡಿ, ಸಂದರ್ಶನ ಮಾಡ ತೊಡಗಿದ.</b></span><br />
<span style="color: blue; font-size: large;"><b>‘‘ಸಾರ್...ಹಸಿರು ಕ್ರಾಂತಿಗಾಗಿ ಏನೇನು ಯೋಜನೆ ಹಾಕಿಕೊಂಡಿದ್ದೀರಿ....?’’</b></span><br />
<span style="color: blue; font-size: large;"><b>‘‘ನೋಡಿ...ರೈತರೆಲ್ಲ ಬಹಳ ಸೋಮಾರಿಗಳಾಗಿದ್ದಾರೆ. ಈ ಕುರಿತಂತೆ ನಾಡಿನ ಚಿಂತಕರು, ಕವಿಗಳು, ಬೃಹತ್ ಕಾದಂಬರಿಕಾರರು, ಜ್ಞಾನಪೀಠಿಗಳು, ಜ್ಞಾನಪೀಠ ವಂಚಿತರು ಎಲ್ಲರೂ ಚಿಂತೆಗೊಳಗಾಗಿದ್ದಾರೆ. ರೈತರು ಸೋಮಾರಿಗಳಾಗಿರುವುದೇ ನಮ್ಮ ಕೃಷಿ ಹಿಂದುಳಿಯಲು ಕಾರಣ. ಆದ್ದರಿಂದ, ರೈತರನ್ನು ಬಡಿದೆಬ್ಬಿಸಲು ಬೇಕಾದ ಎಲ್ಲ ಕ್ರಮಗಳನ್ನು ನಾವು ಮಾಡಿದ್ದೇವೆ...ಈಗಾಗಲೇ ಇದಕ್ಕಾಗಿ ವಿಶೇಷ ಪೊಲೀಸರನ್ನು, ಮಿಲಿಟರಿಯನ್ನು ನೇಮಿಸಬೇಕೆಂದಿದ್ದೇವೆ...ಅವರು ಸೋಮಾರಿಗಳಾಗಿ ಉಂಡು ಮಲಗದಂತೆ ನೋಡಿಕೊಂಡು ಚೆನ್ನಾಗಿ ದುಡಿಸಿ, ದೇಶದಲ್ಲಿ ಹಸಿರು ಕ್ರಾಂತಿಯನ್ನುಂಟು ಮಾಡುವುದು ನಮ್ಮ ಗುರಿ...’’</b></span><br />
<span style="color: blue; font-size: large;"><b>‘‘ಇದಕ್ಕಾಗಿ ವಿಶೇಷ ಹಣವನ್ನು ಬಿಡುಗಡೆ ಮಾಡಿದ್ದೀರಾ ಸಾರ್?’’ ಕಾಸಿ ಆತಂಕದಿಂದ ಕೇಳಿದ.</b></span><br />
<span style="color: blue; font-size: large;"><b>‘‘ಮಾಡಿದ್ದೇವೆ. ಈಗಾಗಲೇ ದೇಶದಲ್ಲಿರುವ ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ಸಾವಯವ ಕೃಷಿ ಯೋಜನೆಗಾಗಿ ಹಲವಾರು ಕೋಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಅವರೆಲ್ಲ ಕೃಷಿಕರಿಗೆ ಸಾವಯವ ಗೊಬ್ಬರ ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ ಅನಿಲ್ ಅಂಬಾನಿ, ಅಧಾನಿಯಂತಹ ಶ್ರೇಷ್ಠಾತಿಶ್ರೇಷ್ಠ ಕೃಷಿಕರಿಗೆ ಬೇಕಾಗುವ ಭೂಮಿಯನ್ನು ಸೋಮಾರಿ ರೈತರಿಂದ ಕಿತ್ತು ಕೊಡುವ ಯೋಜನೆಯೂ ಇದೆ. ಸೋಮಾರಿ ರೈತರೇ ಭೂಮಿ ಬಿಟ್ಟು ತೊಲಗಿ, ದುಡ್ಡಿದ್ದವನೇ ಭೂಮಿಯ ಒಡೆಯ ಮೊದಲಾದ ಘೋಷಣೆ, ಯೋಜನೆಗಳನ್ನು ಶೀಘ್ರ ಜಾರಿಗೆ ತರಲಿದ್ದೇವೆ...’’ ಎನ್ನುತ್ತಿದ್ದಂತೆಯೇ ಪತ್ರಕರ್ತ ಕಾಸಿಯ ಕಣ್ಣ ಮುಂದೆ ಯಾಕೋ ಹಸಿರಿನ ಬದಲಿಗೆ ಕೆಂಪು ಬಣ್ಣ ಆವರಿಸಿಕೊಳ್ಳತೊಡಗಿತು. ‘‘ಈಗ ಬಂದೆ ಸಾರ್...’’ ಎಂದವನೇ ಅಲ್ಲಿಂದ ನೇರವಾಗಿ ಬೆಂಗಳೂರಿನ ಬಸ್ ಹತ್ತಿದ.</b></span><br />
<span style="color: purple; font-size: large;"><b>ಜುಲೈ -05-2015</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-1135418623671361562015-05-19T07:14:00.002-07:002015-05-19T07:14:41.418-07:00ಹಲೋ.....ನಾನು ಯಾರು...ನೀನೇ ಹೇಳು ನೋಡೋಣ? <div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://2.bp.blogspot.com/-tND5Xx-keKo/VVtFLZ1KaCI/AAAAAAAAAQs/aQ9pc92wD2A/s1600/gowda.jpg" imageanchor="1" style="margin-left: 1em; margin-right: 1em;"><img border="0" src="http://2.bp.blogspot.com/-tND5Xx-keKo/VVtFLZ1KaCI/AAAAAAAAAQs/aQ9pc92wD2A/s1600/gowda.jpg" /></a></div>
<b style="color: purple; font-size: x-large;">ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ಬರೆದ ಬುಡ ಬುಡಿಕೆ. ಸೆಪ್ಟೆಂಬರ್ 18, 2005 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>‘‘ಹಲೋ...’’</b></span><br />
<span style="color: blue; font-size: large;"><b>‘‘ಹ್ಯಾಂಗಿದ್ದೀಯ ದೇವು....’’</b></span><br />
<span style="color: blue; font-size: large;"><b>‘‘ಹಲೋ....ಯಾರು ಮಾತಾಡ್ತಾ ಇರೋದು?’’</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>‘‘ನೀನೇ ಹೇಳು ನೋಡೋಣ...ನಾನ್ಯಾರು?’’</b></span><br />
<span style="color: blue; font-size: large;"><b>‘‘ಹಿಂಗೆ ನಿದ್ದೆಯಿಂದ ನನ್ನನ್ನು ಎಬ್ಬಿಸಿ ತೊಂದರೆ ಕೊಡೋದು ನೋಡಿದ್ರೆ ನೀನು ಆ ಕುರುಬ ಸಿದ್ಧರಾಮಯ್ಯನೇ ಇರ್ಬೇಕು...’’</b></span><br />
<span style="color: blue; font-size: large;"><b>‘‘ಛೇಛೇ...ಸಿದ್ಧರಾಮಯ್ಯ ಫೋನ್ ಮಾಡೋದಾಗಿದ್ರೆ ಅಹಿಂದ ಯಾಕೆ ಹುಟ್ತಾ ಇತ್ತು? ಅವರು ಫೋನ್ ಮಾಡ್ತ ಇಲ್ಲ ಅಂತಾ ತಾನೆ ಅವರನ್ನು ನೀವು ಹೊರಗೆ ಹಾಕಿದ್ರಿ. ಸರಿಯಾಗಿ ಯೋಚ್ನೆ ಮಾಡು...ನೀನೇ ಹೇಳು...ನೀನು ನನ್ನನ್ನು ನೋಡಿದೀಯ. ಪ್ರೀತಿಯಿಂದ ಮಾತಾನಾಡಿದ್ದೀಯ...’’</b></span><br />
<span style="color: blue; font-size: large;"><b>‘‘ಪ್ರೀತಿಯಿಂದ ಮಾತನಾಡಿದ್ದೀನಾ. ಹಂಗಾದ್ರೆ ನೀನು ನನ್ನ ಮಗ ಕುಮಾರ ಸ್ವಾಮೀನೇ ಆಗಿರ್ಬೇಕು?’’</b></span><br />
<span style="color: blue; font-size: large;"><b>‘‘ಯಾವಾಗ ನೋಡಿದ್ರೂ ಮಕ್ಕಳ ಜಪ ಮಾಡ್ಕಂತೀಯಲ್ಲ. ಜಗತ್ತಿನಲ್ಲಿ ಯಾರಿಗೂ ಹುಟ್ಟದ ಮಕ್ಳು ನಿಂಗೆ ಹುಟ್ಟಿದ್ಯಾ... ಕೆಲವು ಕ್ಲೂ ಕೊಡ್ತೀನಿ ಓಕೇನಾ...?’’</b></span><br />
<span style="color: blue; font-size: large;"><b>‘‘ಕ್ಲೂ ಕೊಡ್ತೀಯ, ಹಂಗಾದ್ರೆ ನೀನು ಕರೋಡ್ಪತಿ ಅಮಿತಾಬಚ್ಚನ್ನೇ ಇರ್ಬೇಕು...ಕರೆಕ್ಟ್ ತಾನೆ...’’</b></span><br />
<span style="color: blue; font-size: large;"><b>‘‘ನಿಂಗೆ ಜನರಲ್ ನಾಲೆಜ್ಜು ಇಲ್ಲ ಅನ್ನೋದು ಲೋಕಕ್ಕೇ ಗೊತ್ತು. ಇನ್ನು ಅಮಿತಾಬ್ಗೆ ಗೊತ್ತಿರಾಕಿಲ್ವ?ಅವನ್ಯಾಕೆ ಫೋನ್ ಮಾಡ್ತಾನೆ ಬಿಡು’’</b></span><br />
<span style="color: blue; font-size: large;"><b>‘‘ಸರಿ ಬಿಡು ಹಂಗಾದ್ರೆ ಕ್ಲೂ ಕೊಡು...’’</b></span><br />
<span style="color: blue; font-size: large;"><b>‘‘ಚುನಾವಣೆ ಹೊತ್ತಲ್ಲಿ ನಾನು ನಿಂಗೆ ಬೇಕೇ ಬೇಕು...’’</b></span><br />
<span style="color: blue; font-size: large;"><b>‘‘ಹಂಗಾದ್ರೆ ಹಾಸನದ ಯಾವುದೋ ಗಲ್ಲಿಯ ಪುಂಡ ಪಟಾಲಾಂನ ಜನ ಇರ್ಬೇಕು. ಈಗ ಯಾಕೆ ಫೋನ್ ಮಾಡ್ತಿದ್ದೀಯಾ? ಚುನಾವಣೆ ಎನೌನ್ಸ್ ಆಗಿಲ್ವಲ್ಲ. ಹಂಗೇನಾದ್ರು ಎನೌನ್ಸ್ ಆದ್ರೆ ನಾನೇ ಹೇಳಿ ಕಳುಹಿಸ್ತೀನಿ, ಫೋನ್ ಮಡಗು...’’</b></span><br />
<span style="color: blue; font-size: large;"><b>‘‘ತಥ್ ನಿನ್ನ...ಮಾತೆತ್ತಿದ್ರೆ ನಿನ್ನ ರಾಜಕೀಯ ವರಸೆ ತೋರುಸ್ತೀಯಲ್ಲ... ಅವ್ನಲ್ರೀ ನಾನು...’’</b></span><br />
<span style="color: blue; font-size: large;"><b>‘‘ಅಲ್ವಾ? ಹಂಗಾರೆ... ಬೇರೇನಾದ್ರೂ ಕ್ಲೂ ಕೊಡು....’’</b></span><br />
<span style="color: blue; font-size: large;"><b>‘‘ನಾನಿಲ್ಲ ಅಂದ್ರೆ ನೀನಿಲ್ಲ...ಈಗ ಹೇಳು ನೋಡೋಣ ನಾನ್ಯಾರೂ...’’</b></span><br />
<span style="color: blue; font-size: large;"><b>‘‘ಈಗ ಗೊತ್ತಾಯ್ತು ಬಿಡಿ....ಮೊದಲೇ ಹೇಳೋಕಾಗಲ್ವೇನ್ರಿ....ನೀವು ಬೆಳ್ತಂಗಡಿಯಲ್ಲಿ ಕಳೆದ ಬಾರಿ ಚಂಡಿಕಾ ಹೋಮ ಮಾಡಿದ್ರಲ್ಲಾ...ಆ ಕಡೆ ಭಟ್ರಲ್ವಾ’’</b></span><br />
<span style="color: blue; font-size: large;"><b>‘‘ಅಲ್ಲರೀ....’’</b></span><br />
<span style="color: blue; font-size: large;"><b>‘‘ಹಂಗಾದ್ರೆ...ಕಳೆದ ತಿಂಗಳು ಕೊಲ್ಲೂರಿನಲ್ಲಿ ನನಗೆ ಒಂದು ತಾಯತ ಕೊಟ್ರಲ್ಲಾ ಆ ಜೋಯಿಸರಲ್ವಾ...’’</b></span><br />
<span style="color: blue; font-size: large;"><b>‘‘ಛೆ...ಛೆ..ಛೆ.. ಅಲ್ಲಾರೀ...’’</b></span><br />
<span style="color: blue; font-size: large;"><b>‘‘ಹಂಗಾದ್ರೆ ಸಾವಿರ ಕಂಟಕಗಳಿವೆ ಅಂತ ಕಳೆದವಾರ ನನ್ನ ಮನೇಲಿ ಹೋಮ ಮಾಡಿದ್ರಲ್ಲಾ... ಆ ಭಟ್ರಲ್ವಾ...’’</b></span><br />
<span style="color: blue; font-size: large;"><b>‘‘ಊ...ಹುಂ..ಅಲ್ವೇ ಅಲ್ಲಾ...’’</b></span><br />
<span style="color: blue; font-size: large;"><b>‘‘ಹಂಗಾದ್ರೆ ಕಳೆದ ಬಾರಿ ಸಿದ್ದರಾಮಯ್ಯರಿಗೆ ಮಾಟ ಮಾಡಿ ನನ್ನಿಂದ 1,201 ರೂಪಾಯಿ ಇಸ್ಕೊಂಡ್ರಲ್ಲಾ...ಆ ಮಂತ್ರವಾದಿಯಿರ್ಬೇಕು...’’</b></span><br />
<span style="color: blue; font-size: large;"><b>‘‘ತಥ್...</b></span><br />
<span style="color: blue; font-size: large;"><b>‘‘ಅದೂ ಅಲ್ಲಾಂತದ್ರೆ...ಹಾಂ ಗೊತ್ತಾಯ್ತು ಬಿಡಿ, ಮೂರು ದಿನದ ಹಿಂದೆ, ಸಿದ್ಧರಾಮಯ್ಯ, ಜಾಲಪ್ಪ ಸೇರಿ ನನ್ಗೂ ನನ್ನ ಮಕ್ಕಳಿಗೂ ಮಾಟ ಮಾಡಿದ್ದಾರೆ...ತೆಗೀತೀನಿ ಅಂತ ಬಂದ್ರಲ್ಲ ಅವ್ರೇ ತಾನೇ...’’</b></span><br />
<span style="color: blue; font-size: large;"><b>‘‘ನೀ ಇದೇ ತರ ಮಾತಾಡ್ತಾ ಇದ್ರೆ...ಫೋನ್ನಲ್ಲೇ ನಿನ್ಗೆ ಚಚ್ಚಿ ಬಿಡ್ತೀನಿ...’’</b></span><br />
<span style="color: blue; font-size: large;"><b>‘‘ಅಲ್ರೀ...ನೀವಿಲ್ಲದೇ ಇದ್ರೆ ನಾನಿಲ್ಲ ಅಂತ ಹೇಳ್ತೀರಿ...ಮತ್ತೆ ಜೋಯಿಸರ, ಭಟ್ಟರಾ, ಮಂತ್ರವಾದಿಗಳಾ, ಗಿಣಿಶಾಸ್ತ್ರದೋನಾ ಅಂತ ಕೇಳಿದ್ರೆ ಅಲ್ಲಾಂತ ಹೇಳ್ತೀರಿ... ಇದೇನ್ರಿ ಅನ್ಯಾಯಾ....ಒಳ್ಳೆ...ಆ ಅಹಿಂದದೋರು ಕಾಡಿದ ಹಾಗೆ ಕಾಡ್ತಿದ್ದೀರಲ್ರೀ...’’</b></span><br />
<span style="color: blue; font-size: large;"><b>‘‘ಇನ್ನೊಂದು ಕ್ಲೂ ಕೊಡ್ತೀನಿ. ನನ್ನ ಅಶೀರ್ವಾದದಿಂದ್ಲೆ ನಿನ್ನ ಸರಕಾರ ನಡೀತಾ ಇದೆ...’’</b></span><br />
<span style="color: blue; font-size: large;"><b>‘‘ಛೆ...ನಿಮ್ ವಾಯ್ಸು ಸೋನಿಯಾ ಮೇಡಂ ಥರ ಇಲ್ವಲ್ರೀ... ನಿಮ್ದು ಒಳ್ಳೆ... ರಾಜಕುಮಾರ್ ಫಿಲ್ಮಲ್ಲಿ ವಜ್ರಮುನಿ ವಾಯ್ಸು ಕೇಳ್ದಂಗೆ ಕೇಳತ್ತೆ...ಏನ್ ಮೇಡಂ...ವಾಯ್ಸು ಬದಲಾಗಿ ಬಿಟ್ಟಿದೆ... ದಿಲ್ಲೀಲಿ ಹವಾಮಾನ ಚೆನ್ನಾಗಿಲ್ವ... ನನ್ನ ಹಾಗೆ ನಿಮ್ಗೂ ಭಿನ್ನಮತೀಯ ವೈರಸ್ ಕಾಟಾನಾ...’’</b></span><br />
<span style="color: blue; font-size: large;"><b>‘‘ನಾನು ಸೋನಿಯಾ ಮೇಡಂ ಅಲ್ಲಾರೀ....’’</b></span><br />
<span style="color: blue; font-size: large;"><b>‘‘ನಿಮ್ ಆಶೀರ್ವಾದದಿಂದ್ಲೇ ಸರಕಾರ ನಡೀತಾ ಇದೆ ಅಂತ ಹೇಳ್ತೀರಿ...ಮತ್ತೆ ಸೋನಿಯಾ ಗಾಂಧಿ ಅಲ್ಲಾಂತ ಹೇಳ್ತೀರಲ್ಲಾ...?’’</b></span><br />
<span style="color: blue; font-size: large;"><b>‘‘ನನ್ನ ಮನೆಗೆ ಬಂದಿದ್ದೀರಿ. ಹೆಂಗಿದ್ದೀಯ ಅಂತ ನನ್ನ ತಲೆ ಸವರಿದ್ರಿ. ನೆನಪು ಮಾಡ್ಕೊಳ್ಳಿ...ನನ್ನ ಸಣ್ಣ ಮಗನ ಕೆನ್ನೆ ಹಿಂಡಿ ನೂರು ರೂಪಾಯಿ ನೋಟು ಕೊಟ್ರಿ....’’</b></span><br />
<span style="color: blue; font-size: large;"><b>‘‘ಹಂಗಾದ್ರೆ ನೀನು ರೇವಣ್ಣನ ಬೀಗರ ಕಡೆಯೋನು ಇರ್ಬೇಕು. ಹೆಂಗಿದ್ದೀಯಪ್ಪ... ಮನೇಲೆಲ್ವಾ ಸೌಕ್ಯವೆ? ಮಳೆ ಬೆಳೇಲ್ಲಾ ಹೆಂಗದೆ?’’</b></span><br />
<span style="color: blue; font-size: large;"><b>‘‘ನಿಮ್ಮ ರೇವಣ್ಣನ ಬೀಗ ನೆಗೆದು ಬಿದ್ಹೋದ. ಅಲ್ರೀ...ಇಷ್ಟು ಕ್ಲೂ ಕೊಟ್ರು ನಿಂಗೆ ಗೊತ್ತಾಗ್ಲಿಲ್ಲ ಅಂದ್ರೇನೂ....ನಾನು ಇದ್ದಾದ್ರೂ ಏನು ಪ್ರಯೋಜನ... ಅಯ್ಯೋ...’’</b></span><br />
<span style="color: blue; font-size: large;"><b>‘‘ರೀ...ಇನ್ನೂ ಒಂದಿಷ್ಟು ಚಾನ್ಸು ಕೊಡ್ರಿ....’’</b></span><br />
<span style="color: blue; font-size: large;"><b>‘‘ಹಾಂ...ಅದೇ...ನಾನು ಅದೆಷ್ಟು ಚಾನ್ಸು ಕೊಟ್ಟಿದ್ದೀನಿ ಗೊತ್ತ ನಿಮ್ಗೆ...ನಿಮ್ ಪಕ್ಸ ಒಡ್ದು ನುಚ್ಚು ನೂರು ಆದ್ರೂನು ಮತ್ತೆ ಮತ್ತೆ ಚಾನ್ಸು ಕೊಟ್ಟೆ....ನಾನು ಚಾನ್ಸು ಕೊಟ್ಟಿದ್ರಿಂದಾನೇ ಕಳೆದ ಬಾರಿ ಮತ್ತೆ ಗೆದ್ದು ಬಂದ್ರಿ.... ಹೋಗ್ಲಿ.... ದೇಹಲಕ್ಷಣ ಹೇಳ್ತೀನಿ ಕೇಳು...ನೋಡಿ...ನಾನು ಕರ್ರಗಿದ್ದೇನೆ..’’</b></span><br />
<span style="color: blue; font-size: large;"><b>‘‘ಹಂಗಾದ್ರೆ ನೀವು ಖರ್ಗೇನೆ..’’</b></span><br />
<span style="color: blue; font-size: large;"><b>‘‘ಬಡಕಲಾಗಿದ್ದೇನ್ರಿ....’’</b></span><br />
<span style="color: blue; font-size: large;"><b>‘‘ಅರೆ...ಹಂಗಾದ್ರೆ ನೀವು ಎಂ.ಪಿ ಪ್ರಕಾಸು...ನೀವ್ಯಾಕ್ರಿ ಇಷ್ಟೊತ್ನಾಗೆ ಫೋನು ಮಾಡ್ತಿದ್ದೀರಿ....’’</b></span><br />
<span style="color: blue; font-size: large;"><b>‘‘ಅಲ್ರೀ....ನೀರು ನೀರು ಅಂತ ಸಾಯ್ತ ಇದ್ದೇನ್ರಿ....’’</b></span><br />
<span style="color: blue; font-size: large;"><b>‘‘ಹಂಗಾದ್ರೆ...ನೀನು ತಮಿಳುನಾಡು ಜಯಲಲಿತಾ ಇರ್ಬೇಕು...ಜೀವ ಹೋದ್ರು ನಿಂಗೆ ಕಾವೇರಿ ನೀರು ಕೊಡಾಕಿಲ್ಲ...’’</b></span><br />
<span style="color: blue; font-size: large;"><b>‘‘ತಥ್ ನಿನ್ನ...ಇನ್ನೂ ನಿಂಗೆ ಗೊತ್ತಾಗಿಲ್ವಾ...ನೋಡಯ್ಯ ಸಾಲ ಗೀಲಾಂತ ಬಡ್ಡಿ ಕಟ್ಟದೆ ಒದ್ದಾಡ್ತಿದ್ದೀನಿ...’’</b></span><br />
<span style="color: blue; font-size: large;"><b>‘‘ಬಡ್ಡಿ ಕಟ್ಟೋಕಾಗ್ದೆ ದೇಶ ವಿಶ್ವ ಬ್ಯಾಂಕ್ ಹೇಳಿದಲ್ಲೆಲ್ಲಾ ಸಹಿ ಹಾಕ್ತಾ ಇದೇ. ಹಂಗಾದ್ರೆ ನೀನು ಭಾರತಮಾತೇನೇ ಇರ್ಬೇಕು...ಯಕಮ್ಮ ಈ ಅಪರಾತ್ರೀಲಿ ಫೋನ್ ಮಾಡಿ ಗಂಡಸಿನ ವಾಯ್ಸಲ್ಲಿ ಮಾತಾಡ್ತ ಇದ್ದೀಯ....’’</b></span><br />
<span style="color: blue; font-size: large;"><b>‘‘ನನ್ ಕರ್ಮ...ಭಾರತಮಾತೆಯ ನಾಲಗೆ ಕತ್ತರಿಸಿ, ಕೈ ಕಾಲು ಕಟ್ಟಿ ವಿದೇಶಿಯರಿಗೆ ಮಾರಿದ ಮೇಲೆ, ಅವಳೆಲ್ಲಿಂದ ಫೋನ್ ಮಾಡ್ಬೇಕು?ಇನ್ನೂ ಗೊತ್ತಾಗಿಲ್ವಾ...’’</b></span><br />
<span style="color: blue; font-size: large;"><b>‘‘ಇಲ್ಲಾರಿ...’’</b></span><br />
<span style="color: blue; font-size: large;"><b>‘‘ಗೊತ್ತಾಗ್ಲೇ ಇಲ್ವಾ...’’</b></span><br />
<span style="color: blue; font-size: large;"><b>‘‘ಊ...ಹುಂ....</b></span><br />
<span style="color: blue; font-size: large;"><b>‘‘ಮಗ್ನೆ...ಮುಂದಿನ ಚುನಾವಣೆಯ ಹೊತ್ತಿನಲ್ಲಿ ನಮ್ಮೂರಿಗೆ ಬರ್ತೀಯಲ್ಲ, ಆಗ ಗೊತ್ತಾಗತ್ತೆ ನಾನ್ಯಾರೂಂತ...’’</b></span><br />
<span style="color: blue; font-size: large;"><b>ಫೋನನ್ನು ದಡಾಲ್ಲನೆ ಕುಕ್ಕಿದ ಸದ್ದು. ಯಾರು ಪೋನು ಮಾಡಿರಬಹುದು ಎಂದು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ರು ಗೌಡ್ರು. </b></span><br />
<span style="color: purple; font-size: large;"><b>ಸೆಪ್ಟೆಂಬರ್ 18, 2005</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-63556697544447846332015-05-15T06:03:00.002-07:002015-05-15T06:03:16.361-07:00ಪಡಿತರ ಅಂಗಡಿಗಳಲ್ಲಿ ಎರಡು ರೂಪಾಯಿಗೆ ಒಂದು ಕೆ.ಜಿ. ತ್ರಿಶೂಲ...!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://2.bp.blogspot.com/-v7Sm-ZEvaB4/VVXuWrpW1hI/AAAAAAAAAQc/DTooY-u7-lE/s1600/Indian%2B_Election_Cartoon%5B4%5D.png" imageanchor="1" style="margin-left: 1em; margin-right: 1em;"><img border="0" height="139" src="http://2.bp.blogspot.com/-v7Sm-ZEvaB4/VVXuWrpW1hI/AAAAAAAAAQc/DTooY-u7-lE/s320/Indian%2B_Election_Cartoon%5B4%5D.png" width="320" /></a></div>
<b style="font-size: x-large;"><span style="color: purple;">2008 ರಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆಯಾದಾಗ ಬರೆದ ಬುಡಬುಡಿಕೆ. ಎಪ್ರಿಲ್ 20, 2008 ರವಿವಾರದ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. </span></b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ವಿವಿಧ ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಇದೀಗ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಸಮಯ. ಇಲ್ಲಿ ಕೆಲವು ‘ಪರದೇಶಿಕ ಪಕ್ಷ’ಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆ ಇಲ್ಲಿದೆ.</b></span><br />
<span style="color: blue; font-size: large;"><b><br /></b></span>
<span style="color: purple; font-size: large;"><b>ಕರ್ನಾಟಕ ಸಾರಾಯಿ ಪಕ್ಷ</b></span><br />
<span style="color: blue; font-size: large;"><b>ಉಳಿದ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಇಲ್ಲದೇ ಇದ್ದುದರಿಂದ, ಚುನಾವಣೆಯಲ್ಲಿ ಅಖಿಲ ಕರ್ನಾಟಕ ಸಾರಾಯಿ ಪಕ್ಷವೆಂಬ ಪ್ರಾದೇಶಿಕ ಪಕ್ಷವನ್ನು ರಚಿಸಲಾಗಿದೆ. ಈ ನಾಡಿನ ಶೋಷಿತ ವರ್ಗವಾದ ಕುಡುಕರಿಂದಲೇ ರಚನೆಗೊಂಡಿರುವ ಈ ಪಕ್ಷಕ್ಕೆ ಮಲ್ಯ, ಬಂಗಾರಪ್ಪ, ಹೆ.ಛೆ.ಶೆಟ್ಟಿ ಮೊದಲಾದವರು ದುಡ್ಡು ಹಾಕಿದ್ದಾರೆ ಎನ್ನುವುದು ಬರೇ ಗಾಳಿ ಸುದ್ದಿ ಎನ್ನಲಾಗಿದೆ. ಅದು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಇಲ್ಲಿ ಬಿಡುಗಡೆ ಮಾಡಲಾಗಿದೆ.</b></span><br />
<span style="color: blue; font-size: large;"><b>1.ಅಧಿಕಾರ ಹಿಡಿದಾಕ್ಷಣ ಸಾರಾಯಿ ನಿಷೇಧ ಹಿಂದಕ್ಕೆ.</b></span><br />
<span style="color: blue; font-size: large;"><b>2. ಎಲ್ಲ ರೇಷನ್ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಸಾರಾಯಿ ವಿತರಣೆ. ಸೇಂದಿಯನ್ನು ಉಚಿತವಾಗಿ ರೇಷನ್ ಅಂಗಡಿಗಳಲ್ಲಿ ವಿತರಿಸಲು ಯೋಜನೆ. ಈ ಯೋಜನೆಗೆ ‘ತಾಳೆಯ ಭಾಗ್ಯ’ ಎಂದು ಹೆಸರಿಡಲಾಗುವುದು.</b></span><br />
<span style="color: blue; font-size: large;"><b>3.ಈಗಾಗಲೇ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಯೋಜನೆ ಇದೆ. ಸಂಜೆ ಹೊತ್ತಿಗೆ ವಿದ್ಯಾರ್ಥಿಗಳಿಗೆ ಸಾರಾಯಿ ತೊಟ್ಟೆಯನ್ನು ನೀಡುವ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಒತ್ತಡ ರಹಿತ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲಾಗುತ್ತದೆ.</b></span><br />
<span style="color: blue; font-size: large;"><b>4.ವತ್ತಿಪರ ಶಿಕ್ಷಣಕ್ಕೆ ಆದ್ಯತೆ. ಶಾಲೆಗಳಲ್ಲಿ ಸಾರಾಯಿ ತಯಾರಿಕೆ, ಸಾರಾಯಿ ಭಟ್ಟಿ ಇಳಿಸುವುದು ಮೊದಲಾದ ವಿಷಯಗಳ ಕುರಿತಂತೆ ತರಬೇತಿ, ಸಾರಾಯಿ ತರಬೇತಿಗಾಗಿ ರಾಜ್ಯದ ವಿವಿಧೆಡೆ ಪ್ರತ್ಯೇಕ ಕಾಲೇಜುಗಳ ಸ್ಥಾಪನೆ.</b></span><br />
<span style="color: blue; font-size: large;"><b>5.ಮನೆ ಮನೆಗಳಲ್ಲಿ ಸಾರಾಯಿ ತಯಾರಿಕಾ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಗಳ ನಿವಾರಣೆ.</b></span><br />
<span style="color: blue; font-size: large;"><b>6.ಜಿ.ಪಿ.ರಾಜರತ್ನಂ ಅವರ ‘ಹೆಂಡ, ಹೆಡ್ತಿ...’ ಪದ್ಯವನ್ನು ನಾಡಗೀತೆಯನ್ನಾಗಿ ಮಾಡಲಾಗುವುದು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>7. ಧರ್ಮದ ಅಮಲು, ಜಾತಿಯ ಅಮಲು ಇತ್ಯಾದಿಗಳನ್ನು ಅಳಿಸಿ ಹಾಕಿ, ಅಮಲನ್ನು ಜಾತ್ಯತೀತಗೊಳಿಸಲಾಗುತ್ತದೆ. ಮದ್ಯತೀತ ನಾಡನ್ನು ಕಟ್ಟಿ, ಎಲ್ಲ ಜಾತಿ, ಧರ್ಮಗಳನ್ನು ಒಂದೇ ಅಮಲಿನಡಿಯಲ್ಲಿ ತರಲಾಗುತ್ತದೆ. ಸಾರಾಯಿ ಪಕ್ಷದಲ್ಲಿ ಟಿಕೆಟ್ ನೀಡಲು ಅರ್ಹತೆಯೇ ಮಾನದಂಡವಾಗಿರುತ್ತದೆ. ಹೆಚ್ಚು ಹೆಚ್ಚು ಸಾರಾಯಿ ಕುಡಿದು ದಾಖಲೆ ಸ್ಥಾಪಿಸಿದವರಿಗೆ ಮೊದಲ ಆದ್ಯತೆ. ಪಕ್ಷದ ಟಿಕೆಟ್ಗೆ ಅರ್ಜಿ ಹಾಕುವಾಗ, ತಮ್ಮ ಸುಟ್ಟು ಹೋಗಿರುವ ಕರುಳು, ಗಂಟಲು ಇತ್ಯಾದಿಗಳನ್ನು ಅರ್ಜಿಯ ಜೊತೆಗೆ ಲಗ್ಗತ್ತಿಸಬಹುದು.</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>****</b></span><br />
<span style="color: purple; font-size: large;"><b>ಹರಹರಾ ಮಂಕೇಶ್ವರ ಪಕ್ಷ</b></span><br />
<span style="color: blue; font-size: large;"><b>ತಮ್ಮ ಎನ್ನಡ ಪಕ್ಷದಿಂದ ಓಟಿಗೆ ನಿಂತು ಠೇವಣಿ ಕಳೆದುಕೊಂಡ ಬಳಿಕ ಮಂಕೇಶ್ವರರು ಸ್ಥಾಪಿಸಿದ ನೂತನ ಪಕ್ಷ ಇದು. ಅದರ ಪ್ರಣಾಳಿಕೆ ಕೆಳಗಿನಂತಿದೆ.</b></span><br />
<span style="color: blue; font-size: large;"><b>1.ಹೊಸ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನು ಮಾರುಕಟ್ಟೆಗೆ ತಂದು, ಪತ್ರಿಕೆಯ ಜೊತೆಗೆ ಓದುಗರಿಗೆ ಒಂದು ರೂಪಾಯಿಯನ್ನು ಕೊಡುವುದು.</b></span><br />
<span style="color: blue; font-size: large;"><b>2.ಪತ್ರಿಕೆಯನ್ನು ಓದುವುದಕ್ಕಲ್ಲದೆ ಇನ್ನಿತರ ಕೆಲಸಗಳಿಗೂ ಬಳಸಲು ಅನುಕೂಲಾವಾಗುವಂತೆ ರೂಪಿಸಿ, ನಂಬರ್ 1 ಎಂದೆನಿಸಿಕೊಳ್ಳುವುದು. ಮುಖ್ಯವಾಗಿ ನಂ.2 ಮೊದಲಾದ ಬೆಳಗ್ಗಿನ ಕೆಲಸಗಳ ಸಂದರ್ಭದಲ್ಲಿ ಬಳಸಲು ಪತ್ರಿಕೆ ಉಪಯೋಗವಾದರೆ, ಸರ್ಕ್ಯುಲೇಶನ್ ಇನ್ನಷ್ಟು ಹೆಚ್ಚುತ್ತದೆ. ಊಟದ ಬಳಿಕ ಕೈ ಶುಚಿಗೊಳಿಸಲು ಬೆವರೊರೆಸಿಕೊಳ್ಳಲು ಪತ್ರಿಕೆಗಳನ್ನು ಪರಿಣಾಮಕಾರಿಯಾಗಿ ಹೊರತರುವುದು. ಈ ಮೂಲಕ ಕರ್ನಾಟಕದಲ್ಲಿ ಪತ್ರಿಕಾ ಕ್ರಾಂತಿಯನ್ನು ಮಾಡುವುದು.</b></span><br />
<span style="color: blue; font-size: large;"><b>3.ಮಧ್ಯಾಹ್ನ, ರಾತ್ರಿಯ ಊಟಕ್ಕೆ ಪತ್ರಿಕೆಗಳನ್ನೇ ಬೇಯಿಸಿ ತಿನ್ನುವುದು. ಅದಕ್ಕಾಗಿ ಎಲ್ಲ ಪಡಿತರ ಅಂಗಡಿಗಳಲ್ಲಿ ಅಕ್ಕಿಯ ಬದಲಿಗೆ ‘ವಿಜಯ ಮಂಕೇಶ್ವರ’ ಪತ್ರಿಕೆಯನ್ನೇ ಒಂದು ರೂಪಾಯಿಗೆ ಒಂದು ಕೆಜಿಯಂತೆ ನೀಡಲು ಯೋಜನೆ. ಅಡುಗೆ ಅನಿಲ ಕೊರತೆಯನ್ನು ನೀಗಿಸಲು ಪತ್ರಿಕೆಗಳನ್ನೇ ಪರ್ಯಾಯವಾಗಿ ಬಳಸಲು ಯೋಜನೆ. ಉರುವಲಾಗಿ ಪತ್ರಿಕೆಗಳನ್ನು ಸಬ್ಸಿಡಿಯಲ್ಲಿ ವಿತರಣೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>4. ನಾಡಿನಲ್ಲಿ ‘ಭಯೋತ್ಪಾದನೆ’ಗಾಗಿ ಪತ್ರಿಕೆಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ. ಹೆಚ್ಚು ಉತ್ಪಾದನೆ ಮಾಡಿ ನಾಡಿನ ಉದ್ದಗಲಕ್ಕೆ ರಫ್ತು ಮಾಡಲು ಅವಕಾಶ. ಇದಕ್ಕಾಗಿ ತನ್ನ ‘ಮಂಕೇಶ್ವರ’ ಪತ್ರಿಕೆಯಿಂದ ವಿಶೇಷ ಕಾರ್ಖಾನೆ. ಭಯ ಉತ್ಪಾದನೆಯ ಕುರಿತಂತೆ ಅರ್ಹ ‘ಜನಿವಾರ’ ಪತ್ರಕರ್ತರಿಗೆ ಸ್ವ ಉದ್ಯೋಗ ತರಬೇತಿ, ಬಳಿಕ ಅವರಿಗೆ ಮಂಕೇಶ್ವರ ಪತ್ರಿಕೆಯಲ್ಲೇ ಕೆಲಸ. ಪಕ್ಷದಲ್ಲಿ ಟಿಕೆಟ್ ಸಿಗಬೇಕಾದರೆ ಅನುಭವ, ಹಿರಿತನ ಮುಖ್ಯವಾಗುತ್ತದೆ. ಮಂಕೇಶ್ವರ ಪತ್ರಿಕೆಯಲ್ಲಿ ಸರ್ಕ್ಯುಲೇಶನ್, ಜಾಹೀರಾತು ವಿಭಾಗದಲ್ಲಿ ಅಧಿಕ ವರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆಯಲ್ಲಿ ಟಿಕೇಟು ನೀಡಲಾಗುತ್ತದೆ. ಚುನಾವಣೆಯಲ್ಲಿ ಸೋತರೂ, ಮಂಕೇಶ್ವರ ಬಸ್ಗಳಲ್ಲಿ ಓಡಾಡುವಾಗ ಸೋತ ಅಭ್ಯರ್ಥಿಗಳು ಟಿಕೆಟ್ ತೆಗೆಯ ಬೇಕೆಂದಿಲ್ಲ. ಚುನಾವಣೆಗೆ ನಿಲ್ಲುವುದಕ್ಕೆ ಠೇವಣಿ ಕಟ್ಟಲು ಪಕ್ಷ ಶೇ.5ರ ಬಡ್ಡಿಯಲ್ಲಿ ಸಾಲ ನೀಡುತ್ತದೆ. ಠೇವಣಿ ಕಳೆದುಕೊಂಡರೆ ಪಕ್ಷಾಧ್ಯಕ್ಷರು ಜವಾಬ್ದಾರರಲ್ಲ.</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="color: purple; font-size: large;"><b>ಬೇತಾಳ್ ಪಕ್ಷ</b></span><br />
<span style="color: blue; font-size: large;"><b> ಖನ್ನಡದ ಉಟ್ಟು ಓರಾಟಗಾರ ಬೇತಾಳ್ ನಾಗರಾಜ್ ಸ್ಥಾಪಿಸಿರುವ ಈ ಪಕ್ಷದ ಪ್ರಣಾಳಿಕೆ ಕೆಳಗಿನಂತಿದೆ.</b></span><br />
<span style="color: blue; font-size: large;"><b>1.ಸರಕಾರ ಅಸ್ತಿತ್ವಕ್ಕೆ ಬಂದರೆ ಬೆಂಗಳೂರು ನಗರಗಳಲ್ಲಿ ವಾಹನಗಳಿಗೆ ನಿಷೇಧ. ಎಮ್ಮೆ, ಕೋಣಗಳ ಮೂಲಕವೇ ಸಾರಿಗೆ ವ್ಯವಸ್ಥೆ.</b></span><br />
<span style="color: blue; font-size: large;"><b>2.ವಿವಿಧ ನಾಯಕರ ಪ್ರತಿಕತಿಗಳು ಸಬ್ಸಿಡಿಯಲ್ಲಿ ಪಡಿತರ ಅಂಗಡಿಗಳ ಮೂಲಕ ವಿತರಣೆ. ಪ್ರತಿಕತಿಗಳನ್ನು ಸುಟ್ಟು ಹಾಕಲು ಬೇಕಾದ ಸೀಮೆ ಎಣ್ಣೆಯನ್ನು ಓರಾಟಗಾರಿಗೆ ಪಡಿತರ ಕಾರ್ಡ್ಗಳ ಮೂಲಕ ಒದಗಿಸುವ ವ್ಯವಸ್ಥೆ.</b></span><br />
<span style="color: blue; font-size: large;"><b>3.ಪ್ರತಿದಿನ ಎರಡು ಗಂಟೆಗಳ ಕಾಲ ಎಲ್ಲ ಪ್ರತಿಭಟನೆಗಳಿಗೂ ರಸ್ತೆಗಳು ಮುಕ್ತ.</b></span><br />
<span style="color: blue; font-size: large;"><b>4.ಪ್ರತಿಭಟನೆಗಳ ಗುತ್ತಿಗೆಯನ್ನು ವಿದೇಶಿ ಕಂಪೆನಿಗಳಿಗೆ ಹರಾಜು ಮೂಲಕ ರಾಜ್ಯ ಬೊಕ್ಕಸಕ್ಕೆ ಹಣ.</b></span><br />
<span style="color: blue; font-size: large;"><b>5. ಪ್ರತಿ ಜಿಲ್ಲೆಯಲ್ಲಿ ಯುವಕ-ಯುವತಿಯರಿಗೆ ಪ್ರತಿಕತಿಗಳ ತಯಾರಿಕೆ ತರಬೇತಿ. ಈ ಮೂಲಕ ಗುಡಿ ಕೈಗಾರಿಕೆಗಳ ಅಭಿವದ್ಧಿ.</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="color: purple; font-size: large;"><b>ಹೊಡಿ-ಬಡಿ-ಕೊಲ್ಲು ಪಕ್ಷ</b></span><br />
<span style="color: blue; font-size: large;"><b>ಇತ್ತೀಚೆಗೆ ಸಮಾನ ಮನಸ್ಕರು ಒಂದಾಗಿ ‘ಹೊಡಿಬಡಿಕೊಲ್ಲು ಪಕ್ಷ’ವನ್ನು ಕಟ್ಟಿದ್ದಾರೆ. ಬೇರೆ ಗುಂಪುಗಳಾಗಿ ‘ಹೊ-ಬ-ಕೊ’ ಮಾಡಿದಾಗ ಜನರು ತಿರುಗಿ ತದಕಲು ಶುರು ಮಾಡಿದುದರಿಂದ ಎಲ್ಲ ಹೊಡಿ ಬಡಿ ಕೊಲ್ಲು ಮನಸ್ಕರು ಒಂದಾಗಿ ಈ ಪಕ್ಷವನ್ನು ಕಟ್ಟಿದ್ದಾರೆ. ಅವರ ಪ್ರಣಾಳಿಕೆ ಕೆಳಗಿನಂತಿದೆ.</b></span><br />
<span style="color: blue; font-size: large;"><b>1. ಪಡಿತರ ಅಂಗಡಿಗಳಲ್ಲಿ ಎರಡು ರೂಪಾಯಿಗೆ ಒಂದು ಕೆಜಿ ತ್ರಿಶೂಲ, ಕತ್ತಿ, ಚಾಕು ಇತ್ಯಾದಿ ವಿತರಣೆ. ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚಲು ಗರಿಷ್ಠ ಸೀಮೆ ಎಣ್ಣೆ ನೀಡುವ ವ್ಯವಸ್ಥೆ. ‘ಕೇಸರಿ ಕಾರ್ಡ್’ನವರಿಗೆ ಮಾತ್ರ ಈ ಸಬ್ಸಿಡಿ ವ್ಯವಸ್ಥೆ ನೀಡಲಾಗುತ್ತದೆ.</b></span><br />
<span style="color: blue; font-size: large;"><b>2.ಕನ್ನಡದ ಹೆಸರಿನಲ್ಲಿ ಅತ್ಯಧಿಕ ಅಂಗಡಿಗಳನ್ನು ಲೂಟಿ ಮಾಡಿದಾತನಿಗೆ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರತ್ನ, ಕರ್ನಾಟಕ ರತ್ನ ಮೊದಲಾದ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.</b></span><br />
<span style="color: blue; font-size: large;"><b>3. ಕಾರಾಗಹಗಳಲ್ಲಿ ಆಮೂಲಾಗ್ರ ಬದಲಾವಣೆ. ಎಲ್ಲ ಜೈಲು ಕೋಣೆಗಳನ್ನು ಹವಾನಿಂಯತ್ರಿತಗೊಳಿಸಲಾಗುವುದು. ಕೈದಿಗಳಿಗೆ ಉಚಿತ ಮೊಬೈಲ್ಗಳ ವ್ಯವಸ್ಥೆ. ಇದಕ್ಕೆ ಬೇಕಾದ ಸಿಮ್ ಕಾರ್ಡ್ಗಲಿಗಾಗಿ ಬಜೆಟ್ನಲ್ಲಿ ದೊಡ್ಡ ಮೊತ್ತದ ಹಣ ಮೀಸಲು.</b></span><br />
<span style="color: blue; font-size: large;"><b>4.ಕೋಮುಗಲಭೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದು ಹೇಗೆ, ಕಟ್ಟಡ ಕೆಡವುದು ಹೇಗೆ ಎನ್ನುವುದರ ಕುರಿತಂತೆ ಯುವಕರಿಗೆ ಗೋಡ್ಸೆ ರೋಜ್ಗಾರ್ ಯೋಜನೆಯಡಿಯಲ್ಲಿ ತರಬೇತಿ.</b></span><br />
<span style="color: blue; font-size: large;"><b>5. ಅತ್ಯಂತ ಹೆಚ್ಚು ಕೊಲೆಗಳನ್ನು ಮಾಡಿದಾತನಿಗೆ ಕುಂಬ್ಲೆ ಸುಂದರರಾವ್ ಹೆಸರಿನಲ್ಲಿ ಶ್ರೇಷ್ಠ ಕೊಲಾವಿದ ಪ್ರಶಸ್ತಿ.</b></span><br />
<span style="font-size: large;"><b><span style="color: blue;"> </span><span style="color: purple;">(ಎಪ್ರಿಲ್ 20, 2008 ರವಿವಾರ)</span></b></span><br />
<br /></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-40825603208144768632015-05-13T06:19:00.001-07:002015-05-13T06:19:12.917-07:00‘ಅಯ್ಯೋ... ಇವನೂ ಬಂದಿದ್ದಾನಲ್ಲಪ್ಪ...!’<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://1.bp.blogspot.com/-qbohnbEMfKc/VVNPJ-FC7II/AAAAAAAAAQM/9W_fE7S5NQQ/s1600/m-f-hussain-mueen-akhtar.jpg" imageanchor="1" style="margin-left: 1em; margin-right: 1em;"><img border="0" height="320" src="http://1.bp.blogspot.com/-qbohnbEMfKc/VVNPJ-FC7II/AAAAAAAAAQM/9W_fE7S5NQQ/s320/m-f-hussain-mueen-akhtar.jpg" width="240" /></a></div>
<b style="color: purple; font-size: x-large;">ಮಂಗಳಗ್ರಹದಲ್ಲಿ ಮಹಿಳೆಯನ್ನು ಹೋಲುವ ಚಿತ್ರವೊಂದನ್ನು ಉಪಗ್ರಹವೊಂದು ತೆಗೆದಾಗ, "ಮಂಗಳ ಗ್ರಹದಲ್ಲಿ ಮಹಿಳೆ'' ಎಂದು ಮಾಧ್ಯಮಗಳಲ್ಲಿ ಬಾರೀ ಚರ್ಚೆಯಾಯಿತು. ಫೆಬ್ರವರಿ 17, 2008ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ. </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಂಗಳ ಗ್ರಹದಲ್ಲಿ ‘ಮಹಿಳೆ’ಯೊಬ್ಬಳಿದ್ದಾಳೆನ್ನುವ ಸಂಗತಿ ಭೂಮಿಯ ಜನರಿಗೆ ಸಾಕಷ್ಟು ಅಹ್ಲಾದವನ್ನು ನೀಡಿದ್ದು, ಮಂಗಳ ಗ್ರಹದ ಕುರಿತಂತೆ ಆಸಕ್ತಿಯನ್ನು ತೀವ್ರವಾಗುವಂತೆ ಮಾಡಿತು. ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಈ ಸುದ್ದಿ ಕೇಳಿದ್ದೇ, ತಕ್ಷಣ ಖಗೋಳ ವಿಜ್ಞಾನಿಗಳಿಗೆ ಫೋನಾಯಿಸಿ, ‘‘ಆಕೆಯ ವಯಸ್ಸೆಷ್ಟಿರಬಹುದು? ಮದುವೆಯಾಗಿದೆಯೇ? ಆಕೆಯ ಮೊಬೈಲ್ ನಂಬರ್ ಸಿಕ್ಕುವ ಚಾನ್ಸ್ ಇದೆಯೇ? ತಕ್ಷಣ ನನಗೆ ಮಂಗಳ ಗ್ರಹಕ್ಕೊಂದು ಟಿಕೆಟ್ ಮಾಡಿ’’ ಎಂದರು.</b></span><br />
<span style="color: blue; font-size: large;"><b>ಸಿಕ್ಕರೂ ಸಿಕ್ಕಬಹುದು ಎಂದು ಯುವಕರೆಲ್ಲ ಕ್ರಿಕೆಟ್, ಸಿನಿಮಾ ಇತ್ಯಾದಿಗಳನ್ನೆಲ್ಲಾ ಬಿಟ್ಟು ಮಂಗಳಗ್ರಹದ ಅಧ್ಯಯನಕ್ಕೆ ತೊಡಗಿದರು. ಆ ಮಂಗಳಗ್ರಹದ ಹುಡುಗಿಯ ಜೊತೆಗೆ ಚಾಟಿಂಗ್ಗೆ ಪ್ರಯತ್ನಿಸಿದರು. ಗೂಗಲ್ಗೆ ಹೋಗಿ ‘ಮಂಗಳಾ’ ಎಂದು ಹುಡುಕುವುದಕ್ಕೆ ಶುರು ಹಚ್ಚಿದರು. ಚಾಟಿಂಗ್ ರೂಂಗೆ ಹೋಗಿ, ಮಂಗಳಾ ಎಂದು ಹೆಸರಿರುವ ಹುಡುಗಿಯರನ್ನೆಲ್ಲ ‘ನೀನಿರುವುದು ಮಂಗಳ ಗ್ರಹದಲ್ಲಿಯ?’ ಎಂದು ಆಸೆಯಿಂದ ಕೇಳತೊಡಗಿದರು. ಮಂಗಳದಲ್ಲಿ ‘ಮಹಿಳೆಯ ಚಿತ್ರ’ ಕಂಡುದರಿಂದ ಆ ಗ್ರಹವನ್ನು ನೋಡುವುದಕ್ಕೆ ಕ್ಯೂನಲ್ಲಿ ಜನ ನಿಂತರು. ಅಮೆರಿಕ ಮಂಗಳ ಗ್ರಹವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಿತು.</b></span><br />
<span style="color: blue; font-size: large;"><b>ಇದೇ ಸಂದರ್ಭದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೂ ಆ ಗ್ರಹದ ಮೇಲೆ ಆಸಕ್ತಿ ಹೆಚ್ಚಿತು. ಪೊಟೊದಲ್ಲಿ ಕಂಡ ಮಹಿಳೆ ‘ಬುಡಕಟ್ಟು ಮಹಿಳೆ’ಯ ತರಹ ಕಂಡುದರಿಂದ ಕ್ರಿಶ್ಚಿಯನ್ ಪಾದ್ರಿಗಳು ಶಿಲುಬೆಯ ಜೊತೆಗೆ ಮಂಗಳ ಗ್ರಹಕ್ಕೆ ಹೊರಟರು. ಪಾದ್ರಿಗಳು ಹೊರಟಿರುವುದನ್ನು ಕಂಡದ್ದೇ ಒರಿಸ್ಸಾದ ಸಂಘಪರಿವಾರದ ಕಾರ್ಯಕರ್ತರು ತ್ರಿಶೂಲ ಹಿಡಿದು ಅವರ ಹಿಂದೆಯೇ ಹೊರಟರು.</b></span><br />
<span style="color: blue; font-size: large;"><b>ಭಾರತದ ಮುಸ್ಲಿಮರೆಲ್ಲ ಹಣ ಸಂಗ್ರಹಿಸಿ ಅಲ್ಲೊಂದು ಮಸೀದಿ ಕಟ್ಟುವುದು ಎಂದು ತೀರ್ಮಾನಿಸಿದರು. ಮಂಗಳ ಗ್ರಹದ ಮಹಿಳೆ ಮಸೀದಿಗೆ ಬರಬಹುದೋ, ಬೇಡವೋ ಎನ್ನುವ ಕುರಿತಂತೆ ಮುಸ್ಲಿಮರೊಳಗೇ ಭಿನ್ನಮತ ಸಷ್ಟಿಯಾಯಿತು. ಕೊನೆಗೂ ಅಮತಶಿಲೆಯನ್ನು ಹಾಸಿ ಒಂದು ಮಸೀದಿಯನ್ನು ಕಟ್ಟಿದರು. ಇನ್ನೇನು ಅದರೊಳಗೆ ಪ್ರಾರ್ಥನೆ ಮಾಡಬೇಕು ಎನ್ನುವಷ್ಟರಲ್ಲಿ ಸಂಘಪರಿವಾರದ ನಾಯಕರು ತಕರಾರು ತೆಗೆದರು. ಈ ಮಸೀದಿಯನ್ನು ಮಂಗಳ ಗ್ರಹದ ಪುರಾತನ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಮಂಗಳ ಗ್ರಹದಾದ್ಯಂತ ರಥಯಾತ್ರೆ ಆರಂಭಿಸಿದರು.</b></span><br />
<span style="color: blue; font-size: large;"><b>‘‘ಇದಕ್ಕೆ ನಿಮ್ಮಲ್ಲಿ ಸಾಕ್ಷಿಯೇನಿದೆ?’’ ಮುಸ್ಲಿಂ ಮುಖಂಡರು ಕೇಳಿದರು. ಪ್ರಗತಿಪರರು ಅವರ ಜೊತೆ ನಿಂತರು.</b></span><br />
<span style="color: blue; font-size: large;"><b>‘‘ಸೀತೆ ಹುಟ್ಟಿದ್ದು ಮಂಗಳಗ್ರಹದಲ್ಲಿ. ಉಪಗ್ರಹವೊಂದು ಮೊತ್ತ ಮೊದಲು ತೆಗೆದ ಮಂಗಳಗ್ರಹದ ಮಹಿಳೆಯ ಚಿತ್ರ ರಾಮಾಯಣದ ಸೀತೆಯ ಚಿತ್ರವಾಗಿದೆ’’. ಎಂದು ಸಂಘ ಪರಿವಾರದ ನಾಯಕರು ವಾದಿಸಿದರು.</b></span><br />
<span style="color: blue; font-size: large;"><b>‘‘ರಾಮಾಯಣಕ್ಕೂ ಮಂಗಳಗ್ರಹಕ್ಕೂ ಏನು ಸಂಬಂಧ’’ ಎಂದು ಕಮ್ಯುನಿಷ್ಟ್ ಇತಿಹಾಸ ತಜ್ಞರು ಕೇಳಿ ತಮಾಷೆ ಮಾಡತೊಡಗಿದ್ದರು.</b></span><br />
<span style="color: blue; font-size: large;"><b> ಸಂಘಪರಿವಾರದ ಇತಿಹಾಸ ತಜ್ಞರು ತಕ್ಷಣ ಎಚ್ಚರವಾದರು. ಬೆಂಗಳೂರಿನಿಂದ ತಕ್ಷಣ ಚಿದಾನಂದಮೂರ್ತಿಗೆ ಬುಲಾವ್ ಹೋಯಿತು. ಅವರು ಸಂಶೋಧನೆ ಮಾಡಿದರು. ‘‘ರಾಮಾಯಣ ‘ಮಂಗ’ಗಳಿಂದ ಈ ಗ್ರಹಕ್ಕೆ ‘ಮಂಗ’ಳ ಎಂಬ ಹೆಸರು ಬಂತು. ಮಂಗಗಳ ಗ್ರಹ ಮಂಗಳ ಗ್ರಹ’’ ಎಂದು ಚಿದಾನಂದ ಮೂರ್ತಿ ಕಂಡು ಹಿಡಿದರು. ಸಂಘಪರಿವಾರದ ನಾಯಕರು ಮಂಗಗಳಂತೆ ಕುಣಿದಾಡಿದರು.</b></span><br />
<span style="color: blue; font-size: large;"><b>‘‘ಹಾಗಾದ್ರೆ ಸೇತು ಸಮುದ್ರಂನ ಕತೆಯೇನು?’’ ಎಂದು ಕೇಳಿದರು ಕೆಲವರು.</b></span><br />
<span style="color: blue; font-size: large;"><b>‘‘ಮಂಗಗಳು ಭೂಮಿ ಮತ್ತು ಮಂಗಳ ಗ್ರಹದ ನಡುವೆ ಸೇತುವೆ ಕಟ್ಟಿದವು. ಈಗಲೂ ಅದರ ಪಳೆಯುಳಿಕೆ ಇದೆ...’’ ಎಂದರು. ‘‘ತೇತ್ರಾಯುಗದಲ್ಲಿ ಮತ್ತು ದ್ವಾಪರಯುಗದಲ್ಲಿ ಮಂಗಳ ಮತ್ತು ಭೂಮಿಯ ನಡುವೆ ಈ ಸೇತುವೆಯಲ್ಲೇ ಎಲ್ಲರೂ ಓಡಾಡುತ್ತಿದ್ದರು...’’</b></span><br />
<span style="color: blue; font-size: large;"><b>‘‘ಎಲ್ಲಿದೆ ತೋರಿಸಿ... ಅದರ ಪಳೆಯುಳಿಕೆಯನ್ನು...’’ ಎಂದು ಕಮ್ಯುನಿಷ್ಟರು ಕೇಳಿದರು.</b></span><br />
<span style="color: blue; font-size: large;"><b>‘‘ಅದು ಬರಿ ಕಣ್ಣಿಗೆ ಕಾಣುವುದಿಲ್ಲ. ನಮ್ಮದೇ ವಿಶೇಷ ವಿಜ್ಞಾನಿಯೊಬ್ಬರು ಅದರ ಬಗ್ಗೆ ಅಧ್ಯಯನ ನಡೆಸಿದ್ದಾರೆ...’’ ಎಂದರು.</b></span><br />
<span style="color: blue; font-size: large;"><b>ಚಿದಾನಂದ ಮೂರ್ತಿ ಮಂಗಳದಲ್ಲಿ ಒಂದು ಸೈಟ್ ಮಾಡಿ ಸೆಟ್ಲಾದದ್ದೇ, ಒಬ್ಬಂಟಿಯಾಗಿ ಬದುಕುವುದಕ್ಕೆ ಬೋರಾಯಿತು. ಒಂದು ಮದುವೆಯಾದರೆ ಏನು? ಎಂದು ಯೋಚಿಸಿದರು. ಮಂಗಳ ಗ್ರಹದಲ್ಲಿ ತಕ್ಕ ಜೋಡಿ ಇಲ್ಲ ಅನ್ನಿಸಿತು. ಕೊನೆಗೆ ಅವರು ಎಸ್.ಎಲ್. ಭೈರಪ್ಪನವರನ್ನು ಆಹ್ವಾನಿಸಿದರು. ಅವರಿಬ್ಬರು ಜೊತೆಯಾಗಿ ಸುಖ ಸಂಸಾರ ನಡೆಸತೊಡಗಿದರು. ಭೈರಪ್ಪರು ಮಂಗಳ ಗ್ರಹಕ್ಕೆ ಬಂದವರೇ, ಅಲ್ಲಿನ ಪ್ರತೀ ಅವಶೇಷವನ್ನು ನೋಡಿ ಕಣ್ಣೀರು ಸುರಿಸತೊಡಗಿದರು. ಅದೆಲ್ಲವೂ ಔರಂಗಜೇಬನ ದಾಳಿಯಿಂದ ಅಳಿದುಳಿದ ಅವಶೇಷದಂತೆ ಅವರಿಗೆ ಕಂಡಿತು. ಅಲ್ಲಿ ಔರಂಗಜೇಬ್ ಏನನ್ನೆಲ್ಲ ಪುಡಿ ಮಾಡಿದ್ದಾನೆ. ಎಷ್ಟು ದೇವಸ್ಥಾನ ಒಡೆದಿದ್ದಾನೆ ಎನ್ನುವುದನ್ನೆಲ್ಲ ‘ಹಧ್ಯಯನ’ ನಡೆಸಿ ಬರೆಯತೊಡಗಿದರು. ಆ ಕಾದಂಬರಿಗೆ ‘ಆ ವಣ’ ಎಂದು ಹೆಸರಿಟ್ಟರು. ಉಪಗಹದಲ್ಲಿ ಕಂಡ ಮಂಗಳಗಹದ ಮೊದಲ ಮಹಿಳೆಯನ್ನೇ ತನ್ನ ಕಥಾನಾಯಕಿಯನ್ನಾಗಿಸಿದರು. ಆ ಮಹಿಳೆ ‘ಮಾಂಸ’ ತಿನ್ನುತ್ತಿರಲಿಲ್ಲ. ಸಾಬರನ್ನು ಮುಟ್ಟುತ್ತಿರಲಿಲ್ಲ...’’ ಎಂದೆಲ್ಲ ವರ್ಣಿಸಿದರು.</b></span><br />
<span style="color: blue; font-size: large;"><b>‘ಆ ವಣ’ ಮಂಗಳ ಗ್ರಹವನ್ನು ಗಬ್ಬೆಬ್ಬಿಸುತ್ತಿದ್ದ ಹಾಗೆಯೇ, ಕೋಮು ಸೌಹಾರ್ದ ವೇದಿಕೆಯ ತಂಡ ಅತ್ತ ಧಾವಿಸಿತು. ‘ಆ ವಣ’ದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತು. ಅವರನ್ನು ಕಂಡದ್ದೇ ‘ಮಂಗಳಗಹದಲ್ಲಿ ನಕ್ಸಲೈಟ್ಗಳು’ ಎಂದು ಪತ್ರಿಕೆಗಳು ಬರೆಯತೊಡಗಿದವು. ತಕ್ಷಣ ಬಿದರಿಗೆ ಬುಲಾವ್ ಹೋಯಿತು. ಬಿದರಿ ತನ್ನ ನಕ್ಸಲ್ ಸ್ಕ್ವಾಡ್ ಜೊತೆಗೆ ಹೊರಟೇ ಬಿಟ್ಟರು. ಬಿದರಿಯ ಹಿಂದೆ ಎಲ್ಲ ಪತ್ರಕರ್ತರು ಹೊರಟು ಬಿಟ್ಟರು.</b></span><br />
<span style="color: blue; font-size: large;"><b>ಅಷ್ಟರಲ್ಲಿ ಮಂಗಳ ಗಹ ತನ್ನ ಕೈ ತಪ್ಪುತ್ತದೆ ಎನ್ನುವುದು ಅಮೆರಿಕ ಮನಗಂಡಿತು. ‘‘ಮಂಗಳ ಗ್ರಹದಲ್ಲಿ ಉಸಾಮಬಿನ್ ಲಾದೆನ್ ಅಡಗಿದ್ದಾನೆ...’’ ಎಂದು ತನ್ನ ಸೈನ್ಯವನ್ನೆಲ್ಲ ತಂದು ಅಲ್ಲಿ ನಿಲ್ಲಿಸಿತು. ಅಲ್ಲಿಗೆ ಮಂಗಳ ಗ್ರಹದ ‘ಗ್ರಹ’ಚಾರ ಸಂಪೂರ್ಣ ಕೆಟ್ಟಿತು.</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="color: blue; font-size: large;"><b>ಬೆಂಗಳೂರಿನಲ್ಲಿ ಕಂಡ ಕಂಡ ರಾಜಕಾರಣಿಗಳ ಹಿಂದೆ ಸುತ್ತುತ್ತಿದ್ದ ಪತ್ರಕರ್ತ ಎಂಜಲು ಕಾಸಿಯನ್ನು ಸಂಪಾದಕರು ನೇರ ಮಂಗಳಗ್ರಹಕ್ಕೆ ವರ್ಗಾವಣೆ ಮಾಡಿಬಿಟ್ಟರು. ಕಾಸಿ ಮಂಗಳಗ್ರಹದಲ್ಲಿ ‘ಸ್ಕೂಪ’ನ್ನು ಹುಡುಕತೊಡಗಿದ. ಉಪಗ್ರಹ ಮೊತ್ತ ಮೊದಲ ಬಾರಿ ತೆಗೆದ ಮಹಿಳೆಯ ಚಿತ್ರ ಅವನ ನೆನಪಲ್ಲಿತ್ತು. ಆ ಮಹಿಳೆಯನ್ನು ಹುಡುಕಿ ತೆಗೆದು ಆಕೆಯ ಇಂಟರ್ಯೂ ಮಾಡಿದರೆ ಹೇಗೆ? ಎಂದು ಹೊಳೆದದ್ದೇ, ಮಂಗಳ ಗ್ರಹದ, ಗುಡ್ಡ, ಕುಳಿ ಯಾವುದನ್ನೂ ಬಿಡದೇ ಹುಡುಕಾಡ ತೊಡಗಿದ. ಹೀಗೆ ಹುಡುಕುತ್ತಾ ಹುಡುಕುತ್ತಾ ಹೋದ ಹಾಗೆಯೇ ಗುಡ್ಡದ ಕೊನೆಗೆ ತಲೆಗೆದರಿದ ಒಂದು ಹೆಂಗಸು ಏನನ್ನೋ ಯೋಚಿಸುತ್ತಾ ಕುಳಿತ್ತಿತ್ತು. ನೋಡಿದರೆ, ಅದೇ ಹೆಂಗಸು! ಉಪಗ್ರಹ ತೆಗೆದ ಪೋಟೊದಲ್ಲಿದ್ದ ಹೆಂಗಸು ಅದಾಗಿತ್ತು!</b></span><br />
<span style="color: blue; font-size: large;"><b>ಕಾಸಿ ಇಂಟರ್ಯೂಗೆ ರೆಡಿಯಾದ. ‘‘ಯಾರಮ್ಮಾ ನೀನು’’!</b></span><br />
<span style="color: blue; font-size: large;"><b>ಹೆಂಗಸು ಕಾಸಿಯನ್ನು ನೋಡಿದ್ದೇ ‘‘ನೀನು ಇಲ್ಲಿಗೂ ಬಂದೆಯಾ?’’ ಎಂದಿತು.</b></span><br />
<span style="color: blue; font-size: large;"><b> ಕಾಸಿಗೆ ಅಚ್ಚರಿ. ‘‘ಅರೆ! ಈ ಹೆಂಗಸಿಗೆ ನನ್ನ ಪರಿಚಯವಿದೆ’’ ‘‘ನಿನಗೆ ನನ್ನ ಪರಿಚಯವಿದೆಯೇ?’’ ಕೇಳಿದ.</b></span><br />
<span style="color: blue; font-size: large;"><b>‘‘ಇಲ್ಲದೇ ಏನು? ನಿನ್ನದು ಮಾತ್ರ ಅಲ್ಲ. ಭೂಮಿಯಿಂದ ಇಲ್ಲಿಗೆ ಬಂದಿರುವ ಎಲ್ಲರ ಪರಿಚಯವೂ ಇದೆ’’</b></span><br />
<span style="color: blue; font-size: large;"><b>‘‘ಅದು ಹೇಗೆ?’’</b></span><br />
<span style="color: blue; font-size: large;"><b>ಮಹಿಳೆ ನಿಟ್ಟುಸಿರಿಟ್ಟು ಹೇಳಿದಳು ‘‘ನಾನು ಕೂಡಾ ಭೂಮಿಯವಳೇ?’’</b></span><br />
<span style="color: blue; font-size: large;"><b>ಕಾಸಿ ಅಚ್ಚರಿಯಿಂದ ನೋಡತೊಡಗಿದ. ಮಹಿಳೆ ಹೇಳಿದಳು ‘‘ಭೂಮಿಯಲ್ಲಿ ನನ್ನ ಮೇಲೆ ನಡೆದ ದೌರ್ಜನ್ಯದಿಂದ ಪಾರಾಗಿ ಬದುಕಿದೆಯಾ ಬಡ ಜೀವವೇ ಎಂದು ಈ ಮಂಗಳ ಗ್ರಹದಲ್ಲಿ ಬಂದು ಒಂದಿಷ್ಟು ನೆಮ್ಮದಿಯಿಂದ ಇದ್ದೆ. ಆದರೆ ಅಷ್ಟರಲ್ಲಿ ಆ ಬೋ... ಮಗಂದು... ಉಪಗ್ರಹ ನನ್ನ ಚಿತ್ರ ತೆಗೆದು ಕಳುಹಿಸಿತು. ಈಗ ನೋಡಿದರೆ ಇಲ್ಲಿಗೂ ಬಂದು ನನ್ನನ್ನು ಕಾಡುತ್ತಿದ್ದಾರೆ...ಇನ್ನು ಬುಧ ಗ್ರಹವೋ, ಶನಿಗ್ರಹವೋ ಹುಡುಕಬೇಕು... ಈ ಶನಿಗಳಿಂದ ಪಾರಾಗುವುದಕ್ಕೆ...’’</b></span><br />
<span style="color: blue; font-size: large;"><b>ಕಾಸಿ ಕೇಳಿದ ‘‘ನಿನ್ನ ಹೆಸರೇನಮ್ಮ?’’</b></span><br />
<span style="color: blue; font-size: large;"><b>ಹೆಂಗಸು ಕಾಸಿಯನ್ನು ದುರುಗುಟ್ಟಿ ನೋಡಿ ಹೇಳಿತು ‘‘ಅದ್ಯಾವ ಸೀಮೆಯ ಪತ್ರಕರ್ತನೋ ನೀನು... ಇನ್ನೂ ಗೊತ್ತಾಗಲಿಲ್ಲವೇ ನಾನು ಯಾರೆಂದು? ನಾನೇ ಭಾರತ ಮಾತೆ. ಅಲ್ಲಿಂದ ಪಾರಾಗಿ ಇಲ್ಲಿ ಮಂಗಳ ಗ್ರಹದಲ್ಲಿ ಸ್ವಲ್ಪ ಸಮಯ ನೆಮ್ಮದಿಯಿಂದ ಇದ್ದೆ. ಇನ್ನು ಅದೂ ಸಾಧ್ಯವಿಲ್ಲ...’’</b></span><br />
<span style="color: blue; font-size: large;"><b>‘‘ಭಾರತ ಮಾತೆ’’ ಎಂಬ ಶಬ್ದ ಕೇಳಿದ್ದೇ... ಯಾರೋ ಓಡೋಡಿ ಬಂದಂತಾಯ್ತು. ಕಾಸಿ ತಿರುಗಿ ನೋಡಿದರೆ ಚಿತ್ರ ಕಲಾವಿದ ಎಂ.ಎಫ್.ಹುಸೇನರು ಕೈಯಲ್ಲಿ ಕುಂಚ ಹಿಡಿದು ಓಡೋಡಿ ಬರುತ್ತಿದ್ದರು. ಹುಸೇನರನ್ನು ನೋಡಿದ್ದೇ... ‘‘ಅಯ್ಯೋ... ನನ್ನ ಅಳಿದುಳಿದ ಮಾನವನ್ನು ತೆಗೆಯಲು ಇವನೂ ಬಂದಿದ್ದಾನಲ್ಲಪ್ಪ...’’ ಎಂದು ಭಾರತ ಮಾತೆ ಸೆರಗಿನಿಂದ ಎದೆಯನ್ನು ಮುಚ್ಚಿಕೊಂಡು ಓಡತೊಡಗಿದಳು.</b></span><br />
<span style="color: purple; font-size: large;"><b>(ಫೆಬ್ರವರಿ 17, 2008, ರವಿವಾರ)</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-62195493803984183952015-05-12T02:34:00.001-07:002015-05-12T02:34:11.657-07:00‘ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ...’<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://2.bp.blogspot.com/-cJVLtRrR9TQ/VVHI8L61mBI/AAAAAAAAAP8/hvh25iu6B2s/s1600/mars.jpg" imageanchor="1" style="margin-left: 1em; margin-right: 1em;"><img border="0" height="220" src="http://2.bp.blogspot.com/-cJVLtRrR9TQ/VVHI8L61mBI/AAAAAAAAAP8/hvh25iu6B2s/s320/mars.jpg" width="320" /></a></div>
<b style="font-size: x-large;"><span style="color: purple;">ಇದು ಜನವರಿ, 20, 2008, ರವಿವಾರ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ </span></b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಂಗಳ ಗ್ರಹದ ಜೀವಿಗಳು ಕೊನೆಗೂ ಭೂಮಿಯಲ್ಲಿ ಜೀವಿಗಳಿರುವುದನ್ನು ಪತ್ತೆ ಮಾಡಿದವು. ತಕ್ಷಣ ಮಂಗಳ ಗ್ರಹದ ವಿಜ್ಞಾನಿಗಳು ಸಭೆ ಸೇರಿದರು. ಒಂದು ತಂಡವನ್ನು ಮಾಡಿ ಭೂಮಿಗೆ ಕಳುಹಿಸುವುದೆಂದು ತೀರ್ಮಾನಿಸಲಾಯಿತು. ಭೂಮಿಯ ಬಗೆಗಿನ ವಿವರಗಳನ್ನು, ಅಲ್ಲಿಯ ಜನಜೀವನ, ಬದುಕಿನ ಶೈಲಿಯನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ಮಾಡಬೇಕೆಂದು ಈ ತಂಡಕ್ಕೆ ತಿಳಿಸಲಾಯಿತು. ಮಂಗಳ ಗ್ರಹದಿಂದ ಈ ತಂಡ ನೇರವಾಗಿ ಕರ್ನಾಟಕಕ್ಕೇ ಬಂದಿಳಿದು, ಗುಪ್ತವಾಗಿ ಜನರ ನಡುವೆ ಓಡಾಡಿ ಒಂದು ವರದಿಯನ್ನು ಸಿದ್ಧ ಪಡಿಸಿ, ಮರಳಿ ತಮ್ಮ ಗ್ರಹಕ್ಕೆ ತೆರಳಿತು. ಒಂದು ದಿನ ಮುಂಜಾನೆ ಪತ್ರಕರ್ತ ಎಂಜಲು ಕಾಸಿ ಮೂತ್ರ ಮಾಡಲೆಂದು ಎದ್ದಾಗ ಆಕಾಶದಿಂದ ಎನೋ ಬಿದ್ದಂತಾಯಿತು. ನೋಡಿದರೆ ಅದು ಮಂಗಳ ಗ್ರಹದ ಜೀವಿಗಳು ಸಿದ್ಧ ಪಡಿಸಿದ ವರದಿ. ಬಹುಶಃ ಕೈ ಜಾರಿ ಕೆಳಗೆ ಬಿದ್ದಿರಬಹುದು ಎಂದು ಕಾಸಿ ಒಮ್ಮೆ ಆಕಾಶ ನೋಡಿದ. ಮಂಗಳ ಗ್ರಹದ ಜೀವಿಗಳು ತಮ್ಮ ವಿಜ್ಞಾನಿಗಳಿಗೆ ನೀಡಿದ ಆ ಸ್ಕೂಪ್ ವರದಿ ಈ ಕೆಳಗಿನಂತಿದೆ.</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="color: blue; font-size: large;"><b>1. ನಾವು ಕರ್ನಾಟಕ ಎಂಬ ಊರಿಗೆ ಮೊದಲು ಇಳಿದೆವು. ಇದು ಸಂಪೂರ್ಣ ಧೂಳಿನಿಂದಾವತವಾದ ಒಂದು ಗ್ರಹ. ಇಳಿದಾಕ್ಷಣ ನಾವು ಬಹತ್ ಕುಳಿಗಳನ್ನು ಅಥವಾ ಹೊಂಡಗಳನ್ನು ಕಂಡೆವು. ಈ ಕುಳಿಗಳನ್ನು ಇಲ್ಲಿನ ಜನರು ರಸ್ತೆಗಳೆಂದು ಕರೆಯುತ್ತಾರೆ.</b></span><br />
<span style="color: blue; font-size: large;"><b>2. ನಮ್ಮ ಗ್ರಹದಲ್ಲಿರುವಂತೆ ಭೂಮಿಯಲ್ಲಿಯೂ ಕಳ್ಳರು, ದರೋಡೆಕೋರರು ಇದ್ದಾರೆ. ಆದರೆ ಅವರನ್ನು ಈ ಗ್ರಹದಲ್ಲಿ ರಾಜಕಾರಣಿಗಳು ಎಂಬ ವಿಚಿತ್ರ ಹೆಸರಿನಿಂದ ಕರೆಯುತ್ತಾರೆ. ಅವರಿಗಾಗಿಯೇ ಭಾರೀ ಸೌಧವೊಂದನ್ನು ಕಟ್ಟಿದ್ದಾರೆ. ಅದನ್ನು ವಿಧಾನ ಸೌಧ ಎಂದು ಕರೆಯುತ್ತಾರೆ. ದರೋಡೆ ಮಾಡುವುದಕ್ಕಾಗಿಯೇ ಇಲ್ಲಿ ಸಭೆಗಳು ಬಹಿರಂಗವಾಗಿ ನಡೆಯುತ್ತವೆ. ಅದನ್ನು ಈ ಗ್ರಹದ ಜನರು ಅಧಿವೇಶನ ಎಂದು ಕರೆಯುತ್ತಾರೆ. ಅತ್ಯುತ್ತಮ ದರೋಡೆಕೋರರನ್ನು ಆಯ್ಕೆ ಮಾಡುವುದಕ್ಕಾಗಿ ಇಲ್ಲಿ ಚುನಾವಣೆಗಳೂ ನಡೆಯುತ್ತವೆ. ಇಲ್ಲಿ ಹೊಟ್ಟೆಗೆ ತಿನ್ನಲು ಏನೂ ಇಲ್ಲದವರನ್ನು ಕಳ್ಳರು, ನಕ್ಸಲೀಯರು ಎಂದು ಕರೆಯುತ್ತಾರೆ. ಅವರನ್ನು ಕೊಂದು ಹಾಕುವುದಕ್ಕಾಗಿಯೇ ಇಲ್ಲಿ ವಿಶೇಷ ಪಡೆಗಳಿವೆ. ಈ ಪಡೆಗಳನ್ನು ಆ ಹೊಟ್ಟೆಗೆ ಇಲ್ಲದವರೇ ದುಡ್ಡುಕೊಟ್ಟು ಸಾಕುತ್ತಾರೆ.</b></span><br />
<span style="color: blue; font-size: large;"><b>3. ಇದೊಂದು ವಿಚಿತ್ರ ಗ್ರಹ. ಇಲ್ಲಿ ಜನರನ್ನು ಹಿಂಸಿಸುವುದಕ್ಕಾಗಿಯೇ, ಅಮಾಯಕರನ್ನು ಬಂಧಿಸಿ ಅವರ ಮೇಲೆ ಮೊಕದ್ದಮೆ ಹೂಡುವುದಕ್ಕಾಗಿಯೇ ಒಂದು ಇಲಾಖೆ ಇದೆ. ಆ ಇಲಾಖೆಯನ್ನು ಅವರು ಪೊಲೀಸ್ ಇಲಾಖೆ ಎಂದು ಕರೆಯುತ್ತಾರೆ. ಕದಿಯದವರನ್ನು ಕದಿಯುವಂತೆ ಮಾಡುವುದು ಇವರ ಮುಖ್ಯ ಕೆಲಸ.</b></span><br />
<span style="color: blue; font-size: large;"><b>4. ಇಲ್ಲೊಂದು ಉಡುಪಿ ಎನ್ನುವ ಸ್ಥಳ ಇದೆ. ಇದನ್ನೇ ‘ಜಗತ್ತು’ ಎಂದೂ ಇಲ್ಲಿನವರು ಕರೆಯುತ್ತಾರೆ. ಈ ಜಗತ್ತಿಗೆ ಗುರುಗಳೂ ಇದ್ದಾರೆ. ಅವರು ತಮ್ಮನ್ನು ತಾವು ಜಗದ್ಗುರು ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಇಲ್ಲಿ ಉಡುಪಿ ಮಾತ್ರ ಜಗತ್ತು ಮತ್ತು ಅದರಾಚೆಗೆ ಜಗತ್ತು ಇಲ್ಲ ಎನ್ನುವ ವಿಷಯದಲ್ಲಿ ಭಾರೀ ಜಗಳವಾಯಿತು. ಒಬ್ಬ ಜಗದ್ಗುರು ಸಮುದ್ರದಾಚೆಗೂ ಜಗತ್ತು ಇದೆ ಎಂದರೆ, ಉಳಿದವರೆಲ್ಲಾ ಸಮುದ್ರದಾಚೆಗೆ ಜಗತ್ತು ಇಲ್ಲ ಎಂದು ವಾದಿಸಿದರು. ಈ ಜಗಳವನ್ನು ಇಲ್ಲಿ ‘ಪರ್ಯಾಯೋತ್ಸವ’ ಎಂದು ಕರೆಯುತ್ತಾರೆ.</b></span><br />
<span style="color: blue; font-size: large;"><b>5. ಇಲ್ಲಿ ‘ಸಂಸ್ಕೃತಿ’ ಎನ್ನುವ ವಿಚಿತ್ರ ಪದವನ್ನು ಬಳಸುತ್ತಾರೆ. ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ, ಸಾರ್ವಜನಿಕವಾಗಿ ಅಮಾಯಕರನ್ನು ಬೆತ್ತಲೆ ಮಾಡಿ ಥಳಿಸುವುದು, ಆದಿವಾಸಿಗಳು ಎಂದು ಕರೆಸಿಕೊಳ್ಳುವವರನ್ನು ಯರ್ರಾಬಿರ್ರಿ ಥಳಿಸುವುದು ಹೀಗೆ ಇವರು ತಮ್ಮ ಸಂಸ್ಕೃತಿಯನ್ನು ಆಚರಿಸಿಕೊಳ್ಳುತ್ತಾರೆ. ಸುಮಾರು 5 ವರ್ಷಗಳ ಹಿಂದೆ ಗುಜರಾತ್ ಎಂಬ ಊರಿನಲ್ಲಿ ಭಾರೀ ಸಾಂಸ್ಕೃತಿಕ ಉತ್ಸವ ಆಚರಣೆಯಾಯಿತಂತೆ. ನರೇಂದ್ರ ಮೋದಿ ಎಂಬ ನಾಯಕನೇ ಆ ಸಾಂಸ್ಕೃತಿಕ ಆಚರಣೆಯ ನೇತತ್ವವನ್ನು ವಹಿಸಿದ್ದರಿಂದ, ಜನರು ಆತನನ್ನೇ ಮತ್ತೆ ತಮ್ಮ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಇಲ್ಲಿಯ ಜನರು ಸಾಂಸ್ಕೃತಿಕ ಪುನರುತ್ಥಾನ ಎಂದೂ ಕರೆಯುತ್ತಾರೆ.</b></span><br />
<span style="color: blue; font-size: large;"><b>6. ಇಲ್ಲಿ ‘ದನ’ ಎನ್ನುವ ಒಂದು ಪ್ರಾಣಿ ಇದೆ. ಇದು ಹಾಲು ಕೊಡುತ್ತದೆ. ಜೊತೆಗೆ ಇದನ್ನು ಹಾಲಿಗಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳಿಗೆ ಬಳಸಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಇಲ್ಲಿನ ಜೀವಿಗಳು ಪ್ರಯೋಗ ನಡೆಸುತ್ತಿವೆ. ಕರೆದರೆ ಹಾಲು ಮಾತ್ರ ಅಲ್ಲ, ಅಧಿಕಾರದ ಕುರ್ಚಿ, ರಕ್ತ, ಹಿಂಸೆ ಇತ್ಯಾದಿಗಳು ಬರಲು ಸಾಧ್ಯವೆ ಎಂದು ಅವರು ಪ್ರಯೋಗ ಮಾಡುತ್ತಿದ್ದಾರೆ. ಈ ಪ್ರಯೋಗ ಭಾಗಶಃಯಾಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಈವರೆಗೆ ಈ ದನ ಎನ್ನುವ ಪ್ರಾಣಿ ಬಿಳಿ ಹಾಲನ್ನು ಮಾತ್ರ ಕೊಡುತ್ತಿತ್ತು. ಕೇಸರಿ ಬಣ್ಣದ ಹಾಲನ್ನು ತೆಗೆಯಲು ಸಾಧ್ಯವೆ ಎಂಬ ಕುರಿತಂತೆಯೂ ಭಾರೀ ಪ್ರಯೋಗಗಳು ನಡೆಯುತ್ತಿವೆ.</b></span><br />
<span style="color: blue; font-size: large;"><b>7. ಇಲ್ಲಿ ಕಾಡುಗಳಿರುವಂತೆಯೇ ಅಲ್ಲಲ್ಲಿ ‘ಹಳ್ಳಿ’ ಎನ್ನುವುದು ಇವೆಯಂತೆ. ಇವುಗಳಲ್ಲಿ ತುಂಬಾ ಹಿಂದೆ ‘ರೈತ’ ಎಂಬ ಜೀವಿ ವಾಸಿಸುತ್ತಿತ್ತಂತೆ. ಇದೊಂದು ಭಯಂಕರ ಜೀವಿಯಾಗಿತ್ತಂತೆ. ಮುಖ್ಯವಾಗಿ ಭಯೋತ್ಪಾದನೆ, ಉಗ್ರವಾದ ಮೊದಲಾದ ಚಟುವಟಿಕೆಗಳನ್ನು ಈ ಜೀವಿ ನಡೆಸುತ್ತಿತ್ತಂತೆ. ಇವುಗಳು ತಮ್ಮ ಉಗ್ರ ಚಟುವಟಿಕೆಗಳಿಗಾಗಿ ‘ನೇಗಿಲು’ ಎಂಬ ಭಯಾನಕ ಆಯುಧವನ್ನು ಬಳಸುತ್ತಿತ್ತಂತೆ. ಆದುದರಿಂದ ಇವುಗಳನ್ನು ಎನ್ಕೌಂಟರ್ನಿಂದ ಕೊಲ್ಲಲಾಯಿತಂತೆ. ಈಗಲೂ ಈ ‘ರೈತ’ ಎನ್ನುವ ಜೀವಿ ಅಲ್ಲಲ್ಲಿ ಉಳಿದುಕೊಂಡಿದೆಯಂತೆ. ಅದನ್ನು ಹುಡುಕಿ ಹತ್ಯೆಗೈಯುವುದಕ್ಕಾಗಿಯೇ ‘ಸೆಝ್’ ‘ಐಟಿ ಪಾರ್ಕ್’ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆಯಂತೆ. ಇದರ ವಿರುದ್ಧವೂ ಈ ಅಳಿದುಳಿದ ‘ರೈತ’ರು ಎನ್ನುವ ಜೀವಿಗಳು ಭಾರೀ ಸಂಚು ನಡೆಸುತ್ತಿವೆಯಂತೆ.</b></span><br />
<span style="color: blue; font-size: large;"><b>8. ಇಲ್ಲಿ ಭಾರೀ ಶ್ರೀಮಂತರು ಮುಖ ಒರೆಸಿಕೊಳ್ಳುವುದಕ್ಕೆ ಹಾಗೂ ಟಾಯ್ಲೆಟ್ನಲ್ಲಿ ಹೊಲಸನ್ನು ಒರೆಸಿಕೊಳ್ಳುವುದಕ್ಕೆ ಕಾಗದಗಳನ್ನು ಬಳಸುತ್ತಾರೆ. ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ. ಈ ಪತ್ರಿಕೆಗಳನ್ನು ಬಣ್ಣ ಬಣ್ಣವಾಗಿ ಮುದ್ರಿಸುತ್ತಾರೆ. ವಿವಿಧ ಕಂಪೆನಿಗಳು ವಿವಿಧ ಹೆಸರುಗಳಿಂದ ಇವುಗಳನ್ನು ಮುದ್ರಿಸುತ್ತವೆ. ಇಲ್ಲಿ ಮೇಲೆ ಹೇಳಿದ ‘ಸಂಸ್ಕೃತಿ’ಯ ವಕ್ತಾರರು ಎಂದು ಕರೆಸಿಕೊಂಡವರೂ ಈ ಕಾಗದಗಳನ್ನು ಬಳಸುತ್ತಾರೆ. ಅವರು ವಾಂತಿ ಮಾಡಲು ಬಳಸುವುದು ಇದೇ ಕಾಗದಗಳನ್ನು. ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳನ್ನೇ ಈ ಕೆಲಸಕ್ಕೆ ಹೆಚ್ಚು ಬಳಸುತ್ತಾರೆ. ಹಾಗೆಯೇ ಸಮಾಜದ ಉನ್ನತ ವರ್ಣೀಯರು ಮುದ್ಸಿುವ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಯಾಕೆಂದರೆ ಅದು ಹೊಲಸನ್ನು ಒರೆಸುವುದಕ್ಕೆ, ವಾಂತಿ ಮಾಡುವುದಕ್ಕೆ ಹೆಚ್ಚು ಕ್ವಾಲಿಟಿ ಹೊಂದಿರುತ್ತದೆ ಎನ್ನುವುದು ಈ ಗ್ರಹದವರ ನಂಬಿಕೆ.</b></span><br />
<span style="color: blue; font-size: large;"><b>9. ಇಲ್ಲಿ ಕಸದ ತೊಟ್ಟಿ ಎಂಬ ಒಂದು ಪೆಟ್ಟಿಗೆ ಇದೆ. ಇದನ್ನು ಆಗಷ್ಟೇ ಹುಟ್ಟಿದ ಅನಾಥ ಮಕ್ಕಳನ್ನು ಎಸೆಯುವುದಕ್ಕೆ, ‘ಹೆಣ್ಣು’ ಎಂಬ ಭಯಾನಕ ಜೀವಿಯೊಂದು ಜನಿಸಿದರೆ ಅದನ್ನು ಕತ್ತು ಹಿಸುಕಿ ಕೊಂದು ಎಸೆಯುವುದಕ್ಕೆ, ಹೊಟ್ಟೆಯೊಳಗಿರುವ ಭ್ರೂಣವನ್ನು ಎಸೆಯುವುದಕ್ಕೆ ಬಳಸುತ್ತಾರೆ. ಇಂತಹ ಕೆಲಸಕ್ಕಾಗಿಯೇ ಈ ಗ್ರಹದಲ್ಲಿ ಚರಂಡಿ, ಗಟಾರ ಮೊದಲಾದವುಗಳನ್ನು ಮಾಡದ್ದಾರೆ. ಕಸಗಳನ್ನು ಎಸೆಯುವುದಕ್ಕೆ ಸಾರ್ವಜನಿಕ ಸ್ಥಳ, ಇನ್ನೊಬ್ಬರ ಅಂಗಳ, ರಸ್ತೆ ಇತ್ಯಾದಿಗಳನ್ನು ಬಳಸುತ್ತಾರೆ.</b></span><br />
<span style="color: blue; font-size: large;"><b>10. ಈ ಎಲ್ಲ ವರದಿಗಳ ಆಧಾರದಲ್ಲಿ ಸಾಬೀತಾಗುವುದೇನೆಂದರೆ, ಈ ಭೂಮಿ ಎಂಬ ಗ್ರಹ ಯಾವ ಕಾರಣಕ್ಕೂ ‘ಮನುಷ್ಯ’ರು ವಾಸ ಮಾಡುವುದಕ್ಕೆ ಯೋಗ್ಯವಾದ ಗ್ರಹ ಅಲ್ಲ. ಆದುದರಿಂದ ಮಂಗಳ ಗ್ರಹದ ಯಾವ ಮನುಷ್ಯರು ಕೂಡ ತಪ್ಪಿಯೂ ಈ ಭೂಮಿ ಎಂಬ ಗ್ರಹದಲ್ಲಿ ವಾಸ ಮಾಡುವ ಕುರಿತು ಯೋಜನೆ ಮಾಡಬಾರದು. ಹಾಗೆ ಯೋಚನೆ ಮಾಡಿದರೆ ಆಗುವ ಅನಾಹುತಕ್ಕೆ ಮಂಗಳ ಗ್ರಹದ ವಿಜ್ಞಾನಿಗಳಾಗಲಿ, ಸರಕಾರವಾಗಲಿ ಹೊಣೆಯಾಗುವುದಿಲ್ಲ.</b></span><br />
<span style="color: purple; font-size: large;"><b>(ಜನವರಿ, 20, 2008, ರವಿವಾರ)</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-38485488415686575412015-05-10T00:45:00.000-07:002015-05-10T00:45:54.357-07:00ನಾನೇ ಮೂತ್ರ ಸುರಿದು ಬೆಳೆಸಿದ ಪಕ್ಷ!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://1.bp.blogspot.com/-Ameuy6wwWgw/VU8MeRBn8SI/AAAAAAAAAPs/hxYyng4MN3M/s1600/gadkari.jpg" imageanchor="1" style="margin-left: 1em; margin-right: 1em;"><img border="0" height="215" src="http://1.bp.blogspot.com/-Ameuy6wwWgw/VU8MeRBn8SI/AAAAAAAAAPs/hxYyng4MN3M/s320/gadkari.jpg" width="320" /></a></div>
<div style="background-color: white; margin-bottom: 6px;">
<b style="color: purple; font-family: helvetica, arial, 'lucida grande', sans-serif; font-size: x-large; line-height: 19.3199996948242px;"><br /></b>
<b style="color: purple; font-family: helvetica, arial, 'lucida grande', sans-serif; font-size: x-large; line-height: 19.3199996948242px;">ನನ್ನ ಮೂತ್ರವನ್ನು ತೋಟಕ್ಕೆ ಗೊಬ್ಬರವಾಗಿ ಬಳಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ 10-5-2015ರ ರವಿವಾರ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ </b></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b><br /></b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>ಸಚಿವ ನಿತಿನ್ ಗಡ್ಕರಿಯ ಮನೆಯ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಅದಾಗಷ್ಟೇ ಹಿಂದುಗಡೆಯಿರುವ ತೋಟದಲ್ಲಿ ಮೂತ್ರ ವಿಸರ್ಜನೆ ಮಾಡಿ ಒಳ ಬಂದಿದ್ದ ಗಡ್ಕರಿಯವರು ಕಿಟಕಿಯಿಂದ ಇಣುಕಿ ನೋಡಿದರು. ನೋಡಿದರೆ ಪತ್ರಕರ್ತ ಎಂಜಲು ಕಾಸಿ.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>ಬಾಗಿಲು ತೆಗೆದದ್ದೇ ‘‘ಏನ್ರೀ...ಇಂಟರ್ಯೂ ಮಾಡಲು ಬಂದಿದ್ದೀರಾ...’’ ಎಂದು ಕೇಳಿದರು.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ಇಲ್ಲಾ ಸಾರ್...ಮೂತ್ರ ಮಾಡುವುದಕ್ಕೆ ಬಂದಿದ್ದೇನೆ....ನಿಮ್ಮ ತೋಟಕ್ಕೆ ನೀವು ಮೂತ್ರವನ್ನೇ ಬಳಸುತ್ತಿದ್ದೀರಿ ಎಂದು ಗೊತ್ತಾಯಿತು. ಕರ್ನಾಟಕದ ಮಂತ್ರಿಗಳನ್ನು ಇಂಟರ್ಯೂ ಮಾಡಲು ಬಂದಿದ್ದೆ. ಮೂತ್ರ ವಿಸರ್ಜನೆ ಮಾಡಲು ಎಲ್ಲೂ ಶೌಚಾಲಯ ಸಿಗಲಿಲ್ಲ. ಯಾರೋ ನಿಮ್ಮ ಮನೆ ತೋರಿಸಿದರು...’’ ಎಂದು ಹಲ್ಲು ಗಿಂಜಿದ. ‘‘ಬನ್ನಿ...ಬನ್ನಿ...ನನ್ನ ತೋಟ ನಿಮ್ಮನ್ನೇ ಕಾಯುತ್ತಿದೆ...ಇಡೀ ದಿಲ್ಲಿಯ ಜನರೆಲ್ಲ ನನ್ನ ತೋಟವನ್ನೇ ಸುಲಭ ಶೌಚಾಲಯ ಮಾಡಿದ್ದಾರೆ...ಶುಚಿತ್ವಕ್ಕಾಗಿ ಪ್ರಧಾನಿಯವರು ಬಿಡುಗಡೆ ಮಾಡಿದ ಅನುದಾನದಲ್ಲಿ ಒಂದು ಭಾಗವನ್ನು ನಾನು ನನ್ನ ತೋಟಕ್ಕೆ ಹಾಕಿದ್ದೇನೆ...ಸುಲಭ ಶೌಚಾಲಯವೂ ಆಯಿತು...ಸುಲಭದಲ್ಲಿ ತೋಟವೂ ಆಯಿತು...ಇನ್ನು ಮುಂದೆ ಶೌಚಾಲಯಕ್ಕಾಗಿ ಮೀಸಲಿರುವ ಹಣವನ್ನು ಆಯಾ ಊರಿನಲ್ಲಿರುವ ಅಡಿಕೆ ತೋಟದ ಮಾಲಕರಿಗೆ ವಿತರಿಸಲಾಗುತ್ತದೆ. ಆಯಾ ಊರಿನ ಜನರು ಅವರ ತೋಟದಲ್ಲೇ ಮೂತ್ರ ಮತ್ತು ಇನ್ನಿತರ ವಿಸರ್ಜನೆಯನ್ನು ಮಾಡಿ ತೋಟಕ್ಕೆ ಗೊಬ್ಬರ ಒದಗಿಸಬೇಕು. ಹಾಗೆಯೇ ಎರಡೂ ಕಾರ್ಯವೂ ಆದಂತಾಯಿತು. ರೈತರ ಗದ್ದೆಗೆ ಗೊಬ್ಬರ ಪೂರೈಸುವ ಬದಲು ಅವರ ಗದ್ದೆ ತೋಟಗಳನ್ನೆಲ್ಲ ಸುಲಭ ಶೌಚಾಲಯ ಮಾಡುವ ಯೋಜನೆ ನನ್ನ ಬಳಿ ಇದೆ. ಪ್ರಧಾನಿಯವರೂ ಇದಕ್ಕೆ ಸಮ್ಮತಿ ನೀಡಿದ್ದಾರೆ...ಹೀಗೆ ಪ್ರತಿ ಊರಲ್ಲೂ ವಿಶಾಲ ಶೌಚಾಲಯ ನಿರ್ಮಾಣ ಮಾಡಿದಂತಾಗುತ್ತದೆ....’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>ಇದ್ದಕ್ಕಿದ್ದಂತೆಯೇ ಗಡ್ಕರಿಯ ಹಿತ್ತಲಿನಿಂದ ದುರ್ವಾಸನೆ ಮೂಗಿಗೆ ಬಡಿಯಿತು. ಎಂಜಲು ಕಾಸಿ ಮೂಗು ಮುಚ್ಚಿಕೊಂಡೇ ಸಂದರ್ಶನ ಮಾಡತೊಡಗಿದ ‘‘ಸಾರ್...ನಿಮ್ಮ ಮೂತ್ರವನ್ನೇ ಗೊಬ್ಬರವಾಗಿ ಬಳಸುವುದನ್ನು ನೀವು ಕಂಡು ಹಿಡಿದದ್ದು ಹೇಗೆ ಸಾರ್?’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ನಾನದನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗಲೇ ಪ್ರಯೋಗ ಮಾಡುತ್ತಾ ಬಂದೆ. ಕೊನೆಗೂ ಒಳ್ಳೆಯ ಲಿತಾಂಶ ಸಿಕ್ಕಿತು. ಇದೀಗ ನನ್ನ ಲಿತಾಂಶವನ್ನು ಘೋಷಿಸಿದ್ದೇನೆ.....’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ನೀವು ಅದನ್ನು ಹೇಗೆ, ಎಲ್ಲಿ ಪ್ರಯೋಗ ಮಾಡಿದಿರಿ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ನೋಡ್ರಿ...ನಮ್ಮ ಬಿಜೆಪಿ ಅನ್ನೋ ತೋಟ ಅದೇನು ಗೊಬ್ಬರ ಹಾಕಿದ್ರೂ ಸರಿಯಾಗಿ ಬೆಳೀತಾ ಇರ್ಲಿಲ್ಲ.....ರಾಮಜನ್ಮಭೂಮಿ ಗೊಬ್ಬರ ಹಾಕಿಯಾಯಿತು. ಗುಜರಾತ್ ಹತ್ಯಾಕಾಂಡ ಗೊಬ್ಬರ ಹಾಕಿ ಆಯಿತು...ಮುಂಬಯಿ ಗಲಭೆ ಗೊಬ್ಬರ...ಹೀಗೆ ಹಾಕದ ಗೊಬ್ಬರಗಳೇ ಇಲ್ಲ....ಬಳಿಕ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರು ನೋಡಿ. ನಾನು ಹೊಸ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದೆ. ಪ್ರತಿ ದಿನ ನನ್ನ ಮೂತ್ರವನ್ನೆಲ್ಲ ಸಂಗ್ರಹಿಸಿ, ಗೊಬ್ಬರ ರೂಪದಲ್ಲಿ ಬಳಸಿದೆ. ಬರೇ ಒಂದೆರಡು ವರ್ಷಗಳಲ್ಲಿ ಬಿಜೆಪಿ ವಿಶ್ವದೆತ್ತರ ಬೆಳೆದು ನಿಂತು ಇದೀಗ ಮೋದಿ ಪ್ರಧಾನಿಯಾಗಿ, ಕಾಂಗ್ರೆಸ್ ಮೂಲೆಗುಂಪಾಗಿ ಬಿಟ್ಟಿದೆ....’’ ಗಡ್ಕರಿ ಗುಟ್ಟನ್ನು ಬಿಚ್ಚಿಟ್ಟರು.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ಅಂದರೆ ಬಿಜೆಪಿ ಈ ಪ್ರಮಾಣದಲ್ಲಿ ಬೆಳೆಯುವುದಕ್ಕೆ ನಿಮ್ಮ ಗೊಬ್ಬರವೇ ಕಾರಣ ಎನ್ನುತ್ತೀರಾ?’’ ಕಾಸಿ ಅನುಮಾನದಿಂದ ಮತ್ತೆ ಕೇಳಿದ.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ಯಾಕ್ರೀ ಅನುಮಾನ?’’ ಗಡ್ಕರಿ ಸಿಟ್ಟಿನಿಂದ ಕೇಳಿದರು.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ಮತ್ಯಾಕೆ ಸಾರ್ ನಿಮ್ಮನ್ನು ಪಕ್ಷದಿಂದ ಕೆಳಗಿಳಿಸಿದರು? ನಿಮ್ಮನ್ನು ಕೆಳಗಿಳಿಸಿ ರಾಜ್ನಾಥ್ ಸಿಂಗ್ನನ್ನು ಯಾಕೆ ಪಕ್ಷಾಧ್ಯಕ್ಷ ಮಾಡಿದರು?’’ ಕಾಸಿ ಗೊಂದಲದಿಂದ ಕೇಳಿದ. ‘‘ನೋಡ್ರಿ...ಮೂತ್ರವನ್ನು ಗೊಬ್ಬರವಾಗಿ ಬಳಸುವಾಗ ಒಂದಿಷ್ಟು ದುರ್ವಾಸನೆ ಬರುವುದು ಸಹಜ. ಆದರೆ ಅದನ್ನು ಮುಂದಿಟ್ಟುಕೊಂಡು ‘ನನ್ನ ಅವ್ಯವಹಾರದ ದುರ್ವಾಸನೆ’ ಎಂದು ಆರೋಪಿಸಿದರು. ನಾನು ಮೂತ್ರ ಮಾಡಿ ಬೆಳೆಸಿದ ಪಕ್ಷದ ನಾಯಕ ಸ್ಥಾನದಿಂದ ನನ್ನನ್ನು ಕೆಳಗಿಳಿಸಿಬಿಟ್ಟರು. ಆದರೂ ತೋಟ ತುಂಬಾ ಚೆನ್ನಾಗಿ ಬೆಳೆದು ಇದೀಗ ಆ ತೋಟದ ಲವನ್ನು ನರೇಂದ್ರ ಮೋದಿಯಾದಿಯಾಗಿ ಎಲ್ಲರೂ ಅನುಭವಿಸುತ್ತಿದ್ದಾರೆ. ಮೂತ್ರ ಮಾಡಿದ ನನ್ನನ್ನು ಕಡೆಗಣಿಸಿದ್ದಾರೆ...’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>ಕಾಸಿಗೆ ತುಂಬಾ ಬೇಜಾರಾಯಿತು. ಆದರೂ ಮೂತ್ರದಿಂದಲೇ ಬಿಜೆಪಿ ಯೆನ್ನುವ ಮರ ಮುಗಿಲೆತ್ತರ ಬೆಳೆದಿದೆ ಎನ್ನುವುದು ಅವನಲ್ಲಿ ರೋಮಾಂಚನವನ್ನು ತರಿಸಿತು ‘‘ಸಾರ್...ಇನ್ನು ಈ ಮೂತ್ರದಿಂದ ಏನೇನು ಬೆಳೆಸುವುದೆಂದು ಮಾಡಿದ್ದೀರಿ?’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>ಗಡ್ಕರಿ ತನ್ನ ಯೋಜನೆಯನ್ನು ಮುಂದಿಟ್ಟರು ‘‘ಈ ದೇಶದ ಗದ್ದೆಗಳಿಗೆ, ತೋಟಗಳಿಗೆ ಮೂತ್ರವನ್ನೇ ಗೊಬ್ಬರವಾಗಿ ವಿತರಿಸಬೇಕು ಎಂದು ಮಾಡಿದ್ದೇವೆ...’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಇಡೀ ದೇಶಕ್ಕೆ ನೀವೊಬ್ಬರೇ ಮೂತ್ರವನ್ನು ಪೂರೈಸುತ್ತೀರಾ? ಅಷ್ಟೂ ಮೂತ್ರವನ್ನು ವಿಸರ್ಜಿಸಲು ನಿಮ್ಮಿಂದ ಸಾಧ್ಯವೆ?’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>ಗಡ್ಕರಿ ಸ್ಪಷ್ಟನೆ ನೀಡಿದರು ‘‘ಬರೇ ನನ್ನ ಮೂತ್ರ ಮಾತ್ರವಲ್ಲ....ಇಡೀ ಸಚಿವ ಸಂಪುಟದ ಪ್ರಮುಖರು ಮತ್ತು ಸಂಸದರ ಮೂತ್ರಗಳನ್ನು ಸಂಗ್ರಹಿಸಿ ಅದನ್ನು ದೇಶಕ್ಕೆ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ....’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ಇದಕ್ಕೆ ಎಲ್ಲ ಸಂಸದರೂ ಸಮ್ಮತಿಸಿದ್ದಾರಾ ಸಾರ್?’’ ಕಾಸಿಗೆ ಮತ್ತೆ ಅನುಮಾನ ಹತ್ತಿತು.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ನರೇಂದ್ರ ಮೋದಿಯವರು ತಕ್ಷಣ ಸಮ್ಮತಿಸಿದರು. ಈಗಾಗಲೇ ಬಿಜೆಪಿಯೊಳಗೆ ಕೆಲವು ಸ್ವಾಮೀಜಿಗಳ, ಸಾ್ವಗಳ ವೇಷದಲ್ಲಿರುವ ಸಂಸದರು ಕಂಡ ಕಂಡಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ನರೇಂದ್ರ ಮೋದಿಯವರ ಗಮನಕ್ಕೂ ಬಂದಿದೆ. ಭಾಷಣದ ಹೆಸರಿನಲ್ಲಿ, ಪತ್ರಿಕಾ ಹೇಳಿಕೆಯ ಹೆಸರಿನಲ್ಲಿ ಬಾಯಿಯಿಂದಲೂ ಮೂತ್ರ ವಿಸರ್ಜನೆ ಮಾಡುವ ಸಾಮರ್ಥ್ಯವನ್ನು ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಇವರ ಈ ಸಾಮರ್ಥ್ಯ ಬಿಜೆಪಿಯ ಪರಿಸರದಲ್ಲಿ ವ್ಯರ್ಥವಾಗಿ ಹರಿಯುತ್ತಿರುವುದರಿಂದ ಎಲ್ಲರೂ ಬಿಜೆಪಿ ಕಾಂಪೌಂಡ್ನೊಳಗೆ ಮೂಗು ಮುಚ್ಚಿ ಬರಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ, ಈ ವಿಸರ್ಜನೆಯನ್ನೆಲ್ಲ ಸಂಗ್ರಹಿಸಿ ದೇಶದಲ್ಲಿರುವ ತೋಟ, ಗದ್ದೆಗಳಿಗೆ ವಿತರಿಸಿದರೆ ಗೊಬ್ಬರಕ್ಕೆ ಗೊಬ್ಬರವೂ ಆಯಿತು. ನಮ್ಮ ಫಸಲೂ ಜಾಸ್ತಿಯಾಗುತ್ತದೆ...’’</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ಸಾರ್...ಹೀಗಾದಲ್ಲಿ ನರೇಂದ್ರ ಮೋದಿಯವರ ಶುಚಿತ್ವದ ಆಂದೋಲನದ ಗತಿ?’’ ಕಾಸಿ ಆತಂಕದಿಂದ ಕೇಳಿದ.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ಶುಚಿತ್ವ ಆಂದೋಲನ ಯಶಸ್ವಿಯಾಗಿ ನಡೆಯುತ್ತದೆ. ನಾವು ಪೂರೈಸಿದ ಮೂತ್ರಕ್ಕೆ ಬದಲಿಯಾಗಿ ಶುಚಿತ್ವಕ್ಕಾಗಿ ಬಿಡುಗಡೆ ಮಾಡಿದ ಹಣವನ್ನೆಲ್ಲ ಸಮಾನವಾಗಿ ಹಂಚಿಕೊಳ್ಳುತ್ತೇವೆ...ಹಾಗೆಯೇ ಈ ಗೊಬ್ಬರಕ್ಕೆ ‘ದೇಶಪ್ರೇಮಿ’ ಎಂದು ನಾಮಕರಣ ಮಾಡಿದ್ದೇವೆ...ನಮ್ಮ ಆಸಕ್ತಿಯನ್ನು ಕಂಡ ಅಮೆರಿಕದ ಅಧ್ಯಕ್ಷ ಒಬಾಮ ಅವರು ಕೂಡ ತಮ್ಮ ಅಮೂಲ್ಯ ಮೂತ್ರವನ್ನು ಕಳುಹಿಸಿಕೊಡುತ್ತೇನೆ...ಪ್ರತಿಯಾಗಿ ನಿಮ್ಮ ದೇಶದಲ್ಲಿ ವ್ಯರ್ಥವಾಗಿ ಬಿದ್ದಿರುವ ವಿಜ್ಞಾನಿಗಳನ್ನು, ತಂತ್ರಜ್ಞಾನಿಗಳನ್ನು ನಮಗೆ ಕಳುಹಿಸಿಕೊಡಿ ಎಂದಿದ್ದಾರೆ...ಈ ಒಪ್ಪಂದಕ್ಕೆ ಶೀಘ್ರ ಮೋದಿಯವರು ಸಹಿ ಹಾಕಲಿದ್ದಾರೆ...’’ ಇನ್ನೂ ಇಲ್ಲಿ ನಿಂತರೆ ಒಬಾಮನ ಮೂತ್ರಕ್ಕೆ ಬದಲಿಯಾಗಿ ತನ್ನನ್ನೇ ಕಳುಹಿಸಿಕೊಡಬಹುದು ಎಂದು ಕಾಸಿಗೆ ಭಯವಾಯಿತು. ‘‘ಸಾರ್ ಹೊರಟೆ...’’ ಎಂದ ಕಾಸಿ.</b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>‘‘ನಿಲ್ರೀ...ಎಳೆನೀರು ಕುಡಿದುಕೊಂಡು ಹೋಗಿ. ನನ್ನದೇ ಮನೆಯ ತೋಟದ ಎಳೆನೀರು...ತುಂಬಾ ರುಚಿ ಯಾಗಿದೆ...ನಾನೇ ಗೊಬ್ಬರ ಹಾಕಿ ಸಾಕಿದ ಮರ...’’ ಎನ್ನುತ್ತಿದ್ದಂತೆಯೇ ಕಾಸಿಗೆ ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಓಡ ತೊಡಗಿದ. </b></span></span></div>
<div style="background-color: white; margin-bottom: 6px;">
<span style="color: blue; font-family: helvetica, arial, lucida grande, sans-serif; font-size: large;"><span style="line-height: 19.3199996948242px;"><b>೧೦.೫.೨೦೧೫</b></span></span></div>
</div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-4772930137259825682015-05-09T01:13:00.002-07:002015-05-09T01:13:50.821-07:00ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ...!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://1.bp.blogspot.com/-7_nvLiboUgc/VU3BoctET7I/AAAAAAAAAPc/99jYMKK8eCc/s1600/exam.jpg" imageanchor="1" style="margin-left: 1em; margin-right: 1em;"><img border="0" height="312" src="http://1.bp.blogspot.com/-7_nvLiboUgc/VU3BoctET7I/AAAAAAAAAPc/99jYMKK8eCc/s320/exam.jpg" width="320" /></a></div>
<span style="color: purple; font-size: large;"><b>ಈ ಬುಡಬುಡಿಕೆ </b></span><b style="color: purple; font-size: x-large;">ಮೇ 4, 2008 ರವಿವಾರ</b><b style="color: purple; font-size: x-large;">ದ</b><b style="color: purple;"><span style="font-size: large;"> ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ </span></b><br />
<span style="color: purple;"><b><span style="font-size: large;"><br /></span></b></span>
<span style="color: blue; font-size: large;"><b>ಈ ಬಾರಿ ಪಿಯುಸಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಫೇಲಾಗಿ ಶಿಕ್ಷಣ ವ್ಯವಸ್ಥೆಯ ಮೇಲೆ, ಪಾಲಕರ ಮೇಲೆ ವಿದ್ಯಾರ್ಥಿಗಳು ಸೇಡು ತೀರಿಸಿಕೊಂಡ ವರದಿಯನ್ನು ಓದಿ ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಆತನಿಗೆ ಆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಒಮ್ಮೆ ನೋಡಬೇಕೆನ್ನಿಸಿತು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯೊಂದು ಅದು ಹೇಗೋ ಪತ್ರಕರ್ತ ಎಂಜಲು ಕಾಸಿಯ ಕೈ ಸೇರಿತು. ವಿದ್ಯಾರ್ಥಿಯೊಬ್ಬ ಕೆಲವು ಪ್ರಶ್ನೆಗೆ ಉತ್ತರಿಸಿದ ರೀತಿ ಕುತೂಹಲಕರವಾಗಿದ್ದುದರಿಂದ ಅದನ್ನು ಇಲ್ಲಿ ನೀಡಲಾಗಿದೆ.</b></span><br />
<span style="color: blue; font-size: large;"><b>1. ‘ಕ್ರಿಕೆಟ್’ ಇದರ ಕುರಿತಂತೆ ಐದು ವಾಕ್ಯಗಳಿಗೆ ಮೀರದಂತೆ ಉತ್ತರ ಬರೆಯಿರಿ.</b></span><br />
<span style="color: blue; font-size: large;"><b>ಕ್ರಿಕೆಟ್ ಒಂದು ಆಕರ್ಷಣೀಯ ಆಟ. ಇದನ್ನು ಬಯಲಿನಲ್ಲಿ ಕ್ಯಾಬರೆ ನರ್ತಕಿಯರು ಆಡುತ್ತಾರೆ. ಅವರಿಗೆ ಚಿಯರ್ಗರ್ಲ್ಸ್ ಎಂದು ಕರೆಯಲಾಗುತ್ತದೆ. ಶಾರುಕ್ ಖಾನ್ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ವಿಜಯ್ ಮಲ್ಯ, ಪ್ರೀತಿ ಝಿಂಟಾ ಮೊದಲಾದವರು ಭಾರತದ ಉಳಿದ ಅತ್ಯುತ್ತಮ ಆಟಗಾರರು. ಈ ಆಟಗಾರರು ಪೆವಿಲಿಯನ್ನಲ್ಲಿ ಕುಳಿತು ಆಡುತ್ತಿರುವಾಗ ಅದನ್ನು ನೋಡಲೆಂದು ಸಾವಿರಾರು ಜನರು ನೆರೆಯುತ್ತಾರೆ. ವಿರಾಮದ ಸಂದರ್ಭದಲ್ಲಿ ಸಚಿನ್, ಗಂಗುಲಿ ಮೊದಲಾದವರು ಮೈದಾನದ ಮಧ್ಯೆ ಬಾಲ್, ಬ್ಯಾಟ್ಗಳ ಮೂಲಕ ಪ್ರೇಕ್ಷಕರಿಗೆ ಬೇಜಾರಾಗದಂತೆ ನೋಡಿಕೊಳ್ಳುತ್ತಾರೆ. ಇದಕ್ಕಾಗಿ ಅವರಿಗೆ ಭಾರೀ ಹಣವನ್ನು ಕೊಟ್ಟು ಹರಾಜಿನಲ್ಲಿ ಕೊಂಡುಕೊಳ್ಳಲಾಗಿದೆ.</b></span><br />
<span style="color: blue; font-size: large;"><b>2. ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವೇನು? ಬೆಲೆಯೇರಿಕೆಯನ್ನು ಹೇಗೆ ತಡೆಯಬಹುದು?</b></span><br />
<span style="color: blue; font-size: large;"><b>ಇತ್ತೀಚೆಗೆ ಬಡವರು ಹೆಚ್ಚು ಹೆಚ್ಚು ಊಟ ಮಾಡಲು ತೊಡಗಿರುವುದೇ ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವಾಗಿದೆ. ಮೊದಲು ಬಡವರು ಎರಡು ದಿನಕ್ಕೊಮ್ಮೆ ಉಣ್ಣುತ್ತಿದ್ದರು. ಇದೀಗ ಅವರು ದಿನಕ್ಕೊಮ್ಮೆ ಉಣ್ಣುವುದಕ್ಕೆ ತೊಡಗಿದ್ದಾರೆ. ಅವರ ವರಮಾನ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಆದುದರಿಂದ ಬಡವರ ವರಮಾನ ಹೆಚ್ಚದಂತೆ ನೋಡಿಕೊಂಡರೆ ಬೆಲೆಯೇರಿಕೆಯನ್ನೂ ತಡೆಯಬಹುದಾಗಿದೆ. ಬಡವರು ಆದಷ್ಟು ಕಡಿಮೆ ಊಟ ಮಾಡುವಂತೆ ಅವರಿಗೆ ತಿಳಿ ಹೇಳಬೇಕು. ಉಳಿತಾಯವನ್ನು ಕಲಿಸಬೇಕು. ಕನಿಷ್ಠ ಅವರು ವಾರಕ್ಕೊಮ್ಮೆ ಊಟ ಮಾಡುವಂತಾದರೆ ಬೆಲೆಯಿಳಿಕೆಯಾಗಿ ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ಬರುತ್ತದೆ. ದೇಶ ಅಭಿವದ್ಧಿಯಾಗುತ್ತದೆ. ಅವರು ತಮ್ಮ ಹಣವನ್ನು ಆಹಾರ ಧಾನ್ಯಗಳಿಗೆ ವ್ಯಯ ಮಾಡದೆ, ಉಳಿತಾಯ ಮಾಡಿ ಅದರಿಂದ ನ್ಯಾನೋ ಕಾರುಗಳನ್ನು, ಕಂಪ್ಯೂಟರ್ಗಳನ್ನು ಕೊಂಡುಕೊಳ್ಳಬೇಕು. ಮೊಬೈಲ್ಗಳನ್ನು ಕೊಳ್ಳಬೇಕು. ಈ ಮೂಲಕ, ದೇಶದ ಮುಖ್ಯ ವಾಹಿನಿಯಲ್ಲಿ ಒಂದಾಗಬೇಕು.</b></span><br />
<span style="color: blue; font-size: large;"><b>2. ನಕ್ಸಲೀಯರ ಕುರಿತಂತೆ ಐದು ವಾಕ್ಯಗಳನ್ನು ಬರೆಯಿರಿ.</b></span><br />
<span style="color: blue; font-size: large;"><b>ಉತ್ತರ: ನಕ್ಸಲೀಯರು ಎನ್ನುವುದು ಕಾಡು ಪ್ರಾಣಿಗಳ ಹೆಸರು. ತಲೆಯಲ್ಲಿ ಎರಡು ಕೊಂಬು, ಭೀಕರ ಕೋರೆ ಹಲ್ಲುಗಳಿರುವ ಈ ಕಾಡು ಪ್ರಾಣಿಗಳು ಹುಲಿ, ಚಿರತೆ, ಕರಡಿಗಳಂತೆ ಕಾಡಿನಲ್ಲಿ ಹುಟ್ಟಿ ನಾಡಿದ ಅಮಾಯಕ ಜನರಿಗೆ ತೊಂದರೆ ಕೊಡುತ್ತದೆ. ಆದುದರಿಂದ ಈ ಪ್ರಾಣಿಗಳ ನಿಯಂತ್ರಣಕ್ಕೆ ಸರಕಾರ ಈಗಾಗಲೇ ಕೋಟಿಗಟ್ಟಲೆ ರೂಪಾಯಿಗಳನ್ನು ವೆಚ್ಚ ಮಾಡಿದೆ. ಆದರೂ ಇವುಗಳ ಸಂತಾನೋತ್ಪತ್ತಿ ಅಧಿಕವಾಗುತ್ತಾ ಹೋಗುತ್ತಿರುವುದು ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ನಕ್ಸಲೀಯ ಪ್ರಾಣಿಗಳು ಡೈನೋಸರ್ ಕಾಲಕ್ಕೆ ಸೇರಿದವುಗಳು ಎನ್ನಲಾಗಿದೆ. ‘ಜುರಾಸಿಕ್ ಪಾರ್ಕ್’ನಿಂದ ತಪ್ಪಿಸಿಕೊಂಡು ಬಂದ ಈ ಕ್ರೂರ ಪ್ರಾಣಿಗಳು ಕಾಡುಗಳನ್ನು ಸೇರಿರಬಹುದು ಎಂದು ಸರಕಾರ ಸಂಶಯ ವ್ಯಕ್ತಪಡಿಸಿದೆ. ಇವುಗಳು ಮಾಂಸಹಾರಿಗಳು. ಶ್ರೀಮಂತ ವ್ಯಕ್ತಿಗಳ ಮಾಂಸವೆಂದರೆ ಇವುಗಳಿಗೆ ಬಹಳ ಇಷ್ಟ. ತುಪ್ಪ, ಬೆಣ್ಣೆ ಮತ್ತು ಬಡವರ ರಕ್ತ ಕುಡಿದ ಈ ಶ್ರೀಮಂತ ವ್ಯಕ್ತಿಗಳ ಮಾಂಸ ತುಂಬಾ ರುಚಿಯಾಗಿರುತ್ತವೆ.</b></span><br />
<span style="color: blue; font-size: large;"><b> ಒಮ್ಮೆ ಇದರ ರುಚಿ ಹಿಡಿದ ಈ ಪ್ರಾಣಿಗಳು ಮತ್ತೆ ಮತ್ತೆ ನಾಡಿಗೆ ಬಂದು ಅವರನ್ನು ಎಳೆದುಕೊಂಡು ಹೋಗುತ್ತದೆ ಎನ್ನಲಾಗಿದೆ. ನಾಡಿನಲ್ಲಿರುವ ‘ಬಡವರು’ ಎನ್ನುವ ಕೆಲ ಬಡಕಲು ಪ್ರಾಣಿಗಳ ವರ್ಣಸಂಕರವಾಗಿಯೂ ಈ ನಕ್ಸಲ್ ಪ್ರಾಣಿಗಳು ಹುಟ್ಟಿರಬಹುದು ಎಂದು ಸರಕಾರ ನಂಬಿದೆ. ಇದಕ್ಕಾಗಿ ಈಗಾಗಲೇ ವಿಜ್ಞಾನಿಗಳನ್ನು ಅಧ್ಯಯನಕ್ಕಾಗಿ ನೇಮಿಸಿ ಅದಕ್ಕೊಂದು ಪ್ರಾಧಿಕಾರವನ್ನೂ ರಚಿಸಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಾಧ್ಯವಾದಷ್ಟು ಬಡವರನ್ನು ಬಂಧಿಸಿ ಗುಂಡಿಟ್ಟುಕೊಳ್ಳುವ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ.</b></span><br />
<span style="color: blue; font-size: large;"><b>4. ‘ವಿಶೇಷ ಆರ್ಥಿಕ ವಲಯ’ ದೇಶದ ಅಭಿವದ್ಧಿಗೆ ನೀಡುವ ಕಾಣಿಕೆಗಳು ಯಾವುವು?</b></span><br />
<span style="color: blue; font-size: large;"><b> ‘ವಿಶೇಷ ಆರ್ಥಿಕ ವಲಯ’ ದೇಶದ ಬಡತನ, ರೈತರ ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ. ರೈತನಿಗೆ ಬೀಜಕೊಳ್ಳುವ, ಗೊಬ್ಬರ ಹಾಕುವ, ಗದ್ದೆಗಳಲ್ಲಿ ದುಡಿಯುವ ಶ್ರಮವನ್ನು ಇಲ್ಲವಾಗಿಸುತ್ತದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ಕಿತ್ತುಕೊಂಡ ಮೇಲೆ ರೈತ ಗೊಬ್ಬರ, ಬೀಜಗಳನ್ನು ಕೊಂಡುಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಈ ಮೂಲಕ ಈ ದೇಶದ ರೈತರ ಬಹುದೊಡ್ಡ ಸಮಸ್ಯೆ ಇಲ್ಲವಾಗುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ. ಸೆಝ್ ವಿರುದ್ಧ ಪ್ರತಿಭಟನೆ ಮಾಡಿದರೆ ಸರಕಾರವೇ ರೈತರನ್ನು ಗುಂಡು ಹಾಕಿ ಕೊಲ್ಲುತ್ತದೆ. ಆದುದರಿಂದ ರೈತರ ಆತ್ಮಹತ್ಯೆ ಸಮಸ್ಯೆ ಭಾರೀ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಆತ್ಮಹತ್ಯೆಗೆ ಬಳಸುವ ವಿಷಕ್ಕೆ ತೆರಬೇಕಾದ ಹಣ ಉಳಿತಾಯವಾಗಿ ರೈತ ಕುಟುಂಬ ಶ್ರೀಮಂತವಾಗುತ್ತದೆ. ಆಹಾರದ ಬೆಲೆ ಅಧಿಕವಾಗಿ ಬಡವರು ಊಟ ಮಾಡದೇ ಸಾಯಬೇಕಾಗುತ್ತದೆ. ಈ ಮೂಲಕ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗುತ್ತದೆ.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>5. ಸಂವಿಧಾನದ ಕುರಿತಂತೆ ಕೆಲವು ವಾಕ್ಯಗಳನ್ನು ಬರೆಯಿರಿ? ಈ ದೇಶದಲ್ಲಿ ಹಲವು ಬಾರಿ ಕೊಲೆಗೀಡಾಗಿರುವ ವ್ಯಕ್ತಿಯ ಹೆಸರು ಸಂವಿಧಾನ. ಈತನಿಗೆ ಇರಿದರೆ, ತದುಕಿದರೆ ಅದು ಅಪರಾಧವಾಗುವುದಿಲ್ಲ. ಆದುದರಿಂದ ಯಾರು ಬೇಕಾದರೂ ಈತನ ಮೇಲೆ ಹಲ್ಲೆ ನಡೆಸಬಹುದಾಗಿದೆ. ಇವನನ್ನು ಮಾರಾಣಾಂತಿಕವಾಗಿ ಇರಿದವರನ್ನು ಈ ದೇಶದ ಉಪಪ್ರಧಾನಿಯಾಗಿ ಮಾಡಿ ಗೌರವಿಸಲಾಗುತ್ತದೆ. ಅಥವಾ ಯಾವುದಾದರೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಈತನ ತಾತನನ್ನು ಗುಂಡಿಟ್ಟು ಕೊಲ್ಲಲಾಯಿತು. ಈತನ ಅಪ್ಪನನ್ನು ಇನ್ನೊಂದು ಧರ್ಮಕ್ಕೆ ಓಡಿಸಲಾಯಿತು. ಈತನ ಮಕ್ಕಳನ್ನು ಇದೀಗ ಹಂತಹಂತವಾಗಿ ಕೊಂದು ಹಾಕುವ ಯೋಜನೆಯೊಂದನ್ನು ರೂಪಿಸಲಾಗಿದೆ.</b></span><br />
<span style="color: blue; font-size: large;"><b>6. ‘ಗೋವಿನ ಹಾಡು’ ಪದ್ಯದ ನೀತಿಯನ್ನು ಬರೆಯಿರಿ.</b></span><br />
<span style="color: blue; font-size: large;"><b> ಗೋವಿನ ಹಾಡು ಪದ್ಯದಲ್ಲಿ ಪುಣ್ಯಕೋಟಿಯ ಒಂದು ಬ್ರಾಹ್ಮಣ ಜಾತಿಯ ಹಸುವಾಗಿರುತ್ತದೆ. ಅದು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ದಲಿತ ಜಾತಿಗೆ ಸೇರಿದ ಹುಲಿಯೊಂದು ಎದುರಾಗುತ್ತದೆ. ಹುಲ್ಲು ತಿಂದು ಮಾರ್ಯದೆಯಲ್ಲಿ ಬದುಕಬೇಕಾದ ಹುಲಿ ಈ ಹಸುವನ್ನು ತಿನ್ನುವ ದುರಾಲೋಚನೆಯನ್ನು ಮಾಡುತ್ತದೆ. ದುರಾಲೋಚನೆಗಾಗಿ ಅದು ಸಾವನ್ನಪ್ಪಬೇಕಾಗುತ್ತದೆ. ಬ್ರಾಹ್ಮಣರನ್ನು ಕಾಡಿಸುವ ಎಲ್ಲರ ಸ್ಥಿತಿಯೂ ಇದೇ ಆಗಿರುತ್ತದೆ ಎನ್ನುವುದೇ ಈ ಕವಿತೆಯ ಪಾಠವಾಗಿದೆ.</b></span><br />
<span style="color: blue; font-size: large;"><b>ಹುಲಿ ಮಾಂಸವನ್ನು ತಿನ್ನುವುದು ತಪ್ಪು. ಅದು ಹುಲ್ಲನ್ನು ತಿನ್ನಬೇಕು. ಒಂದು ವೇಳೆ ಹಸುವನ್ನು ತಿನ್ನುವ ಯೋಚನೆ ಮಾಡಿದರೂ ಅದಕ್ಕಾಗಿ ತನ್ನ ಪ್ರಾಣವನ್ನು ತೆರಬೇಕು. ದನ ಹುಲಿಯ ಪ್ರಾಣವನ್ನು ತೆಗೆದರೆ ಅದರಲ್ಲಿ ತಪ್ಪೇನೂ ಇಲ್ಲ. ಇದೇ ಗೋವಿನ ಹಾಡು ಪದ್ಯದ ನೀತಿ ಪಾಠ.</b></span><br />
<span style="color: blue; font-size: large;"><b>ಎಲ್ಲವನ್ನು ಓದಿದ ಎಂಜಲು ಕಾಸಿಗೆ ಆಶ್ಚರ್ಯವಾಯಿತು. ‘ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ. ಮತ್ಯಾಕೆ ಈ ವಿದ್ಯಾರ್ಥಿಗಳು ಫೇಲಾದರು ಎಂದು ತಲೆ ತುರಿಸತೊಡಗಿದ.</b></span><br />
<span style="color: purple; font-size: large;"><b>(ಮೇ 4, 2008 ರವಿವಾರ)</b></span><br />
<br /></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-9640314855394512712015-04-30T02:32:00.001-07:002015-04-30T02:32:22.837-07:00ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು?<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-pRABA--mxZY/VUH2kiIDMZI/AAAAAAAAAPM/updEgm8ViXc/s1600/yedi.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-pRABA--mxZY/VUH2kiIDMZI/AAAAAAAAAPM/updEgm8ViXc/s1600/yedi.jpg" /></a></div>
<b style="color: purple; font-size: x-large;">ಯಡಿಯೂರಪ್ಪ ಕೃಪೆಯಿಂದ ಸದಾನಂದ ಗೌಡರು ಮುಖ್ಯ ಮಂತ್ರಿಯಾಗಿ, ಬಳಿಕ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟು ಕೊಡಲು ಗೌಡರು ನಿರಾಕರಿಸಿದಾಗ ಬರೆದ ಬುಡಬುಡಿಕೆ. ಫೆಬ್ರವರಿ -26-2012ರಲ್ಲಿ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಶಿಗೆ ಹೋಗಿ ಬಂದ ಸುದ್ದಿ ಕೇಳಿದ್ದೇ ಎಲ್ಲರಿಗೂ ಕುತೂಹಲ. ಸಾಧಾರಣವಾಗಿ ಕಾಶಿಗೆ ಹೋಗಿಬಂದವರು ಗಂಗಾನದಿಯಲ್ಲಿ ಏನನ್ನಾದರೂ ಬಿಟ್ಟು ಬರಲೇ ಬೇಕು. ಯಡಿಯೂರಪ್ಪ ಏನನ್ನು ಬಿಟ್ಟು ಬಂದಿರ ಬಹುದು? ಎಲ್ಲರೂ ತಲೆ ಕೆಡಿಸತೊಡಗಿದರು. ಪತ್ರಕರ್ತ ಎಂಜಲು ಕಾಸಿ ಕೂಡ ಈ ಕುರಿತಂತೆ ತಲೆ ಕೆಡಿಸತೊಡಗಿದ. ಏನು ಬಿಟ್ಟು ಬಂದಿರ ಬಹುದು? ಎಲ್ಲಿಯೂ ಯಡಿಯೂರಪ್ಪ ಕೈಗೆ ಸಿಗುತ್ತಿಲ್ಲ. ಪತ್ರಕರ್ತ ಎಂಜಲು ಕಾಸಿ ನೇರ ಈಶ್ವರಪ್ಪನವರಲ್ಲಿಗೆ ಹೋದ.</b></span><br />
<span style="color: blue; font-size: large;"><b>‘‘ಸಾರ್...ಯಡಿಯೂರಪ್ಪನವರು ಕಾಶಿಗೆ ಹೋದರಂತಲ್ಲ ಸಾರ್. ಏನು ಬಿಟ್ಟು ಬಂದರು?’’</b></span><br />
<span style="color: blue; font-size: large;"><b>‘‘ಅದೇ ನನಗೂ ಕುತೂಹಲ. ನೀವು ಪತ್ತೆ ಮಾಡಿ ಹೇಳುವುದು ಬಿಟ್ಟು ನನ್ನಲ್ಲಿ ಕೇಳ್ತೀರಲ್ಲ...ಸದನದಲ್ಲಿ ಯಾರ್ಯಾರು ಬ್ಲೂಫಿಲಂ ನೋಡ್ತಾರೆ ಎನ್ನೋದನ್ನು ಕಂಡು ಹಿಡಿಯೋದಕ್ಕಾಗುತ್ತೆ. ಇದು ನಿಮಗೆ ಕಂಡು ಹಿಡಿ ಯೋದಕ್ಕಾಗೋದಿಲ್ವ?’’ ಈಶ್ವರಪ್ಪ ಸಿಟ್ಟಾದರು.</b></span><br />
<span style="color: blue; font-size: large;"><b>‘‘ಹಾಗಲ್ಲ ಸಾರ್...ಯಡಿಯೂರಪ್ಪರವರ ಅಂತ ರಂಗದ ವಿಷಯ ಇದು. ನಿಮಗೆ ಗೊತ್ತಿರಬಹುದು...’’ ಕಾಸಿ ಹಲ್ಲು ಕಿರಿದ.</b></span><br />
<span style="color: blue; font-size: large;"><b>‘‘ಅವರ ಅಂತರಂಗದ ವಿಷಯವನ್ನು ಅವರ ಅಂತ ರಂಗಕ್ಕೆ ಹತ್ತಿರವಿರುವವರತ್ರ ಕೇಳ್ರೀ...ನನ್ನತ್ರ ಯಾಕೆ ಕೇಳ್ತೀರಿ...’’ ಈಶ್ವರಪ್ಪ ಮತ್ತೆ ಸಿಡುಕಿದರು.</b></span><br />
<span style="color: blue; font-size: large;"><b>ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ಸಾರ್... ಯಡಿಯೂರಪ್ಪ ಏನನ್ನು ಕಾಶಿಯಲ್ಲಿ ಬಿಟ್ಟು ಬಂದರೆ ಚೆನ್ನಾಗಿತ್ತು...ಅದನ್ನಾದರೂ ಹೇಳಿ’’</b></span><br />
<span style="color: blue; font-size: large;"><b>ಈಶ್ವರಪ್ಪ ಒಂದು ಕ್ಷಣ ಯೋಚಿಸಿ ಹೇಳಿದರು ‘‘ಗಂಗಾನದಿಯಲ್ಲಿ ಶೋಭಾ ಕರಂದ್ಲಾಜೆಯನ್ನು ಬಿಟ್ಟು ಬಂದಿದ್ದರೆ ರಾಜ್ಯದ ಎಲ್ಲ ಸಮಸ್ಯೆಗಳೂ ಮುಗಿಯು ತ್ತಿತ್ತು...’’</b></span><br />
<span style="color: blue; font-size: large;"><b>‘‘ಆದರೆ ಶೋಭಾ ಅವರು ಇಲ್ಲೇ ಬೆಂಗಳೂರಿನಲ್ಲಿ ಸುತ್ತಾಡ್ತಾ ಇದ್ದಾರಲ್ಲ ಸಾರ್?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಹೌದೌದು. ಅವರೆಲ್ಲಿ ಬಿಡ್ತಾರೆ. ಒಂದು ವೇಳೆ ಅವರು ನಮಗೆ ಒಪ್ಪಿಗೆ ಕೊಟ್ಟರೂ ಸಾಕು, ನಾವೇ ಶೋಭಾರನ್ನು ಗೋಣಿ ಚೀಲದಲ್ಲಿ ಹಾಕಿ ಗಂಗಾನದಿಗೆ ಎಸೆದು ಬರ್ತೇವೆ...’’ ಎಂದು ಹಣೆ ಒರೆಸಿಕೊಂಡರು.</b></span><br />
<span style="color: blue; font-size: large;"><b>‘‘ಥ್ಯಾಂಕ್ಯೂ ಸಾರ್ ಬರ್ತೇನೆ’’ ಕಾಸಿ ಹೊರಟ.</b></span><br />
<span style="color: blue; font-size: large;"><b>‘‘ಹೋಗಿ, ಬರ್ಬೇಡಿ...’’ ಎಂದರು ಈಶ್ವರಪ್ಪ.</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ಕಾಸಿ ಅಲ್ಲಿಂದ ನೇರ ಸದಾನಂದ ಗೌಡರ ಮನೆಗೆ ಓಡಿದ. ಕಾಸಿಯನ್ನು ಕಂಡದ್ದೇ ‘‘ಬಂದ ಮಂಡೆ ಬೆಚ್ಚ ಮಾಡ್ಲಿಕ್ಕೆ’’ ಎಂದು ಸದಾನಂದರು ತಲೆ ಚಚ್ಚಿಕೊಂಡರು. ಆದರೂ ನಗುನಗುತ್ತಾ ಕೇಳಿದರು ‘‘ಏನು ಕಾಸಿಯವ್ರೇ ಬಂದದ್ದು...?’’</b></span><br />
<span style="color: blue; font-size: large;"><b>‘‘ಸಾರ್...ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು ಅಂತ ಗೊತ್ತುಂಟಾ...?’’</b></span><br />
<span style="color: blue; font-size: large;"><b>ಸದಾನಂದ ಗೌಡರ ಹುಬ್ಬು ಗಂಟಿಕ್ಕಿತು, ‘‘ಹೋಗು ವಾಗ, ಬರ್ತೀನೇನ್ರಿ ಕಾಶಿಗೆ ಅಂತ ನನ್ನನ್ನು ಕರೆದರು. ನನಗೆ ಹೋಗಲಿಕ್ಕೆ ಹುಚ್ಚುಂಟಾ? ನಾನು ಬರುವುದಿಲ್ಲ ಎಂದೆ. ನನಗೆ ಗೊತ್ತಿತ್ತು. ಇವರು ನನ್ನನ್ನೇ ಕಾಶಿಯಲ್ಲಿ ಬಿಡಲಿಕ್ಕೆ ಪ್ಲಾನ್ ಮಾಡಿದ್ದಾರೆ ಅಂತ. ಏನನ್ನು ಬಿಟ್ಟು ಬರುತ್ತಾರೆ... ಅವರ ಲಂಗೋಟಿಯನ್ನು ಬಿಟ್ಟು ಬರ್ಬೇಕಷ್ಟೇ...ಬೇರೇನು ಬಿಟ್ಟು ಬರುವ ಜಾತಿಯಲ್ಲ ಅದು....’’</b></span><br />
<span style="color: blue; font-size: large;"><b>‘‘ಹಾಗಲ್ಲ ಸಾರ್...ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಬಿಟ್ಟು ಬಂದಿದ್ದಾರೆ ಅಂತ ಸುದ್ದಿ ಉಂಟು, ಹೌದಾ’’ ಕಾಸಿ ಸುಮ್ಮಗೆ ಒಂದು ತುಂಡು ಬಿಸ್ಕೆಟ್ ಬಿಸಾಡಿದ.</b></span><br />
<span style="color: blue; font-size: large;"><b>ಸದಾನಂದ ಗೌಡರು ಒಮ್ಮೆಲೆ ಚುರುಕಾಗಿ, ಕಾಸಿಯತ್ತ ಬಾಗಿದರು ‘‘ಹೌದಾ? ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಕಾಸಿಯಲ್ಲಿ ಬಿಟ್ಟು ಬಂದದ್ದು ಹೌದಾ? ಏನಾದರೂ ವಿಷಯ ಉಂಟಾ...ನಾನು ಪುತ್ತೂರಿನ ಸಹಸ್ರಲಿಂಗೇಶ್ವರ ನಲ್ಲಿ ಹರಕೆ ಹೊತ್ತಿದ್ದೆ. ಅವರಿಗೆ ಈ ಕುರ್ಚಿಯ ವ್ಯಾಮೋ ಹ ಒಂದು ಬಿಡಿಸಪ್ಪ ಅಂತ...ಇದು ನಿಜವಾ...ಬಿಟ್ಟದ್ದು ಹೌದಾ?’’ ಗೌಡರು ಮತ್ತೆ ಮತ್ತೆ ಕೇಳಿದರು.</b></span><br />
<span style="color: blue; font-size: large;"><b>‘‘ಗೊತ್ತಿಲ್ಲ ಸಾರ್, ನಿಮಗೇನಾದರೂ ಗೊತ್ತಾ ಅಂತ ಕೇಳಿದ್ದು...’’ ಕಾಸಿ ಹೇಳಿದ.</b></span><br />
<span style="color: blue; font-size: large;"><b>‘‘ನೀವು ಸುಮ್ಮನೆ ಏನೇನೆಲ್ಲ ಹೇಳಿ ನನಗೆ ಆಸೆ ಹುಟ್ಟಿಸಬೇಡಿ ಗೊತ್ತಾಯಿತಾ? ಗಂಗಾನದಿಯಲ್ಲಿ ಕುರ್ಚಿಯ ಆಸೆಯನ್ನು ಬಿಡುವುದು ಅಷ್ಟು ಸುಲಭವಲ್ಲ. ಅವರೇ ಗಂಗಾನದಿಯಲ್ಲಿ ಕೊಚ್ಚಿ ಹೋದರೆ, ಆಸೆಯೂ ಅವರ ಜೊತೆಗೇ ಹೋದೀತು. ಅದು ಬಿಟ್ಟು ಅವರು ಕುರ್ಚಿಯ ಆಸೆಯನ್ನು ಬಿಟ್ಟು ಬರ್ಲಿಕ್ಕುಂಟಾ? ಅದರ ಆಸೆ ಅವರ ರಕ್ತದ ಕಣಕಣದಲ್ಲೂ ಉಂಟು ಗೊತ್ತುಂಟಾ?’’</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ಸರಿ ಕಾಸಿ ನೇರವಾಗಿ ರೇಣುಕಾಚಾರ್ಯರಲ್ಲಿಗೆ ಹೋದ. ‘‘ಯಡಿಯೂರಪ್ಪನವರು ಏನು ಬಿಟ್ಟು ಬಂದಿದ್ದಾರೆ ಅಂತ ನಿಮಗೇನಾದರೂ ಗೊತ್ತಾ?’’</b></span><br />
<span style="color: blue; font-size: large;"><b>ರೇಣುಕಾಚಾರ್ಯರು ತೇಲುಗಣ್ಣು ಮಾಡುತ್ತಾ ಮಾತನಾಡತೊಡಗಿದರು ‘‘ಯಾಕೆ? ಯಾಕೆ ಬಿಡ ಬೇಕು... ಹಾಗೆಲ್ಲ ಅಷ್ಟು ಸುಲಭದಲ್ಲಿ ಅವರು ಬಿಡು ವುದಿಲ್ಲ ಗೊತ್ತಾಯಿತಲ್ಲ? ವೀರಶೈವರೇ ಯಾಕೆ ಬಿಡಬೇಕು...ಈ ಬ್ರಾಹ್ಮಣರು ಬಿಡಲಿ ನೋಡುವ... ಲಿಂಗಾಯತರಿಗೆ ಈಗಾಗಲೇ ಭಾರೀ ಅನ್ಯಾಯವಾಗಿದೆ. ನಾವು ಬಿಡುವುದಿಲ್ಲ, ಬಿಡಿವುದಿಲ್ಲ... ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ...’’</b></span><br />
<span style="color: blue; font-size: large;"><b>ಕಾಸಿ ಒಂದೂ ಅರ್ಥವಾಗದೆ ತಲೆ ಕೆರೆದುಕೊಂಡು ಮತ್ತೆ ಹೇಳಿದ ‘‘ಹಾಗಲ್ಲ ಸಾರ್...ಕಾಶಿಗೆ ಹೋದರೆ ನಮ್ಮೆಳಗಿನ ಕೆಡುಕುಗಳಲ್ಲಿ ಒಂದನ್ನು ಗಂಗಾನದಿಯಲ್ಲಿ ಬಿಟ್ಟು ಬರಬೇಕು ಅಂತ ಸಂಪ್ರದಾಯವಿದೆ. ಯಡಿಯೂ ರಪ್ಪ ಯಾವ ಕೆಡುಕು ಬಿಟ್ಟು ಬಂದಿದ್ದಾರೆ...’’</b></span><br />
<span style="color: blue; font-size: large;"><b>ರೇಣುಕಾಚಾರ್ಯರು ತಕ್ಷಣ ಉತ್ತರಿಸಿದರು ‘‘ಅದರ ಬಗ್ಗೆ ಕೇಳುತ್ತಿದ್ದೀರಾ? ನೋಡಿ ಇವ್ರೆ, ಯಡಿಯೂರಪ್ಪನವರಿಗೆ ಎಲ್ಲ ಕೆಡುಕುಗಳನ್ನು ಗಂಗಾನದಿಯಲ್ಲಿ ಬಿಡಬೇಕು ಅಂತ ಮನಸ್ಸಿತ್ತು. ಅದಕ್ಕಾಗಿ ಈಶ್ವರಪ್ಪ, ಸದಾನಂದ ಗೌಡ, ಅಶೋಕ್ ಎಲ್ಲರನ್ನೂ ಕಾಶಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಡಲು ತೀರ್ಮಾನಿಸಿದ್ದರು. ಆದರೆ ಯಡಿಯೂರಪ್ಪ ನಿಮ್ಮನ್ನು ಗಂಗಾನದಿಯ ಲ್ಲಿ ಬಿಟ್ಟು ಬಿಡುತ್ತಾರೆ ಎನ್ನುವುದನ್ನು ಯಾರೋ ಭಿನ್ನಮತೀಯರು ಅವರಿಗೆ ತಿಳಿಸಿರಬೇಕು. ಎಲ್ಲರೂ ಕೈಕೊಟ್ಟರು. ಪಾಪ ಯಡಿಯೂರಪ್ಪ ನವರು ಏನು ಮಾಡುವುದು? ಬರಿಗೈಯಲ್ಲಿ ಬಂದು ಬಿಟ್ಟರು....’’</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>ಇವರೊಂದಿಗೆಲ್ಲ ಕೇಳಿ ಪ್ರಯೋಜನವಿಲ್ಲವೆಂದು ಎಂಜಲು ಕಾಸಿ ಯಡಿಯೂರಪ್ಪರನ್ನು ಹುಡುಕತೊಡ ಗಿದ. ನೋಡಿದರೆ ಯಾವುದೋ ಒಂದು ಮೂಲೆಯ ಊರಿನಲ್ಲಿರುವ ಸ್ವಾಮಿಯ ಆಶೀರ್ವಾದ ಪಡೆಯುತ್ತಿದ್ದರು.</b></span><br />
<span style="color: blue; font-size: large;"><b>‘‘ಸಾರ್..ಕಾಶಿಯಲ್ಲಿ ನೀವೇನಾದರು ಬಿಟ್ಟು ಬಂದಿರಾ?’’ ಕಾಸಿ ಯಡಿಯೂರಪ್ಪರಲ್ಲಿ ಕೇಳಿಯೇ ಬಿಟ್ಟ.</b></span><br />
<span style="color: blue; font-size: large;"><b>‘‘ಹೂಂ..ಬಿಟ್ಟು ಬಂದೆ....’’ಗಂಭೀರವಾಗಿ ನುಡಿದರು ಯಡಿಯೂರಪ್ಪ.</b></span><br />
<span style="color: blue; font-size: large;"><b>‘‘ಏನನ್ನು ಬಿಟ್ಟು ಬಂದಿರಿ ಸಾರ್?’’</b></span><br />
<span style="color: blue; font-size: large;"><b>‘‘ನನ್ನೊಳಗಿದ್ದ ಅಳಿದುಳಿದ ಮಾನ, ಮರ್ಯಾದೆ, ನಾಚಿಕೆ ಎಲ್ಲವನ್ನೂ ಬಿಟ್ಟು ಬಂದೆ. ಈಗ ನಾನು ತುಂಬಾ ಹಗುರವಾಗಿದ್ದೇನೆ. ಇನ್ನು ಮುಖ್ಯಮಂತ್ರಿ ಗಾದಿಗಾಗಿ ನನ್ನ ಹೋರಾಟ ತೀವ್ರವಾಗುತ್ತದೆ....’’</b></span><br />
<span style="color: purple; font-size: large;"><b>ರವಿವಾರ - ಫೆಬ್ರವರಿ -26-2012</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-15646580974197117472015-04-27T10:57:00.001-07:002015-04-27T10:57:09.316-07:00 ರಾಹುಲ್ ಗಾಂಧಿ ಕುರಿತು ದುರಂತ ಕಾವ್ಯಮಂ ಬರೆವೆಂ....<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://3.bp.blogspot.com/-PckiDs9RZA4/VT54P7RGDwI/AAAAAAAAAO8/cWuq52QF7IU/s1600/veerappa-moily-2.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-PckiDs9RZA4/VT54P7RGDwI/AAAAAAAAAO8/cWuq52QF7IU/s1600/veerappa-moily-2.jpg" /></a></div>
<span style="color: purple; font-size: large;"><b>ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸ್ ನೊಳಗೆ ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಸುಪುತ್ರ ಹರ್ಷ ಮೊಯ್ಲಿ ನಡುವೆ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ನಡೆದಾಗ ಬರೆದ ಬುಡಬುಡಿಕೆ. ಫೆಬ್ರವರಿ -23-2014ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ</b></span><b style="color: blue; font-size: x-large;"> </b><br />
<b style="color: blue; font-size: x-large;"><br /></b>
<span style="color: blue; font-size: large;"><b>‘ಕೊನೆಗೂ ಚುನಾವಣೆ ಘೋಷಣೆಯಾಯಿತು’ ಎಂದು ಯಾರೋ ಹೇಳಿದ್ದು ಕೇಳಿ ‘ಇಷ್ಟು ಬೇಗವಾ?’ ಎಂದು ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಅಷ್ಟರಲ್ಲಿ ಜನಾರ್ದನ ಪೂಜಾರಿಯವರು ಮಂಗಳೂರಿನ ಬೀದಿಯಲ್ಲಿ ಪಾದಯಾತ್ರೆ ಮಾಡುವುದನ್ನು ಟಿವಿಗಳು ಅತ್ಯುತ್ಸಾಹದಿಂದ ತೋರಿಸುತ್ತಿದ್ದವು. ‘‘ಅರೆ! ಪೂಜಾರಿಯವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟೂ ಆಯಿತಾ?’’ ಎಂದು ಕಾಸಿ ಮತ್ತೊಮ್ಮೆ ಆಘಾತಕ್ಕೀಡಾದ.</b></span><br />
<span style="color: blue; font-size: large;"><b>‘‘ಅವರ ಎದುರು ಯಾರು ಚುನಾವಣೆಗೆ ನಿಂತದ್ದು?’’ ಎಂದು ಕಾಸಿ ತನ್ನಷ್ಟಕ್ಕೆ ಕೇಳುತ್ತಿರುವಾಗ ಯಾರೋ ಜೋರಾಗಿ ಹೇಳಿದರು ‘‘ಮೊಯ್ಲಿ ಕಣ್ರೀ...’’ ‘‘ಅಂದರೆ ಈಗ ಕಾಂಗ್ರೆಸ್ ಕ್ಯಾಂಡಿಡೇಟು ಯಾರು? ಬಂಡಾಯ ಯಾರು?’’ ‘‘ಎಲವೋ ಮಂಕೆ...ಇದು ಕಾಂಗ್ರೆಸ್ನೊಳಗಿನ ಚುನಾವಣೆ. ಮಂಗಳೂರಿನಲ್ಲಿ ಯಾರು ಚುನಾವಣೆಗೆ ನಿಲ್ಲಬೇಕು ಎನ್ನುವುದನ್ನು ನಿರ್ಧರಿಸಲು ಚುನಾವಣೆ...’’ ಹೀಗೆಂದು ದಾರಿ ಹೋಕರಾರೋ ಕಾಸಿಯ ತಲೆಗೆ ಮೊಟಕಿದರು. ಈಗ ಕಾಸಿಯ ಟ್ಯೂಬ್ಲೈಟ್ ಹತ್ತಿಕೊಂಡಿತು. ತಕ್ಷಣ ಪೂಜಾರಿಯವರ ಇಂಟರ್ಯೂ ಮಾಡಿ ಬರೋಣ ಎಂದು ಮಂಗಳೂರು ಕಡೆಯ ಲಾರಿ ಹತ್ತಿದ ಕಾಸಿ.</b></span><br />
<span style="color: blue; font-size: large;"><b>ಮಂಗಳೂರಿನ ಪಂಪ್ವೆಲ್ನಲ್ಲಿ ಇಳಿಯುತ್ತಿರು ವಾಗಲೇ ಜನಾರ್ದನ ಪೂಜಾರಿ ಕೈಕೊಟ್ಟು ಕಾಸಿಯನ್ನು ಇಳಿಸಿದರು ‘‘ಈ ಸಾರಿ ಗೆಲ್ಲುವುದು ನಾನೇ ಗೊತ್ತುಂಟಾ...’’ ಎನ್ನುತ್ತಾ ಪೂಜಾರಿ ಮಾತಿಗೆ ಶುರು ಮಾಡಿದರು. ‘‘ಲೋಕಸಭಾ ಚುನಾವಣೆಯಲ್ಲಿಯಾ...ಅಥವಾ ಮೊಯ್ಲಿ ವಿರುದ್ಧದ ಚುನಾವಣೆಯಲ್ಲಿಯಾ?’’ ಕಾಸಿ ಅರ್ಥವಾಗದೆ ಕೇಳಿದ.</b></span><br />
<span style="color: blue; font-size: large;"><b>‘‘ಯಾವ ಇಲಿ, ಬೆಕ್ಕು ನಿಂತರೂ ನಾನು ಹೆದರುವುದಿಲ್ಲ. ಅವರು ಇಲಿಯಾದರೆ ನಾನು ಹುಲಿ. ಸ್ವಲ್ಪ ವಯಸ್ಸಾಗಿದೆ. ಹಲ್ಲು, ಉಗುರು ಹೋಗಿದೆ ಅಂತಾ ನನ್ನನ್ನು ಮೂಲೆಗೆ ತಳ್ಳುವುದಾ....ನಾನು ಸುಮ್ಮನಿರುವುದಿಲ್ಲ... ಭರ್ಜರಿ ಪ್ರಚಾರ ಮಾಡಿ ಗೆಲ್ಲುವುದು ಗೆಲ್ಲುವುದೇ...’’</b></span><br />
<span style="color: blue; font-size: large;"><b>‘‘ಯಾರ ವಿರುದ್ಧ ಸಾರ್....?’’</b></span><br />
<span style="color: blue; font-size: large;"><b>‘‘ಮೊದಲು ಮೊಯ್ಲಿಯ ವಿರುದ್ಧ ಗೆಲ್ಲುವುದು... ಅನಂತರ ನೋಡುವ...’’ ಪೂಜಾರಿ ತಡವರಿಸಿ ಹೇಳಿದರು.</b></span><br />
<span style="color: blue; font-size: large;"><b>‘‘ಅಂದರೆ ಅನಂತರ ಗೆಲ್ಲದಿದ್ದರೂ ಪರವಾಗಿಲ್ಲ ಅಂತವಾ?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಬಿಜೆಪಿಯವರೊಟ್ಟಿಗೆ ಗೆಲ್ಲುವುದು ದೊಡ್ಡ ವಿಷಯ ಅಲ್ಲ. ನನ್ನ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಗೆಲ್ಲುವುದು ದೊಡ್ಡ ವಿಷಯ...ನಾನು ಬಿಡುವುದಿಲ್ಲ...ದೊಡ್ಡ ಯುದ್ಧ ಮಾಡುತ್ತೇನೆ...’’ ಪೂಜಾರಿಯವರು ಕಣ್ಣು ತಿರುಗಿಸುತ್ತಾ ಹೇಳಿದರು.</b></span><br />
<span style="color: blue; font-size: large;"><b>‘‘ಮೊಯ್ಲಿಯವರಿಗೆ ಕೇಂದ್ರದಲ್ಲಿ ಬೆಂಬಲ ಇದೆ. ನಿಮಗೆ ಯಾರು ಯಾರು ಬೆಂಬಲ ನೀಡುತ್ತಾರೆ ಸಾರ್?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಕಲ್ಲಡ್ಕದ ಭಟ್ಟರು ನನಗೆ ಪೂರ್ತಿ ಬೆಂಬಲ ಘೋಷಿಸಿದ್ದಾರೆ....ಈ ಚುನಾವಣೆಯಲ್ಲಿ ಗೆದ್ದರೆ...ಭಟ್ಟರಿಗೆ ಮೀಸಲಾತಿ ಕೊಡುವುದು ಗ್ಯಾರಂಟಿ...’’ ಪೂಜಾರಿ ಹೇಳಿದರು.</b></span><br />
<span style="color: blue; font-size: large;"><b>‘‘ಸಾರ್... ಬಿಲ್ಲವರಿಗೆ...?’’ ಕಾಸಿ ಆತಂಕದಿಂದ ಕೇಳಿದ.</b></span><br />
<span style="color: blue; font-size: large;"><b>‘‘ಬಿಲ್ಲವರಿಗೆ ಎಂತಕ್ಕೆ ಕೊಡುವುದು? ಅವರಿಗೆ ಕೊಟ್ಟರೆ ಏನೂ ಫಾಯಿದ ಇಲ್ಲ...ಭಟ್ಟರಿಗೆ ಕೊಟ್ಟರೆ ನಮ್ಮ ಬಿಲ್ಲವರಿಗೆ ಸಂತೋಸ ಆಗ್ತದೆ...’’ ಪೂಜಾರಿ ಹೇಳಿದರು.</b></span><br />
<span style="color: blue; font-size: large;"><b>‘‘ಕಾಂಗ್ರೆಸ್ನಿಂದ ನೀವು ನಿಂತರೆ ಬಿಜೆಪಿಯ ವಿರುದ್ಧ ಗೆಲ್ಲುವ ಚಾನ್ಸ್ ಉಂಟಾ?’’ ಕಾಸಿ ಅನುಮಾನದಿಂದ ಕೇಳಿದ.</b></span><br />
<span style="color: blue; font-size: large;"><b>‘‘ಈ ಬಾರಿ ಭಟ್ಟರು ನನ್ನ ಕಡೆಗೆ ಕಣ್ಣು ಹೊಡೆದಿದ್ದಾರೆ ಗೊತ್ತುಂಟಾ...’’ ಜನಾರ್ದನ ಪೂಜಾರಿ ನಾಚಿ ಹೇಳಿದರು.</b></span><br />
<span style="color: blue; font-size: large;"><b>‘‘ಸಾಧಾರಣವಾಗಿ ಕಲ್ಲಡ್ಕದ ಭಟ್ಟರು ಕಲ್ಲು ಹೊಡೆದು ಫೇಮಸು. ನಿಮಗೇಕೆ ಕಣ್ಣು ಹೊಡೆದರು...’’ ಕಾಸಿ ಅಚ್ಚರಿಯಿಂದ ಕೇಳಿದ.</b></span><br />
<span style="color: blue; font-size: large;"><b>‘‘ಭಟ್ಟರ ಮೇಲೆ ಸುಮ್ಮಸುಮ್ಮಗೆ ಆರೋಪ ಮಾಡಬೇಡಿ...ಈ ಪೇಪರ್ನವರಿಗೆ ಕೆಲಸವಿಲ್ಲ...ಹಾಗೆ ನೋಡಿದರೆ ಒಂದೆರಡು ಕಲ್ಲು ಹೊಡೆದರೆ ಏನೂ ನಷ್ಟವಿಲ್ಲ...ಸದ್ಯಕ್ಕೆ ಅವರು ನನ್ನ ಕಡೆ ಕಣ್ಣು ಹೊಡೆದಿದ್ದಾರೆ ಆದುದರಿಂದ ನಾನು ಗೆಲ್ಲುತ್ತೇನೆ...’’</b></span><br />
<span style="color: blue; font-size: large;"><b>‘‘ಆದರೆ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಸೋತರೆ ಏನು ಮಾಡುತ್ತೀರಿ?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಸೋತರೆ ಬಿಡುವುದಿಲ್ಲ....ಭಟ್ಟರು ಭರವಸೆ ಕೊಟ್ಟಿದ್ದಾರೆ... ಕಲ್ಲಡ್ಕವನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡಿ ಚುನಾವಣೆಗೆ ನಿಲ್ಲಿಸುತ್ತೇನೆ ಎಂದಿದ್ದಾರೆ. ನಾನು ಸೋತರೂ ಪರವಾಗಿಲ್ಲ ಮೊಯ್ಲಿಯನ್ನು ಗೆಲ್ಲಲು ಬಿಡುವುದಿಲ್ಲ...’’</b></span><br />
<span style="color: blue; font-size: large;"><b>‘‘ನೀವು ಕಾಂಗ್ರೆಸನ್ನು ಸೋಲಿಸಲು ಬಂಡಾಯ ನಿಲ್ಲುತ್ತೀರಾ?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಹ್ಹೆ ಹ್ಹೆ...ಹಾಗೆ ಮಾಡುವುದಕ್ಕೆ ಹುಚ್ಚುಂಟ ನನಗೆ. ನಾನು ಹರ್ಷ ಮೊಯ್ಲಿ ಪರವಾಗಿ ಪ್ರಚಾರ ಮಾಡಿದರೆ ಸಾಕು...ಜನ ಬಿಜೆಪಿಗೆ ಓಟು ಹಾಕಿ ಬಿಡ್ತಾರೆ...’’ ಪೂಜಾರಿ ತಮ್ಮ ಮೀಸೆ ತಿರುವಿದರು.</b></span><br />
<span style="color: blue; font-size: large;"><b>‘‘ಸಾರ್... ಅದಿರಲಿ... ಹರ್ಷ ಮೊಯ್ಲಿಯ ವಿರುದ್ಧ ಸ್ಪರ್ಧೆಗೆ ಪ್ರಚಾರ ಹೇಗೆ ನಡೆದಿದೆ?’’ ಕಾಸಿ ಪ್ರಶ್ನಾಂತರ ಮಾಡಿದ.</b></span><br />
<span style="color: blue; font-size: large;"><b>‘‘ಭರ್ಜರಿ ಪ್ರಚಾರ ಸಿಕ್ಕಿದೆ ಮಾರ್ರೆ... ಬಿಜೆಪಿ ಯವರು ಫುಲ್ ಸಪೋರ್ಟ್ ಮಾಡಿದ್ದಾರೆ. ಅವರೆಲ್ಲ ಓಟ್ ಹಾಕ್ಲಿಕ್ಕೆ ಬರ್ತೇನೆ ಅಂದಿದ್ದಾರೆ... ಹಾಗೆಯೇ ನನ್ನ ಪರವಾಗಿ ಪ್ರಚಾರ ಮಾಡಲು ಬೇಕಾದರೆ ಮೋದಿ ಯನ್ನು ಗುಜರಾತಿನಿಂದ ಕರೆಸುವ ಎಂದು ಸದಾನಂದ ಗೌಡ ಭರವಸೆ ನೀಡಿದ್ದಾರೆ... ನಳಿನ್ ಕುಮಾರ್ ಕಟೀಲ್ ಕೂಡ ತುಂಬಾ ಸಂತೋ ಷದಿಂದ ನನಗೆ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ಯವರೇ ನನಗೆ ಬೆಂಬಲ ಘೋಷಿಸಿರುವಾಗ, ಇನ್ನು ಕಾಂಗ್ರೆಸ್ನವರು ನನ್ನನ್ನು ಆಯ್ಕೆ ಮಾಡಬೇಕೋ ಬೇಡವೋ? ನನ್ನ ಬೆಲೆ ಬಿಜೆಪಿಯವರಿಗೆ ಗೊತ್ತುಂಟು. ಆದರೆ ದಿಲ್ಲಿಯಲ್ಲಿರುವ ನಾಯಕರಿಗೆ ಗೊತ್ತಿಲ್ಲ. ಎಂಥ ಬೇಜಾರಿನ ವಿಷಯ ಗೊತ್ತುಂಟಾ?’’ ಪೂಜಾರಿ ಯವರು ಬೇಜಾರಿನಲ್ಲಿ ಹೇಳಿದರು.</b></span><br />
<span style="color: blue; font-size: large;"><b>ಕಾಸಿ ಪೂಜಾರಿಯವರ ಸಂದರ್ಶನವನ್ನು ಭರ್ಜರಿ ಯಾಗಿ ಮಾಡುತ್ತಿರುವುದು ಮೊಯ್ಲಿಯವರಿಗೆ ಗೊತ್ತಾಗಿ ಕಿಡಿಕಿಡಿಯಾದರು. ಇದರ ಬಿಸಿ ಕಾವ್ಯ ರೂಪದಲ್ಲಿ ಕಾಸಿಯ ಮೈಯನ್ನು ಸುಡುತ್ತಿರಲಾಗಿ ‘‘ಈಗ ಬಂದೆ....’’ ಎನ್ನುತ್ತಾ ಮೊಯ್ಲಿಯ ಹೆಬ್ಬಾಗಿಲೊಳು ನಿಂತಿರಲು, ಸ್ಫೋಟಗೊಳ್ಳಲ್ ನಿಂತ ಗ್ಯಾಸ್ಸಿಲಿಂಡರ್ನಂದದಿ ಮೊಯ್ಲಿಯುಂ ಕಾಸಿಯಂ ನೋಡಿದರು.</b></span><br />
<span style="color: blue; font-size: large;"><b>‘‘ಸಾರ್...ಲಾರಿಯಿಂದ ಇಳಿದ ಕೂಡಲೇ ಪೂಜಾರಿ ನನ್ನನ್ನು ಕೈ ಹಿಡಿದು ನಿಲ್ಲಿಸಿದರು. ನಾನು ನಿಜಕ್ಕೂ ನಿಮ್ಮ ಸುಪುತ್ರರನ್ನು ಇಂಟರ್ಯೂ ಮಾಡಲು ಬಂದಿರುವುದು...’’ ಎಂದು ಕಾಸಿಯುಂ ವಿನೀತನಾಗಿ ಉಸಿರ್ದಂ.</b></span><br />
<span style="color: blue; font-size: large;"><b>ಇತ್ತ ತನ್ನ ಕಂಕುಳೊಳ್ ಪುತ್ರನಂ ಇರಿಸಿ, ಬಾಯಿಗೆ ಮೊಲೆಬತ್ತಿಯಂ ಅಂಟಿಸಿ, ದಶರಥಂ ಶ್ರೀರಾಮನಂ ತೂಗುವಂದದಿ ತೂಗುತಿರ್ಪರ್. ಇದಕಂಡು ಕಾಸಿಯುಂ ಇಂತು ಕೇಳ್ವರ್ ‘‘ಸಾರ್....ಹರ್ಷ ಮೊಯ್ಲಿಯವರು ಈ ಬಾರಿ ಪೂಜಾರಿಯ ವಿರುದ್ಧ ಗೆಲ್ಲುವುದು ಖಚಿತವೇ?’’</b></span><br />
<span style="color: blue; font-size: large;"><b>ಇದ ಕೇಳಿ ಮೊಯ್ಲಿಯುಂ ಸಿಟ್ಟಾಗಿ ‘ಗೆಲ್ವರ್. ಖಂಡಿತಾ ಗೆಲ್ವರ್. ಶ್ರೀರಾಮನಂ ಎದುರಿಸಿ ಲವಕುಶರ್ ಗೆಲ್ಲಲಿಲ್ಲವೆ? ಅಂತಿರ್ಪೊಡೆ ನನ್ನ ಹರ್ಷಕುಮಾರ್ ಬರಿದೇ ಈ ಪೊಳ್ಳುನಾಯಕನಂ ಗೆಲ್ಲದೇ ಇರ್ಪರೇ...ಹಹಹ’’ ಎಂದು ಹಳೆ ಗನ್ನದೊಡಳ್ ವದರಿದರ್.</b></span><br />
<span style="color: blue; font-size: large;"><b>ಇತ್ತ ಕಾಸಿಯುಂ ಬಿಡದೇ ಮತ್ತೆ ಪ್ರಶ್ನೆ ಕೇಳ್ಪರ್ ‘‘ಸಾರ್...ಪೂಜಾರಿಯವರನ್ನೇನೋ ಗೆಲ್ಲಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನ ಸ್ಥಿತಿ ಚಕ್ರವ್ಯೆಹದೊಳ್ ನುಗ್ಗಿದ ಅಭಿಮನ್ಯುವಿನಂತೆ ದುರ್ಗತಿಯಾದರೆ ಗತಿಯೇನು?’’</b></span><br />
<span style="color: blue; font-size: large;"><b>ಇದ ಕೇಳಿ, ಮೊಯ್ಲಿಯ ಕಂಕುಳಲ್ಲಿದ್ದ ಹರ್ಷ ಕುಮಾರನ್ ಭಯದಿಂದ ಚೀರಿದನ್. ಮಗು ಬೆಚ್ಚಿ ಬಿದ್ದುದ ಕಂಡು ಕಾಸಿಯಂ ರೋಷದಿಂ ನೋಡಿ ‘‘ಎಲವೋ ಅಧಮಾಧಮ...ಲೋಕಸಭಾ ಚುನಾವಣೆ ಯೊಳ್ ಎನ್ನ ಪುತ್ರನ್ ಗೆದ್ದರೆಷ್ಟು, ಬಿಟ್ಟರೆಷ್ಟು. ಲೋಕ ಸಭೆಯೊಳ್ ಸೋತರೆ ರಾಜ್ಯಸಭೆಯೆಂಬ ಹಿಂಬಾಗಿ ಲೊಳ್ ನನ್ನ ಪುತ್ರನಂ ಕಳುಹಿಸಿ ಕೇಂದ್ರ ಸಚಿವನಾಗಿ ಮಾಳ್ಪೆ...’’</b></span><br />
<span style="color: blue; font-size: large;"><b>‘‘ಸಾರ್...ಹೀಗೆ ಆದರೆ ನಿಮ್ಮ ಹರ್ಷಕುಮಾರ ಮೋದಿ ಸರಕಾರದಲ್ಲಿ ಕೇಂದ್ರ ಸಚಿವರಾಗುವುದು ಸತ್ಯ. ಆದರೆ ನಿಮ್ಮನ್ನು ನಂಬಿದ ರಾಹುಲ್ ಗಾಂಧಿ ಮಾತ್ರ ಚಕ್ರವ್ಯೆಹದಲ್ಲಿ ಸಿಕ್ಕಿದ ಅಭಿಮನ್ಯು ಆಗುವುದು ಖಚಿತ...’’ ಎಂದು ಓಡಲು ಅಣಿಯಾದ.</b></span><br />
<span style="color: blue; font-size: large;"><b>ವೀರಪ್ಪ ಮೊಯ್ಲಿ ಸಂತೋಷದಿಂದ ಹೇಳಿದರು ‘‘ಅಭಿಮನ್ಯು ಆದರೇನಂತೆ? ರಾಹುಲ್ಗಾಂಧಿಯ ಹೆಸರಿನೊಳ್ ನಾನ್ ದುರಂತ ಕಾವ್ಯಮಂ ಬರೆದು, ಮಹಾಕವಿಯೆಂಬ ಬಿರುದನ್ ಪೇಜಾವರಶ್ರೀ ಮೂಲಕ ಪಡೆವೆಂ’’ ಎಂದು ರಾಹುಲ್ಗಾಂಧಿಯ ದುರಂತ ಕಾವ್ಯವನ್ನು ಬರೆಯಲು ಮಡಿಯುಟ್ಟು ಕುಳಿತರು.</b></span><br />
<span style="color: purple; font-size: large;"><b>ರವಿವಾರ - ಫೆಬ್ರವರಿ -23-2014</b></span><br />
<br /></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-38043556140907830152015-04-26T11:20:00.002-07:002015-04-26T11:20:41.130-07:00‘ಎರಡು ನ್ಯಾನೋ ಕಾರಿದ್ದರೆ ಅವರು ಅತಿ ಬಡವರು’<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-QcFH9lND2BE/VT0sQ-CZ23I/AAAAAAAAAOw/WoBmamfzfJI/s1600/nano.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-QcFH9lND2BE/VT0sQ-CZ23I/AAAAAAAAAOw/WoBmamfzfJI/s1600/nano.jpg" /></a></div>
<b style="color: purple; font-size: x-large;">ಪಶ್ಚಿಮ ಬಂಗಾಳದಲ್ಲಿ ಬಡವರಿಗಾಗಿ ನ್ಯಾನೋ ಕಾರು ತಯಾರಿಸಲು ಅಲ್ಲಿನ ಕಮ್ಯುನಿಸ್ಟ್ ಸರಕಾರ ರೈತರ ಜಮೀನು ಕಿತ್ತು ಕೊಳ್ಳಲು ಹೊರಟಾಗ 2008ರಲ್ಲಿ ಬರೆದ ಬುಡಬುಡಿಕೆ. ಜನವರಿ, 13, 2008ರಲ್ಲಿ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>‘ಕ್ರಾಂತಿ’ ‘ಕ್ರಾಂತಿ’ ‘ಕ್ರಾಂತಿ’ ಹೀಗೆ ಪತ್ರಿಕೆಗಳಲ್ಲೆಲ್ಲಾ ಕ್ರಾಂತಿಯ ತಲೆ ಬರಹಗಳು ಕಾಣಿಸಿಕೊಂಡದ್ದೇ ಮಲೆನಾಡಿನ ಕಾಡಿನಲ್ಲಿ ಅವಿತುಕೊಂಡಿದ್ದ ನಕ್ಸಲೀಯರು ಕಂಗಾಲಾದರು. ನಕಲಿ ಎನ್ಕೌಂಟರ್ ಭಯದಿಂದ ನಾವಿಲ್ಲಿ ಕಾಡಿನಲ್ಲಿ ದಿಗ್ಭಂಧನಕ್ಕೊಳಗಾಗಿರುವಾಗ ನಾಡಿನಲ್ಲಿ ಕ್ರಾಂತಿ ಮಾಡುತ್ತಿರುವವರು ಯಾರಾಗಿರಬಹುದು? ನಮ್ಮ ಹೆಸರಿನಲ್ಲಿ ಮತ್ತೆ ಯಾರಾದರೂ ಮನೆಗಳಿಗೆ ನುಗ್ಗಿದರೋ? ಅಥವಾ ನಮ್ಮಿಂದ ಸಿಡಿದವರು ಹೊಸತಾಗಿ ಗುಂಪು ಕಟ್ಟಿ ಬಂಡವಾಳ ಶಾಹಿಗಳ ವಿರುದ್ಧ ಕೋವಿ ಎತ್ತಿರಬಹುದೋ, ನಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಪತ್ರಿಕಾ ಹೇಳಿಕೆ ನೀಡಿರಬಹುದೋ... ಹೀಗೆ ಸಾವಿರಾರು ಪ್ರಶ್ನೆಗಳು ಅವರನ್ನು ಕಾಡಿತು. ಅಷ್ಟರಲ್ಲಿ ಒಬ್ಬಾತ ನುಡಿದ ‘‘ಇದು ಬೇರೆ ಕ್ರಾಂತಿ ಸಂಗಾತಿಗಳೇ... ಪತ್ರಿಕೆಗಳು ಬರೆಯುತ್ತಿರುವುದು ಮಾವೋ ಕ್ರಾಂತಿಯ ಬಗ್ಗೆಯಲ್ಲ...’’</b></span><br />
<span style="color: blue; font-size: large;"><b>ನಕ್ಸಲ್ ನಾಯಕನಿಗೆ ಅರ್ಥವಾಗಲಿಲ್ಲ. ‘‘ಕಾರ್ಲ್ ಮಾರ್ಕ್ಸ್ವಾದಿಗಳ ಕ್ರಾಂತಿಯ ಬಗ್ಗೆ ಬರೆದಿದ್ದಾರೆಯೆ?’’</b></span><br />
<span style="color: blue; font-size: large;"><b>ಸಂಗಾತಿ ನುಡಿದ ‘‘ಇದು ಕಾರ್ಲ್ ಮಾರ್ಕ್ಸ್ವಾದಿಗಳ ಬಗ್ಗೆ ಅಲ್ಲ... ಕಾರ್ ಮಾರ್ಕ್ಸ್ವಾದಿಗಳ ಬಗ್ಗೆ....’’</b></span><br />
<span style="color: blue; font-size: large;"><b>ನಾಯಕನಿಗೆ ತಲೆ ಬಿಸಿಯಾಯಿತು. ‘‘ಅದು ಯಾವುದು ಕಾರ್ ಮಾರ್ಕ್ಸ್ವಾದಿಗಳು... ಮಾರ್ಕ್ಸ್ವಾದಿಗಳ ಇನ್ನೊಂದು ಗುಂಪೇ? ಯಾರದರ ನಾಯಕ?’’</b></span><br />
<span style="color: blue; font-size: large;"><b>ಸಂಗಾತಿ ವಿವರಿಸಿದ ‘‘ ಈ ಗುಂಪು ಕ್ರಾಂತಿ ಮಾಡಲು ಹೊರಟಿರುವುದು ಕೋವಿಯಲ್ಲಲ್ಲ. ಕಾಮ್ರೇಡ್.. ಕಾರ್ನಲ್ಲಿ. ಈ ಕಾರ್ ಕ್ರಾಂತಿಗೆ ಕಾರ್ಲ್ಮಾಕ್ಸ್ ಬೆಂಬಲವಿದೆಯಂತೆ. ಇನ್ನು ಮುಂದೆ ಕಾರ್ಲ್ಮಾಕ್ಸ್ ಎನ್ನುವ ಹೆಸರನ್ನು ಕಾರಲ್ಲಿ ಮಾರ್ಕ್ಸ್ ಎಂದು ತಿದ್ದಿ ಓದಲಾಗುವುದೆಂದು ಪಶ್ಚಿಮಬಂಗಾಳದ ಕಮ್ಯುನಿಷ್ಟ್ ನಾಯಕರು ಹೇಳಿಕೆ ನೀಡಿದ್ದಾರೆ.’’</b></span><br />
<span style="color: blue; font-size: large;"><b>ನಾಯಕನಿಗೆ ಅರ್ಥವಾಗಲಿಲ್ಲ ‘‘ ರಸ್ತೆ ಅಪಘಾತದಲ್ಲಿ ನಡೆಯುತ್ತಿರುವ ಸಾವು ನೋವುಗಳನ್ನು ಗಮನಿಸಿದರೆ, ನಮ್ಮ ಕೋವಿಗಿಂತ ಕಾರೇ ಹಿಂಸೆಗೆ ಹೆಚ್ಚು ಅನುಕೂಲ. ಆದುದರಿಂದ ನಮ್ಮ ಪಶ್ಚಿಮ ಬಂಗಾಳದ ಸಂಗಾತಿಗಳು ಕ್ರಾಂತಿಗೆ ಕಾರನ್ನು ಬಳಸಲು ಹೊರಟಿರಬೇಕು...’’</b></span><br />
<span style="color: blue; font-size: large;"><b>ಸಂಗಾತಿ ನುಡಿದ ‘‘ಬಡವರ ಕೈಗೆಟಕುವ ದರದಲ್ಲಿ ಕಾರನ್ನು ಉತ್ಪಾದಿಸುತ್ತಿದ್ದಾರಂತೆ. ಈ ಕಾರಿಗೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಬೆಂಬಲ ನೀಡಿದ್ದಾರೆ. ಬಡವರಿಗೆ ಕಾರು ಎಟಕುತ್ತದೆ ಎಂದ ಮೇಲೆ ಅದು ಕ್ರಾಂತಿಯೇ ತಾನೆ... ಇದೀಗ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಬದಲಿಗೆ ಸಿಪಿಐ(ಟಿ) ಎಂದು ಕರೆಯಲಾಗುತ್ತದೆಯಂತೆ...’’</b></span><br />
<span style="color: blue; font-size: large;"><b>‘‘ಟಿ ಎಂದರೆ?’’</b></span><br />
<span style="color: blue; font-size: large;"><b>‘‘ಟಿ ಎಂದರೆ ಟಾಟಾ ಅಂತ. ಇನ್ನು ಮುಂದೆ ಸಿಪಿಐಎಂ ಟಾಟಾ...’’</b></span><br />
<span style="color: blue; font-size: large;"><b>‘‘ಹಾಗಾದರೆ ಮಾರ್ಕ್ಸ್...’’</b></span><br />
<span style="color: blue; font-size: large;"><b>‘‘ಅವನಿಗೆ ಈಗಾಗಲೇ ಟಾಟಾ ಹೇಳಿಯಾಗಿದೆ...ಅವರ ಸ್ಥಾನದಲ್ಲಿ ಟಾಟಾವನ್ನೇ ಶಾಶ್ವತವಾಗಿ ನಿಲ್ಲಿಸಲಾಗುತ್ತದೆಯಂತೆ...’’</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="color: blue; font-size: large;"><b>ರತನ್ ಟಾಟಾ ಬೆಳಗ್ಗೆ ಎದ್ದಾಗ ಅವರ ಪುಟ್ಟ ಮೊಮ್ಮಗಳು ಏನೋ ಬರೆಯುತ್ತಿದ್ದಳು. ಟಾಟಾ ಮೆಲ್ಲಗೆ ಮೊಮ್ಮಗಳ ಹತ್ತಿರ ಹೋಗಿ’’ ಪುಟ್ಟಿ ಏನು ಬರೆಯುತ್ತಿದ್ದೀಯಮ್ಮ...?’’ ಎಂದು ಕೇಳಿದರು.</b></span><br />
<span style="color: blue; font-size: large;"><b>ಪುಟ್ಟಿ ಹೇಳಿದಳು ‘‘ಕತೆ ಬರೆಯುತ್ತಿದ್ದೇನೆ ತಾತಾ...’’</b></span><br />
<span style="color: blue; font-size: large;"><b>‘‘ಯಾರ ಕತೆ ಪುಟ್ಟಿ?’’</b></span><br />
<span style="color: blue; font-size: large;"><b>‘‘ಬಡವರ ಕತೆ ತಾತಾ’’</b></span><br />
<span style="color: blue; font-size: large;"><b>ಟಾಟಾಗೆ ಖುಷಿಯಾಯಿತು. ತನ್ನ ಹಾಗೆಯೇ ಈಕೆಯೂ ಬಡವರ ಕುರಿತಂತೆ ಆಲೋಚಿಸುವುದು ನೋಡಿದರೆ, ನನ್ನ ಮೊಮ್ಮಗಳು ದೊಡ್ಡ ಉದ್ಯಮಿಯಾಗುವುದು ಗ್ಯಾರಂಟಿ ಅನ್ನಿಸಿತು. ‘‘ಇಲ್ಲಿ ಕೊಡಮ್ಮ ನಾನೊಮ್ಮೆ ಓದಿ ಕೊಡುತ್ತೇನೆ’’ ಎಂದರು. ಪುಟ್ಟಿ ಕೊಟ್ಟಳು.</b></span><br />
<span style="color: blue; font-size: large;"><b>‘‘ಒಂದಾನೊಂದು ಊರಿನಲ್ಲಿ ಒಬ್ಬ ದಟ್ಟ ದರಿದ್ರ ಬಡವನಿದ್ದ. ಅವನು ಅದೆಷ್ಟು ಬಡವನಾಗಿದ್ದ ಎಂದರೆ ಓಡಾಡುವದಕ್ಕೆ ಅವನಲ್ಲಿ ಒಂದೇ ಒಂದು ‘ನ್ಯಾನೋ’ ಕಾರು ಇತ್ತು. ಅವರ ಮನೆ ಅದೆಷ್ಟು ಸಣ್ಣದಾಗಿತ್ತು ಎಂದರೆ, ಅಲ್ಲಿ ಒಂದು ಹೂವಿನ ಗಾರ್ಡನ್ ಕೂಡಾ ಇದ್ದಿರಲ್ಲಿಲ್ಲ. ಮನೆಗೆ ಎಸಿ ಕೂಡ ಇದ್ದಿರಲಿಲ್ಲ. ಪಾಪ ಅವನ ಮಕ್ಕಳಿಗೆ ಓದುವುದಕ್ಕೆ ಮನೆಯಲ್ಲಿ ರೀಡಿಂಗ್ ರೂಮ್ ಕೂಡಾ ಇದ್ದಿರಲಿಲ್ಲ. ಆ ಬಡವನ ಮನೆಯಲ್ಲಿ ಅಡುಗೆ ಕೆಲಸಕ್ಕೆ ಆಳು ಕೂಡಾ ಇದ್ದಿರಲಿಲ್ಲ. ಆದುದರಿಂದ ಬಡವನ ಹೆಂಡತಿಯೇ ಅಡುಗೆ ಕೆಲಸ ಮಾಡಬೇಕಾಗಿತ್ತು....’’</b></span><br />
<span style="color: blue; font-size: large;"><b> ಟಾಟಾಗೆ ಕತೆ ಓದುತ್ತಾ ಓದುತ್ತಾ ಕಣ್ಣೀರು ಉಕ್ಕಿ ಬಂತು. ಈ ದೇಶದಲ್ಲಿ ಬಡವರು ಎಷ್ಟು ಕಷ್ಟ ಪಡುತ್ತಿದ್ದಾರೆ ಅನ್ನಿಸಿತು. ತನ್ನ ಮೊಮ್ಮಗಳು ಬಡವರ ಬಗ್ಗೆ ಎಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎಂದು ಅಚ್ಚರಿಯೂ ಆಯಿತು. ತನ್ನ ಮೊಮ್ಮಗಳ ಹೆಸರಿನಲ್ಲಿ ಕಡಿಮೆ ದರಕ್ಕೆ ಫ್ರಿಜ್ಜು, ಕಡಿಮೆ ಬೆಲೆಯ ಎಸಿ ಇತ್ಯಾದಿಗಳನ್ನು ಅತಿ ಬಡವರಿಗಾಗಿ ಸಿದ್ಧಗೊಳಿಸುವ ನಿರ್ಧಾರವನ್ನು ಅದಾಗಲೇ ಅವರು ತೆಗೆದುಕೊಂಡಾಗಿತ್ತು.</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="color: blue; font-size: large;"><b>ರಾಜ್ಯದಲ್ಲಿ ನ್ಯಾನೋ ಕಾರು ಬಿಡುಗಡೆಯಾದದ್ದೇ ರಾಜ್ಯಪಾಲರು ಪತ್ರಿಕಾಗೋಷ್ಠಿ ಕರೆದರು. ಎಂಜಲು ಕಾಸಿ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಪಾಲರ ಪತ್ರಿಕಾಗೋಷ್ಠಿಗೆ ಹಾಜರಾದ. ಮುಖ್ಯಮಂತ್ರಿಗಳು ಕರೆದ ಪತ್ರಿಕಾಗೋಷ್ಠಿಯ ಮಜಾ ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಸಿಗುತ್ತಿರಲಿಲ್ಲ. ಮುಖ್ಯವಾಗಿ ರಾಜ್ಯಪಾಲರು ತರಿಸುವ ಟೀ ಜೊತೆಗಿರುವ ಇಡ್ಲಿಯ ಚಟ್ನಿ ಅಷ್ಟು ಚೆನ್ನಾಗಿರುತ್ತಿರಲಿಲ್ಲ. ಅದಲ್ಲದೆ, ಮುಖ್ಯಮಂತ್ರಿಗಳಾದರೆ, ಪಕ್ಕಕ್ಕೆ ಕರೆದು ನೂರೋ ಇನ್ನೂರೋ ಕಿಸೆಗೆ ತಳ್ಳಿಬಿಡುತ್ತಿದ್ದರು. ಆ ಸೌಜನ್ಯವೂ ರಾಜ್ಯಪಾಲರಲ್ಲಿರಲಿಲ್ಲ. ಆದರೂ ಸಂಪಾದಕ ಒತ್ತಡದಿಂದಾಗಿ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ. ರಾಜ್ಯಪಾಲರು ಅದಾಗಲೇ ಪತ್ರಿಕಾಗೋಷ್ಠಿಯನ್ನು ಆರಂಭಿಸಿ ಬಿಟ್ಟಿದ್ದರು. ಅವರ ಮುಖದಲ್ಲಿ ಸಂಭ್ರಮ ಕುಣಿಯುತ್ತಿತ್ತು.</b></span><br />
<span style="color: blue; font-size: large;"><b>‘‘ರಾಜ್ಯದ ಬಡವರ ಪಾಲಿಗೆ ಇದೊಂದು ಸುದಿನ. ನನ್ನ ಆಳ್ವಿಕೆಯಲ್ಲಿ ಇಂತಹ ದಿನವೊಂದು ಬಂದಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ನ್ಯಾನೋ ಕಾರು ಬಿಡುಗಡೆಗೊಂಡಿರುವುದರಿಂದ ದೂರ ದೂರದ ಹಳ್ಳಿಗಳಿಂದ ಜನತಾದರ್ಶನಕ್ಕೆ ಬರುವ ಬಡವರಿಗೆ ತುಂಬಾ ಅನುಕೂಲವಾಗಲಿದೆ. ಅವರು ತಮ್ಮ ಸಮಸ್ಯೆಗಳನ್ನು ಹೇಳಲು ಈ ನ್ಯಾನೋ ಕಾರಿನಲ್ಲೇ ಆಗಮಿಸಬಹುದು. ಹಾಗೆಯೇ ಜನತಾದರ್ಶನಕ್ಕೆಂದು ಬಂದವರು ತಮ್ಮ ಕೆಲಸ ಮುಗಿದ ಬಳಿಕ ಬೆಂಗಳೂರನ್ನು ಸುತ್ತಾಡಿಕೊಂಡೂ ಹೋಗಬಹುದು. ಇನ್ನು ಮುಂದೆ ನ್ಯಾನೋ ಕಾರು ಯಾರೆಲ್ಲಾ ಹೊಂದಿದ್ದಾರೋ ಅವರನ್ನೆಲ್ಲ ಬಡತನ ರೇಖೆಗಿಂತ ಕೆಳಗಿನವರೆಂದು ಗುರುತಿಸಲಾಗುತ್ತದೆ. ಬಡವರೊಂದೂ, ಬಡತನ ರೇಖೆಗಿಂತ ಕೆಳಗಿನವರೆಂದೂ ಗುರುತಿಸಬೇಕಾದರೆ ಅವರು ಕಡ್ಡಾಯವಾಗಿ ‘ನ್ಯಾನೋ’ ಕಾರನ್ನು ಹೊಂದಿರಬೇಕಾಗುತ್ತದೆ. ಯಾರೆಲ್ಲ ನ್ಯಾನೋ ಕಾರು ಹೊಂದಿಲ್ಲವೋ ಅವರ ಹಸಿರು ಕಾರ್ಡನ್ನು ಹಿಂದಕ್ಕೆ ಪಡೆಯಲಾಗುತ್ತದೆ...’’</b></span><br />
<span style="color: blue; font-size: large;"><b>ಸಾಲ ಸೋಲ ಮಾಡಿಯಾದರೂ ನ್ಯಾನೋ ಕಾರು ತೆಗೆದುಕೊಳ್ಳುವುದು ಅನಿವಾರ್ಯ ಎನಿಸಿತು ಎಂಜಲು ಕಾಸಿಗೆ. ಇಲ್ಲವಾದರೆ ಅವನ ಮನೆಯ ಹಸಿರು ಕಾರ್ಡು ವಜಾ ಆಗುವ ಅಪಾಯವಿತ್ತು. ಅದನ್ನು ನೆನೆಸಿಕೊಂಡೇ ಕೇಳಿದ ‘‘ಒಂದು ವೇಳೆ ಕೆಲವರಲ್ಲಿ ಎರಡು ನ್ಯಾನೋ ಕಾರು ಇದ್ದರೆ...’’</b></span><br />
<span style="color: blue; font-size: large;"><b>ರಾಜ್ಯಪಾಲರಲ್ಲಿ ಉತ್ತರ ಸಿದ್ಧವಿತ್ತು. ‘‘ನೋಡಿ, ಒಂದು ನ್ಯಾನೋ ಕಾರು ಇದ್ದರೆ ಅವರನ್ನು ಬಡವರು ಎಂದು ಗುರುತಿಸಲಾಗುತ್ತದೆ. ಎರಡು ನ್ಯಾನೋ ಕಾರು ಇದ್ದರೆ ಅವರನ್ನು ಅತಿ ಬಡವರು ಎಂದು ಗುರುತಿಸಲಾಗುತ್ತದೆ. ಅಂತವರನ್ನು ಬಡತನ ರೇಖೆಗಿಂತ ಕೆಳಗಿನವರ ಪಟ್ಟಿಯಲ್ಲಿ ನಾವು ಗುರುತಿಸುತ್ತೇವೆ...’’</b></span><br />
<span style="color: blue; font-size: large;"><b>‘‘ನ್ಯಾನೋ ಕಾರು ಇಲ್ಲದೇ ಇದ್ದರೆ...’’</b></span><br />
<span style="color: blue; font-size: large;"><b>ರಾಜ್ಯಪಾಲರು ಕಡ್ಡಿ ಮುರಿದಂತೆ ಹೇಳಿದರು ‘‘ಯಾರಲ್ಲೆಲ್ಲಾ ಬಡವರಿಗಾಗಿ ತಯಾರಿಸಿರುವ ನ್ಯಾನೋ ಕಾರು ಇಲ್ಲವೋ ಅವರನ್ನು ಶ್ರೀಮಂತರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮತ್ತು ಅವರ ಮೇಲೆ ತೆರಿಗೆಗಳನ್ನು ಹಾಕಲಾಗುತ್ತದೆ. ಆದುದರಿಂದ ಇನ್ನೂ ಎರಡು ತಿಂಗಳ ಒಳಗಾಗಿ ಎಲ್ಲ ಬಡವರು ನ್ಯಾನೋ ಕಾರುಗಳನ್ನು ಕೊಂಡು ತಾವು ಬಡವರು ಎನ್ನುವುದನ್ನು ಸಾಬೀತು ಪಡಿಸಬೇಕಾಗಿದೆ’’ ಎನ್ನುತ್ತಾ ಎದ್ದು ನಿಂತರು. ಅಷ್ಟರಲ್ಲಿ ಶೀರ, ಉಪ್ಪಿಟ್ಟು ಹಿಡಿದುಕೊಂಡು ಬಂದರು. ಎಂಜಲು ಕಾಸಿ ಎಂಜಲು ಸುರಿಸುತ್ತಾ ಆ ಕಡೆಗೆ ತಿರುಗಿದ.</b></span><br />
<span style="color: purple; font-size: large;"><b>(ಜನವರಿ, 13, 2008, ರವಿವಾರ)</b></span><br />
<br /></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-2014532893000703052015-04-25T08:52:00.000-07:002015-04-25T08:52:14.620-07:00ಕೆಲವು ಜಾಹಿರಾ ‘ಥೂ’ಗಳು<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-flzqO0iWfoE/VTu33qEyFTI/AAAAAAAAAOc/rScbwKqmV_8/s1600/bam.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-flzqO0iWfoE/VTu33qEyFTI/AAAAAAAAAOc/rScbwKqmV_8/s1600/bam.jpg" /></a></div>
<b style="color: purple; font-size: x-large;">2008ನೇ ಇಸವಿಯಲ್ಲಿ ವಿಧಾನಸಭಾ ಚುನಾವಣೆಯ ಹೊತ್ತು. ಪಕ್ಷಾಂತರದಲ್ಲಿ ಕುಖ್ಯಾತರಾಗಿದ್ದ ಬಂಗಾರಪ್ಪರನ್ನು ಬಿಜೆಪಿ ಹೊರ ಹಾಕಿದ ಸಂದರ್ಭ. ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿರುವ ಸಮಯ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ</b><br />
<span style="color: blue; font-size: large;"><b><br /></b></span>
<span style="font-size: large;"><b>ವರ ಬೇಕಾಗಿದೆ</b></span><br />
<span style="color: blue; font-size: large;"><b> ಈಗಾಗಲೇ ಹತ್ತು ಬಾರಿ ಡೈವರ್ಸ್ ಪಡೆದ 70ರ ತಾರುಣ್ಯದ ಯುವತಿಗೆ ಯೋಗ್ಯ ವರ ಬೇಕಾಗಿದೆ. ಯಾವ ಧರ್ಮ, ಜಾತಿ, ವರ್ಗಗಳಿಗೆ ಸೇರಿದ್ದರೂ ಚಿಂತೆಯಿಲ್ಲ. ಈ ಹಿಂದೆ ಡೈವರ್ಸ್ ನೀಡಿದ ಗಂಡಂದಿರಾದರೂ ಆದೀತು. ಈಗಾಗಲೇ ಪೂಜಾರಿಗಳು ಮುಹೂರ್ತ, ಸಮಯ, ಮದುವೆ ಹಾಲ್ ಎಲ್ಲವನ್ನೂ ನಿಗದಿ ಪಡಿಸಿರುವುದರಿಂದ ಅರ್ಜೆಂಟಾಗಿ ಮದುವೆಯಾಗಬೇಕಾಗಿದೆ. ತಾಳಿಯ ಹಣವನ್ನು ವಧುವೇ ಭರಿಸಲಿರುವುದರಿಂದ ವರ ಸೀದಾ ಮಂಟಪಕ್ಕೆ ಬಂದು ತಾಳಿ ಕಟ್ಟಿದರೆ ಆಯಿತು. ಈಡಿಗ ಜಾತಿಗೆ ಸೇರಿರುವ ಈ ಹುಡುಗಿ ಅತಿ ಸುಂದರಿ, ಹಲವು ಮದುವೆಯಾಗಿ ಸಾಕಷ್ಟು ಅನುಭವವಿರುವುದರಿಂದ ವರನಿಗೆ ಅನುಕೂಲ. ವಧುವಿನ ಕೈಯಲ್ಲಿ ಸ್ವಲ್ಪ ಪಿತ್ರಾರ್ಜಿತ ಆಸ್ತಿ ಇದೆ. ಆಸಕ್ತಿ ಇರುವವರು ತಕ್ಷಣ ಮುಖತಃ ಸಂಪರ್ಕಿಸಬೇಕು.</b></span><br />
<span style="font-size: large;"><b><span style="color: red;">ಬಂಗಾರಮ್ಮ, ಸಮಾಜವಾದಿ ವಿಲ್ಲಾ, ಸಮಯ ಸಾಧಕ ರಸ್ತೆ, ಬಿಜೆಪಿ ಮೊದಲ ತಿರುವು, ಹಳೇ ಕ್ರಾಂತಿರಂಗ ಬೀದಿ, ಕಾಂಗ್ರೆಸ್ ಮುಖ್ಯರಸ್ತೆ, ಶಿವಮೊಗ್ಗ-111 </span><span style="color: blue;">(ಮೊಬೈಲ್ ಫೋನ್ನ ಕರೆನ್ಸಿ ಮುಗಿದಿರುವುದರಿಂದ ಹಳೆ ನಂಬರನ್ನು ಸಂಪರ್ಕಿಸಬಾರದಾಗಿ ವಿನಂತಿ)</span></b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b><br /></b></span>
<span style="font-size: large;"><b>ಕುರಿಗಳು ಮಾರಾಟಕ್ಕಿವೆ</b></span><br />
<span style="color: blue; font-size: large;"><b>ನಾನೇ ನನ್ನ ದೊಡ್ಡಿಯಲ್ಲಿ ಸಾಕಿದ ದಷ್ಟಪುಷ್ಟ ಅಲ್ಪಸಂಖ್ಯಾಕ ಕುರಿಗಳು ಮಾರಾಟಕ್ಕಿವೆ. ಇರಾಕ್ನಿಂದ ತರಿಸಿದ ಸದ್ದಾಂ ಕಂಪೆನಿಯ ಹುಲ್ಲು ಹಾಕಿ ಈ ಕುರಿಗಳನ್ನು ಸಾಕಲಾಗಿದೆ. ಬಲಿ ಕೊಡುವುದಕ್ಕೆ ಯೋಗ್ಯ ಕುರಿಗಳು ಇವು. ನನಗೆ ವಯಸ್ಸಾಗಿರುವುದರಿಂದ ಈ ಕುರಿಗಳನ್ನು ಮಾರಿ, ನನ್ನ ಅಳಿಯ ಮತ್ತು ಮೊಮ್ಮಕ್ಕಳಿಗೆ ಸಲ್ಲಬೇಕಾದುದನ್ನು ಕೊಟ್ಟು, ನಾನು ನಿವತ್ತ ಜೀವನ ಮಾಡಬೇಕೆಂದಿದ್ದೇನೆ. ಆದುದರಿಂದ ಯಾರಾದರೂ ಸರಿ, ಒಳ್ಳೆಯ ದರ ಕೊಟ್ಟರೆ ಈ ಕುರಿಗಳನ್ನು ಮಾರುವುದಕ್ಕೆ ಸಿದ್ಧ. ಕುರಿಗಳ ಜೊತೆಗೆ ಕತ್ತಿಗಳನ್ನು ಪುಕ್ಕಟ್ಟೆಯಾಗಿ ನೀಡಲಾಗುವುದು. ಬಿರಿಯಾನಿ ಮಾಡಲು ಯೋಗ್ಯ ಕುರಿಗಳು. ನನ್ನ ಮಕ್ಕಳು, ಮೊಮ್ಮಕ್ಕಳಿಗಾಗಿಯೇ ಸಾಕಿರುವ ಕುರಿಗಳು ಇವಾಗಿರುವುದರಿಂದ ದರದಲ್ಲಿ ಯಾವುದೇ ರಾಜಿಯಿಲ್ಲ. ಇವನ್ನು ಮಾರಿ ಸಿಕ್ಕಿದ ಲಾಭವನ್ನು ಅಳಿಯ, ಮೊಮ್ಮಕ್ಕಳಿಗೆ ಸಮನಾಗಿ ಹಂಚಿ ಅಲ್ಪಸಂಖ್ಯಾತ ಸಮುದಾಯವನ್ನು ಉದ್ಧಾರ ಮಾಡುವುದು ನನ್ನ ಉದ್ದೇಶ. ಆದುದರಿಂದ ಈ ಕುರಿಗಳನ್ನು ಅತಿ ಹೆಚ್ಚು ದರ ಕೊಟ್ಟು ಖರೀದಿಸಿ ಅಲ್ಪಸಂಖ್ಯಾತರ ಏಳಿಗೆ ಮಾಡಬೇಕೆಂದು ಮನವಿ. ಅಲ್ಪಸಂಖ್ಯಾತ ಕುರಿಗಳಿಂದ ಮಾಡಲ್ಪಟ್ಟ ಚಿಲ್ಲಿ, ಫ್ರೈ, ಸುಕ್ಕ ಇತ್ಯಾದಿಗಳು ಇತ್ತೀಚೆಗೆ ಗುಜರಾತ್ನಲ್ಲಿ ಭಾರೀ ಖ್ಯಾತಿಯನ್ನು ಪಡೆದಿದ್ದವು. ಈ ಕುರಿಗಳನ್ನು ಕಡಿದು ಯಾವ ಥರದ ಸುಕ್ಕ, ಫ್ರೈ, ಟಿಕ್ಕಾ ಮಾಡಿ ತಿಂದರೂ ನನ್ನ ಮತ್ತು ನನ್ನ ಮೊಮ್ಮಕ್ಕಳ ಅಭ್ಯಂತರವಿಲ್ಲ. </b></span><br />
<span style="font-size: large;"><b><span style="color: red;">ಜೋಕರ್ ಶರೀಫ್, ಅಲ್ಪಸಂಖ್ಯಾತರ ದೊಡ್ಡಿ, ಕಾಂಗ್ರೆಸ್ ವದ್ದಾಶ್ರಮ ರಸ್ತೆ, ಸದ್ದಾಂ ಹುಸೇನ್ ಅಡ್ಡ ಹಾದಿ, ರೈಲ್ವೆ ಹಳಿಗಳ ಸಮೀಪ, ಶಿವಾಜಿನಗರ</span><span class="Apple-tab-span" style="white-space: pre;"><span style="color: red;"> </span><span style="color: blue;"> </span></span></b></span><br />
<span style="color: blue; font-size: large;"><b>*** </b></span><br />
<span style="color: blue; font-size: large;"><b><br /></b></span>
<span style="font-size: large;"><b>ಕಾಣೆಯಾಗಿದ್ದಾರೆ</b></span><br />
<span style="color: blue; font-size: large;"><b>ವಾರದ ಹಿಂದೆ ಚುನಾವಣಾ ಸಂತೆಯನ್ನು ನೋಡಿ ಬರುತ್ತೇನೆ ಎಂದು ಹೋದ ಸತ್ಯ, ಆತ್ಮಗೌರವ ಮತ್ತು ಪ್ರಾಮಾಣಿಕತೆ ಎಂಬ ಮೂವರು ಮಕ್ಕಳು ಕಾಣೆಯಾಗಿದ್ದಾರೆ. ಆತ್ಮಸಾಕ್ಷಿ ಎಂಬ ಊರಿನ ನಿವಾಸಿಗಳಾಗಿರುವ ಈ ಮಕ್ಕಳು ಕೇಸರಿ, ಬಿಳಿ, ಹಸಿರು ಬಣ್ಣವನ್ನು ಹೊಂದಿದ್ದು, ಹದಯದ ಭಾಷೆಯನ್ನು ಮಾತನಾಡುತ್ತಾರೆ. ಯಾರಾದರೂ ಈ ಮಕ್ಕಳನ್ನು ನೋಡಿದರೆ ದಯವಿಟ್ಟು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಬೇಡಿ. ಯಾಕೆಂದರೆ ಅವರು ನಕಲಿ ಎನ್ಕೌಂಟರ್ನಲ್ಲಿ ಕೊಲ್ಲುವ ಸಾಧ್ಯತೆಯಿದೆ. ಸ್ಥಳೀಯ ರಾಜಕಾರಣಿಗಳಿಗೂ ಒಪ್ಪಿಸಬೇಡಿ. ಅವರು ಚಿಲ್ಲರೆ ಹಣಕ್ಕೆ ಆ ಮಕ್ಕಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ. ಸಿಕ್ಕಿದರೆ ನಿಮ್ಮ ನಿಮ್ಮ ಆತ್ಮ ಸಾಕ್ಷಿಯೊಳಗೆ ಭದ್ರವಾಗಿ ಬಚ್ಚಿಟ್ಟುಕೊಳ್ಳಿ. ಚುನಾವಣೆ ಸಂತೆ ಮುಗಿಯುವವರೆಗೆ ಅವರನ್ನು ಹೊರಗೆ ಬಿಡಬೇಡಿ.</b></span><br />
<span style="color: red; font-size: large;"><b>ಪ್ರಜಾಪ್ರಭುತ್ವ, ಕಾಣೆಯಾದ ಮಕ್ಕಳ ನಿರ್ಭಾಗ್ಯ ತಂದೆ</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="font-size: large;"><b>ಹರಾಜು ಪ್ರಕಟನೆ</b></span><br />
<span style="color: blue; font-size: large;"><b>ಅತ್ಯುತ್ತಮ ತಳಿಯ 20 ಕ್ರಿಕೆಟ್ ಆಟಗಾರರು ಹರಾಜಿಗಿದ್ದಾರೆ. ಸ್ಫುರದ್ರೂಪಿಗಳಾಗಿರುವ ಈ ಕ್ರಿಕೆಟ್ ಆಟಗಾರರು ಅತ್ಯಂತ ಚೆಂದ ಹಾಡಬಲ್ಲರು. ಫ್ಯಾಶನ್ ಶೋಗಳಲ್ಲಿ ಮಾರ್ಜಾಲ ನಡಿಗೆಯ ಕುರಿತಂತೆ ವಿಶೇಷ ತರಬೇತಿ ಪಡೆದಿದ್ದಾರೆ. ಬಿಕಿನಿ ಹಾಕಿದ ಹುಡುಗಿಯರೊಂದಿಗೆ ಅದ್ಭುತವಾಗಿ ಕುಣಿಯಬಲ್ಲರು. ಯಾವ ಯಾವ ಸಂದರ್ಭಗಳಲ್ಲಿ ಹೇಗೆ ವಿವಾದಿತರಾಗಿ ಸುದ್ದಿಯಾಗಬೇಕು ಎನ್ನುವುದರ ಕುರಿತಂತೆ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಸಹನಟರಾಗಿ ಅಭಿನಯಿಸಿದ್ದಾರೆ. ಬೇಕಾದರೆ ಆಟಕ್ಕೂ ಕೂಡಾ ಇವರನ್ನು ಬಳಸಬಹುದು. ಆದರೆ ಇವರ ಮೇಕಪ್ ಕೆಡದಂತೆ ಜಾಗತೆ ವಹಿಸಬೇಕು. ಬಿಸಿಲಿಗೆ ಹೆಚ್ಚು ಹೊತ್ತು ನಿಲ್ಲಿಸಬಾರದು. ಆಟಗಾರರ ಜೊತೆಗೆ ಅವರ ನಾಚಿಕೆ, ಮಾನ ಮರ್ಯಾದೆ, ಸ್ವಂತಿಕೆ ಇವುಗಳಿಗೆ ಪ್ರತ್ಯೇಕ ದರ ವಿಧಿಸಲಾಗುವುದಿಲ್ಲ. ಅದನ್ನು ಪುಕ್ಕಟೆಯಾಗಿ ನೀಡಲಾಗುತ್ತದೆ.</b></span><br />
<span style="color: red; font-size: large;"><b>ಡಾಲರ್ ಕುಮಾರ್, ಆತ್ಮ ಗೌರವವಿಲ್ಲ, ಹಾಕಿ ಆಟದ ಗೋರಿಯ ಎದುರುಗಡೆ, ಬಹುರಾಷ್ಟ್ರೀಯ ಕಂಪೆನಿ, ಭಾರತ</b></span><br />
<span style="color: blue; font-size: large;"><b><span class="Apple-tab-span" style="white-space: pre;"> </span>***</b></span><br />
<span style="font-size: large;"><b>ಅನಾಥ ಶವ ಪತ್ತೆ</b></span><br />
<span style="color: blue; font-size: large;"><b>ಗುಜರಾತ್ನ ಗೋಧ್ರಾ ರೈಲು ಹಳಿ ಬಳಿ ಒಂದು ಅನಾಥ ಶವ ಪತ್ತೆಯಾಗಿದೆ. ಮುಖ ಗುರುತು ಸಿಕ್ಕಲಾರದಷ್ಟು ಜಜ್ಜಿ ಹೋಗಿದೆ. ಆತ್ಮಹತ್ಯೆಯೋ, ಕೊಲೆಯೋ ತಿಳಿಯದಾಗಿದೆ. ಮತ ದೇಹದ ಅಂಗಿಯ ಕಾಲರ್ ಬಳಿ ‘ಅಂಬೇಡ್ಕರ್ ಟೈಲರ್ ಶಾಪ್’ ಎನ್ನುವ ಮಾರ್ಕ್ ಇದೆ. ಕಿಸೆಯಲ್ಲೊಂದು ಗುರುತು ಚೀಟಿ ಸಿಕ್ಕಿದ್ದು, ಅದರಲ್ಲಿ ‘ಸಂವಿಧಾನ’ ಎಂಬ ಹೆಸರಿದ್ದು, ಅದು ಮತ ವ್ಯಕ್ತಿಯ ಹೆಸರಾಗಿರಬೇಕೆಂದು ಶಂಕಿಸಲಾಗಿದೆ. ಗುರುತು ಚೀಟಿಯಲ್ಲಿ ತಂದೆಯ ಹೆಸರು ಸ್ವಾತಂತ್ರ, ತಾಯಿಯ ಹೆಸರು ಭಾರತಮಾತೆ ಎಂದು ಬರೆದಿದೆ. ವ್ಯಕ್ತಿಯ ದೇಹದಾದ್ಯಂತ ಚೂರಿಯ ಗಾಯಗಳಿವೆ. ವ್ಯಕ್ತಿಯ ಎದೆ ಭಾಗಕ್ಕಿಂತ ಬೆನ್ನಿನ ಭಾಗಕ್ಕೆ ಹೆಚ್ಚು ಇರಿಯಲಾಗಿದೆ. ಗಾಯದ ಗುರುತು ನೋಡಿದಾಗ ತ್ರಿಶೂಲಗಳಿಂದ ಬೆನ್ನಿಗೆ ಇರಿಯಲಾಗಿದೆ ಎಂಬ ಅನುಮಾನ ಬರುತ್ತದೆ. ಬೆನ್ನಿಗೆ ಇರಿದ ಪರಿಣಾಮವಾಗಿಯೇ ವ್ಯಕ್ತಿ ಸತ್ತಿರಬೇಕೆಂದು ಶಂಕಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ಮೊಕದ್ದಮೆ ಎಂದು ದಾಖಲಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ ಮತದೇಹವನ್ನು ಕೊಂಡೊಯ್ಯಬಹುದು.</b></span><br />
<span style="color: red; font-size: large;"><b>ನರೀಂದ್ರ ಮೊ. ದಿ. ಮುಖ್ಯಸ್ಥರು ಗುಜರಾತ್ ಶವಾಗಾರ ವಿಭಾಗ.</b></span><br />
<span style="color: purple; font-size: large;"><b>(ಎಪ್ರಿಲ್ 27, 2008, ರವಿವಾರ)</b></span><br />
<br /></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-49116127424214467912015-04-23T06:17:00.001-07:002015-04-23T06:17:13.395-07:00ನನ್ನದೂ ಗಾಂಧಿ ಫ್ಯಾಮಿಲೀನೇ ಕಣ್ರೀ...<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://3.bp.blogspot.com/-dqLh9L2V3IM/VTjwk5izYDI/AAAAAAAAAOM/rpQ2uIMHAgU/s1600/pooja.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-dqLh9L2V3IM/VTjwk5izYDI/AAAAAAAAAOM/rpQ2uIMHAgU/s1600/pooja.jpg" height="240" width="320" /></a></div>
<b style="color: purple; font-size: x-large;">2013</b><b style="color: purple; font-size: x-large;">ರ</b><b style="color: purple; font-size: x-large;"> ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಪೂಜಾ ಗಾಂಧೀ ರಾಜಕೀಯ ಪ್ರವೇಶಿಸಿ ಪಕ್ಷಾಂತರದಲ್ಲಿ ದಾಖಲೆ ಬರೆದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಬುಡಬುಡಿಕೆ. ಮಾರ್ಚ್ -09-2013 ರಲ್ಲಿ ವಾರ್ತಾಭಾರತಿ ದೈನಿಕದಲ್ಲ್ಲಿ ಪ್ರಕಟವಾಗಿದೆ </b><br />
<span style="color: purple; font-size: large;"><b><br /></b></span>
<span style="color: blue; font-size: large;"><b>ಸಿನಿಮಾ ನಟಿ ಹೂಜಾ ಗಾಂಧಿ ಇನ್ನೊಂದು ಪಕ್ಷಕ್ಕೆ ಸೇರಿದರು ಎಂಬ ಸುದ್ದಿ ಕೇಳಿದ್ದೆ ಪತ್ರಕರ್ತ ಎಂಜಲು ಕಾಸಿಗೆ ಸಿಟ್ಟು ಒತ್ತರಿಸಿ ಬಂತು. ಈಗಷ್ಟೇ ಹೂಜಾ ಗಾಂಧಿ ಪಕ್ಷಾಂತರ ಮಾಡಿದ ಸುದ್ದಿ ಮಾಡಿ ಕಳುಹಿಸಿದ್ದ. ಅಷ್ಟರಲ್ಲೇ ಆಕೆ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಹೀಗೆ ಆದಲ್ಲಿ ಪಕ್ಷಾಂತರ ಮಾಡುವುದರಲ್ಲಿ ನಟಿ ಹೂಜಾಗಾಂಧಿ ಆಸ್ಕರ್ ಅವಾರ್ಡ್ ಪಡೆಯುವುದು ಗ್ಯಾರಂಟಿ ಅನ್ನಿಸಿತು ಎಂಜಲು ಕಾಸಿಗೆ. ನೇರವಾಗಿ ಹೂಜಾ ಗಾಂಧಿಯ ಮನೆಬಾಗಿಲನ್ನು ತಟ್ಟಿ, “ಮೇಡಂ ನಿಮ್ಮ ಇಂಟರ್ಯೂಗೆ ಬಂದಿದ್ದೇನೆ” ಎಂದ.</b></span><br />
<span style="color: blue; font-size: large;"><b>“ನಾನೀಗ ಪಕ್ಷಾಂತರ ಮಾಡುವುದರಲ್ಲಿ ತುಂಬಾ ಬಿಸಿಯಾಗಿದ್ದೇನೆ....ಈಗಾಗ್ಲೇ ಹೊಸ ಪಕ್ಷದೋರು ನನ್ನನ್ನು ಸಂಪರ್ಕಿಸಿದ್ದಾರೆ....ಡೇಟ್ ಕೊಟ್ಟಿದ್ದೇನೆ...ಇನ್ನೇನೂ ಶೂಟಿಂಗ್ ರೆಡಿಯಾಗತ್ತೆ...” ಹೂಜಾಗಾಂಧಿ ಬಳುಕುತ್ತಾ ಕುರ್ಚಿಯಲ್ಲಿ ಕುಳಿತುಕೊಂಡರು.</b></span><br />
<span style="color: blue; font-size: large;"><b>“ಅಲ್ಲ ಮೇಡಂ ಬೆಳಗ್ಗೆ ಯಡಿಯೂರಪ್ಪ ಪಕ್ಷದಲ್ಲಿ, ಮಧ್ಯಾಹ್ನ ಶ್ರೀರಾಮುಲು ಪಕ್ಷದಲ್ಲಿ ರಾತ್ರಿ... ಕುಮಾರಸ್ವಾಮಿ ಪಕ್ಷದಲ್ಲಿ....ಹೀಗಾದ್ರೆ....ನೀವು ಸಿನಿಮಾ ಶೂಟಿಂಗ್ಗೆ ಯಾವಾಗ ಹೋಗ್ತೀರಿ...”</b></span><br />
<span style="color: blue; font-size: large;"><b>ಹೂಜಾಗಾಂಧಿ ನಕ್ಕಳು “ಇತ್ತೀಚಿನ ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಗೋದೆ ಕಡಿಮೆ. ಕಲಾತ್ಮಕ ಚಿತ್ರಗಳಲ್ಲಿ ನಟಿಸೋಣ ಅಂದ್ರೆ ಅದ್ರಲ್ಲಿ ಸಂಭಾವನೆ ಕಡಿಮೆ. ಆದುದರಿಂದ ರಾಜಕೀಯ ಸಿನಿಮಾದಲ್ಲಿ ನಟಿಸುವುದಕ್ಕೆ ಹೊರಟಿದ್ದೇನೆ....ಇದರಲ್ಲಿ ನಟಿಸುವುದಕ್ಕೂ ಸಾಕಷ್ಟು ಅವಕಾಶವಿದೆ. ಹಾಗೆಯೇ ಸಂಭಾವಣೆಯೂ ಕೈತುಂಬಾ ಸಿಗತ್ತೆ...”</b></span><br />
<span style="color: blue; font-size: large;"><b>“ನಿಮ್ಮ ದಿನಚರಿಯನ್ನು ಸ್ವಲ್ಪ ವಿವರಿಸುತ್ತೀರಾ...” ಕಾಸಿ ಕುತೂಹಲದಿಂದ ಕೇಳಿದ.</b></span><br />
<span style="color: blue; font-size: large;"><b>“ಬೆಳಗ್ಗೆ ಎದ್ದವಳೇ ಸೀದಾ ಶ್ರೀರಾಮುಲು ಪಕ್ಷಕ್ಕೆ ತೆರಳಿ ಮುಖ ಮತ್ತು ಇತರೆಲ್ಲವನ್ನು ತೊಳೆಯುತ್ತೇನೆ. ಹತ್ತು ಗಂಟೆಗೆ ಯಡಿಯೂರಪ್ಪ ಪಕ್ಷಕ್ಕೆ ಪಕ್ಷಾಂತರ ಮಾಡಿ ಟಿಫಿನ್ ಮುಗಿಸ್ತೇನೆ. ಮಧ್ಯಾಹ್ನ ಒಂದು ಗಂಟೆಗೆ ಕಾಂಗ್ರೆಸ್ ಪಕ್ಷದಲ್ಲಿ ಊಟ. ಸಂಜೆ ಜೆಡಿಎಸ್ಗೆ ಪಕ್ಷಾಂತ್ರ ಮಾಡಿ ಕಾಫಿ ತಿಂಡಿ. ರಾತ್ರಿ....ಇನ್ನಿತರ ಹಲವು ಪಕ್ಷಗಳಿಗೆ ಏಕಕಾಲದಲ್ಲಿ ಪಕ್ಷಾಂತರ ಮಾಡುತ್ತೇನೆ...” ಹೂಜಾಗಾಂಧಿಯ ಮಾತು ಕೇಳಿ ಕಾಸಿಗೆ ತಲೆ ತಿರುಗಿತು.</b></span><br />
<span style="color: blue; font-size: large;"><b>“ಅಲ್ಲಾ ಮೇಡಂ...ಎಲ್ಲರೂ ನಿಮ್ಮ ಹಿಂದೆ ಯಾಕೆ ಬಿದ್ದಿದ್ದಾರೆ....?” ಕಾಸಿ ಕೇಳಿದ.</b></span><br />
<span style="color: blue; font-size: large;"><b>“ಕಾಂಗ್ರೆಸ್ನೋರು ಸೋನಿಯಾಗಾಂಧಿ ಹಿಂದೆ ಬಿದ್ದ ಹಾಗೆ ಕರ್ನಾಟಕದ ಪಕ್ಷದೋರು ಹೂಜಾಗಾಂಧಿಯ ಹಿಂದೆ ಬಿದ್ದಿದ್ದಾರೆ...ಗಾಂಧಿ ಹೆಸರಿನೋರು ಇದ್ದರೆ ಪಕ್ಷಕ್ಕೊಂದು ಮರ್ಯಾದೆ ಅಲ್ವಾ...ಅದಕ್ಕೆ”</b></span><br />
<span style="color: blue; font-size: large;"><b>“ಆದ್ರೆ ಸೋನಿಯಾ ಗಾಂಧಿ ಫ್ಯಾಮಿಲಿಯೋರು....ನೀವು...?”</b></span><br />
<span style="color: blue; font-size: large;"><b>ಹೂಜಾಗಾಂಧಿ ಒಮ್ಮೆ ನೊಂದುಕೊಂಡರು. ಅಳುವುದಕ್ಕೆ ಪ್ರಯತ್ನಿಸಿದರು. ಆದರೆ ಪಕ್ಕದಲ್ಲಿ ಗ್ಲಿಸರಿನ್ ಇಲ್ಲದೇ ಇರುವುದರಿಂದ ಅಳುವ ಪ್ರಯತ್ನ ವಿಫಲವಾಯಿತು.</b></span><br />
<span style="color: blue; font-size: large;"><b>“ನೋಡ್ರಿ...ನನ್ನನ್ನು ಯಾರು ಅಂತ ತಿಳ್ಕೊಂಡಿದ್ದೀರಿ? ನಾನೂ ಗಾಂಧೀ ಫ್ಯಾಮಿಲೀನೇ...ಗೊತ್ತಾ....ನನ್ಗೂ ಗೊತ್ತು ಗಾಂಧಿ ಎಂದ್ರೆ ಯಾರು ಅಂತ...” ಎನ್ನುತ್ತಾ ಕಣ್ಣೊರೆಸುವ ನಟನೆ ಮಾಡಿದರು.</b></span><br />
<span style="color: blue; font-size: large;"><b>“ಗಾಂಧಿಗೂ ನಿಮಗೂ ಏನು ಸಂಬಂಧ...” ಕಾಸಿ ಕುತೂಹಲದಿಂದ ಕೇಳಿದ.</b></span><br />
<span style="color: blue; font-size: large;"><b>“ನೋಡ್ರಿ ರಾಹುಲ್ಗಾಂಧಿ ಯಾವತ್ತೂ ನನ್ನ ಜೊತೆ ಮಾತಾಡ್ತಾ ಇರ್ತಾರೆ...ನಾವೆಲ್ಲ ಒಂದೇ ಫ್ಯಾಮಿಲಿ ಗೊತ್ತಾ...” ಹೂಜಾಗಾಂಧಿ ಮತ್ತೊಮ್ಮೆ ಘೋಷಿಸಿದರು.</b></span><br />
<span style="color: blue; font-size: large;"><b>“ಅದು ಹ್ಯಾಗೆ ಮೇಡಂ...” ಕಾಸಿ ಕೇಳಿದ.</b></span><br />
<span style="color: blue; font-size: large;"><b>“ಅದೆಲ್ಲ ಹೇಳೋಕ್ಕಾಗಲ್ಲ....ನನಗೂ ಗಾಂಧಿಗೂ ಹತ್ತಿರದ ಸಂಬಂಧ ಇದೆ....ನನ್ನ ಅಜ್ಜೀನೂ ಸ್ವಾತಂತ್ರ ಓರಾಟದಲ್ಲಿ ಭಾಗವಹಿಸಿದ್ದಾರೆ ಗೊತ್ತಾ...? ಗಾಂಧಿ ನಮಗೂ ದೂ...ರದಿಂದ ಸಂಬಂಧ....ನನ್ನ ಅಜ್ಜಿಯ ಚಿಕ್ಕಪ್ಪನ ಮಗನ ಮಾವನ...ಅತ್ತೆಯ ಎರಡನೆ ಮಗನ ಅಜ್ಜ ಗಾಂಧೀಜಿಯ ದೂರದ ಸಂಬಂಧಿಕರು. ಸೋನಿಯಾಗಾಂಧಿ ನಕಲಿ. ನಾನು ನಿಜವಾದ ಗಾಂಧಿ ಗೊತ್ತಾ?”</b></span><br />
<span style="color: blue; font-size: large;"><b>ಕಾಸಿ ರೋಮಾಂಚನಗೊಂಡ. ಅಂದರೆ ಮುಂದಿನ ದಿನಗಳಲ್ಲಿ ಈ ರಾಜ್ಯವನ್ನು ಗಾಂಧಿ ಫ್ಯಾಮಿಲಿ ಆಳುತ್ತೆ ಅಂತ ಆಯ್ತು “ಮೇಡಂ...ಗಾಂಧಿ ಫ್ಯಾಮಿಲಿಯವರಾಗಿದ್ದು ನೀವು ಸಿನಿಮಾಕ್ಕೆ ಯಾಕೆ ಬಂದ್ರಿ?”</b></span><br />
<span style="color: blue; font-size: large;"><b>ಹೂಜಾಗೆ ಮತ್ತೆ ಬೇಜಾರಾಯ್ತು “ಯಾಕೆ ಬರಬಾರದು? ನಮ್ಮ ಗಾಂಧೀನು ಸಿನಿಮಾದಲ್ಲಿ ನಟಿಸಿರಲಿಲ್ವ? ಗಾಂಧಿ ಚಿತ್ರದಲ್ಲಿ ಅವರಿಗೆ ಆಸ್ಕರ್ ಅವಾರ್ಡ್ ಸಿಕ್ಕಿದೆಯಲ್ಲ...ಅದಕ್ಕೆ ನಾನು ಸಿನಿಮಾ ಪ್ರವೇಶಿಸಿ ಮತ್ತೆ ರಾಜಕೀಯ ಪ್ರವೇಶಿಸಿದೆ. ಗಾಂಧಿ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ಸ್ವಾತಂತ್ರ ಹೋರಾಟ ಮಾಡಿ ಬ್ರಿಟಿಷರನ್ನು ಓಡಿಸಿದ್ದು. ಹಾಗೆಯೇ ನಾನು ಈಗ ರಾಜಕೀಯಕ್ಕೆ ಕಾಲಿಡುತ್ತಾ ಇದ್ದೇನೆ....”</b></span><br />
<span style="color: blue; font-size: large;"><b>“ಆದ್ರೆ ಗಾಂಧಿಯನ್ನು ಯಾರೋ ನಾಥೂರಾಂ ಅನ್ನೋನು ಕೊಂದನಲ್ಲಾ...ಹಾಗೆ ನೀವು ಸಾಯೋದಕ್ಕೆ ಇಷ್ಟ ಪಡುತ್ತೀರಾ?” ಕಾಸಿ ಮೆಲ್ಲಗೆ ಕೇಳಿದ.</b></span><br />
<span style="color: blue; font-size: large;"><b>“ಅದೆಷ್ಟೋ ಸಿನಿಮಾ ಶೂಟಿಂಗ್ನಲ್ಲಿ ನಾನು ಸತ್ತಿದ್ದೇನೆ...ಹೂಜಾಗಾಂಧಿ ಅಂತ ಸಿನಿಮಾ ತೆಗಿತೀನಿ. ಅದರಲ್ಲಿ ಒಂದಲ್ಲ ಎರಡು ಬಾರಿ ಸಾಯ್ತೀನಿ...ಮತ್ತೆ ಹುಟ್ಟಿ ಮತ್ತೆ ಬೇರೆ ಬೇರೆ ಪಕ್ಷ ಸೇರ್ತೀನಿ...”</b></span><br />
<span style="color: blue; font-size: large;"><b>“ಮೇಡಂ...ಈ ಬಾರಿ ನೀವು ಶಾಶ್ವತವಾಗಿ ಯಾವ ಪಕ್ಷದಲ್ಲಿ ಉಳ್ಕೊಳ್ಳುತ್ತೀರಿ?” ಕಾಸಿ ಕೇಳಿದ.</b></span><br />
<span style="color: blue; font-size: large;"><b>“ನಾನು ಶಾಶ್ವತವಾಗಿ ಯಾವ ಪಕ್ಷಕ್ಕೂ ಸೇರುವುದಿಲ್ಲ. ಗಾಂಧೀ ಈ ದೇಶಕ್ಕೆ ಸೇರಿದವರು. ಆದುದರಿಂದ ನಾನು ಎಲ್ಲ ಪಕ್ಷದಲ್ಲೂ ಸ್ವಲ್ಪ ಕಾಲ ನೆಲೆಸಬೇಕೆಂದು ಬಯಸಿದ್ದೇನೆ. ಚುನಾವಣೆಯ ನಂತರ ಯಾವ ಪಕ್ಷ ನನಗೆ ಹುದ್ದೆ ಕೊಡುತ್ತದೋ ಆ ಪಕ್ಷದಲ್ಲಿ ಐದು ವರ್ಷ ಸೇವೆ ಮಾಡಬೇಕು ಎನ್ನುವಂತಹ ಆಸೆ ನನಗಿದೆ...”</b></span><br />
<span style="color: blue; font-size: large;"><b>ಅಷ್ಟರಲ್ಲಿ ವೊಬೈಲ್ ರಿಂಗಣಿಸಿತು. “ಹಲೋ....ಯಾರು....ವಾಟಾಳ್ ಅವರಾ...ನಿಮ್ಮ ಪಕ್ಷಕ್ಕೆ ಸೇರೋದಕ್ಕೆ ಆಗೊಲ್ಲಾರಿ....ಊಹುಂ...ನಿಮ್ಮ ಪಕ್ಷಕ್ಕೆ ನಿರ್ಮಾಪಕರು ಹಣ ಹಾಕ್ತಾರೇನ್ರಿ...ವೊದಲು ನನಗೆ ಸಂಭವಾನೆ ಒಳ್ಳೆದಾಗಿ ಕೊಡಬೇಕು. ಚೆಕ್ ಬ್ಯಾಡ ಕ್ಯಾಶ್. ಆ ಬಳಿಕ ಒಳ್ಳೆಯ ಕತೆ ಇರುವ ಸ್ಕ್ರಿಪ್ಟ್ ಬೇಕು. ಹಾಗೆಯೇ ಸಂಭಾಷಣೆ ಒಳ್ಳೆಯ ಕತೆಗಾರರಿಂದಲೇ ಬರೆಸಿ. ಪತ್ರಕರ್ತರಲ್ಲಿ ಹೇಗೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ಯಾಗಿ ಚೆನ್ನಾಗಿರಬೇಕು ಸಂಭಾಷಣೆ....ಇಲ್ಲ...ಇಲ್ಲ ಕಣ್ರೀ...ನಿಮ್ಮ ಎಮ್ಮೆ, ಕತ್ತೆಯ ಜೊತೆಗೆಲ್ಲ ಧರಣಿ ಮಾಡೋದಕ್ಕೆ ನನ್ನಿಂದ ಸಾಧ್ಯವಿಲ್ಲ. ಬೇಕಾದ್ರೆ ಜಗ್ಗೇಶನ್ನು ನಿಮ್ಮ ಪಕ್ಷಕ್ಕೆ ತೆಗೆದುಕೊಳ್ಳಿ....” ಎಂದು ಫೋನ್ ಕಟ್ ಮಾಡಿದರು.</b></span><br />
<span style="color: blue; font-size: large;"><b>ಎಂಜಲು ಕಾಸಿ ಕೇಳಿದ “ಮೇಡಂ ಯಾರು? ವಾಟಾಳ್ ನಾಗರಾಜ?”</b></span><br />
<span style="color: blue; font-size: large;"><b>ಹೂಜಾ ಗಾಂಧಿ ಮುಖ ಸಿಂಡರಿಸಿ ಹೇಳಿದರು “ಹೌದು. ನಾಳೆ ಅರ್ಧಗಂಟೆ ಅವರ ಪಕ್ಷ ಸೇರ್ಕೋಬೇಕಂತೆ. ಅರ್ಧಗಂಟೆಗೆ ಹತ್ತು ಲಕ್ಷ ಕೊಡ್ತಾರಂತೆ....ಕಾಂಗ್ರೆಸ್ನೋರು ಕರೆದಿದ್ದಾರೆ...ಅರ್ಧಗಂಟೆಗೆ ಒಂದು ಕೋಟಿ ಕೊಡ್ತಾರಂತೆ ಗೊತ್ತಾ....? ಆದ್ರೆ ನಾನು ಸೇರೋದು ಸೋನಿಯಾಗಾಂಧಿಗೆ ಇಷ್ಟ ಇಲ್ಲ. ಕರ್ನಾಟಕದಲ್ಲಿ ಆಕೆಗೆ ಪ್ರತಿಸ್ಪರ್ಧಿಯಾಗಿ ಒಂದು ಗಾಂಧಿ ಹುಟ್ಟಿ ಬಿಟ್ಟು ಎಲ್ಲಿ ಪ್ರಧಾನಿ ಕುರ್ಚಿ ನಾನು ಕಸಿದುಕೊಳ್ತೇನೋ ಎನ್ನೋ ಭಯ ಆಕೆಗೆ...”</b></span><br />
<span style="color: blue; font-size: large;"><b>ಅಷ್ಟರಲ್ಲಿ ಮತ್ತೆ ಫೋನ್ರಿಂಗಣಿಸಿತು.... “ಹಲೋ... ಯಾವುದು ಹೊಸ ಪಕ್ಷವಾ? ಯಾರೂ ಗೌಡರ... ದೇವೇ ಗೌಡರ ಅಲ್ವಾ.... ಹಾಗಾದ್ರೆ... ಮತ್ಯಾರು? ಸುಳ್ಯದ ಗೌಡ್ರ....ಓಹೋ ಕೇಳಿದ್ದೇನೆ ನಿಮ್ಮ ಹೆಸರು... ನೀವು ದೇವೇಗೌಡ್ರ ಕಿರಿಯ ಮಗ ತಾನೆ? ಅಲ್ವಾ....ನೀವು ಬೇರೆಯೇ ಗೌಡ್ರ...ಹೊಸ ಪಕ್ಷ ಕಟ್ತೀರಾ...ನಿಮ್ಮ ಪಕ್ಷದಲ್ಲಿ ಎಷ್ಟು ನಿಮಿಷ ನಟಿಸಬೇಕು...?” ಎನ್ನುತ್ತಿದ್ದಂತೆಯೇ ಸ್ಕೂಪ್ ಸುದ್ದಿ ಸಿಕ್ಕಿದ ಖುಷಿಯಿಂದ ಎಂಜಲು ಕಾಸಿ ಅಲ್ಲಿಂದ ಪತ್ರಿಕಾಕಚೇರಿ ಕಡೆಗೆ ಓಡತೊಡಗಿದ.</b></span><br />
<span style="color: purple; font-size: large;"><b>ಮಾರ್ಚ್ -09-2013 </b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-79407231381911883132015-04-20T06:35:00.000-07:002015-04-20T06:35:02.807-07:00ಆಹಾ...ಮುತಾಲಿಕ್ ಮದುವೆಯಂತೆ...!!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://2.bp.blogspot.com/-LMTs0_k5vxE/VTUATlApCdI/AAAAAAAAAN8/NsGXerTDE3Q/s1600/pramod%2Bmutalik.jpg" imageanchor="1" style="margin-left: 1em; margin-right: 1em;"><span style="color: blue; font-size: large;"><b><img border="0" src="http://2.bp.blogspot.com/-LMTs0_k5vxE/VTUATlApCdI/AAAAAAAAAN8/NsGXerTDE3Q/s1600/pramod%2Bmutalik.jpg" height="320" width="230" /></b></span></a></div>
<span style="color: purple; font-size: large;"><b>ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹಣ ಪಡೆದು ಗಲಭೆ ನಡೆಸುವ ಕೃತ್ಯ ತೆಹಲ್ಕಾ ಕಾರ್ಯಾಚರಣೆಯಲ್ಲಿ ಬಯಲಾದಾಗ ಮೇ -30-2010 ರಲ್ಲಿ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ. </b></span><br />
<span style="color: purple; font-size: large;"><b><br /></b></span>
<span style="color: blue; font-size: large;"><b>ಮುಖಕ್ಕೆ ಮೆತ್ತಿದ ಮಸಿಯನ್ನು ಉಜ್ಜಿ ಉಜ್ಜಿ ಸುಸ್ತಾಗಿ ಬಚ್ಚಲು ಮನೆಯಲ್ಲಿ ಉಸ್ಸೆಂದು ಬಿದ್ದುಕೊಂಡರು ಪ್ರಮೋದ್ ಮುತಾಲಿಕ್. ಇತ್ತೀಚೆಗೆ ತನ್ನ ಯಾರು ಭೇಟಿಯಾಗಲು ಬಂದರೂ ಅವರಲ್ಲಿ ಗುಪ್ತ ಕ್ಯಾಮರಾ ಇರಬಹುದೆಂದು ಭಾವಿಸಿ, ಮಾತನಾಡುವುದಕ್ಕೆ ಭಯ ಪಡುತ್ತಿದ್ದರು. ಒಂದೆಡೆ ಪ್ರಸಾದ್ ಅತ್ತಾವರ ಜೈಲಲ್ಲಿದ್ದಾನೆ. ಮತ್ತೊಂದೆಡೆ ತನ್ನ ಶಿಷ್ಯರೆಲ್ಲ ದರೋಡೆ, ಪಿಕ್ಪಾಕೆಟ್ ಮೊದಲಾದ ಆರೋಪದಲ್ಲಿ ಬಳ್ಳಾರಿ ಜೈಲು ಸೇರಿದ್ದಾರೆ.</b></span><br />
<span style="color: blue; font-size: large;"><b>ತೆಹಲ್ಕಾ ಸ್ಟಿಂಗ್ ಆಪರೇಷನ್ ಬಳಿಕ, ಯಾವ ಕೆಲಸ ಮಾಡುವುದಕ್ಕೂ ಭಯ. ಮನೆಯಲ್ಲಿ ಕೆಲಸವಿಲ್ಲದೆ ಒಂಟಿಯಾಗಿ ಬಿದ್ದುಕೊಂಡಿದ್ದ ಮುತಾಲಿಕರಿಗೆ ಒಬ್ಬಂಟಿತನ ಕಾಡತೊಡಗಿತು. ನೇರವಾಗಿ ಹೋಗಿ ಕನ್ನಡಿ ಮುಂದೆ ನಿಂತರು. ತೀರಾ ಮುದುಕನಾಗಿಲ್ಲ ಎಂದು ತುಸು ಸಮಾಧಾನವಾಯಿತು. ಒಮ್ಮೆಲೆ ಅವರಿಗೆ ‘ಅರೆ! ನಾನು ಇಲ್ಲಿಯವರೆಗೆ ಮದುವೆಯೇ ಆಗಿಲ್ಲವಲ್ಲ, ಒಂದು ಮದುವೆಯಾದರೆ ಹೇಗೆ?’ ಎಂಬ ಆಲೋಚನೆ ಬಂತು.</b></span><br />
<span style="color: blue; font-size: large;"><b>ಆದರೆ ಕರ್ನಾಟಕದಲ್ಲಿ ಈಗಾಗಲೇ ಹೆಣ್ಣು ಹೆತ್ತವರ ವಿರೋಧ ಕಟ್ಟಿಕೊಂಡುದರಿಂದ ಮದುವೆಗೆ ಹೆಣ್ಣು ಸಿಗುವುದು ಕಷ್ಟ ಎಂಬ ಆಲೋಚನೆ ಬಂತು. ಪತ್ರಿಕೆಯಲ್ಲಿ ಒಂದು ಜಾಹೀರಾತು ಕೊಟ್ಟು ನೋಡಿದರೆ ಹೇಗೆ? ಎಂಬ ಆಲೋಚನೆ ಬಂತು. ಮರುದಿನವೇ ‘ಕೇಸರಿ ಲಂಗೋಟಿ’ ಪತ್ರಿಕೆಯಲ್ಲಿ ಜಾಹೀರಾತು ನೀಡಿಯೇ ಬಿಟ್ಟರು.</b></span><br />
<span style="color: blue; font-size: large;"><b>"ವಧು ಬೇಕಾಗಿದೆ".</b></span><br />
<span style="color: blue; font-size: large;"><b>ಅಂತಾರಾಷ್ಟ್ರೀಯ ದೇಶಪ್ರೇಮಿ ‘ಯುವಕ’ನಿಗೆ ವಧು ಬೇಕಾಗಿದೆ. ದೇಶಸೇವೆ ಮಾಡುತ್ತಾ ಮದುವೆಯಾಗುವುದನ್ನು ಮರೆತೇ ಹೋಗಿದ್ದ ಯುವಕನೊಬ್ಬನಿಗೆ, ದೇಶಪ್ರೇಮಿ ಯುವತಿಯೊಬ್ಬಳು ಮದುವೆಯಾಗುವುದಕ್ಕೆ ಬೇಕಾಗಿದ್ದಾಳೆ. ಯುವತಿ ದೇಶಪ್ರೇಮಿ ಯಾಗಿರಬೇಕು. 20 ವರ್ಷ ದೊಳಗಿನವಳಾಗಿರಬೇಕು. ಯಾವುದಾದರೂ ಉದ್ಯೋಗದಲ್ಲಿದ್ದರೆ ಒಳ್ಳೆಯದು. ವಿಶೇಷ ವರದಕ್ಷಿಣೆಯ ಅಗತ್ಯವಿಲ್ಲ.</b></span><br />
<span style="color: blue; font-size: large;"><b>ತಿಂಗಳ ಸಂಬಳದಲ್ಲಿ ಕಂತಿನಲ್ಲಿ ಹಫ್ತಾ ನೀಡಿದರೆ ಸಾಕು. ಅದನ್ನು ರಾಮಸೇನೆಯ ಕಾರ್ಯಕರ್ತರು ಪ್ರತಿ ವಾರ ಬಂದು ವಸೂಲು ಮಾಡಿಕೊಂಡು ಹೋಗುತ್ತಾರೆ. ಮುಖತಃ ಸಂದರ್ಶನದ ಸಂದರ್ಭದಲ್ಲಿ ಇನ್ನಿತರ ವಿವರಗಳನ್ನು ನೀಡಲಾಗುತ್ತದೆ. ವರನನ್ನು ಸಂಪರ್ಕಿಸಬೇಕಾದ ವಿಳಾಸ: ವಿರಾಮಸೇನೆ, ಸೋಮಾರಿ ಕಟ್ಟೆಯ ಬಳಿ, ಕ್ರಿಮಿನಲ್ ವಿಲ್ಲಾ, ಬಳ್ಳಾರಿ ಜೈಲು ಮಾರ್ಗ, ಕರಿ ನಾಟಕ ರಾಜ್ಯ’’</b></span><br />
<span style="color: blue; font-size: large;"><b>* * *</b></span><br />
<span style="color: blue; font-size: large;"><b>ಕೊನೆಗೂ ಮುತಾಲಿಕ್ಗೆ ತಕ್ಕ ವಧುವನ್ನು ಹುಡುಕಿಕೊಂಡು ಬಂದ, ಪತ್ರಕರ್ತ ಎಂಜಲು ಕಾಸಿ ಫೋಟೋವನ್ನು ಮುತಾಲಿಕ್ ಮುಂದಿಟ್ಟು ಹೇಳ ತೊಡಗಿದ ‘‘ಸಾರ್, ಹುಡುಗಿಯದು ದೇಶಪ್ರೇಮಿ ಕುಟುಂಬ ಸಾರ್. ಹುಡುಗಿಯ ತಾತ ಸುತ್ತಮುತ್ತಲಿನ ಗಲ್ಲಿಯಲ್ಲೆಲ್ಲ ಫೇಮಸ್ಸು. ಹುಡುಗಿಯರೆಲ್ಲ ಆತನನ್ನು ಕಂಡರೆ ಹೆದರಿ ಮನೆಯಲ್ಲಿ ಅವಿತು ಕೂರ್ತಿದ್ದರಂತೆ. ಹುಡುಗಿಯ ತಂದೆ ಅಕ್ಕಪಕ್ಕದಲ್ಲಿ ದರೋಡೆ ಗಿರೋಡೆ ಮಾಡಿ ಹಲವು ಬಾರಿ ಜೈಲು ಸೇರಿ ದೇಸಪ್ರೇಮಿ ಎಂದು ಗುರುತಿಸ್ಕೊಂಡೋರು ಸಾರ್.</b></span><br />
<span style="color: blue; font-size: large;"><b>ದುಡ್ಡು ಕೊಟ್ರೆ ಏನು ಮಾಡುವುದಕ್ಕೂ ಸಿದ್ಧ ಅಂತೆ. ಹುಡುಗೀನೂ ಬಜಾರಿಯಂತೆ. ಬಾಯಿ ತೆರೆದರೆ ಸೂ...ಮಗ... ಬೋ...ಮಗ ಎನ್ನುವುದನ್ನು ಸೊಗಸಾಗಿ ಹೇಳ್ತಾಳಂತೆ. ನಿಮಗೆ ಹೊಂದಿಕೆಯಾಗುವ ಮರ್ಯಾದಸ್ಥರ ಕುಟುಂಬ ಸಾರ್. ಮುಂದುವರಿಯೋಣ ಸಾರ್...’’</b></span><br />
<span style="color: blue; font-size: large;"><b>ಮುತಾಲಿಕರಿಗೆ ಕೊನೆಗೂ ಖುಷಿಯಾಯಿತು. ಒಂದು ದೇಸಪ್ರೇಮಿ ಹುಡುಗಿಗೆ ಲೈಫು ಕೊಟ್ಟಂಗಾಯ್ತು ಎಂದು ಕನ್ನಡಿಯ ಮುಂದೆ ನಿಂತು ಸಿಂಗರಿಸಿ, ಹಣೆಗೆ ಕೆಂಪು ಕುಂಕುಮ ಬಳಿದುಕೊಂಡರು. ಆದರೆ, ಮುಖಕ್ಕೆ ಅಂಟಿದ್ದ ಕಪ್ಪು ಮಸಿಯನ್ನು ಕಂಡು ತುಸು ಖೇದವಾಯ್ತು. ಆದರೆ, ದೇಸಕ್ಕಾಗಿ ಇದೆಲ್ಲ ಅನುಭವಿಸಬೇಕಾಗುತ್ತದೆ ಎಂದು ನಿಟ್ಟುಸಿರಿಟ್ಟು ಪತ್ರಕರ್ತ ಎಂಜಲು ಕಾಸಿಯ ಜೊತೆ ಹೆಣ್ಣು ನೋಡುವುದಕ್ಕೆ ಹೊರಟೇ ಬಿಟ್ಟರು.</b></span><br />
<span style="color: blue; font-size: large;"><b>* * *</b></span><br />
<span style="color: blue; font-size: large;"><b>ಹೆಣ್ಣಿನ ತಂದೆ ಕೇಳಿದರು ‘‘ನಿಮ್ಮ ಜೊತೆಗೆ ನಿಮ್ಮ ಫ್ಯಾಮಿಲಿಯೋರು ಯಾರು ಬರ್ಲಿಲ್ವೆ?’’ ಆ ಪ್ರಶ್ನೆಗೆ ಮುತಾಲಿಕ್ ನಾಚಿ ನೆಲ ನೋಡತೊಡಗಿದರು. ಎಂಜಲು ಕಾಸಿ ಹೇಳಿದ ‘‘ಅವರ ಫ್ಯಾಮಿಲಿ ಎಲ್ಲ ಜೈಲಿನೊಳಗಿದ್ದಾರೆ ಸಾರ್. ಸದ್ಯಕ್ಕೆ ಈಗ ಇವರೊಬ್ಬರೆ’’</b></span><br />
<span style="color: blue; font-size: large;"><b>ಹೆಣ್ಣಿನ ತಂದೆಗೆ ಅದನ್ನು ಕೇಳಿ ಸಂತೋಷವಾಯಿತು ‘‘ಅಂದರೆ ನಿಮ್ಮದು ಕೂಡ ನಮ್ಮ ಹಾಗೆ ದೇಶಪ್ರೇಮಿ ಫ್ಯಾಮಿಲಿ ಅಂದಂಗಾಯ್ತು. ವರೋಪಚಾರ ಅಂತ ಕೊಡ್ಲಿಕೆ ವಿಶೇಷವಾಗಿ ನನ್ನಲ್ಲೇನೂ ಇಲ್ಲ. ನನ್ನ ಜೀವನವೆಲ್ಲ ದೇಶಸೇವೆಗೆ ಮುಡಿಪಾಗಿದ್ದುದರಿಂದ ನನ್ನಲ್ಲಿರುವ ಸಂಪತ್ತು ಕೂಡ ಅದೇ ಆಗಿದೆ...’’</b></span><br />
<span style="color: blue; font-size: large;"><b>ಕಾಸಿ ಮಧ್ಯ ಬಾಯಿ ಹಾಕಿದ ‘‘ಪರವಾಗಿಲ್ಲ ಪರವಾಗಿಲ್ಲ...ಎಲ್ಲ ಮದುಮಗನಿಗೆ ಗೊತ್ತಿದೆ...’’ ಹೆಣ್ಣಿನ ತಂದೆ ಮುಂದುವರಿಸಿದರು ‘‘ಆದರೂ ವರದಕ್ಷಿಣೆಯಾಗಿ ಒಂದಿಪ್ಪತ್ತೈದು ಬಾಂಬು, ಒಂದೈವತ್ತು ತಲವಾರು, ನಾಲ್ಕು ಪಿಸ್ತೂಲು ಮತ್ತು ಇಪ್ಪತ್ತೈದು ಚಾಕು, ಚೂರಿಗಳನ್ನು ಕೊಡುವುದಕ್ಕೆ ನನ್ನಿಂದ ಸಾಧ್ಯವಿದೆ’’</b></span><br />
<span style="color: blue; font-size: large;"><b>ಮುತಾಲಿಕರಿಗೆ ತುಂಬಾ ತುಂಬಾ ಸಂತೋಷವಾಯಿತು. ಎರಡು ಕುಟುಂಬಗಳು ಸೇರಿ ತುಂಬಾ ತುಂಬಾ ದೇಸಸೇವೆ ಮಾಡಬಹುದು ಎನ್ನಿಸಿತು.</b></span><br />
<span style="color: blue; font-size: large;"><b>ಎಂಜಲು ಕಾಸಿ ಕೇಳಿದ ‘‘ಸಾರ್...ಹುಡುಗಿಗೆ ಏನಾದರೂ ಕೆಲಸ ಇದ್ದರೆ...ಹುಡುಗ ಯಾವ ಅಂಜಿಕೆಯೂ ಇಲ್ಲದೆ ದೇಸ ಸೇವೆ ಮಾಡಬಹುದು. ಹೊತ್ತು ಹೊತ್ತಿಗೆ ಹುಡುಗ ಊಟ ಮಾಡ್ಬೇಕಲ್ಲ....’’</b></span><br />
<span style="color: blue; font-size: large;"><b>ಹುಡುಗಿಯ ತಂದೆ ಹೇಳಿದರು ‘‘ಹಾಗೇನಿಲ್ಲ...ನಮ್ಮ ಹುಡುಗಿಗೆ ನೂರಾರು ಕೆಲಸ ಇದೆ. ಆಕೆ ಗಲ್ಲಿಯ ನಳ್ಳಿ ಪಕ್ಕ ನಿಂತು ಬಾಯಿ ತೆರೆದರೆ ಉಳಿದೋರೆಲ್ಲ ಓಡಿ ಹೋಗ್ತಾರೆ. ಮಾನ ಮಾರ್ಯದೆಗೆ ತುಂಬಾ ಬೆಲೆ ಕೊಡ್ತಾಳೆ. ಅದಕ್ಕಾಗಿ ಮಾನ ಮರ್ಯಾದೆಯನ್ನೆಲ್ಲ ಮನೆಯ ಪೆಟ್ಟಿಗೆಯೊಳಗೆ ಇಟ್ಟು ಬೀಗ ಹಾಕಿದ್ದಾಳೆ’’</b></span><br />
<span style="color: blue; font-size: large;"><b>ಅಷ್ಟರಲ್ಲಿ ಹುಡುಗಿ ತಟ್ಟೆಯಲ್ಲಿ ನಾಲ್ಕು ಗ್ಲಾಸ್ ವಿಸ್ಕಿಯನ್ನು ಇಟ್ಟು ನಾಚುತ್ತಾ ಬಂದಳು. ಎಲ್ಲರಿಗೂ ವಿಸ್ಕಿ ಗ್ಲಾಸನ್ನು ಕೊಟ್ಟಳು. ಮುತಾಲಿಕ್ ಹಲ್ಲು ಬಿಟ್ಟು ಹೇಳಿದರು ‘‘ಹಾಡು ಹಾಡುವುದಕ್ಕೆ ಬರುತ್ತೇನಮ್ಮ?’’</b></span><br />
<span style="color: blue; font-size: large;"><b>ಹುಡುಗಿ ಗಂಟಲು ಸರಿಪಡಿಸಿ ಹಾಡುವುದಕ್ಕೆ ಶುರು ಹಚ್ಚಿದಳು ‘‘ಹೊಡಿ ಮಗ...ಹೊಡಿಮಗ...ಹೊಡಿಮಗ...ಹೊಡಿಮಗ ಬಿಡಬೇಡ ಅವನ್ನ....’’</b></span><br />
<span style="color: blue; font-size: large;"><b>ಆಕೆಯ ಹಾಡಿನಲ್ಲಿ ಭಾರತೀಯ ಸಂಸ್ಕೃತಿ ತುಂಬಿ ತುಳುಕುತ್ತಿರುವುದನ್ನು ಕಂಡು ಮುತಾಲಿಕ್ಗೆ ಭಾರೀ ಭಾರೀ ಸಂತೋಷವಾಯಿತು. ‘‘ಸಂತೋಷ ಸಂತೋಷ’’</b></span><br />
<span style="color: blue; font-size: large;"><b>ಹುಡುಗಿಯ ತಂದೆ ಹೇಳಿದರು ‘‘ಮದುವೆ ಅದ್ದೂರಿಯಾಗಿ ನಡೀಬೇಕು. ಕನಿಷ್ಠ ನೂರು ಮನೆಗಳಿಗೆ ಬೆಂಕಿ ಬೀಳ್ಬೇಕು. ಇನ್ನೂರು ಅಂಗಡಿಗಳು ಲೂಟಿಯಾಗಬೇಕು. ನನ್ನ ಮಗಳ ಮದುವೆ ಅಂದ ಮೇಲೆ ಒಂದಿಪ್ಪತ್ತು ಮುಸಲರು ಆಸ್ಪತ್ರೆಯಲ್ಲಿ ಮಲಗಿರ್ಬೇಕು....’’</b></span><br />
<span style="color: blue; font-size: large;"><b>ಮುತಾಲಿಕರ ಸಂತೋಷಕ್ಕೆ ಪಾರವೇ ಇಲ್ಲ ‘‘ಅದಕ್ಕೇನಂತೆ. ನನ್ನ ಕುಟುಂಬದವರನ್ನೆಲ್ಲ ಜೈಲಿನಿಂದ ಜಾಮೀನಿನ ಮೇಲೆ ಬಿಡಿಸ್ಕೋತೀನಿ. ಎಲ್ಲವನ್ನು ಸಾಂಗವಾಗಿ ಮಾಡ್ತಾರೆ. ದೇಸದ ಹೊರಗೂ ಕೆಲವು ಕುಖ್ಯಾತ ದೇಸಪ್ರೇಮಿಗಳು ಇದ್ದಾರೆ. ನನ್ನ ಮದುವೆಗೆ ಅವರನ್ನೂ ಕರೆಸೋಣವಂತೆ...’’</b></span><br />
<span style="color: blue; font-size: large;"><b>‘‘ಮೀಡಿಯಾದವರು ಮದುವೆಗೆ ಬರೋದು ಬೇಡವೇ...ಅದಕ್ಕೆ ಏನು ವ್ಯವಸ್ಥೆ ಮಾಡುತ್ತೀರಾ?’’ ಹೆಣ್ಣಿನ ತಂದೆ ಕೇಳಿದರು.</b></span><br />
<span style="color: blue; font-size: large;"><b>ಮುತಾಲಿಕ್ ನಗುತ್ತಾ ಹೇಳಿದರು ‘‘ನನ್ನ ಮದುವೆ ಅಂದ ಮೇಲೆ ಮೀಡಿಯಾದವರನ್ನು ಕರೀಬೇಕೂಂತಿಲ್ಲ. ಅವರಾಗಿಯೇ ಗುಪ್ತ ಕ್ಯಾಮರಾ ಇಟ್ಕೊಂಡು ಬಂದೇ ಬರ್ತಾರೆ. ತೆಹಲ್ಕಾದವರು ಬರುತ್ತಾರೆ, ಟೈಮ್ಸ್ನವರು ಬರುತ್ತಾರೆ....’’</b></span><br />
<span style="color: blue; font-size: large;"><b>‘‘ಅಳಿಯಂದಿರೇ...ಪ್ರಸ್ಥ ಎಲ್ಲಿ ಇಟ್ಕೊಳ್ಳೋಣ...’’ ಮುತಾಲಿಕ್ ಹೇಳಿದರು ‘‘ಒಂದೋ ಬಳ್ಳಾರಿ ಜೈಲಿನಲ್ಲಿ...ಇಲ್ಲಾ ಗುಲ್ಬರ್ಗ ಜೈಲಿನಲ್ಲಿ ಇಟ್ಕೊಳ್ಳೋಣ....ಬಳ್ಳಾರಿ ಜೈಲಿನಲ್ಲಿ ನನ್ನ ಬಂಧುಗಳು ತುಂಬಾ ಇರೋದ್ರಿಂತ ಅಲ್ಲೇ ಪ್ರಸ್ಥ ಇಟ್ಕೊಳ್ಳೋದು ಚೆನ್ನಾಗಿರತ್ತೆ....’’</b></span><br />
<span style="color: blue; font-size: large;"><b>ಎಲ್ಲರಿಗೂ ಸಂತೃಪ್ತಿಯಾಯಿತು. ಸಾಧಾರಣವಾಗಿ ಪತ್ರಕರ್ತ ಎಂಜಲು ಕಾಸಿ ರಾಜಕಾರಣಿಗಳು ಮತ್ತು ಸನ್ಯಾಸಿಗಳು, ಕ್ರಿಮಿನಲ್ಗಳು ಮತ್ತು ರಾಜಕಾರಣಿಗಳ ನಡುವೆ ದಲ್ಲಾಳಿ ಕೆಲಸ ಮಾಡುತ್ತಿದ್ದ. ಇದೀಗ ಮೊದಲ ಬಾರಿ ವಧೂ-ವರರ ನಡುವೆ ದಲ್ಲಾಳಿ ಕೆಲಸ ಮಾಡಿ ಯಶಸ್ವಿಯಾಗಿದ್ದು ಆತನಿಗೆ ಸಂತೋಷ ತಂದಿತ್ತು.</b></span><br />
<span style="color: blue; font-size: large;"><b>ಮುತಾಲಿಕರ ಬಳಿಗೆ ಬಂದ ಕಾಸಿ ಹಲ್ಲು ಕಿರಿದು ಕೇಳಿದ ‘‘ಸಾರ್, ನನ್ನ ಕಮಿಶನ್ನೂ....’’ ಮುತಾಲಿಕರು ಹೇಳಿದರು ‘‘ನನ್ನ ಸಿಷ್ಯರು ಬೇಗ ಜೈಲಿಂದ ಹೊರಗೆ ಬರ್ತಾರೆ. ಅವರೇ ನಿನ್ನ ಕಮಿಷನ್ನೂ ಕೊಡ್ತಾರೆ...ಜೈ ಶ್ರೀರಾಂ...’’ ಎಂದು ಮದುಮಗನ ಸಂಭ್ರಮದಲ್ಲಿ ಹೆಣ್ಣಿನ ಮನೆಯಿಂದ ಹೊರಗೆ ಕಾಲಿಟ್ಟರು.</b></span><br />
<span style="color: purple; font-size: large;"><b>ರವಿವಾರ - ಮೇ -30-2010</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-84377426958346601092015-04-19T05:47:00.001-07:002015-04-19T05:47:19.549-07:00ಲಕ್ಕವ್ವನ ‘ಹೊಸರುಚಿ’ ಸೊಗಡು...<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://2.bp.blogspot.com/-JfDDSigeuy8/VTOjyFlwKLI/AAAAAAAAANs/lty7WpvAZr8/s1600/tv.jpg" imageanchor="1" style="margin-left: 1em; margin-right: 1em;"><img border="0" src="http://2.bp.blogspot.com/-JfDDSigeuy8/VTOjyFlwKLI/AAAAAAAAANs/lty7WpvAZr8/s1600/tv.jpg" height="320" width="267" /></a></div>
<b style="color: purple; font-size: x-large;">ಮಾರ್ಚ್ -04-2012ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಇತ್ತೀಚೆಗೆ ಟಿವಿಯಲ್ಲಿ ಜ್ಯೋತಿಷ್ಯ ಮತ್ತು ಹೊಸ ರುಚಿ ತುಂಬಾ ಫೇಮಸ್ಸು. ಅದಕ್ಕೆ ಗಿರಾಕಿಗಳು ಜಾಸ್ತಿ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಎಂಜಲು ಕಾಸಿ ಸ್ಥಳೀಯ ಟಿ.ವಿ. ಯೊಂದದರಲ್ಲಿ ಹೊಸ ರುಚಿ ಕಾರ್ಯಕ್ರಮವನ್ನು ನೀಡಲು ಶುರು ಮಾಡಿದ. ಇತ್ತೀಚೆಗಂತೂ ಈತನ ಕಾರ್ಯಕ್ರಮ ತುಂಬ ಜನಪ್ರಿಯ. ಟಿಆರ್ಪಿ ಪೆಟ್ರೋಲ್ ಬೆಲೆಯ ಹಾಗೆ ಏರುತ್ತಿತ್ತು. ಹೊಸತನ ಇರಲಿ ಅಂತ ವಿಭಿನ್ನ ಹೊಸರುಚಿ ಯನ್ನು ಚಾನೆಲ್ನಲ್ಲಿ ಪ್ರದರ್ಶಿಸುತ್ತಿದ್ದ. ನಗರದ ಹೊಸರುಚಿ ಯನ್ನು ಉಂಡವರಿಗೆ ಒಂದಿಷ್ಟು ಸ್ಪೆಶಲ್ ಇರಲಿ ಎಂದು ಗ್ರಾಮೀಣ ಭಾಗದ ಜನರ ಹೊಸ ರುಚಿಯನ್ನು ಏರ್ಪಡಿಸಿದ. ಗ್ರಾಮೀಣ ಪ್ರದೇಶದಿಂದ ಬಂದಂತಹ ಲಕ್ಕವ್ವ ಟಿ.ವಿಯಲ್ಲಿ ಹೊಸ ರುಚಿಯನ್ನು ಪ್ರದರ್ಶಿಸತೊಡಗಿದರು.</b></span><br />
<span style="color: blue; font-size: large;"><b>ಎಂಜಲು ಕಾಸಿ ಪ್ರಶ್ನಿಸಿದ ‘‘ನಿನ್ನ ಹೆಸರೇನಮ್ಮ...?’’</b></span><br />
<span style="color: blue; font-size: large;"><b>‘‘ಅಪ್ಪ ಇಟ್ಟಿರೋ ಹೆಸ್ರು ಲಕ್ಷ್ಮವ್ವ. ಊರವರು ಕರೆಯೋದು ಲಕ್ಕವ್ವ...ನೀವು ಹಂಗೇ ಕರೀರಿ ಧನಿ...’’</b></span><br />
<span style="color: blue; font-size: large;"><b>‘‘ಗ್ರಾಮೀಣ ಪ್ರದೇಶದಲ್ಲಿ ಮಾಡೋ ಹೊಸ ರುಚಿಯನ್ನು ನೀವೀಗ ನಮ್ಮ ವೀಕ್ಷಕರಿಗೆ ಮಾಡಿ ತೋರಿಸಬೇಕು... ರೆಡಿನಾ?’’</b></span><br />
<span style="color: blue; font-size: large;"><b>‘‘ಅದ್ರಾಗೆ ಏನೈತೆ ಬುದ್ದಿ, ತಯಾರಾಗೆ ಬಂದೀನಿ...’’ ಲಕ್ಕವ್ವ ಹೊಸ ರುಚಿ ಕಾರ್ಯಕ್ರಮ ವನ್ನು ಪ್ರದರ್ಶಿಸತೊಡಗಿದಳು.</b></span><br />
<span style="color: blue; font-size: large;"><b>***</b></span><br />
<span style="color: blue; font-size: large;"><b>‘‘ಮೊದ್ಲು ಒಲೆ ಹೊತ್ತಿಸಿ. ಆದ್ರೆ ಹಸಿ ಸೌದೆ. ಮೊದ್ಲು ಬೆಂಕಿ ಹತ್ತಂಗಿಲ್ಲ. ಸುಮಾರು ಅರ್ಧಗಂಟೆ ಒಲೆಯನ್ನು ಚೆನ್ನಾಗಿ ಊದಿ. ಈಗ ನಿಮ್ಮ ಕಣ್ಣು ಕೆಂಪಾಗತ್ತೆ. ಸರಿ, ಈಗ ಮೆಲ್ಲ ಮಣ್ಣಿನ ಮಡಕೆಯಲ್ಲಿ ಎರಡು ಸೇರು ನೀರು ತುಂಬಿ ಕುದಿಯಾಕೆ ಬಿಡಿ. ಆಮೇಲೆ ನಾಲ್ಕು ಕಲ್ಲು ಉಪ್ಪು, ಒಂದು ಹಿಡಿ ಅಕ್ಕಿ ಹಾಕಿ....ಇನ್ನೂ ಎರಡು ಸೇರು ನೀರನ್ನು ಹಾಕಿ....ಚೆನ್ನಾಗಿ ಕುದೀಲಿ...ಕುದ್ದು ಕುದ್ದು ಅಕ್ಕೀದು ಪರಿಮಳ ಗಮಗಮಾಂತ ಬರತ್ತೆ ಆಮೇಲೆ ಮೆಲ್ಲಗೆ ಕೆಳಗಿಳಿಸಿ...’’</b></span><br />
<span style="color: blue; font-size: large;"><b>‘‘ಈಗ ಒಂದು ಹಸಿ ಮೆಣಸು ತೆಗೆದುಕೊಳ್ಳಿ... ಮಡಕೆಯಿಂದ ನೀರನ್ನಷ್ಟೇ ಇನ್ನೊಂದು ಮಡಕೆಗೆ ಸುರಿಯಿರಿ. ಬಳಿಕ ಮಕ್ಕಳಿಗೆ ತಲಾ ಒಂದೊಂದು ಗ್ಲಾಸ್ ಗಂಜಿ ನೀರು..ಮತ್ತು ಕಾಯಿ ಮೆಣಸನ್ನು ಕೊಡಿ...ಹೊಟ್ಟೆ ತುಂಬಾ ಹಸಿದಾಗ ಇದನ್ನು ಮಕ್ಕಳಿಗೆ ಬಡಿಸಬೇಕು. ಆಗ ಬಹಳ ರುಚಿಯಾಗಿರುತ್ತದೆ. ರಾತ್ರಿ ಹಸಿವೆಗೆ ಇದು ಒಳ್ಳೆಯದು. ಹಾಗೆಯೇ ಮಡಕೆಯ ತಳದಲ್ಲಿರುವ ಗಂಜಿಯನ್ನು ಯಾವ ಕಾರಣಕ್ಕೂ ಮಕ್ಕಳಿಗೆ ಹಂಚಬೇಡಿ. ಅದಕ್ಕೆ ನೀರು ಹಾಕಿ ಬೆಳಗ್ಗೆ ಮತ್ತೆ ಕುದಿಸಿದರೆ ಬೆಳಗಿನ ಊಟವನ್ನೂ ಆರಾಮವಾಗಿ ಮಾಡಬಹುದು. ಹಳ್ಳಿಗಳಲ್ಲಿ ಇದಕ್ಕೆ ಬಹಳ ಬೇಡಿಕೆಯಿದೆ...’’</b></span><br />
<span style="color: blue; font-size: large;"><b>ಲಕ್ಕವ್ವ ಮಾಡಿದ ಹೊಸ ರುಚಿಯನ್ನು ಕಾಸಿ ಮೆಲ್ಲಗೆ ಮೂಗಿನ ಸಮೀಪಕ್ಕೆ ತಂದ. ‘‘ಲಕ್ಕವ್ವ, ಇದಕ್ಕೆ ಪರಿಮಳ...ರುಚಿ ಏನೂ ಇಲ್ಲವಲ್ಲ...’’</b></span><br />
<span style="color: blue; font-size: large;"><b>ಲಕ್ಕವ್ವ ಅದನ್ನು ಒಂದಿಷ್ಟು ಕುಡಿದು ಹೇಳಿದಳು ‘‘ಯಾಕಿಲ್ಲ? ಅನ್ನದ ಪರಿಮಳ ಗಮಗಮಾಂತ ಮೂಗಿಗೆ ಬಡೀತೈತೆ...ಬುದ್ಯೋರೆ...ಅದನ್ನು ಎಸೀಬೇಡಿ...ಊರಿಗೆ ಹೋಗಾವಾಗ ನಾನು ಹಿಡ್ಕೊಂಡು ಹೋಗ್ತೀನಿ...ನನ್ನ ಮಕ್ಳಿಗಾತು..’’ ಕಾಸಿ ತಲೆಯಾಡಿಸಿದ.</b></span><br />
<span style="color: blue; font-size: large;"><b>‘‘ನಿಮ್ಮ ಹಳ್ಳಿಯಲ್ಲಿ ಅನ್ನಕ್ಕೆ ಸಾಂಬರೂ, ಗೊಜ್ಜು ಇತ್ಯಾದಿ ಮಾಡಲ್ವ....?’’</b></span><br />
<span style="color: blue; font-size: large;"><b>‘‘ಮಾಡ್ತರ್ರೀ...ಬುದ್ಯೋರೆ...ಆದ್ರೆ ಒಂದು ಸ್ವಲ್ಪ ಬೇರೆ ತರಾ ಇರತ್ತೆ...’’</b></span><br />
<span style="color: blue; font-size: large;"><b>ಕಾಸಿಗೆ ಖುಷಿಯಾಯಿತು. ‘‘ಹಾಗಾದ್ರೆ ಅದನ್ನೇ ನಮ್ಮ ವೀಕ್ಷಕರಿಗೆ ಹೊಸರುಚಿ ಹೇಳಿಕೊಡಿ’’</b></span><br />
<span style="color: blue; font-size: large;"><b>ಲಕ್ಕವ ಶುರು ಮಾಡಿದರು ‘‘ಮೊದ್ಲು ಒಂದು ಕುಂಟೆ ಮೆಣಸನ್ನು ತೆಗೆದುಕೊಳ್ಳಿ. ಆಮೇಲೆ ಅದನ್ನು ಒಲೆಯ ಕೆಂಡದ ಮೇಲೆ ಇಡಿ.... ತುಸು ಹೊತ್ತು ಸುಟ್ಟ ಬಳಿಕ ಹೊರಗಿಡಿ. ಈಗ ಸ್ವಲ್ಪ ನೀರನ್ನು ಒಂದು ಲೋಟದಲ್ಲಿ ತೆಗೆದುಕೊಳ್ಳಿ... ಬಳಿಕ ಅದಕ್ಕೆ ಎರಡು ಕಲ್ಲು ಉಪ್ಪು ಮತ್ತು ರುಚಿಗೆ ತಕ್ಕಷ್ಟು ಹುಳಿಯನ್ನು ಹಾಕಿ. ಈಗ ಮೆಲ್ಲಗೆ ಸುಟ್ಟ ಮೆಣಸನ್ನು ನೀರಿಗೆ ಹಾಕಿ ಕೈಯಲ್ಲಿ ಚೆನ್ನಾಗಿ ಹಿಂಡಿ. ಈಗ ಸಾಂಬಾರ್ ರೆಡಿ. ಬಿಸಿ ಬಿಸಿ ಗಂಜಿಯ ಜೊತೆಗೆ ನೆಂಜಿ ಕುಡಿಯುವುದಕ್ಕೆ ಈ ಉಪ್ಪು ನೀರನ್ನು ಬಳಸಿಕೊಳ್ಳಬಹುದು. ನಮ್ಮಲ್ಲಿ ನೆಂಟರು ಬಂದಾಗ ಇದನ್ನೇ ಬಳಸುತ್ತೇವೆ. ಹಸಿವೆ ತುಂಬಾ ಕಾಡುತ್ತಿರುವಾಗ ಈ ಸಾಂಬಾರಿಗೆ ರುಚಿ ಇನ್ನೂ ಜಾಸ್ತಿ...’’</b></span><br />
<span style="color: blue; font-size: large;"><b>ಕಾಸಿಗೆ ತಲೆ ಬಿಸಿಯಾಯಿತು ‘‘ನೀವು ಹಬ್ಬದೂಟ ಮಾಡುವುದಿಲ್ಲವಾ? ಬಿರಿಯಾನಿ, ಪಾಯಸ...ಇತ್ಯಾದಿ ಗಳನ್ನು ಮಾಡುವುದಿಲ್ಲವ...’’ ಕೇಳಿದ.</b></span><br />
<span style="color: blue; font-size: large;"><b>ಲಕ್ಕವ್ವ ಬಾಯಿಯಲ್ಲಿ ನೀರಿಳಿಸುತ್ತಾ ಹೇಳಿದರು ‘‘ಮಾಡ್ತೀವಿ...ತಿನ್ತೀವಿ...’’</b></span><br />
<span style="color: blue; font-size: large;"><b>ಕಾಸಿಗೆ ಸಂತೋಷವಾಯಿತು ‘‘ಹಾಗಾದ್ರೆ...ಅದನ್ನು ಹೊಸರುಚಿ ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ವಿವರಿಸಿ...’’</b></span><br />
<span style="color: blue; font-size: large;"><b>ಲಕ್ಕವ್ವ ಬಿರಿಯಾನಿಯ ಕುರಿತಂತೆ ವಿವರಣೆ ನೀಡತೊಡಗಿದಳು ‘‘ಊರಿನಲ್ಲಿ...ಶ್ರೀಮಂತರ, ಜಮೀನ್ದಾರ ಮದುವೆ, ಮುಂಜಿ ಇದ್ದರೆ ಮೊದಲೇ ನೆನಪಲ್ಲಿಟ್ಕೋ ಬೇಕು. ಬಳಿಕ ಬೆಳಗ್ಗೆನೇ ಜಮೀನ್ದಾರರ ಮನೆಯ ನಾಯಿಗಳಿಗೆ ಗೊತ್ತಾಗದ ಹಾಗೆ ಅವರ ಮನೆಯ ಹಿತ್ತಲಲ್ಲಿ ಹೋಗಿ ನಿಂತ್ಕೋಬೇಕು. ಪಾತ್ರೆಗಳನ್ನು, ಎಲೆಗಳನ್ನು ನಾವೇ ತೆಗೆದುಕೊಂಡು ಹೋಗಬೇಕು. ಸುಮಾರು ನಾಲ್ಕೈದು ಗಂಟೆ ಬಿಸಿಲು ಚೆನ್ನಾಗಿ ಕುದಿಯುವವರೆಗೆ ಹಿತ್ತಲಲ್ಲೇ ಕಾಯ್ತಾ ಇರಬೇಕು. ಹಿತ್ತಲಲ್ಲಿ ಅಮ್ರಾವ್ರನ್ನು ಕಂಡಾಗ ನಗೆ ಬೀರಬೇಕು. ಕಾರ್ಯಕ್ರಮಕ್ಕೆ ಬಂದೋರೆಲ್ಲ ಹೋದ ಬಳಿಕ ಮಧ್ಯಾಹ್ನ ಮೂರುಗಂಟೆಯ ಹೊತ್ತಿಗೆ ಉಳಿದ ಎಲ್ಲ ಪಾಯಸ, ಬಿರಿಯಾನಿಗಳನ್ನು ನಮ್ಮ ಬಟ್ಟಲಿಗೆ ಸುರೀತಾರೆ. ಸಂಜೆಯ ಹೊತ್ತಿಗೆ ಅದು ಒಂದಿಷ್ಟು ವಾಸ್ನೆ ಬಂದಿರತ್ತೆ. ಅದನ್ನು ರಾತ್ರಿ ತಿಂದು ಉಳಿದುದನ್ನು ಒಲೆಯಲ್ಲಿಟ್ಟು ಬೇಯಿಸಬೇಕು. ಮರುದಿನವೂ ತಿಂದು, ಉಳಿದುದನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿಸಿ ಅದನ್ನು ಪಾತ್ರೆಯಲ್ಲಿಟ್ಟು ಬೇಕಾದಾಗ ಬೇಯಿಸಿ ತಿನ್ನಬಹುದು. ಸುಮಾರು ಒಂದು ವಾರ ನಿಮಗೆ ಹೊಟ್ಟೆ ತುಂಬಾ ಬಿರಿಯಾನಿ ತಿನ್ನಬಹುದು...’’ ಎನ್ನುತ್ತಾ ಲಕ್ಕವ್ವ ಬಿರಿಯಾನಿ ಯನ್ನು ವರ್ಣನೆ ಮಾಡತೊಡಗಿದಳು.</b></span><br />
<span style="color: blue; font-size: large;"><b>ಈಗ ಕಾಸಿ ವಿಷಯ ಬದಲಿಸಿದನು ‘‘ನೀವು ತುಪ್ಪದಲ್ಲಿ ಯಾವುದೇ ಹೊಸರುಚಿ ಮಾಡೊಲ್ವ...?’’</b></span><br />
<span style="color: blue; font-size: large;"><b>‘‘ತುಪ್ಪ ಅಂದ್ರೆ ಹೆಂಗಿರ್ತದೆ ಬುದ್ಯೋರಾ?’’ ಲಕ್ಕವ್ವ ಕೇಳಿದರು.</b></span><br />
<span style="color: blue; font-size: large;"><b>ಕಾಸಿಗೆ ತಲೆಬಿಸಿಯಾಯಿತು ‘‘ಹಾಲಿನಲ್ಲಿ ಏನೂ ತಿಂಡಿ ಮಾಡೋಲ್ವ...’’</b></span><br />
<span style="color: blue; font-size: large;"><b>‘‘ಮೊಲೆ ಹಾಲು ಬಿಟ್ರೆ ಬೇರೇನು ನಮ್ಮ ಹೈಕ್ಳು ಕುಡಿದಿಲ್ರೀ...’’</b></span><br />
<span style="color: blue; font-size: large;"><b>‘‘ಸರಿ...ಅಕ್ಕಿಯ ಐಟಂ ಬಿಟ್ರೆ ಇನ್ನು ಬೇರೇನು ಮಾಡ್ತೀರಿ?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಸರ...ಒಂದು ಮಡಕೆಯಲ್ಲಿ ನೀರನ್ನು ಇಡಬೇಕು. ಬಳಿಕ ಐದು ಕಲ್ಲು ಉಪ್ಪು ಹಾಕಬೇಕು. ಆ ಬಳಿಕ ಅದನ್ನು ಚೆನ್ನಾಗಿ ಕುದಿಸಬೇಕು. ಈಗ ಅದನ್ನು ಕೆಳಗಿಳಿಸಿ...ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಕುಡಿಯಬಹುದು. ಮನೆಯಲ್ಲಿ ಅಕ್ಕಿ ಇಲ್ಲದೆ ಇದ್ದರೆ ಇದನ್ನೇ ನಾವು ಮಾಡೋದು...’’</b></span><br />
<span style="color: blue; font-size: large;"><b>‘‘ಇದರಲ್ಲಿ ರುಚಿ ಎಲ್ಲಿದೆ...?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಹೊಟ್ಟೆ ಹಸಿದಾಗ ಎಲ್ಲಾನೂ ರುಚಿಯಾಗಿರತ್ತೆ ಒಡೆಯಾ? ಎಲ್ಲದಕ್ಕೂ ಮೊದಲು ಹೊಟ್ಟೆ ಹಸಿದಿರಬೇಕು... ಕಲ್ಲು ಮಣ್ಣೂನು ರುಚಿರುಚಿಯಾಗಿರತ್ತೆ.....ಹಾಂ...ಈಗ ನಾವು ಮಣ್ಣಿನಿಂದಲೂ ಹೊಸ ರುಚಿ ಮಾಡ್ತೀವಿ...ಒಂದು ಬೊಗಸೆ ಶುದ್ಧ ಮಣ್ಣನ್ನು ಚೆನ್ನಾಗಿ ನೀರಲ್ಲಿ ನಾದಬೇಕು. ಬಳಿಕ ಒಲೆಯಲ್ಲಿ ಮಡಕೆಯಲ್ಲಿ ನೀರಿಡಬೇಕು...’’ ಕಾಸಿ ತನ್ನ ಎರಡೂ ಕಿವಿಗಳನ್ನು ಮುಚ್ಚಿ ‘‘ಸಾಕು..ಸಾಕು...ಗ್ರಾಮೀಣ ಹೊಸರುಚಿಗಳ ಬಗೆಯನ್ನು ನಾವೀಗ ಅಸ್ವಾದಿಸಿದೆವು... ಲಕ್ಕವ್ವನವ್ವರಿಗೆ ಇದರ ಪ್ರಯುಕ್ತ ಹೊಟ್ಟೆ ತುಂಬಾ ಊಟವನ್ನು ಉಡುಗೊರೆಯಾಗಿ ಕೊಡುತ್ತಿದ್ದೇವೆ...’’ ಎಂದು ಕಾರ್ಯಕ್ರಮ ಮುಗಿಸಿದ.</b></span><br />
<span style="color: purple; font-size: large;"><b>ಮಾರ್ಚ್ -04-2012</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-49503611271328006072015-04-03T09:30:00.004-07:002015-04-03T09:30:27.562-07:00ಹಲ್ಲೆಗೊಳಗಾದ ಗೋಮಾತೆಗೆ ಒಂದು ಲಕ್ಷ ರೂ. ಪರಿಹಾರ...<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-PAZwqvtBSg4/VR6_6nBGIuI/AAAAAAAAANc/PvZ05CoQm4g/s1600/cow.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-PAZwqvtBSg4/VR6_6nBGIuI/AAAAAAAAANc/PvZ05CoQm4g/s1600/cow.jpg" /></a></div>
<b style="color: purple; font-size: x-large;">ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ಗೋ ಹತ್ಯೆ ನಿಷೇಧ ಕಾನೂನು ಜಾರಿ ಗೊಳಿಸಲು ಹವಣಿಸಿತು. ಈ ಹಿನ್ನೆಲೆಯಲ್ಲಿ ಮಾರ್ಚ್ -28-2010 ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಗೋ ಹತ್ಯೆ ನಿಷೇಧ ವಿಧೇಯಕ ಜಾರಿಗೆ ಬಂದ ಬಳಿಕ ರಾಜ್ಯದ ಸ್ಥಿತಿ ಹೇಗಿರಬಹುದು ಎನ್ನುವುದನ್ನು ಪತ್ರಕರ್ತ ಎಂಜಲು ಕಾಸಿ ಗೋಮಾಂಸ ಸವಿಯುತ್ತಾ ಯೋಚಿಸಿದಾಗ ಹೊಳೆದ ಕೆಲವು ಸುದ್ದಿಯ ಹನಿಗಳನ್ನು ಇಲ್ಲಿ ಯಥಾವತ್ ನೀಡಲಾಗಿದೆ.</b></span><br />
<span style="color: purple; font-size: large;"><b> ಹನಿ-1</b></span><br />
<span style="color: blue; font-size: large;"><b>ಗೋಮಾತೆಗೆ ಹಲ್ಲೆ: ರೈತನ ಬಂಧನ</b></span><br />
<span style="color: blue; font-size: large;"><b>ಹಾಲು ಕರೆಯುವಾಗ ಒದೆಯಿತೆಂದು ಆರೋಪಿಸಿ ರೈತನೊಬ್ಬ ಗೋಮಾತೆಗೆ ಥಳಿಸಿದ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ರೈತನನ್ನು ಕೋಕಾ ಕಾಯ್ದೆಯಲ್ಲಿ ಬಂಧಿಸಲಾಗಿದೆ. ಗೋಮಾತೆಗೆ ಥಳಿಸಲು ಬಳಸಿದ ಬೆತ್ತವನ್ನು ವಶಪಡಿಸಿಕೊಳ್ಳಲಾಗಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಗೋಮಾತೆಯನ್ನು ಹತ್ತಿರದ ಖಾಸಗಿ ಮಠವೊಂದರ ಗೋಮಾಳವೊಂದಕ್ಕೆ ಸೇರಿಸಲಾಗಿದ್ದು, ಅದರ ಆರೈಕೆಗಾಗಿ ಒಂದು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.</b></span><br />
<span style="color: blue; font-size: large;"><b>ಪೇಜಾವರ ಖಂಡನೆ:</b></span><br />
<span style="color: blue; font-size: large;"><b> ಗೋಮಾತೆಗೆ ಥಳಿಸಿದ ಬರ್ಬರ ಘಟನೆಯನ್ನು ಪೇಜಾವರ ಶ್ರೀ ತೀವ್ರವಾಗಿ ಖಂಡಿಸಿದ್ದಾರೆ. ಹಾಲು ಕೊಡುವುದು ಅಥವಾ ಕೊಡದೇ ಇರುವುದು ಗೋಮಾತೆಯ ಅಧಿಕಾರವಾಗಿದ್ದು, ಅದರ ಮೇಲೆ ಬಲ ಪ್ರಯೋಗಿಸುವುದು ತಪ್ಪು ಎಂದು ಅವರು ಹೇಳಿಕೆ ನೀಡಿದ್ದಾರೆ.</b></span><br />
<span style="color: blue; font-size: large;"><b> ‘‘ಗೋಮಾತೆಯ ಮೇಲೆ ಹಲ್ಲೆ ನಡೆಸಿರುವುದರ ಹಿಂದೆ ಭಯೋತ್ಪಾದಕರ ಪಿತೂರಿ ಇರುವುದರಿಂದ, ಇದನ್ನು ಗಂಭೀರ ತನಿಖೆಗೆ ಒಳಪಡಿಸಬೇಕು. ಥಳಿಸುವುದಕ್ಕೆ ಪ್ರೇರಣೆ ನೀಡಿರುವ ಭಯೋತ್ಪಾಕರನ್ನು ಬಂಧಿಸಬೇಕು’’ ಎಂದು ಆಗ್ರಹಿಸಿದ್ದಾರೆ.</b></span><br />
<span style="color: blue; font-size: large;"><b>ಪರಿಹಾರ ಘೋಷಣೆ:</b></span><br />
<span style="color: blue; font-size: large;"><b> ಹಲ್ಲೆಗೊಳಗಾದ ಗೋಮಾತೆಗೆ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದ್ದು, ಇದನ್ನು, ಸ್ಥಳೀಯ ಮಠದ ಸ್ವಾಮೀಜಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.</b></span><br />
<span style="color: purple; font-size: large;"><b>ಹನಿ-2</b></span><br />
<span style="color: blue; font-size: large;"><b>ಹತ್ತು ಮನೆಗಳಿಗೆ ದಾಳಿ: ಅಕ್ರಮ ಮಾಂಸ ವಶ</b></span><br />
<span style="color: blue; font-size: large;"><b> ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪಡೆಯು ಹಲವು ಮನೆಗಳಿಗೆ ವಿಶೇಷ ದಾಳಿಯನ್ನು ಆಯೋಜಿಸಿದ್ದು, ಅಡುಗೆ ಮನೆಯ ಒಲೆಯಲ್ಲಿ ಬೇಯುತ್ತಿದ್ದ ಅಕ್ರಮ ಮಾಂಸದ ಸಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.</b></span><br />
<span style="color: blue; font-size: large;"><b> ಈ ಮಾಂಸದ ಸಾರು ಗೋಮಾತೆಯ ಮಾಂಸದಿಂದ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದು, ಅಲ್ಪಸಂಖ್ಯಾತರು ಅದನ್ನು ನಿರಾಕರಿಸಿದ್ದರು. ನಾವು ಒಲೆಯಲ್ಲಿ ಬೇಯಿಸಿರುವುದು ಕೋಳಿಯ ಸಾರು ಎಂದು ಅವರು ಹೇಳಿಕೆ ನೀಡಿದ್ದಾರೆ. ‘‘ನಾವು ಸ್ಥಳೀಯ ಕೋಳಿ ಫಾರಂನಿಂದ ತಂದ ಕೋಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದೇವೆ. ಕೋಳಿಯ ಗರಿಗಳನ್ನು, ಅದರ ಕರುಳು, ಕಾಲು ಮೊದಲಾದ ಅವಶೇಷಗಳನ್ನು ತೋರಿಸಿದ್ದರೂ ಪೊಲೀಸರು ನಮ್ಮ ಮಾಂಸದ ಸಾರುಗಳನ್ನು ವಶಪಡಿಸಿ, ನಮ್ಮ ಮನೆಯ ಯುವಕರ ಮೇಲೆ ಭಯೋತ್ಪಾದಕ ಕೇಸುಗಳನ್ನು ದಾಖಲಿಸಿದ್ದಾರೆ’’ ಎಂದು ದೂರಿದ್ದಾರೆ.</b></span><br />
<span style="color: blue; font-size: large;"><b>ಆದರೆ ಈ ಹೇಳಿಕೆಯನ್ನು ಪೊಲೀಸರು ತಳ್ಳಿ ಹಾಕಿದ್ದು, ಸಾರು ಗೋಮಾತೆಯದ್ದೋ ಅಥವಾ ಕೋಳಿಯದ್ದೋ ಎಂಬುದರ ತನಿಖೆ ನಡೆಯುತ್ತಿದೆ. ಈ ಕುರಿತಂತೆ ಹಲವರನ್ನು ವಶಪಡಿಸಿ ವಿಚಾರಣೆ ನಡೆಸಿದ್ದೇವೆ. ಸ್ಥಳೀಯ ಮಠದ ಎರಡು ಗೋವುಗಳು ಕಾಣೆಯಾಗಿದ್ದು ಆ ಗೋವುಗಳನ್ನೇ ಸಾರು ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಸಾರನ್ನು ಅನ್ನದ ಜೊತೆ ಬೆರೆಸಿ ಅದನ್ನು ತಿಂದು ಪರೀಕ್ಷೆ ನಡೆಸಿದ್ದಾರೆ. ನಿನ್ನೆ ವಶಪಡಿಸಿಕೊಂಡಿರುವ ಎಲ್ಲ ಮನೆಗಳ ಬಿರಿಯಾನಿಯನ್ನು ನಾವು ತಿಂದು ಕೋಳಿಯದ್ದೋ, ಗೋವಿನದ್ದೋ ಎಂದು ಪರೀಕ್ಷೆ ನಡೆಸಿದ್ದೇವೆ. ವರದಿ ಹೊರ ಬೀಳುವುದನ್ನಷ್ಟೇ ಕಾಯುತ್ತಿದ್ದೇವೆ’’ ಎಂದು ಪೊಲೀಸರು ತಿಳಿಸಿದ್ದಾರೆ.</b></span><br />
<span style="color: blue; font-size: large;"><b>ಅಕ್ರಮ ಮಾಂಸದ ಸಾರಿಗೆ ಸಂಬಂಧಿಸಿ ಈಗಾಗಲೇ 25 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹಲವರ ಮೇಲೆ ಕೋಕಾ ಕಾಯ್ದೆಯನ್ನು ಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಕ್ರಮ ಗೋವಿನ ಸಾರು ವಶಪಡಿಸಿಕೊಂಡ ಪೊಲೀಸರಿಗೆ ಪೊಲೀಸ್ 10 ಸಾವಿರ ರೂ. ಬಹುಮಾನವನ್ನು ಘೋಷಿಸಿದ್ದಾರೆ.</b></span><br />
<span style="color: purple; font-size: large;"><b>ಹನಿ-3</b></span><br />
<span style="color: blue; font-size: large;"><b>ಗೋಮಾಳಕ್ಕಾಗಿ ಭೂಮಿ ವಶಹೆಚ್ಚುತ್ತಿರುವ ವೃದ್ಧ ಮತ್ತು ಗೊಡ್ಡು ಗೋವುಗಳಿಂದಾಗಿ ಇರುವ ಗೋಮಾಳಗಳು ತುಂಬಿ ತುಳುಕುತ್ತಿದ್ದು, ಗೋಮಾಳಗಳನ್ನು ವಿಸ್ತರಿಸಲು ಸರಕಾರ ನಿರ್ಧರಿಸಿದೆ. ಈಗಾಗಲೇ ಗೋಮಾಳಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಠಗಳಿಗೆ ಒಂದು ಸಾವಿರ ಎಕರೆ ಭೂಮಿಯನ್ನು ಕೊಡಲು ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಇನ್ನಷ್ಟು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಆದೇಶ ಹೊರಡಿಸಿದೆ.ಗೋಮಾಳಕ್ಕೆ ಭೂಮಿ ಕೊಡಲು ವಿರೋಧ ವ್ಯಕ್ತಪಡಿಸುವ ರೈತರನ್ನು ಗೋಹತ್ಯೆ ನಿಷೇಧ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.</b></span><br />
<span style="color: blue; font-size: large;"><b>ಅಭಿವದ್ಧಿಗಾಗಿ ಭೂಮಿ ಕೊಡಿ: ಮುಖ್ಯಮಂತ್ರಿ ಕರೆ</b></span><br />
<span style="color: blue; font-size: large;"><b>ಗೋವುಗಳ ಅಭಿವದ್ಧಿಗಾಗಿ ರೈತರು ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಕರೆ ನೀಡಿದ್ದು, ಅಭಿವದ್ಧಿ ವಿರುದ್ಧ ಧ್ವನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಾಗುವುದು ಎಂದು ತಿಳಿಸಿದ್ದಾರೆ.ರೈತರಿಗೆ ಪರಿಹಾರಭೂಮಿಯನ್ನು ಕೊಟ್ಟ ರೈತರಿಗೆ ಪರಿಹಾರವಾಗಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುವುದು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.</b></span><br />
<span style="color: purple; font-size: large;"><b>ಹನಿ-4</b></span><br />
<span style="color: blue; font-size: large;"><b>ಗೋಮಾರಾಟ: ಮಠಾಧೀಶರ ಮೇಲೆ ಆರೋಪ</b></span><br />
<span style="color: blue; font-size: large;"><b>ತಮ್ಮ ಉಸ್ತುವಾರಿಯಲ್ಲಿದ್ದ ಒಂದು ಸಾವಿರ ಗೋವುಗಳು ಕಾಣೆಯಾಗಿವೆ ಎಂದು ಸ್ಥಳೀಯ ಮಠಾಧೀಶರು ಪೊಲೀಸರಿಗೆ ದೂರು ನೀಡಿದ್ದು, ಈ ಒಂದು ಸಾವಿರ ಗೋವುಗಳನ್ನು ಸ್ವಾಮೀಜಿಗಳು ವಿದೇಶಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.</b></span><br />
<span style="color: blue; font-size: large;"><b>ಮಠಗಳು ಅಕ್ರಮವಾಗಿ ಗೋಮಾರಾಟ ದಂಧೆಯನ್ನು ಆರಂಭಿಸಿವೆ ಎಂದು ಅವರು ಟೀಕಿಸಿದ್ದಾರೆ.ಆದರೆ ಈ ಆರೋಪವನ್ನು ಎಲ್ಲ ಸ್ವಾಮೀಜಿಗಳು ಒಕ್ಕೊರಲಲ್ಲಿ ವಿರೋಧಿಸಿದ್ದು, ಗೋವುಗಳ ಮಾರಾಟವನ್ನು ಮಾಡಿಲ್ಲ. ಗೋವುಗಳನ್ನು ನಾವು ದಾನ ಮಾಡಿದ್ದೇವೆ. ಅವುಗಳು ವಿದೇಶಿ ಹವಾನಿಯಂತ್ರಿತ ದೊಡ್ಡಿಗಳಲ್ಲಿ ಸುಖವಾಗಿ ಬಾಳುತ್ತಿವೆ ಎಂದು ಹೇಳಿದ್ದಾರೆ.</b></span><br />
<span style="color: purple; font-size: large;"><b>ಹನಿ-5</b></span><br />
<span style="color: blue; font-size: large;"><b>ಕುರಿಗಳಿಗೆ ಕೊಂಬುಗಳು</b></span><br />
<span style="color: blue; font-size: large;"><b>ಗೋವುಗಳನ್ನು ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿರುವ ಸಂದರ್ಭದಲ್ಲಿ ಮೂವರು ಸಂಘಪರಿವಾರ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಆದರೆ ನಾವು ಮಾಂಸ ಮಾಡುತ್ತಿದ್ದುದು ಗೋವನ್ನಲ್ಲ, ಕುರಿಗಳನ್ನು ಎಂದು ಅವರು ಹೇಳಿದ್ದಾರೆ.ಕುರಿಗಳಿಗೆ ಕೊಂಬು ಇರುವುದಿಲ್ಲ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿದ್ದು, ಅದು ಕೊಂಬುಗಳು ಇರುವ ಕುರಿಗಳು ಎಂದು ಸಂಘಪರಿವಾರದ ಕಾರ್ಯಕರ್ತರು ಸಮರ್ಥಿಸಿದ್ದಾರೆ.</b></span><br />
<span style="color: blue; font-size: large;"><b>ಆರೆಸ್ಸೆಸ್ನ ಕಾರ್ಯಕರ್ತರು ಹೇಳಿರುವುದರಿಂದಾಗಿ, ಆ ಕುರಿಗಳಿಗೆ ಕೊಂಬುಗಳಿವೆ ಎಂದು ಮುಖ್ಯಮಂತ್ರಿ ಸಮರ್ಥಿಸಿದ್ದಾರೆ.</b></span><br />
<span style="color: purple; font-size: large;"><b>ಹನಿ-6</b></span><br />
<span style="color: blue; font-size: large;"><b>ಮುಖ್ಯಮಂತ್ರಿ ಆತಂಕ</b></span><br />
<span style="color: blue; font-size: large;"><b>ಗೋ ಹತ್ಯೆ ನಿಷೇಧ ಜಾರಿಗೆ ಬಂದ ಬಳಿಕ ರೈತರ ಹಟ್ಟಿಗಳಲ್ಲಿ ಗೋವುಗಳು ಗಣನೀಯವಾಗಿ ಕಡಿಮೆಯಾಗಿದ್ದು, ಗೋಮಾಳಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದಕ್ಕೆ ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದಾರೆ.ಗೋ ಸಾಕಣೆ ದುಬಾರಿಯೆಂದು ಗೋವುಗಳನ್ನು ಸಾಕಲು ಹಿಂಜರಿಯುವ ರೈತರ ಮೇಲೆ ಗೋ ಹತ್ಯೆ ನಿಷೇಧ ಮೊಕದ್ದಮೆ ಹಾಕಲಾಗುವುದು ಎಂದು ಎಚ್ಚರಿಸಿರುವ ಮುಖ್ಯಮಂತ್ರಿ, ಬ್ಯಾಂಕಿನಿಂದ ಸಾಲ ತೆಗೆದು ಗೋವುಗಳನ್ನು ಕಡ್ಡಾಯವಾಗಿ ಸಾಕತಕ್ಕದ್ದು ಎಂದು ಎಚ್ಚರಿಸಿದ್ದಾರೆ.ಗೋವುಗಳನ್ನು ಸಾಕಿದ ರೈತರು ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದರೂ, ಗೋಮಾಳಗಳನ್ನಿಟ್ಟು ಗೊಡ್ಡು ದನಗಳನ್ನು ಸಾಕುವ ಸ್ವಾಮೀಜಿಗಳು ದಷ್ಟ ಪುಷ್ಟರಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.ಗೋವುಗಳನ್ನು ಸಾಕುವ ರೈತರಿಗೆ ಅವರ ಭೂಮಿ, ಮನೆಯ ಆಧಾರವಿಟ್ಟು ಇನ್ನಷ್ಟು ಸಾಲವನ್ನು ನೀಡಲಾಗುವುದು.</b></span><br />
<span style="color: blue; font-size: large;"><b>ಹಾಗೆಯೇ, ಗೊಡ್ಡು ದನಗಳನ್ನು ಗೋಮಾಳದಲ್ಲಿಟ್ಟು ಸಾಕುವ ಮಠಾಧಿಪತಿಗಳಿಗೆ ಬಜೆಟ್ನಲ್ಲಿ ಪ್ರತ್ಯೇಕ ಅನುದಾನವನ್ನು ಒದಗಿಸಲಾಗುವುದು. ಸರಕಾರದ ಕೆಚ್ಚಲಿನಿಂದ ಯಾವಾಗಬೇಕಾದರೂ ಹಾಲು ಕರೆಯಲು ಅವರಿಗೆ ಪೂರ್ಣ ಅವಕಾಶವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.</b></span><br />
<span style="color: purple; font-size: large;"><b>ರವಿವಾರ - ಮಾರ್ಚ್ -28-2010</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-910532911668318422015-03-31T05:25:00.001-07:002015-03-31T05:25:36.814-07:00ಪೂಜೆಯಿಂದ ಅಸ್ಸಾಂನಲ್ಲಿ ರಕ್ತದ ಮಳೆಯಾಗಿದೆ...!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-M1XiAWY3O3Y/VRqSJdQ2B8I/AAAAAAAAANI/uz4oTTH9ItY/s1600/rain.png" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-M1XiAWY3O3Y/VRqSJdQ2B8I/AAAAAAAAANI/uz4oTTH9ItY/s1600/rain.png" /></a></div>
<b style="color: purple; font-size: x-large;">ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ, ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮಳೆಗಾಗಿ ಪೂಜೆ ಮಾಡಲು ಸರಕಾರದಿಂದ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಿದರು. ಈ ಹಿನ್ನೆಲೆಯಲ್ಲಿ ರವಿವಾರ -ಜುಲೈ -29-2012 ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ </b><br />
<span style="color: purple; font-size: large;"><b><br /></b></span>
<span style="color: blue; font-size: large;"><b>ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಕೊಡೆ ಹಿಡಿದುಕೊಂಡು ಉಡುಪಿಯಲ್ಲಿ ಓಡಾಡುತ್ತಿದ್ದರು. ಬಹುಶಃ ಬಿಸಿಲಿಗಾಗಿ ಕೊಡೆ ಹಿಡಿದಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಪತ್ರಕರ್ತ ಎಂಜಲು ಕಾಸಿ ಮೆಲ್ಲಗೆ ಆ ಕೊಡೆಯಲ್ಲಿ ಸೇರಿಕೊಂಡ ‘‘ಸಾರ್ ನಾನು ಸಾರ್...ಪತ್ರಕರ್ತ ಎಂಜಲು ಕಾಸಿ...ತುಂಬಾ ಬಿಸಿಲಲ್ವಾ ಸಾರ್...’’</b></span><br />
<span style="color: blue; font-size: large;"><b>ಖೋಟಾ ಶ್ರೀನಿವಾಸ ಪೂಜಾರಿಯವರು ಸಿಟ್ಟಾದರು ‘‘ಎಂತ ಬಿಸಿಲು ನಿಮ್ಮ ಕರ್ಮ. ಇದು ಬಿಸಿಲ, ಮಳೆಯಲ್ಲವಾ? ಮಳೆಗಾಗಿ ಕೋಟ್ಯಂತರ ಖರ್ಚು ಮಾಡಿ ಪೂಜೆ ಮಾಡಿದ್ದೇವೆ. ಹೊರಗಡೆ ಧಾರಾಕಾರ ಮಳೆ ಸುರೀತಾ ಉಂಟು... ನೀವು ಬಿಸಿಲು ಎಂದು ಹೇಳುತ್ತೀರಾಲ್ಲ...ಮಂಡೆ ಸರಿ ಇಲ್ವಾ....’’ ಒದ್ದೆ ಹಣೆಯನ್ನು ಒರೆಸಿಕೊಂಡರು. ಹನಿಗಳು ಪಟಪಟನೆ ತೊಟ್ಟಿಕ್ಕಿತು. ಅವರ ಅಂಗಿ, ಲುಂಗಿ ಕೂಡ ಒದ್ದೆಯಾಗಿತ್ತು.</b></span><br />
<span style="color: blue; font-size: large;"><b>‘‘ಸಾರ್ ಅದು ಮಳೆಹನಿಯಲ್ಲ, ಬೆವರ ಹನಿ ಸಾರ್...’’ ಕಾಸಿ ಗೊಂದಲದಲ್ಲಿ ಹೇಳಿದ.</b></span><br />
<span style="color: blue; font-size: large;"><b>‘‘ಎಂತ ಮಾರ್ರೆ...ಬಿಜೆಪಿ ಸರಕಾರವನ್ನು ಹೀಗೂ ಟೀಕಿಸುವುದಾ...ಪೂಜಾರಿಗಳು ಮಳೆ ಬರುತ್ತದೆ ಎಂದ ಮೇಲೆ ಮುಗಿಯಿತು...’’ ಖೋಟಾ ನುಡಿದರು.</b></span><br />
<span style="color: blue; font-size: large;"><b>‘‘ಯಾವ ಪೂಜಾರಿ ಸಾರ್? ಜನಾರ್ದನ ಪೂಜಾರಿಯ?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ನಿಮಗೆಂತ ತಲೆಕೆಟ್ಟಿದೆಯಾ? ಅವರು ಬರೇ ಬಿಲ್ಲವರಿಗೆ ಮಾತ್ರ ಪೂಜಾರಿ. ನಾನು ದೇವಸ್ಥಾನದ ಪೂಜಾರಿಗಳ ವಿಷಯ ಹೇಳಿದ್ದು. ಅವರಿಗೆ ದುಡ್ಡಿನ ಮಳೆ ಸುರಿದಿದ್ದೇವೆ. ಅದಕ್ಕಾಗಿ ಪೂಜೆ ಮಾಡಿದ್ದಾರೆ. ಆದುದರಿಂದ ಮಳೆ ಬರಲೇ ಬೇಕು. ಅದಕ್ಕಾಗಿಯೇ ಅಲ್ಲವಾ ನಾನು ಕೊಡೆ ಹಿಡಿದು ತಿರುಗಾಡುತ್ತಿರುವುದು...ಸರಕಾರಿ ಪೂಜೆಗಾಗಿ ಮಾತ್ರ ಹಣಕೊಟ್ಟದ್ದಲ್ಲ...ಜೋರಾಗಿ ಮಳೆ ಬರುತ್ತದಲ್ಲ...ಅದಕ್ಕಾಗಿ ಕೊಡೆಯನ್ನು ಕೂಡ ಇಡೀ ರಾಜ್ಯದ ಪೂಜಾರಿಗಳಿಗೆ ವಿತರಣೆ ಮಾಡಿದ್ದೇನೆ....’’</b></span><br />
<span style="color: blue; font-size: large;"><b>‘‘ಸಾರ್ ನೀವು ಪೂಜಾರಿಗಳು ಅನ್ನುವಾಗ ಸ್ವಲ್ಪ ಗೊಂದಲ...ನೀವು ಕೂಡ ಪೂಜಾರಿ ಅಲ್ಲವಾ...’’ ಕಾಸಿ ಹಲ್ಲು ಕಿರಿದ.</b></span><br />
<span style="color: blue; font-size: large;"><b>‘‘ನಿಮ್ಮ ತಲೆ...ನಾನು ಹೇಳುವುದು ಕೃಷ್ಣ ಮಠದ ಪೂಜಾರಿಗಳ ಬಗ್ಗೆ....ಅವರ ದೇವಸ್ಥಾನದ ಪೂಜಾರಿಗಳು. ನಾವು ಬರೇ ಖಾಲಿ ಪೂಜಾರಿಗಳು...ಬರೇ ಪೂಜಾರಿಗಳಿಗೆ ಮಾತ್ರ ಕೊಡೆ ಕೊಡುವುದಕ್ಕೆ ನಾನೇನು ಜಾತೀವಾದಿಯಲ್ಲ...’’</b></span><br />
<span style="color: blue; font-size: large;"><b>‘‘ಸಾರ್ ಕೊಡೆ ಮಡಚಿ ಸಾರ್. ಮಳೆಯಲ್ಲೇ ನೆಂದು ಹೋಗುವ...’’ ಕಾಸಿ ಸಲಹೆ ನೀಡಿದ.</b></span><br />
<span style="color: blue; font-size: large;"><b>‘‘ಹೌದಲ್ಲ...ಮಳೆಯಲ್ಲಿ ನೆನೆದುಕೊಂಡು ಹೋಗುವುದಕ್ಕೆ ತುಂಬಾ ಕುಸಿಯಾಗುತ್ತದೆ’’ ಎನ್ನುತ್ತಾ ಕೊಡೆ ಮಡಚುವುದಕ್ಕೆ ಮುಂದಾದರು. ಆದರೆ ಅಷ್ಟರಲ್ಲಿ ಬಿಸಿಲ ಝಳ ಅವರ ನೆತ್ತಿಯ ಮೇಲೆ ಹೊಡೆಯಿತು ‘‘ಓಹ್ ಮಳೆ ಭಾರೀ ಜೋರುಂಟು ಮಾರ್ರೆ...ಒಟ್ಟಿನಲ್ಲಿ ನಮ್ಮ ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಿದ್ದರಿಂದ ಇದೊಂದು ಒಳ್ಳೆದಾಯಿತು ನೋಡಿ....’’</b></span><br />
<span style="color: blue; font-size: large;"><b>‘‘ಸಾರ್...ಹಾಗಾದರೆ ಮೋಡ ಬಿತ್ತನೆಗೂ ಈ ಮಳೆ ಪೂಜೆಗೂ ಏನು ವ್ಯತ್ಯಾಸ?’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಯತ್ಯಾಸ ಎಂತದು ಮಣ್ಣು...ಅದರಲ್ಲಿ ವಿಜ್ಞಾನಿಗಳಿಗೆ ಹಣ ಹೋಗ್ತದೆ...ಇದರಲ್ಲಿ ಪಾಪ ಪೂಜಾರಿಗಳಿಗೆ ಅಂದರೆ ದೇವಸ್ತಾನದ ಪೂಜಾರಿಗಳಿಗೆ ಹೋಗ್ತದೆ. ಅಷ್ಟೇ ವ್ಯತ್ಯಾಸ. .’’</b></span><br />
<span style="color: blue; font-size: large;"><b>‘‘ಸಾರ್...ಮಳೆಗಾಗಿ ಸರಕಾರಿ ಪೂಜೆ ಮಾಡಿದ ಎಲ್ಲ ಪೂಜಾರಿಗಳು ತಮ್ಮನ್ನು ಸರಕಾರಿ ನೌಕರರೆಂದು ಗುರುತಿಸಬೇಕು ಎಂದು ಕೇಳುತ್ತಿದ್ದಾರಂತೆ ಹೌದಾ?’’ ಕಾಸಿ ಚುಚ್ಚಿದ.</b></span><br />
<span style="color: blue; font-size: large;"><b>‘‘ಕೇಳಿದರೆ ಕೇಳಲಿ ಮಾರಾಯರೆ...ನಿಮ್ಮದೇನು ಗಂಟು ಹೋಯಿತು? ಪೂಜೆಯೂ ಸರಕಾರಿ ಕೆಲಸವೇ ಅಲ್ಲವಾ....ಸರಕಾರಿ ಕೆಲಸ ದೇವರ ಕೆಲಸ ಅಂದ ಮೇಲೆ ದೇವರ ಕೆಲಸ ಸರಕಾರಿ ಕೆಲಸ ಅಲ್ಲವಾ? ಆದುದರಿಂದ ಇನ್ನು ಮುಂದೆ ನಾವು ದೇವಸ್ಥಾನದ ಎಲ್ಲ ಪೂಜಾರಿಗಳನ್ನು ಸರಕಾರಿ ನೌಕರರೆಂದು ನೇಮಕ ಮಾಡುತ್ತೇವೆ...ಅವರ ಕೆಲಸವನ್ನು ಶೀಘ್ರದಲ್ಲೇ ಖಾಯಂ ಮಾಡುವ ಉದ್ದೇಶ ಉಂಟು...’’</b></span><br />
<span style="color: blue; font-size: large;"><b>‘‘ಸಾರ್...ಹಾಲಾಡಿ...ಶ್ರೀನಿವಾಸ ಶೆಟ್ಟಿ....’’ ಎಂದು ಕಾಸಿ ಬಾಯಿತೆರೆದದ್ದೇ ಖೋಟಾ ಶ್ರೀನಿವಾಸರು ಸಿಟ್ಟಾದರು ‘‘ಅವರು ಹಾಲಾಡಿಯಲ್ಲ, ನನ್ನ ಪಾಲಿಗೆ ಹಾಳಾಡಿ...ಅವರ ವಿಷಯ ಯಾಕೆ ಈಗ?’’</b></span><br />
<span style="color: blue; font-size: large;"><b>‘‘ಅವರು ಕುಂದಾಪುರದ ವಾಜಪೇಯಿಯಂತೆ ಹೌದಾ?’’</b></span><br />
<span style="color: blue; font-size: large;"><b>‘‘ಅದಕ್ಕೆ ನಾನೇನು ಮಾಡುವುದು? ಬೇಕಾದರೆ ಅವರನ್ನು ಪ್ರಧಾನಮಂತ್ರಿ ಮಾಡಲಿ. ನಾನೇನು ಬೇಡ ಅನ್ನುತ್ತೇನಾ? ಸಚಿವ ಸ್ಥಾನ ಸಿಗಲಿಲ್ಲ ಅಂತ ಅವರು ನನ್ನ ಮೇಲೆ ಕಾರ್ಗಿಲ್ ಯುದ್ಧ ಮಾಡುವುದು ಸರಿಯ?’’</b></span><br />
<span style="color: blue; font-size: large;"><b>‘‘ಸಚಿವ ಸ್ಥಾನ ಸಿಗಬೇಕಾದರೆ ಪ್ರಭಾಕರ ಭಟ್ಟರ ಕಾಲು ಹಿಡಿಯುವುದು ಅನಿವಾರ್ಯವಂತೆ...ನೀವೇನಾದರೂ ಹಿಡಿದಿದ್ದೀರಾ...?’’ ಕಾಸಿ ಮೆಲ್ಲಗೆ ಬುದ್ಧಿ ತೋರಿಸಿದ.</b></span><br />
<span style="color: blue; font-size: large;"><b>‘‘ನನಗೆ ಸಿಟ್ಟು ಬರುತ್ತದೆ...ಭಟ್ಟರ ಕಾಲು ಹಿಡಿದರೆ ಅದರಲ್ಲಿ ನಮಗೆ ಪುಣ್ಯ ಉಂಟು ಗೊತ್ತುಂಟ. ಒಂದು ವೇಳೆ ನಾವು ಕಾಲು ಮುಟ್ಟಲು ಹಿಂದೇಟು ಹಾಕಿದರೆ ಅದು ಅಸ್ಪಶತೆ ಆಗುವುದಿಲ್ಲವಾ...ಭಟ್ಟರು ಅಂತ ನಾವು ಕಾಲು ಮುಟ್ಟದೆ ಭೇದಭಾವ ತೋರಿಸುವುದಕ್ಕಾಗುತ್ತದ? ಅದು ಜಾತೀಯವಾದವಲ್ಲವ?’’</b></span><br />
<span style="color: blue; font-size: large;"><b>‘‘ನಿಮ್ಮ ಮುಂದಿನ ಕಾರ್ಯಕ್ರಮಗಳು ಏನೇನು ಎನ್ನುವುದನ್ನು ಹೇಳುತ್ತೀರಾ....’’</b></span><br />
<span style="color: blue; font-size: large;"><b>‘‘ಕಾರ್ಯಕ್ರಮ ತುಂಬಾ ಉಂಟು ಮಾರೆಯರೆ...ಆದರೆ ದೊಡ್ಡ ತಲೆಬಿಸಿಯೆಂದರೆ ಸರಕಾರ ಎಷ್ಟರವರೆಗೆ ಉಳಿಯುತ್ತದೆ ಎಂದು ಗೊತ್ತಿಲ್ಲ...ತುಂಬಾ ಪೂಜೆ ಕಾರ್ಯಕ್ರಮ ಮಾಡ್ಲಿಕ್ಕೆ ಉಂಟು. ಮುಖ್ಯವಾಗಿ ನಮ್ಮ ಸರಕಾರಕ್ಕೆ ಯಾರೋ ಮಾಟ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಒಂದು ಆದೇಶ ಹೊರಡಿಸುತ್ತೇನೆ...ಆಮೇಲೆ, ಹಾಲಾಡಿಯವರು ಪಕ್ಷದಲ್ಲೇ ಉಳಿದು, ಪ್ರಭಾಕರ ಭಟ್ಟರತ್ರ ಕ್ಷಮೆಯಾಚಿಸಬೇಕು ಎಂದು ಎಲ್ಲ ದೇವಾಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಈಗಾಗಲೇ ಆದೇಶ ಹೊರಡಿಸಿದ್ದೇನೆ. ಅದು ಸ್ವಲ್ಪ ಮಟ್ಟಿಗೆ ಪ್ರಯೋಜನಕ್ಕೆ ಬಂದಿದೆ...ಈಗ ಮೊದಲಿನ ಹಾಗೆ ಅವರು ಮಂಡೆಬೆಚ್ಚದಿಂದ ಮಾತನಾಡುವುದಿಲ್ಲ...ರೈತರ ಆತ್ಮಹತ್ಯೆ ತಡೆಯುವುದಕ್ಕೆ, ರಾಜ್ಯದಲ್ಲಿ ಬಡತನ ನಿವಾರಣೆ ಮಾಡುವುದಕ್ಕೆ ಪೂಜೆ ಮಾಡುವ ಕಾರ್ಯಕ್ರಮ ಉಂಟು. ಅದಕ್ಕಾಗಿ ಎಲ್ಲ ದೇವಸ್ಥಾನಗಳಿಗೆ ಕೆಲವು ಕೋಟಿ ಬಿಡುಗಡೆ ಮಾಡಬೇಕೂಂತ ಉಂಟು...’’</b></span><br />
<span style="color: blue; font-size: large;"><b>‘‘ಬಿಜೆಪಿಯ ವರಿಷ್ಠರಿಗೆ, ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸಬಹುದಲ್ಲ ಸಾರ್?’’</b></span><br />
<span style="color: blue; font-size: large;"><b>‘‘ಮೊದಲು ಪತ್ರಕರ್ತರ ಮಂಡೆ ಸರಿಯಾಗಲಿ ಅಂತ ಪೂಜೆ ಮಾಡಿಸ್ಲಿಕ್ಕೆ ಉಂಟು. ಬಳಿಕ ನಮ್ಮ ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸ್ತೇನೆ...ಆಗಬಹುದಾ...?’’ ಎಂದು ಒಮ್ಮೆಲೆ ಖೋಟಾ ಸಚಿವರು ಸಿಟ್ಟಾಗಿ ತನ್ನ ಕೊಡೆಯನ್ನು ಮಡಿಚಿದರು.</b></span><br />
<span style="color: blue; font-size: large;"><b>ಅಷ್ಟರಲ್ಲಿ ಯಾರದೋ ಫೋನ್ ಬಂತು. ಅದರಲ್ಲಿ ಮಾತನಾಡಿದ್ದೆ ಪೂಜಾರಿಯವರು ಖುಷಿಯಾದರು ‘‘ನೋಡ್ರಿ ಕಾಶಿಯವರೆ...ಮಳೆಯಾಗಿದೆ...ನಮ್ಮ ಪೂಜೆಯಿಂದ ಈಶಾನ್ಯ ಭಾರತದ ಅಸ್ಸಾಂನಲ್ಲಿ ಭಾರೀ ರಕ್ತದ ಮಳೆಯಾಗಿದೆ...ಇನ್ನೇನು ಅದು ಕರ್ನಾಟಕಕ್ಕೆ ಬರುವ ಸಾಧ್ಯತೆ ಇದೆಯಂತೆ...’’</b></span><br />
<span style="color: blue; font-size: large;"><b>ಆ ಗುಡುಗಿಗೆ ಪತ್ರಕರ್ತ ಕಾಸಿ ನಿಂತಲ್ಲೇ ಸಣ್ಣಗೆ ನಡುಗಿದ.</b></span><br />
<span style="color: purple; font-size: large;"><b>ರವಿವಾರ - ಜುಲೈ -29-2012</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-75518317373767805082015-03-30T05:03:00.002-07:002015-03-30T05:03:31.920-07:00ನರಕದಲ್ಲೊಂದು ಸ್ವಚ್ಛತಾ ಆಂದೋಲನ!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-wJrUFkhjXGI/VRk7drBT8YI/AAAAAAAAAM4/cotPGH-ngwY/s1600/gandhi.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-wJrUFkhjXGI/VRk7drBT8YI/AAAAAAAAAM4/cotPGH-ngwY/s1600/gandhi.jpg" /></a></div>
<b style="color: purple; font-size: x-large;">ನರೇಂದ್ರ ಮೋದಿ ಸ್ವಚ್ಚತಾ ಆಂದೋಲನಕ್ಕೆ ಇಳಿದ ಸಂದರ್ಭದಲ್ಲಿ ಶನಿವಾರ - ಅಕ್ಟೋಬರ್ -18-2014ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ನರೇಂದ್ರ ಮೋದಿ, ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್, ಶಶಿ ತರೂರ್, ಸಾನಿಯಾ ಮಿರ್ಝಾ ಎಲ್ಲರೂ ಬೀದಿಗಿಳಿದು ಕಸ ಗುಡಿಸುತ್ತಿರುವುದನ್ನು ಮೇಲಿನಿಂದ ನೋಡಿದ ಮಹಾತ್ಮಾ ಗಾಂಧೀಜಿಗೆ ಫುಲ್ ಕಂಫ್ಯೂಶನ್. ಎಲ್ಲರೂ ತನ್ನ ಭಾವಚಿತ್ರದ ಜೊತೆಗೆ ಪೊರಕೆ ಹಿಡಿದುಕೊಂಡಿದ್ದಾರಲ್ಲ ಎಂದುಕೊಂಡು ಭಯಭೀತರಾದರು. ಸಾರ್ವಜನಿಕವಾಗಿ ನನಗೆ ಪೊರಕೆ ಸೇವೆ ಮಾಡುವ ಉದ್ದೇಶವೇನಾದರೂ ಇದೆಯಾ...ಎಂದು ಸ್ವರ್ಗಲೋಕದಿಂದ ತನ್ನ ದೂತರಿಗೆ ಕರೆ ಕಳುಹಿಸಿದರು ‘‘ಇವತ್ತಿನ ಹರಿಜನ ಸಂಚಿಕೆ ಒಂದನ್ನು ಭೂಲೋಕದಿಂದ ಹಿಡಿದುಕೊಂಡು ಬನ್ನಿ. ನಿಜವಾದ ವಿಷಯವೇನು ಎನ್ನುವುದು ನನಗೆ ತಿಳಿಯ ಬೇಕಾಗಿದೆ....’’</b></span><br />
<span style="color: blue; font-size: large;"><b>ದೂತ ವಿಷಾದದ ನಗೆ ನಕ್ಕು ಹೇಳಿದ ‘‘ಬಾಪೂಜಿ... ನಿಮ್ಮ ಹರಿಜನ ಪತ್ರಿಕೆ ಸ್ವಾತಂತ್ರ ಸಿಗುವ ಮೊದಲೇ ನಿಂತು ಹೋಗಿದೆ ಗೊತ್ತಿದೆಯಲ್ಲ...ಈಗ ಏನಿದ್ದರೂ ನಂ.1, ನಂ.2 ಪತ್ರಿಕೆಗಳದ್ದೇ ಕಾರುಬಾರು...ಎಲ್ಲ ಪುಕ್ಕಟೆ ಹಂಚುತ್ತಾರೆ...ನಮ್ಮ ನರಕಕ್ಕೆ ಎಲ್ಲ ದಿನ ಪತ್ರಿಕೆಗಳೂ ಪೂರೈಸಲಾಗುತ್ತದೆ. ಪುಕ್ಕಟೆಯಾಗಿ....’’</b></span><br />
<span style="color: blue; font-size: large;"><b> ‘ಹೇ ರಾಮ್...’ ಎಂದು ನಿಟ್ಟುಸಿರಿಟ್ಟ ಗಾಂಧೀಜಿ ‘‘ಸರಿ...ಯಾರಿಂದಾದರೂ ಒಂದು ಪತ್ರಿಕೆ ತನ್ನಿ...’’ ಎಂದು ಹೇಳಿದರು. ದೂತ ತಕ್ಷಣವೇ ನರಕಕ್ಕೆ ಹೋಗಿ ಒಂದಿಷ್ಟು ದಿನ ಪತ್ರಿಕೆಗಳನ್ನು ತಂದ...‘‘ಯಾರೂ ಪತ್ರಿಕೆಗಳನ್ನು ಕೊಡಲು ಒಪ್ಪಲಿಲ್ಲ ಬಾಪೂಜಿ. ಆದರೆ ಗಾಂಧೀಜಿಗೆ ಎಂದು ಗೊತ್ತಾದ ಕೂಡಲೇ ನಾಥೂರಾಂ ಗೋಡ್ಸೆ ತನ್ನಲ್ಲಿದ್ದ ಪತ್ರಿಕೆಯನ್ನು ತಕ್ಷಣ ಕೊಟ್ಟ...ನರಕಕ್ಕೆ ಸಂಬಂಧಿಸಿ ಯಾವುದೇ ವರದಿಗಳನ್ನು ಅವರು ನೇರವಾಗಿ ಭೂಲೋಕದ ಪತ್ರಿಕೆಗಳಿಗೆ ತಲುಪಿಸುತ್ತಾರೆ..ಕ್ಯಾಮರಾಮ್ಯಾನ್ ಸಾವರ್ಕರ್ ಜೊತೆಗೆ ವರದಿಗಾರ ನಾಥೂರಾಂ ಗೋಡ್ಸೆ...ಎಂದು ಈಗ ದಿನಾ ಟೀವಿಯಲ್ಲಿ ಸುದ್ದಿಗಳು ಬರುತ್ತಿರುತ್ತವೆ...ಇವತ್ತು ನರಕಲೋಕವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿದಿದ್ದಾರೆ ಸಾವರ್ಕರ್...ಗಾಂಧಿಜಯಂತಿ ದಿನ ಭೂಲೋಕದಲ್ಲಿ ನರೇಂದ್ರ ಮೋದಿಯವರು ಸ್ವಚ್ಛತಾ ಆಂದೋಲನ ಮಾಡುತ್ತಿದ್ದಾರಂತೆ...ಅದರ ಪರವಾಗಿ ನರಕಲೋಕವನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ನಾಥೂರಾಂ ಗೋಡ್ಸೆ ಮತ್ತು ಬಳಗ ಇಳಿದಿದೆ. ನೀವು ಅದರ ಉದ್ಘಾಟನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಬರೇ ಫೋಟೋಕ್ಕೆ ನಾಥೂರಾಂ ಜೊತೆಗೆ ಒಂದು ಭಂಗಿಯನ್ನು ನೀಡಿದರೆ ಸಾಕಂತೆ. ಗುಡಿಸಬೇಕಾಗಿಲ್ಲ ಅಂತೆ. ಬಾಪೂಜಿ ಇದು ಒಳ್ಳೆಯ ಅವಕಾಶ. ಈಗ ಅವರದೇ ಸರಕಾರ ಇರೋದು. ಹೋಗಿ ನರಕದ ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿ ಬನ್ನಿ...’’</b></span><br />
<span style="color: blue; font-size: large;"><b>‘‘ಹೇ ರಾಮ್...ಮೊದಲು ನಾಥೂರಾಂ ಗೋಡ್ಸೆ ತನ್ನ ತಪ್ಪನ್ನು ಒಪ್ಪಿಕೊಳ್ಳಲಿ. ಅಂತರಂಗವನ್ನು ಶುಚಿಗೊಳಿಸಲಿ. ಅವನು ನನ್ನನ್ನು ಕೊಂದು ಹಾಕಿದ್ದಕ್ಕೆ ನನಗೆ ಬೇಸರವಿಲ್ಲ. ನನ್ನ ಆಲೋಚನೆಗಳನ್ನು ಕೊಂದು ಹಾಕಲು ಅವನಿಗೆ ಸಾಧ್ಯವಿಲ್ಲ. ನನ್ನ ಆಶ್ರಮದಲ್ಲಿ ಹಿಂಸೆಯನ್ನು ಮಾಡಿದ್ದಕ್ಕಾಗಿ ಮಾತ್ರ ನನಗೆ ದುಃಖವಿದೆ. ಆದುದರಿಂದ ಆ ಹಿಂಸೆಗಾಗಿ ಅವನು ಪಶ್ಚಾತಾಪ ಪಟ್ಟು ಮರಳಿದರೆ ನಾನು ಗೋಡ್ಸೆಯ ಜೊತೆಗೆ ಕೈ ಜೋಡಿಸಿ ನರಕದಲ್ಲಿರುವ ಬ್ರಾಹ್ಮಣರ ಅಗ್ರಹಾರವನ್ನು ಶುಚಿಗೊಳಿಸಲು ಸಿದ್ಧನಿದ್ದೇನೆ. ಭಾರತದಲ್ಲಿರುವ ದಲಿತರನ್ನು ಅತ್ಯಂತ ಹೀನಯವಾಗಿ ಶೋಷಣೆ ಮಾಡಿದವರಿಗಾಗಿ ಇರುವ ನರಕದ ಅತ್ಯಂತ ಕೊಳಚೆ ಪೀಡಿತವಾಗಿರುವ ಅಗ್ರಹಾರ ಅದು. ಮೊದಲು ಗೋಡ್ಸೆ ತನ್ನ ಮನಸ್ಸನ್ನು ಪರಿವರ್ತನೆಗೊಳಿಸಲಿ. ಅಂತರಂಗವನ್ನು ಸ್ವಚ್ಛಗೊಳಿಸಲು. ನಾವಿಬ್ಬರು ಜೊತೆಯಾಗಿ ನರ ದಲ್ಲಿರುವ ಅಗ್ರಹಾರಗಳನ್ನು ಶುಚಿಗೊಳಿಸಿ ಅದರಿಂದ ಅವರನ್ನು ಮುಕ್ತಗೊಳಿಸುವೆವು...’’</b></span><br />
<span style="color: blue; font-size: large;"><b>ಸ್ವರ್ಗದ ದೂತನಿಗೆ ನಗು ಬಂತು ‘‘ಬಾಪೂಜಿ. ಅವರಿಗೆ ನಿಮ್ಮ ಜೊತೆಗೆ ಒಂದು ಫೋಟೋ ಹೊಡೆಸಿಕೊಂಡು ಅದನ್ನು ಭೂಲೋಕಕ್ಕೆ ತುರ್ತಾಗಿ ಕಳುಹಿಸಬೇಕಾಗಿದೆಯಂತೆ. ಭಾರತದಲ್ಲೀಗ ನೀವು ಮತ್ತು ಗೋಡ್ಸೆ ಭಾಯಿ ಭಾಯಿ. ಎರಡು ಸಿದ್ದಾಂತಗಳ ನಡುವೆ ಒಂದು ಸೇತುವೆ ಕಟ್ಟುವ ಕೆಲಸ ನಡೆದಿದೆ...ನಿಮ್ಮ ಫೋಟೋ ಒಂದು ಇದ್ದರೆ ರಾಜಕೀಯವಾಗಿ ಅವರಿಗೆ ತುಂಬಾ ಲಾಭವಾಗುತ್ತದೆ...’’</b></span><br />
<span style="color: blue; font-size: large;"><b>‘‘ಹೇ ರಾಮ್...’’ ಗಾಂಧೀಜಿ ಮತ್ತೆ ನೊಂದು ಕೊಂಡರು. ‘‘ನರಕದಲ್ಲಿ ಇಷ್ಟು ಸಮಯ ನರಳಿ ದರೂ ಆತನ ಮನಸ್ಸು ಬದಲಾಗಲಿಲ್ಲ. ಬರೇ ಹಿಂಸೆಯ ಶಿಕ್ಷೆಯಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅವರನ್ನೆಲ್ಲ ನಾನು ಬದಲಾವಣೆ ಮಾಡುತ್ತೇನೆ ಎಂದು ಯಮರಾಜನ ಬಳಿ ಹೇಳಿದೆ. ಆದರೆ ಅದಕ್ಕೆ ಯಮರಾಜ ಒಪ್ಪಲಿಲ್ಲ...ಬರೇ ಅಹಿಂಸೆಯಿಂದ ಒಬ್ಬನನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಯಮರಾಜರು ತಿಳಿದಿದ್ದಾರೆ...ಇರಲಿ. ಭಾರತದಲ್ಲಿ ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್ ಮೊದಲಾದವರೆಲ್ಲ ಬೀದಿಯಲ್ಲಿ ಏನು ಮಾಡುತ್ತಿದ್ದಾರೆ...’’ ಬಾಪೂಜಿ ಕೇಳಿದರು.</b></span><br />
<span style="color: blue; font-size: large;"><b>‘‘ಅವರೆಲ್ಲ ಸ್ವಚ್ಛತಾ ಆಂದೋಲನದ ಪರವಾಗಿ ಫೋಟೋಗಳಿಗೆ ಭಂಗಿ ನೀಡುತ್ತಿದ್ದಾರೆ....’’ ದೂತ ಹೇಳಿದ.</b></span><br />
<span style="color: blue; font-size: large;"><b>‘‘ಅಂದರೆ...ಅವರೆಲ್ಲ ರಸ್ತೆ ಗುಡಿಸುತ್ತಾರೆಯೇ... ಭಾರತವನ್ನು ಸ್ವಚ್ಛಗೊಳಿಸುತ್ತಾರೆಯೆ?’’ ಬಾಪೂಜಿ ಆಸೆಯಿಂದ ಕೇಳಿದರು.</b></span><br />
<span style="color: blue; font-size: large;"><b>ದೂತ ನಕ್ಕ ‘‘ಬಾಪೂಜಿ, ಅವರೆಲ್ಲ ಇಡೀ ಭಾರತದ ಸಂಪನ್ಮೂಲವನ್ನು, ಬಡವರನ್ನು ಗುಡಿಸಿ ಸ್ವಚ್ಛಗೊಳಿಸುವ ಯೋಜನೆ ಹಾಕಿದ್ದಾರೆ. ಅದಕ್ಕಾಗಿ ಕೆಲವು ಸಂಚುಗಳನ್ನು ಹಾಕಿದ್ದಾರೆ. ಅದರ ಭಾಗವಾಗಿ ಈಗ ಗುಡಿಸುವ ನಾಟಕ ಮಾಡುತ್ತಿದ್ದಾರೆ...’’</b></span><br />
<span style="color: blue; font-size: large;"><b>‘‘ಆದರೆ ಮೋದಿಯವರು ಒಂದು ಬೀದಿಯನ್ನು ಗುಡಿಸುವ ಹಾಗೆ ಕಾಣುತ್ತಿದೆಯಲ್ಲ...’’ ಗಾಂಧಿ ಮೇಲಿ ನಿಂದಲೇ ದಿಲ್ಲಿಯ ಒಂದು ಬೀದಿಯನ್ನು ನೋಡುತ್ತಾ ಕೇಳಿದರು.</b></span><br />
<span style="color: blue; font-size: large;"><b> ‘‘ಅವರು ಗುಡಿಸುವುದಕ್ಕಾಗಿಯೇ ಅಲ್ಲಿ ವಿಶೇಷ ಕಸಗಳನ್ನು ತಂದು ಹಾಕಲಾಗಿದೆ ಬಾಪೂಜಿ. ಹಾಗೆಯೇ ಅವರಿಗಾಗಿ ವಿಶೇಷ ಕೈಗವಚ, ವಿಶೇಷ ಕಸಬರಿಕೆಗಳನ್ನು ಒದಗಿಸಲಾಗಿದೆ. ಟಿವಿಯವರಿಗಾಗಿ ಮತ್ತು ಪತ್ರಿಕೆ ಗಳಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ...’’</b></span><br />
<span style="color: blue; font-size: large;"><b> ‘‘ಆತ್ಮ ಪರಿವರ್ತನೆಯಾಗದೆ ಕೇವಲ ನಾಟಕಕ್ಕಾಗಿ ಈ ರೀತಿ ಮಾಡಿದರೆ ದೇಶ ಉದ್ಧಾರ ಸಾಧ್ಯವೆ...ಅದಿರಲಿ. ಗ್ರಾಮೀಣ ಪ್ರದೇಶದಲ್ಲಿರುವ ಭಂಗಿ ಸಮುದಾಯದ ಜನರು ಏನು ಮಾಡುತ್ತಿದ್ದಾರೆ...’’</b></span><br />
<span style="color: blue; font-size: large;"><b>‘‘ಅವರಿನ್ನೂ ಮಲ ಹೊರುತ್ತಲೇ ಇದ್ದಾರೆ. ರಸ್ತೆ ಗುಡಿಸುತ್ತಲೇ ಇದ್ದಾರೆ...’’ ದೂತ ಹೇಳಿದ.</b></span><br />
<span style="color: blue; font-size: large;"><b>‘‘ನಿಜಕ್ಕೂ ಈ ದೇಶವನ್ನು ಸ್ವಚ್ಛಗೊಳಿಸುತ್ತಿರುವವರು ಅವರಲ್ಲವೆ? ಅವರ ಚಿತ್ರಗಳನ್ನು ಯಾಕೆ ಪತ್ರಿಕೆಗಳು ಹಾಕುತ್ತಿಲ್ಲ...?’’ ಗಾಂಧೀಜಿ ಅಚ್ಚರಿಯಿಂದ ಕೇಳಿದರು.</b></span><br />
<span style="color: blue; font-size: large;"><b> ‘‘ಅಯ್ಯೋ...ಇವರೆಲ್ಲ ಸೇರಿ ಅಕ್ಟೋಬರ್ 2ನ್ನು ಯಾಕೆ ಇಷ್ಟು ಕ್ರೂರವಾಗಿ ಆಚರಿಸುತ್ತಿದ್ದಾರೆ. ನನ್ನನ್ನು ಒಂದು ಬಾರಿ ಗೋಡ್ಸೆ ಕೊಂದು ಮುಗಿಸಿದ್ದಾನೆ. ಆದರೆ ಇವರೆಲ್ಲ ಮತ್ತೆ ಮತ್ತೆ ಕೊಂದು ಹಾಕಲು ಅಕ್ಟೋಬರ್ 2ನ್ನು ಬಳಸುತ್ತಿದ್ದಾರಲ್ಲ...’’ ಎಂದು ಗಾಂಧೀಜಿ ಸ್ವರ್ಗದಲ್ಲಿರುವ ತನ್ನ ಆಶ್ರಮದ ನೆಲದಲ್ಲಿ ಕುಸಿದು ಬಿದ್ದರು. ಅಷ್ಟರಲ್ಲಿ ಅವರ ಕೋಣೆಯ ಟಿವಿಯನ್ನು ದೂತ ಆನ್ ಮಾಡಿದ. ಅದರಲ್ಲಿ ಗೋಡ್ಸೆ ವರದಿಯನ್ನು ಬಿತ್ತರಿಸುತ್ತಿದ್ದ. ‘‘ಇದೀಗ ಬೆಳಗ್ಗೆ ಗಾಂಧಿಜಯಂತಿ ಕಾರ್ಯಕ್ರಮ ನರಕದಲ್ಲಿ ಯಶಸ್ವಿಯಾಗಿ ನಡೆಯಿತು. ನರಕದಲ್ಲಿರುವ ಶೋಷಿತ ಸಮುದಾಯವಾಗಿರುವ ಬ್ರಾಹ್ಮಣ ಅಗ್ರಹಾರವನ್ನು ಸ್ವಚ್ಛತಾ ಆಂದೋಲನದ ಪರವಾಗಿ ಗುಡಿಸುವ ಕಾರ್ಯಕ್ರಮ ಜರಗುತ್ತಿದೆ. ಈ ಸ್ವಚ್ಛತಾ ಆಂದೋಲನದಲ್ಲಿ ಹೆಡಗೇವಾರ್, ಗೋಲ್ವಾಲ್ಕರ್ ಅವರು ಭಾಗವಹಿಸಿದ್ದಾರೆ. ಕಾರ್ಯಕ್ರಮವನ್ನು ಮಹಾತ್ಮಗಾಂಧೀಜಿಯವರೇ ಖುದ್ದಾಗಿ ಬಂದು ಉದ್ಘಾಟಿಸುವುದರಲ್ಲಿದ್ದರು. ಆದರೆ ತುರ್ತಾಗಿ ನೆಹರೂ ಅವರ ಜೊತೆಗೆ ಮೀಟಿಂಗ್ ಇದ್ದುದರಿಂದ ಅವರು ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಪ್ಪಟ ಗಾಂಧೀವಾದಿಯಾಗಿರುವ ಗೋಲ್ವಾಲ್ಕರ್ ಅವರು ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿದರು. ಈ ಸ್ವಚ್ಛತಾ ಆಂದೋಲನದಲ್ಲಿ ಸಿಖ್ ಮುಖಂಡರಾಗಿರುವ ಬಿಂದ್ರನ್ವಾಲೆ ಕೂಡ ಭಾಗವಹಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದ ಉಸಾಮಬಿನ್ ಲಾದೆನ್ ಅವರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ್ದಾರೆ. ಕ್ಯಾಮರಾಮೇನ್ ಸಾವರ್ಕರ್ ಜೊತೆಗೆ ನಾಥೂರಾಂ ಗೋಡ್ಸೆ....ನರಕದಿಂದ...’’</b></span><br />
<span style="color: blue; font-size: large;"><b>ಅಷ್ಟರಲ್ಲಿ ಪತ್ರಕರ್ತ ಎಂಜಲು ಕಾಸಿಗೆ ಎಚ್ಚರ ವಾಯಿತು. ತಾನು ಈವರೆಗೆ ನೋಡಿದ್ದು ವಾಸ್ತವವೋ, ಕನಸೋ ಎಂಬ ಗೊಂದಲ ಇನ್ನೂ ಅವನೊಳಗಿತ್ತು. ಟಿವಿ ಆನ್ ಮಾಡಿದ.ನೋಡಿದರೆ ಅದರಲ್ಲಿ ‘‘ಸಚಿನ್, ಅನಿಲ್ ಅಂಬಾನಿ ಮೊದಲಾದವರೆಲ್ಲ ಕಸ ಗುಡಿಸುವ ವರದಿ’’ ಬಿತ್ತರವಾಗುತ್ತಿತ್ತು. </b></span><br />
<span style="color: purple; font-size: large;"><b>ಅಕ್ಟೋಬರ್ -18-2014</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-54227392528642725172015-03-29T02:58:00.002-07:002015-03-29T02:58:40.161-07:00ಅಂಬಾನೀಜಿ ಕಂಹಾಹೇ.. ಅದಾನಿಜೀ ಕಂಹಾಹೇ...!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-BAfXrbkov_E/VRfMvWIfDhI/AAAAAAAAAMo/C_WQt4UN_BU/s1600/amit-shah.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-BAfXrbkov_E/VRfMvWIfDhI/AAAAAAAAAMo/C_WQt4UN_BU/s1600/amit-shah.jpg" height="282" width="320" /></a></div>
<b style="color: purple; font-size: x-large;">ನರೇಂದ್ರ ಮೋದಿ ಧರಿಸಿದ ಲಕ್ಷಾಂತರ ಬೆಲೆಯ ಸೂಟು ಕೋಟ್ಯಂತರ ಬೆಲೆಗೆ ಹರಾಜಾದ ಹಿನ್ನೆಲೆಯಲ್ಲಿ ರವಿವಾರ - ಫೆಬ್ರವರಿ -22-2015 ರ ವಾರ್ತಾ ಭಾರತಿ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ. </b><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಹರಾಜು...ಹರಾಜು...ಹರಾಜು...</b></span><br />
<span style="color: blue; font-size: large;"><b>ದೇಶದಲ್ಲೆಲ್ಲ ಹರಾಜಿನದ್ದೇ ಸುದ್ದಿ. ಬೆಳಗ್ಗೆ ಸುದ್ದಿಯ ವಾಸನೆ ಹಿಡಿದು ಓಡಾಡುತ್ತಿದ್ದ ಎಂಜಲು ಕಾಸಿಗೆ ಈ ಹರಾಜು ಸುದ್ದಿ ಕೇಳಿ ಅಚ್ಚರಿಯಾಯಿತು. ಅರೆ! ಈ ದೇಶದಲ್ಲಿ ಯಾವುದನ್ನು ಹರಾಜಿಗಿಟ್ಟಿದ್ದಾರೆ?</b></span><br />
<span style="color: blue; font-size: large;"><b>ಗಾಂಧಿಯನ್ನು ಹರಾಜಿಗಿಟ್ಟಾಯಿತು. ನೆಹರೂವನ್ನು ಹರಾಜಿಗಿಟ್ಟಾಯಿತು. ನೇತಾಜಿಯನ್ನು ಹರಾಜಿಗಿಟ್ಟಾಯಿತು. ವಿವೇಕಾನಂದರನ್ನು ಹರಾಜಿಗಿಟ್ಟಾಯಿತು. ದೇಶದ ನ್ಯಾಯಾಲಯವನ್ನು ಹರಾಜು ಕೂಗಿದ್ದಾಯಿತು. ರಕ್ಷಣಾ ಇಲಾಖೆ, ಕೃಷಿ, ಚಿಲ್ಲರೆ ಅಂಗಡಿಗಳು ಎಲ್ಲವನ್ನೂ ವಿದೇಶಿಯರಿಗೆ ಹರಾಜು ಹಾಕಿ ಪ್ರಧಾನಿ ಮೋದಿಯವರು ದೇಶವನ್ನು ಶ್ರೀಮಂತಗೊಳಿಸಿರುವಾಗ ಇನ್ನು ಈ ದೇಶದಲ್ಲಿ ಹರಾಜಿಗೆ ಉಳಿದಿರುವುದಾದರೂ ಏನು ಎನ್ನುವ ಸಮಸ್ಯೆ ಎಂಜಲು ಕಾಸಿಯನ್ನು ಕಾಡತೊಡಗಿತು. ಕುತೂಹಲದಿಂದ ಕಿವಿ ನಿಮಿರಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಧರಿಸಿರುವ ಕೋಟು ಕೋಟ್ಯಂತರ ರೂಪಾಯಿಗೆ ಹರಾಜಾಗುತ್ತಿರುವುದು ಗೊತ್ತಾಗಿಬಿಟ್ಟಿತು. ಇಡೀ ದೇಶ ಆ ಕೋಟಿಗಾಗಿ ಹರಾಜು ನಿಂತಿರುವುದಾಗಿ ಟಿವಿ ವಾಹಿನಿಯೊಂದು ಒದರುತ್ತಿತ್ತು. ಕಾಸಿ ತಾನು ಧರಿಸಿದ ಹಳೆಯ ತೇಪೆ ಹಾಕಿದ ಜುಬ್ಬಾವನ್ನೊಮ್ಮೆ ನೋಡಿ ನಿಟ್ಟುಸಿರಿಟ್ಟ. ಸರಿ. ಆದದ್ದಾಗಲಿ ಎಂದು ನೇರವಾಗಿ ಹರಾಜು ನಡೆಯುವಲ್ಲಿಗೇ ಹೋದ. ನೋಡಿದರೆ ಭಾರೀ ದೊಡ್ಡ ಸಂತೆ. ಸಂತೆಯ ಮಧ್ಯೆ ನಿಂತು ಅಮಿತ್ ಶಾ ಮೋದಿಯನ್ನು ಕೋಟನ್ನು ಹಿಡಿದುಕೊಂಡು ಹರಾಜು ಕೂಗುತ್ತಿದ್ದಾರೆ.</b></span><br />
<span style="color: blue; font-size: large;"><b>‘‘ಆಯಿಯೇ...ಆಯಿಯೇ...ಇದು ದೇಶದ ಅತ್ಯಂತ ಆತ್ಮಾಭಿಮಾನದ ಕೋಟು. ಸ್ವತಃ ಅಮೆರಿಕದ ಒಬಾಮ ಅವರು ಇದನ್ನು ಅಪ್ಪಿಕೊಂಡಿದ್ದು, ಅವರ ಬೆವರಿನ ವಾಸನೆ ಇನ್ನೂ ಹಾಗೇ ಘಮಘಮಿಸುತ್ತಿದೆ...ಹರಾಜು ಕೂಗಿ...ದೇಶದ ಮಾನ ಉಳಿಸಿ...ದೇಶದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಿ...ನಿಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಿ...’’</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಸೇರಿದ ಜನರೆಲ್ಲ ತಮ್ಮ ತಮ್ಮ ಭೂಮಿಯನ್ನು, ಗೂಡಂಗಡಿಗಳನ್ನು, ಕಾಡನ್ನು, ನದಿಯನ್ನು, ಕಡಲನ್ನು ಒತ್ತೆಯಿಟ್ಟು ನರೇಂದ್ರ ಮೋದಿಯ ಕೋಟಿಗೆ ಹರಾಜು ಕೂಗುತ್ತಿದ್ದರು. ಅದೆಷ್ಟು ಸಂಪತ್ತು ತಂದು ಸುರಿದರೂ ನರೇಂದ್ರ ಮೋದಿಯ ಕೋಟಿನ ಬೆಲೆಗೆ ಅದು ಸಮಗಟ್ಟುತ್ತಿಲ್ಲ. ರೈತರ ಪತ್ನಿಯರೆಲ್ಲ ತಮ್ಮ ಕೊರಳಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಅಮಿತ್ ಶಾಗೆ ಕೊಟ್ಟರು. ಎಲ್ಲವನ್ನೂ ಕಿತ್ತು ಕಿತ್ತು ಅಮಿತ್ ಶಾ ತಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದರು. ಆದರೂ ಕೋಟಿನ ಬೆಲೆ ಏರುತ್ತಲೇ ಇತ್ತು. ಅಮಿತ್ ಷಾ ಮತ್ತೆ ಘೋಷಣೆ ಕೂಗತೊಡಗಿದರು ‘‘ಈ ಕೋಟು ಭಾರತದ ಆತ್ಮಾಭಿಮಾನದ ಸಂಕೇತ...ಬನ್ನಿ...ಇದನ್ನು ಕೊಂಡುಕೊಳ್ಳಿ...ಹರಾಜು ಕೂಗಿ...ಇಂದು ಈ ದೇಶದ ಮಾನವನ್ನು ಕಾಪಾಡಬೇಕಾದರೆ ಈ ಕೋಟು ಅತ್ಯಗತ್ಯ. ನಿಮ್ಮ ಮಾನ ಮಾತ್ರ ಅಲ್ಲ...ಪ್ರಾಣವನ್ನೂ ತೆತ್ತು ಹರಾಜು ಕೂಗಿ....’’</b></span><br />
<span style="color: blue; font-size: large;"><b>ಎಂದದ್ದೇ ತಡ...ದೇಶದ ಹಲವೆಡೆ ಕೋಮುಗಲಭೆಗಳನ್ನು ನಡೆಸಿ ತಲೆಬುರುಡೆಗಳನ್ನು ರಾಶಿರಾಶಿಯಾಗಿ ಅಮಿತ್ ಶಾ ಮುಂದೆ ಸುರಿಯಲಾಯಿತು. ಆದರೂ ಕೋಟಿನ ಬೆಲೆ ಸರಿಗಟ್ಟಲಾಗುತ್ತಿಲ್ಲ. ನೂರಾರು ಮನೆಗಳಿಗೆ ಬೆಂಕಿ ಹಚ್ಚಿ, ಅದರ ಬೂದಿಯನ್ನು ತಂದು ಅಮಿತ್ ಶಾ ಮುಂದೆ ನೀಡಲಾಯಿತು. ಊಹೂಂ...ಅದೇನಿದ್ದರೂ ಕೋಟಿನ ಬೆಲೆಯನ್ನು ಸರಿಗಟ್ಟಲಾಗುವುದಿಲ್ಲ. ವಲ್ಲಭಭಾಯಿ ಪಟೇಲ್ ಪ್ರತಿಮೆಗೆಂದು ತಂದ ಕಬ್ಬಿಣವನ್ನೆಲ್ಲ ಅಲ್ಲಿ ಸುರಿಯಲಾಯಿತು. ಎಲ್ಲವೂ ಕೋಟಿನ ಮುಂದೆ ನಗಣ್ಯವಾದವು. ಈ ದೇಶದ ಅದಿರುಗಳನ್ನು, ಹಸಿರುಗಳನ್ನು, ಮರಳುಗಳನ್ನು...ಹೀಗೆ ಯಾವುದಕ್ಕೂ ನರೇಂದ್ರ ಮೋದಿಯವರ ಸೂಟು ಸರಿಗಟ್ಟುತ್ತಿಲ್ಲ.</b></span><br />
<span style="color: blue; font-size: large;"><b>ಅಷ್ಟರಲ್ಲಿ ಅಲ್ಲಿಗೆ ಅಂಬಾನಿ, ಅದಾನಿಗಳಾದಿಯಾಗಿ ನಿಜ ದೇಶಭಕ್ತರ ಪ್ರವೇಶವಾಯಿತು. ನರೇಂದ್ರ ಮೋದಿಯವರ ಸೂಟಿಗೆ ಸರಿಯಾದ ಬೆಲೆ ನೀಡುವವರಿಲ್ಲದೆ ದೇಶದ ಮಾನ ಹರಾಜಾಗುತ್ತಿರುವುದನ್ನು ಕಂಡು ತಕ್ಷಣ ಅವರು ಮಧ್ಯೆ ಪ್ರವೇಶಿಸಿದರು. ಅಂಬಾನಿ, ಅದಾನಿ ಸೂಟಿನ ಮೇಲೆ ಕೈ ಸ್ಪರ್ಶ ಮಾಡಿದ್ದೇ ಸೂಟು ಧನ್ಯವಾಯಿತು. ತಕ್ಷಣ ಅಮಿತ್ ಷಾ ಅವರು ಸೂಟಿಗಾಗಿ ದೇಶದ ಜನರು ಕೊಟ್ಟ ಎಲ್ಲ ಸಂಪತ್ತನ್ನು ಅಂಬಾನಿ, ಅದಾನಿಯಾದಿಗಳಿಗೆ ಒಪ್ಪಿಸಿ, ಸೂಟಿನ ಮರ್ಯಾದೆ ಉಳಿಸಿದ್ದಕ್ಕೆ ಅವರಿಗೆ ಉದ್ದಂಡ ನಮಸ್ಕಾರ ಹಾಕಿದರು.</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>ಮೇಲಿನ ಎಲ್ಲ ದೃಶ್ಯಗಳನ್ನು ನೋಡಿದ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ನೇರವಾಗಿ ಅಮಿತ್ ಷಾ ಬಳಿಗೆ ಹಾರಿದ. ‘‘ಸಾರ್...ಇನ್ನು ಹರಾಜು ಹಾಕುವುದಕ್ಕೆ ಬೇರೇನೇನು ಇದೆ...’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>ಅಮಿತ್ ಶಾ ಅವರು ತಮ್ಮ ಗಡ್ಡ ನೇವರಿಸುತ್ತಾ ಹೇಳಿದರು ‘‘ನೋಡ್ರಿ...ನಾವು ಗಾಂಧಿಯ ಚರಕವನ್ನು ಹರಾಜು ಹಾಕಿದೆವು. ಆದರೆ ಅದು ಒಂದು ರೂಪಾಯಿಯೂ ಬೆಲೆ ಬಾಳಲಿಲ್ಲ. ದೇಶ ಸಂಕಷ್ಟದಲ್ಲಿದೆ ಎಂದು ವಲ್ಲಭಭಾಯಿ, ವಿವೇಕಾನಂದರನ್ನೂ ಹರಾಜು ಹಾಕಿದೆವು. ಆದರೂ ವಿಶೇಷ ಬೆಲೆ ದಕ್ಕಲಿಲ್ಲ. ದೇಶದ ಅಭಿವೃದ್ಧಿಗೆ ದುಡ್ಡು ಸಾಲುವುದಿಲ್ಲ ಎಂದು ನಮ್ಮ ಸಂವಿಧಾನ, ನ್ಯಾಯಾಂಗ, ರಕ್ಷಣಾ ಇಲಾಖೆ ಎಲ್ಲವನ್ನೂ ಹರಾಜು ಹಾಕಿದೆವು. ಆದರೂ ದೇಶವನ್ನು ಅಭಿವೃದ್ಧಿಗೊಳಿಸಲು ಬೇಕಾದಷ್ಟು ದುಡ್ಡು ನಮಗೆ ಸಿಗಲಿಲ್ಲ. ಇದೀಗ ನರೇಂದ್ರ ಮೋದಿಯವರು ತಮ್ಮ ದೇಶಕ್ಕಾಗಿ ತಾವು ಧರಿಸಿದ ಕೋಟನ್ನೇ ಹರಾಜು ಹಾಕಿದ್ದಾರೆ...ಇದೀಗ ಇದಕ್ಕೆ ಭಾರೀ ಬೆಲೆ ಬಂದಿದೆ. ಇದರಿಂದಾಗಿ ನಮ್ಮ ಅಂಬಾನಿ, ಅದಾನಿ ಮೊದಲಾದವರು ಸಂತೋಷಗೊಂಡಿದ್ದಾರೆ. ದೇಶದ ಜನರು ತಮ್ಮ ತಮ್ಮ ಸಂಪತ್ತು, ಸೊತ್ತುಗಳನ್ನು ಈ ಸೂಟಿಗಾಗಿ ಒಪ್ಪಿಸಿರುವುದು ಅಂಬಾನಿಯವರಿಗೆ ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯವರು ಹಾಕಿದ ಇತರ ವಸ್ತ್ರ ಗಳನ್ನೂ ಹರಾಜು ಹಾಕಲಿದ್ದೇವೆ...’’</b></span><br />
<span style="color: blue; font-size: large;"><b><br /></b></span>
<span style="color: blue; font-size: large;"><b>‘‘ಅಂದರೆ ಮೋದಿಯವರು ಇನ್ನು ಮುಂದೆ ವಸ್ತ್ರ ವಿಲ್ಲದೆಯೇ ವಿದೇಶ ಪ್ರಯಾಣ ಮಾಡಲಿದ್ದಾರೆಯೇ?’’ ಕಾಸಿ ಆತಂಕದಿಂದ ಕೇಳಿದ. ‘‘ಅವರಿಗೆ ವಸ್ತ್ರ ದ ಅಗತ್ಯವೇನೂ ಇಲ್ಲ. ಆದರೂ ಅವರು ಧರಿಸಿ ಎಸೆದ ವಸ್ತ್ರಗಳಿಗೆ ದೇಶವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹರಾಜಿನಲ್ಲಿ ಅದು ಕೋಟಿಗಟ್ಟಲೆ ಬೆಲೆಬಾಳುತ್ತದೆ. ಇದರಿಂದಾಗಿ ದೇಶ ಆರ್ಥಿಕವಾಗಿ ಅಭಿವೃದ್ಧಿಗೊಳ್ಳುತ್ತದೆ. ದೇಶವನ್ನು ಆರ್ಥಿಕವಾಗಿ ಬಲಗೊಳಿಸುವುದಕ್ಕಾಗಿ ನರೇಂದ್ರ ಮೋದಿಜಿ ಬಟ್ಟೆ ಧರಿಸುತ್ತಾರೆ. ಇನ್ನು ಮುಂದೆ ನರೇಂದ್ರ ಮೋದಿಯವರು ಧರಿಸಿ ಎಸೆದ ಬಟ್ಟೆಗಳನ್ನು ಹರಾಜು ಮಾಡಲಾಗುತ್ತದೆ. ಈ ಮೂಲಕ ದೇಶವನ್ನು ಆರ್ಥಿಕವಾಗಿ ಮೇಲೆತ್ತುವ ಯೋಜನೆಯನ್ನು ಹಾಕಿಕೊಂಡಿದ್ದೇವೆ...’’</b></span><br />
<span style="color: blue; font-size: large;"><b>‘‘ಮುಂದೆ ಮೋದಿಯ ಯಾವ್ಯಾವ ರಿಸುಗಳನ್ನು ಹರಾಜು ಹಾಕಲಿದ್ದೀರಿ ಸಾರ್...’’ ಕಾಸಿ ಕೇಳಿದ.</b></span><br />
<span style="color: blue; font-size: large;"><b>‘‘ಮುಖ್ಯವಾಗಿ ಅವರ ಒಳಚೆಡ್ಡಿ ಮತ್ತು ಒಳಅಂಗಿಗಳಿಗೂ ಭಾರೀ ಬೇಡಿಕೆ ಇದೆ. ಅವರ ಒಳಚೆಡ್ಡಿ ಪುರಾತನ ಕಾಲದಲ್ಲಿ ಆರೆಸ್ಸೆಸ್ ಶಾಖೆಯಲ್ಲಿ ಧರಿಸಿರುವುದರಿಂದ ಅದು ಒಳಗೇ ಬಲವಾಗಿ ಅಂಟಿಕೊಂಡಿರುವ ಸಾಧ್ಯತೆ ಇದೆ. ಶಸಚಿಕಿತ್ಸೆಯ ಮೂಲಕ ಅವರ ದೇಹದಿಂದ ಅವರ ಒಳಚೆಡ್ಡಿಯನ್ನು ಬೇರ್ಪಡಿಸಿ ಅದನ್ನು ಹರಾಜು ಹಾಕಬೇಕು ಎಂದಿದ್ದೇವೆ...ಹಾಗೆಯೇ ಅವರು ಧರಿಸಿರುವ ಕೌಪೀನಕ್ಕೆ ಅಮೆರಿಕದ ಎನ್ಆರ್ಐಗಳು ಭಾರೀ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಅದನ್ನು ಹರಾಜಿನಲ್ಲಿ ಕೊಂಡು ದೇಶವನ್ನು ಉದ್ಧರಿಸುವ ಮಹಾ ಕನಸನ್ನು ಅವರು ಹೊಂದಿದ್ದಾರೆ....’’</b></span><br />
<span style="color: blue; font-size: large;"><b>ಅಷ್ಟರಲ್ಲಿ ಯಾರೋ ಒಂದು ಕೆಂಪು ಬಟ್ಟೆಯನ್ನು ಹಿಡಿದುಕೊಂಡು ಬಂದರು ‘‘ನೋಡಿ...ಇಲ್ಲಿ ಮೋದಿಯವರ ಕುರ್ಚಿಯನ್ನು ಒರೆಸುವ ಬಟ್ಟೆ ಇದೆ...ಇದನ್ನು ಹರಾಜು ಹಾಕಿ ಬಿಡಿ...’’</b></span><br />
<span style="color: blue; font-size: large;"><b>ಆ ಬಟ್ಟೆ ಕೆಂಪಗಿತ್ತು. ಅಮಿತ್ ಶಾ ಅದನ್ನು ಮೂಸಿ ನೋಡಿದರು ‘‘ಈ ಬಟ್ಟೆ ರಕ್ತದ ಪರಿಮಳ ಬರುತ್ತಿದೆಯಲ್ಲ...’’ ಎಂದು ಬಟ್ಟೆ ತಂದುಕೊಟ್ಟವನ ಮುಖ ನೋಡಿದರು.</b></span><br />
<span style="color: blue; font-size: large;"><b> ನೋಡಿದರೆ ಆಮ್ ಆದ್ಮಿ ನಾಯಕ ಕೇಜ್ರಿವಾಲ್. ‘‘ಅದು ಗುಜರಾತ್ ಹತ್ಯಾಕಾಂಡದ ರಕ್ತ. ಅವರು ಕುಳಿತ ಕುರ್ಚಿಯಲ್ಲಿ ಅಂಟಿದ್ದ ರಕ್ತವನ್ನು ಶುಚಿ ಮಾಡಿದ ಬಟ್ಟೆ ಇದು...’’ ಎನ್ನುತ್ತಾ ಕೇಜ್ರಿವಾಲ್ ಹಲ್ಲು ಕಿರಿದರು.</b></span><br />
<span style="color: blue; font-size: large;"><b>ಭೂತವನ್ನು ಕಂಡವರಂತೆ ಅಮಿತ್ ಶಾ ಕೈಯಲ್ಲಿದ್ದ ಕೆಂಪು ಬಟ್ಟೆಯನ್ನು ಎಸೆದವರೇ ‘‘ಅಂಬಾನೀಜಿ ಕಂಹಾಹೇ... ಅಧಾನಿಜೀ ಕಂಹಾಹೇ...’’ ಎನ್ನುತ್ತಾ ಸಂತೆಯಲ್ಲಿ ಹುಡುಕ ತೊಡಗಿದರು.</b></span><br />
<span style="color: purple; font-size: large;"><b>ರವಿವಾರ - ಫೆಬ್ರವರಿ -22-2015</b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-25156475980095701702014-05-25T02:19:00.001-07:002014-05-25T02:19:11.003-07:00 ಕಾಂಗ್ರೆಸ್ ಆತ್ಮ ಎಲ್ಲಿದೆ? ಹುಡುಕಿ ಕೊಡಿ!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-oQrpQKpg9F0/U4G1ZJ6MFyI/AAAAAAAAALk/kUWtJDGgblw/s1600/sonia.jpg" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-oQrpQKpg9F0/U4G1ZJ6MFyI/AAAAAAAAALk/kUWtJDGgblw/s1600/sonia.jpg" /></a></div>
<span style="font-size: large;"><b><span style="color: blue;"><span style="color: purple;">ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ರವಿವಾರ ಮೇ ೨೫ ರಂದು ಪ್ರಕಟವಾದ ಬುಡಬುಡಿಕೆ </span><br /><br />ದಿಲ್ಲಿ ಕಾಂಗ್ರೆಸ್ನೊಳಗೆ ಕಲರವ. ಸೋತ ಸಂಭ್ರಮವನ್ನು ಆಚರಿಸಿಕೊಳ್ಳಲು ‘ಆತ್ಮಾವಲೋಕನ ಸಭೆ’ಯನ್ನು ಸೋನಿಯಾಗಾಂಧಿ ಕರೆದಿರುವುದು ಗೊತ್ತಾಗಿ, ಮೇಡಂ ಅವರ ಪ್ರಮಾಣ ವಚನ ಸಭೆಯೋ ಎಂಬಂತೆ ಸೋತ ಕಾಂಗ್ರೆಸ್ ಮುಖಂಡರೆಲ್ಲ ಮೀಸೆಯ ಮಣ್ಣನ್ನು ಕೊಡವಿಕೊಂಡು ಸಭೆಗೆ ಹಾಜರಾದರು. ‘ಬಹುಶಃ 50 ಸೀಟ್ ಸಿಕ್ಕಿದ ಸಂಭ್ರಮವನ್ನು ಆಚರಿಸಿಕೊಳ್ಳಲು ನಮ್ಮನ್ನು ಕರೆದಿರಬಹುದು’’ ಎಂದು ದಿಗ್ಗಿ, ಕಪಿಲ್, ಅಝಾದ್ ಮೊದಲಾದವರೆಲ್ಲ ಗರಿಗರಿ ಖಾದಿಯನ್ನು ತೊಟ್ಟು ಹಾಜರಾಗಿದ್ದರು. ರಾಹುಲ್ ಅಂತೂ ಫಲಿತಾಂಶದಿಂದ ರೋಮಾಂಚನಗೊಂಡಿದ್ದರು. ಇಷ್ಟು ಸ್ಥಾನಗಳಾದರೂ ಸಿಕ್ಕಿದೆ ಎಂದರೆ ಅದರ ಅರ್ಥ ಇನ್ನೂ ನಮ್ಮ ಮೇಲೆ ನಂಬಿಕೆ ಉಳಿಸಿಕೊಂಡಿದ್ದಾರೆ ಎಂದಲ್ಲವೆ? ಇದನ್ನು ನಾವು ಆಚರಿಸಬೇಕು. ಈ ಆಚರಣೆಗಾಗಿ ಅಮೆರಿಕ, ಲಂಡನ್, ಜರ್ಮನ್, ಫ್ರಾನ್ಸ್ ಪ್ರಧಾನಿಗಳಿಗೆ ಆಹ್ವಾನ ನೀಡಬೇಕು ಎಂದು ತಾಯಿಗೆ ಸಲಹೆ ನೀಡಿದ್ದ. ‘‘ಸುಮ್ಮನೆ ಹಿತ್ತಲಲ್ಲಿ ಹೋಗಿ ಆಟ ಆಡ್ಕೊಂಡಿರು. ಕಿರಿ ಕಿರಿ ಮಾಡ್ಬೇಡ...’’ ಎಂದು ಸೋನಿಯಾ ಮಗನ ತಲೆಗೆ ಎರಡು ಮೊಟಕಿದ್ದರು. ಆಟ ಆಡಲು ಕಾಂಗ್ರೆಸ್ನ್ನು ಕೊಡಬಾರದಿತ್ತು...ಎಲ್ಲವನ್ನೂ ಮುರಿದಿಕ್ಕಿದ್ದಾನೆ ಎಂದು ಸೋನಿಯಾ ಗೊಣಗಿದರು.<br />ಅಂತೂ ಆತ್ಮಾವಲೋಕನ ಸಭೆ ಆರಂಭವಾಯಿತು. ಅಷ್ಟರಲ್ಲಿ ಸೋನಿಯಾಗಾಂಧಿ ಮಾತು ಆರಂಭಿಸಿದರು ‘‘ಕಾಂಗ್ರೆಸ್ ತನ್ನ ಸೋಲಿನ ಕುರಿತಂತೆ ಆತ್ಮ ಅವಲೋಕನ ಮಾಡಲು ಈ ಸಭೆಯನ್ನು ಕರೆದಿದೆ...ಮೊತ್ತ ಮೊದಲು ನಾವು ಕಾಂಗ್ರೆಸ್ನ ಆತ್ಮವನ್ನು ಅವಲೋಕನ ಮಾಡಬೇಕು... ಮಿ. ದ್ವಿಗ್ವಿಜಯ್ ಸಿಂಗ್...ಎಲ್ಲಿದೆ ಕಾಂಗ್ರೆಸ್ನ ಆತ್ಮ. ಅದನ್ನು ಸಭೆಯ ಮುಂದೆ ತನ್ನಿ...’’<br />ಆಗಷ್ಟೇ ಹನಿಮೂನ್ ಮುಗಿಸಿಕೊಂಡು ಬಂದಿದ್ದ ದಿಗ್ವಿಜಯ್ ಕಂಗಾಲಾದರು. ‘‘ಆತ್ಮ...ಅದೂ ಅದೂ...ನಾನು ಕಾಂಗ್ರೆಸ್ಗೆ ಕಾಲಿಡುವಾಗಲೇ ಅದನ್ನು ರಾಜೀವ್ಗಾಂಧಿಯವರ ಕೈಗೆ ಕೊಟ್ಟಿದ್ದೆ. ಅದು ನಿಮ್ಮ ತಿಜೋರಿಯಲ್ಲಿ ಭದ್ರವಾಗಿರಬೇಕು...’’<br />ಸೋನಿಯಾ ಮೇಡಂ ಸಿಟ್ಟಾದರು ‘‘ನಾನು ಕೇಳುತ್ತಾ ಇರುವುದು ನಿಮ್ಮ ಮೆದುಳಿನ ಬಗ್ಗೆ ಅಲ್ಲ. ಕಾಂಗ್ರೆಸ್ನ ಆತ್ಮ ಎಲ್ಲಿದೆ ಎಂದು ಕೇಳುತ್ತಿದ್ದೇನೆ. ತಿಜೋರಿಯಲ್ಲಿರುವುದು ನಿಮ್ಮ ಮೆದುಳು ಮಾತ್ರ. ಇಡೀ ಕಾಂಗ್ರೆಸ್ ಮುಖಂಡರ ಮೆದುಳು ನನ್ನ ತಿಜೋರಿಯಲ್ಲಿ ಭದ್ರವಾಗಿದೆ. ಕಾಂಗ್ರೆಸ್ನ ಆತ್ಮ ಎಲ್ಲಿದೆ? ರಾಹುಲ್ನ ಕೈಗೆ ಸಿಗದ ಹಾಗೆ ಜಾಗೃತೆಯಾಗಿ ಇಟ್ಟುಕೊಳ್ಳಿ ಎಂದು ಕೊಟ್ಟಿದ್ದೆನಲ್ಲ...ಇದೀಗ ನೋಡಿ...ಆತ್ಮಾವಲೋಕನ ಮಾಡಲು ಕರೆದ ಸಭೆಯಲ್ಲಿ ಕಾಂಗ್ರೆಸ್ನ ಆತ್ಮವೇ ಕಾಣುತ್ತಿಲ್ಲ....ಆತ್ಮ ಇಲ್ಲದೆ ಆತ್ಮಾವಲೋಕನ ನಡೆಸುವುದು ಹೇಗೆ?’’<br />‘‘ಮೇಡಂ...ನನಗೆ ವೀರಪ್ಪ ಮೊಯ್ಲಿಯವರ ಮೇಲೆಯೇ ಡೌಟು. ಕಾಂಗ್ರೆಸ್ನ ಆತ್ಮವನ್ನು ಅಂಬಾನಿಗೆ ಮಾರಿ ಅವರು ಚಿಕ್ಕಬಳ್ಳಾಪುರದಲ್ಲಿ ಗೆದ್ದದ್ದು ಅಂತ ನನ್ನ ಗೂಢಚಾರರು ಹೇಳಿದ್ದಾರೆ...’’<br />‘‘ನೀವು ಯಾರು? ಯಾವ ಲೋಕಸಭೆಯ ಎಂಪಿ ನೀವು?’’<br />‘‘ಅದೇ ಮೇಡಂ...ಎರಡು ಲಕ್ಷ ಓಟಿನಲ್ಲಿ ಸೋಲಿಸಿದ್ದು...’’<br />‘‘ಎರಡು ಲಕ್ಷ ಅಂತರದಲ್ಲಿ ಸೋಲಿಸಿದ್ದೇ...ಯಾರನ್ನು ಎಲ್ಲಿ?’’<br />‘‘ಅದೇ ಮೇಡಂ...ಮಂಗಳೂರಿನಲ್ಲಿ...ಎರಡು ಲಕ್ಷ ಓಟಿಗೆ ಸೋತದ್ದು ನಾನೇ...ಇಂದಿರಾಗಾಂಧಿಯ ಕಾಲದಲ್ಲಿ ನಾನು ಸಾಲಮೇಳಕ್ಕೆ ಫೇಮಸ್...ನಾನೇ ಜನಾರ್ದನಪೂಜಾರಿ...’’<br />ಸೋನಿಯಾಗೆ ಸಿಟ್ಟು ಒತ್ತರಿಸಿ ಬಂತು ‘‘ಇವರನ್ನು ಯಾರು ಒಳಗೆ ಬಿಟ್ಟದ್ದು...ತಕ್ಷಣ ಹೊರಗೆ ಹಾಕಿ....’’ ಎಂದದ್ದೇ ತಡ....ಭಾರತ ಸೇವಾದಳದ ಕಾರ್ಯಕರ್ತರು ಅವರನ್ನು ಎಳೆದುಕೊಂಡು ಹೋದರು.<br />‘‘ಆತ್ಮ ಎಲ್ಲಿದೆ...ಆತ್ಮ ಎಲ್ಲಿದೆ...ತಕ್ಷಣ ಉತ್ತರಿಸಿ. ಇಲ್ಲದಿದ್ದರೆ ಎಲ್ಲರನ್ನೂ ವಜಾ ಮಾಡಬೇಕಾಗುತ್ತದೆ...’’<br />‘‘ಅಣು ಒಪ್ಪಂದದ ಸಂದರ್ಭದಲ್ಲಿ ಅಮೆರಿಕಕ್ಕೆ ಹೋದ ಮನಮೋಹನ್ ಸಿಂಗ್ ಕಾಂಗ್ರೆಸ್ನ ಆತ್ಮವನ್ನು ಅಲ್ಲೇ ಬಿಟ್ಟು ಬಂದಿರಬೇಕು...ನೀವು ಒಮ್ಮೆ ಒಬಾಮ ಅವರಿಗೆ ಫೋನ್ ಮಾಡಿ ನೋಡಿ....’’ ಯಾರೋ ಆರೋಪಿಸಿದರು.<br />‘‘ಬಹುಶಃ ಕಲ್ಲಿದ್ದಲು ಗಣಿಯ ಒಳಗೆ ಇಣುಕಿ ನೋಡುವಾಗ ಅದರೊಳಗೆ ಬಿದ್ದಿರುವ ಸಾಧ್ಯತೆಯೇ ಜಾಸ್ತಿ...ಮನಮೋಹನ್ ಸಿಂಗ್ ಅವರನ್ನು ಒಮ್ಮೆ ಗಣಿಯ ಒಳಗೆ ಇಳಿಸಿ ನೋಡಿದರೆ ಸಿಕ್ಕಿದರೂ ಸಿಕ್ಕಬಹುದು...’’ ಅಯ್ಯರ್ ಹೇಳಿದರು.<br />‘‘ನನಗೆ ತಿಳಿದಿರುವ ಮಟ್ಟಿಗೆ ಅದನ್ನು ಸಲ್ಮಾನ್ ಖುರ್ಷಿದ್ ಅವರು ಉತ್ತರ ಪ್ರದೇಶದಲ್ಲಿ ಮುಲಾಯಂ ಜೊತೆ ಸೇರಿ ಬಿರಿಯಾನಿ ಮಾಡಿ ತಿಂದಿರಬೇಕು....’’<br />ಸಲ್ಮಾನ್ ಖುರ್ಷಿದ್ ಸಿಟ್ಟಾದರು ‘‘ನಾನು ಬಿರಿಯಾನಿ ಮಾಡಿದ್ದು ಮುಝಫ್ಫರ್ ನಗರದ ಅಲ್ಪಸಂಖ್ಯಾತ ಕುರಿಗಳನ್ನು ಕಡಿದು. ಕಾಂಗ್ರೆಸ್ ಆತ್ಮವನ್ನು ಬಿರಿಯಾನಿ ಮಾಡಿ ತಿನ್ನುವಷ್ಟು ಇನ್ನೂ ಕೆಟ್ಟು ಹೋಗಿಲ್ಲ....ಇಂದಿನ ಸಭೆಗೆ ಗೈರು ಹಾಜರಾಗಿದ್ದಾರಲ್ಲ ಚಿದಂಬರಂ...ಅವರಲ್ಲಿ ಕೇಳಿ...ಅವರು ಫೈನಾನ್ಸ್ ಮಿನಿಸ್ಟರಾಗಿದ್ದಾಗ ಕಾಂಗ್ರೆಸ್ನ ಆತ್ಮವನ್ನು ಒತ್ತೆಯಿಟ್ಟು ವಿಶ್ವಬ್ಯಾಂಕ್ನಿಂದ ಸಾಲ ತಂದಿರುವ ಸಾಧ್ಯತೆಯೂ ಇದೆ...’’<br />‘‘ಮೇಡಂ...ಅಸ್ಸಾಂನಲ್ಲಿ ಕಾಂಗ್ರೆಸ್ನ ಆತ್ಮವನ್ನು ಗೊಗೊಯಿ ಶಿಲುಬೇಗೇರಿಸಿರುವ ಬಗ್ಗೆ ದಟ್ಟವಾಗಿ ವದಂತಿ ಹಬ್ಬಿದೆ. ಒಮ್ಮೆ ಅವರಲ್ಲಿ ವಿಚಾರಿಸಿ ನೋಡಿದರೂ ಆಗಬಹುದು...’’ ಇನ್ಯಾರೋ ಇನ್ನೊಂದು ಸಲಹೆ ನೀಡಿದರು.<br />‘‘ಯಾವುದಕ್ಕೂ ಪ್ರಿಯಾಂಕಾ ಮೇಡಮ್ ಅವರಲ್ಲೂ ವಿಚಾರಿಸುವುದು ಒಳ್ಳೆಯದು. ರಾಬರ್ಟ್ ವಾದ್ರಾ ಅವರ ತಿಜೋರಿಯಲ್ಲಿ ಹುಡುಕಿದರೆ ಕೆಲವೊಮ್ಮೆ ಸಿಕ್ಕಿದರೂ ಸಿಕ್ಕಿತು...’’ ಸೋನಿಯಾಗೆ ಅದು ಯಾರೋ ಭಿನ್ನಮತೀಯ ಎನ್ನುವುದು ಗೊತ್ತಾಗಿ ಬಿಟ್ಟಿತು. ಉತ್ತರಿಸುವುದಕ್ಕೇ ಹೋಗಲಿಲ್ಲ.<br />‘‘ನಾಡಿದ್ದು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಹುಡುಕೋಣ....ಅಲ್ಲಿ ಸಿಕ್ಕಿದರೂ ಸಿಕ್ಕೀತು...’’ ಇನ್ಯಾರೋ ತಲೆಗೆಟ್ಟ ಸಲಹೆ ನೀಡಿದರು. ವೀರಪ್ಪ ಮೊಯ್ಲಿ ಮಾತ್ರ ಇಂತಹ ಸಲಹೆ ನೀಡಲು ಸಾಧ್ಯ ಎಂದು ಸೋನಿಯಾ ಅರ್ಥ ಮಾಡಿಕೊಂಡರು.<br />‘‘ಪ್ರಧಾನಿ ಮೋದಿಗೆ ಹುಡುಕಿಕೊಡಲು ಮನವಿ ಸಲ್ಲಿಸೋಣ...’’ ಮಗದೊಬ್ಬ ಸಲಹೆ ನೀಡಿದರು. ಇದು ಮೈಸೂರಿನ ಎಚ್. ವಿಶ್ವನಾಥ್ ಇರಬೇಕು ಎಂದು ಸೋನಿಯಾ ಊಹಿಸಿದರು.<br />‘‘ಬೇಡ ಮೇಡಂ...ನಾವೆಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡೋಣ....ನಮ್ಮ ಕಾಂಗ್ರೆಸ್ನ ಆತ್ಮವನ್ನು ಮೋದಿ ಬಳಗ ಕದ್ದುಕೊಂಡಿದೆ. ಆದುದರಿಂದ ಮೋದಿ ಸರಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸೋಣ....’’ ಸೋನಿಯಾ ಸಿಟ್ಟಿನಿಂದ ತಲೆಯೆತ್ತಿ ನೋಡಿದರೆ ದಿಗ್ವಿಜಯ್ ಸಿಂಗ್. ಸೋನಿಯಾ ನಿಟ್ಟುಸಿರಿಟ್ಟು.<br />ಅಷ್ಟರಲ್ಲಿ ‘‘ಮೇಡಂ...’’ ಎಂಬ ಸದ್ದು. ಇಡೀ ಸಭೆ ಬೆಚ್ಚಿ ಬಿದ್ದಿತು. ಮನಮೋಹನ್ ಸಿಂಗ್ ಬಾಯಿ ತೆರೆದಿದ್ದಾರೆ. ಅವರು ಮಾತನಾಡುತ್ತಿದ್ದಾರೆ. ಅರೆ! ಮನಮೋಹನ್ ಸಿಂಗ್ ಮಾತನಾಡುತ್ತಿದ್ದಾರೆ....ಮೊತ್ತ ಮೊದಲ ಬಾರಿಗೆ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಮಾತನಾಡಲು ಬಿಟ್ಟರು ‘‘ಮೇಡಂ...ಕಾಂಗ್ರೆಸ್ನ ಆತ್ಮ ಈಗ ಅಲ್ಲ 1992ರಲ್ಲೇ ಕಾಣೆಯಾಗಿದೆ....’’<br />‘‘ಹೌದಾ...ಹೇಗೆ...’’<br />‘‘ಅಂದಿನ ಪ್ರಧಾನಿ ನರಸಿಂಹರಾವ್ ಅವರ ಕೈಯಲ್ಲಿ ಕಾಂಗ್ರೆಸ್ನ ಆತ್ಮವನ್ನು ಜೋಪಾನ ಮಾಡಲು ನೀವೇ ತಾನೆ ಕೊಟ್ಟದ್ದು? ಆದರೆ ಬಾಬರೀ ಮಸೀದಿ ಆ ಆತ್ಮದ ಮೇಲೆ ಬಿದ್ದು ಬಿಟ್ಟಿತು. ಅದೀಗ ಕಾಣೆಯಾಗಿದೆ. ಬಾಬರೀ ಮಸೀದಿಯ ಧೂಳಿನಲ್ಲಿ ನಾವು ಆ ಆತ್ಮವನ್ನು ಹುಡುಕಬೇಕಾಗಿದೆ...’’</span></b></span><br />
<span style="color: purple;"><span style="font-size: large;"><b>ರವಿವಾರ - ಮೇ -25-2014</b></span></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-69032510760323659332014-05-18T02:41:00.001-07:002014-05-18T02:41:22.703-07:00ಅಕ್ಕಿಯನ್ನು ಇನ್ನು ಕಂಪ್ಯೂಟರ್ನಲ್ಲೇ ಬೆಳೆಯೋದು....<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://3.bp.blogspot.com/-UBCBtlmgzZQ/U3iAJf_Q8OI/AAAAAAAAALU/hVUtN1DBo6Q/s1600/satish+modi.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-UBCBtlmgzZQ/U3iAJf_Q8OI/AAAAAAAAALU/hVUtN1DBo6Q/s1600/satish+modi.jpg" height="320" width="184" /></a></div>
<span style="color: purple;"><span style="font-size: large;"><b> ವಾರ್ತಾ ಭಾರತಿ ಕನ್ನಡ ದೈನಿಕದ ಮೇ ೧೮ ರ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ </b></span></span><br />
<span style="font-size: large;"><b><span style="color: blue;"><br /></span></b></span>
<span style="font-size: large;"><b><span style="color: blue;">ಅಂದು ಪತ್ರಕರ್ತ ಎಂಜಲು ಕಾಸಿ ಎಂದಿಗಿಂತ ತುಸು ಬೇಗ ಅಂದರೆ ಬೆಳಗ್ಗೆ ಹತ್ತು ಗಂಟೆಗೆ ಎದ್ದಿದ್ದ. ಅಂದಿನ ಬೆಳಗ್ಗೆ ಎಂದಿನಂತಿಲ್ಲ ಅನ್ನಿಸಿತು. ಅನುಮಾನ ಬಂದು, ಸೀದಾ ಅಂಗಳಕ್ಕೆ ಬಂದ. ಮೇಲೆ ನೋಡಿದರೆ ಮಾವಿನ ಮರದಲ್ಲಿ ಹಲಸಿನ ಗಾತ್ರದಷ್ಟು ದೊಡ್ಡ ಮಾವುಗಳು ನೇತಾಡುತ್ತಿದ್ದವು. ಕಾಸಿ ಬೆಚ್ಚಿ ಬಿದ್ದ. ಅರೆ! ಹಲಸಿನ ಗಾತ್ರ ಮಾವು! ಜೋರಾಗಿ ಹೆಂಡತಿಯನ್ನು ರಕ್ಷಣೆಗೆಂದು ಕೂಗಿದ ‘‘ಸೂಸಿ...ಸೂಸಿ...ಇಲ್ಲಿ ಬಾ...ಬೇಗ ಬಾ...’’<br />ಸೂಸಿ ಒಳಗಿನಿಂದ ಓಡಿ ಬಂದಳು ‘‘ಏನಾಯ್ತು...?’’ ಅಚ್ಚರಿಯಿಂದ ಕೇಳಿದಳು.<br />‘‘ಆಗುವುದೇನು, ಮರದಲ್ಲಿ ನೋಡು?’’ ಎಂದು ಕೇಳಿದ.<br />ಸೂಸಿ ನಿಟ್ಟುಸಿರಿಟ್ಟಳು ‘‘ಅಷ್ಟೇಯ? ನಿಮಗಿನ್ನೂ ಗೊತ್ತಿಲ್ಲವಾ? ಪತ್ರಕರ್ತರಾಗಿ ಹತ್ತು ಗಂಟೆಗೆ ಎದ್ದರೆ ನಿಮಗೆ ಗೊತ್ತಾಗೋದು ಹೇಗೆ? ದೇಶದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿದೆ...ಅಭೂತಪೂರ್ವವಾಗಿ ನರೇಂದ್ರ ಮೋದಿ ಗೆದ್ದಿದ್ದಾರೆ. ಆದುದರಿಂದ ಇವತ್ತಿನಿಂದ ಮಾವಿನ ಕಾಯಿಗಳೆಲ್ಲ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ...’’ ಸೂಸಿ ಹೇಳಿದಳು.<br />‘‘ಅಲ್ಲ ಕಣೆ...ಅದಕ್ಕೂ ಇದಕ್ಕೂ ಏನು ಸಂಬಂಧ...’’ ಕಾಸಿ ಕೇಳಿದ.<br />‘‘ಅಭಿವೃದ್ಧಿ ಕಣ್ರೀ....ಅಭಿವೃದ್ಧಿ. ಮೋದಿ ಅಧಿಕಾರಕ್ಕೆ ಬಂದದ್ದೇ ಅಭಿವೃದ್ಧಿ ಆಗ್ತಾ ಇದೆ...ಇದೀಗ ಗೆದ್ದದ್ದಷ್ಟೇ. ಅಷ್ಟರಲ್ಲಿ ಮಾವು ಹೆದರಿ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ. ನಮ್ಮ ಹೆಂಟೆ ಪಾಪ ರುಬ್ಬು ಕಲ್ಲಿನಷ್ಟು ದೊಡ್ಡ ಮೊಟ್ಟೆ ಇಟ್ಟು ಸತ್ತೇ ಹೋಗಿದೆ...ಎಲ್ಲ ಮೋದಿ ಮಹಾತ್ಮೆ ಕಣ್ರೀ....’’<br />ಕಾಸಿ ವಿಸ್ಮಯಗೊಂಡ. ಆಕಾಶವನ್ನು ನೋಡಿದರೆ ಅಲ್ಲಿ ಕೇಸರಿ ಸೂರ್ಯ. ಮನೆಯ ಮುಂದೆ ನೋಡಿದರೆ ವಿಮಾನ ನಿಲ್ದಾಣ...ಮೆಟ್ರೋರೈಲು ಕಣ್ಮುಂದೆಯೇ ಧಡ್ ಧಡ್ ಎಂದು ಹೋಗುತ್ತಿದೆ...’’<br />ಒಳಗೆ ಬಂದ. ಅಷ್ಟರಲ್ಲಿ ಎಂಟು ವರ್ಷದ ಮಗ ಭಾರತದಲ್ಲಿ 40 ರಾಜ್ಯಗಳಿವೆ....’’ ಎಂದು ಓದುತ್ತಿದ್ದ. ಅರೇ! ನಲವತ್ತು ರಾಜ್ಯಗಳು ಯಾವಾಗ ಸೃಷ್ಟಿಯಾಯಿತು? ಕಾಸಿಗೆ ಅಚ್ಚರಿಯಾಯಿತು ‘‘ಮಗನೇ ದೇಶದಲ್ಲಿ 40 ರಾಜ್ಯ ಅಂತ ಯಾರು ಹೇಳಿಕೊಟ್ಟಿರೋದು....’’<br />‘‘ಅಪ್ಪಾ ಮೋದಿ ಗೆದ್ದರೆ ಪಕ್ಕದ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಭಾರತಕ್ಕೆ ಸೇರತ್ತೆ ಎಂದು ಮೇಷ್ಟ್ರು ಹೇಳುತ್ತಿದ್ದರು. ಆ ಲೆಕ್ಕದಲ್ಲಿ ಭಾರತದ ರಾಜ್ಯಗಳು ಜಾಸ್ತಿ ಆಗಿವೆ ಅಪ್ಪ. ಇವತ್ತು ಮೋದಿ ಗೆದ್ದಿರೋದರಿಂದ ಪಾಕಿಸ್ತಾನ ‘‘ನಮ್ಮನ್ನು ಭಾರತಕ್ಕೆ ಸೇರಿಸ್ಕೊಳ್ಳಿ’’ ಅಂತ ಘೋಷಿಸಿದೆ....’’<br />‘‘ಹೌದಾ...’’ ಎಂದು ಒಳ ಹೋಗಿ ಮನೆಯ ಕಪಾಟು ತೆರೆದು ನೋಡಿದರೆ ಅದರ ತುಂಬಾ ರಾಶಿ ರಾಶಿ ನೋಟುಗಳು....‘‘ಸೂಸಿ....’’ ಮತ್ತೆ ಕಾಸಿ ಚೀರಿದ.<br />ಸೂಸಿ ಓಡಿ ಬಂದಳು. ‘‘ಏನ್ರೀ...ಅದು...’’ ಕೇಳಿದಳು.<br />ಕಾಸಿ ತೆರೆದ ಕಾಪಾಟಿನ ಮುಂದೆ ಸ್ತಂಭೀಭೂತನಾಗಿ ನಿಂತಿದ್ದ. ಸೂಸಿಗೆ ಅರ್ಥವಾಯಿತು ‘‘ಓ ಅದಾ...ನಿಮಗೆ ಇನ್ನೂ ವಿಷಯ ಗೊತ್ತಿಲ್ವಾ....ಸ್ವಿಸ್ ಬ್ಯಾಂಕಿನಲ್ಲಿದ್ದ ಕಪ್ಪು ಹಣವನ್ನೆಲ್ಲ ಅಲ್ಲಿನ ಬ್ಯಾಂಕಿನ ಮ್ಯಾನೇಜರ್ಗಳು ನರೇಂದ್ರ ಮೋದಿಯ ಪಾದ ಬುಡಕ್ಕೆ ತಂದು ಸುರಿದಿದ್ದಾರಂತೆ...ಅದನ್ನು ಮೋದಿಯವರು ಇಡೀ ದೇಶಕ್ಕೆ ಹಂಚಿದ್ದಾರೆ. ನಮ್ಮ ಪಾಲಿನದ್ದನ್ನು ಈಗಷ್ಟೇ ಬಿಜೆಪಿಯ ಸ್ಥಳೀಯ ಮುಖಂಡರು ತಂದು ಕೊಟ್ಟರು...ಇದರಲ್ಲಿ ನಮ್ಮ ಪಾಲಿನ ಹತ್ತು ಕೋಟಿ ರೂಪಾಯಿ ಇದೆ ಗೊತ್ತಾ...’’<br />ಕಾಸಿಗೆ ತಲೆ ಗಿರ್ರೆಂದಿತು. ನೇರವಾಗಿ ಸ್ನಾನ ಮಾಡಿ, ತಿಂಡಿ ತಿಂದು ಮನೆಯ ಹೊರಗೆ ಬರುವಷ್ಟರಲ್ಲಿ ಒಂದಿಷ್ಟು ಜನ ಸಾಲು ಸಾಲಾಗಿ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದರು. ‘‘ಯಾರ್ರೀ ನೀವು? ಯಾಕೆ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದೀರಿ?’’ ಕಾಸಿ ಕೇಳಿದ.<br />‘‘ನಾವು ಬಾಂಗ್ಲಾ ವಲಸಿಗರು. ಮೋದಿ ಗೆದ್ದಿದ್ದಾರಲ್ಲ. ಅವರು ನಮಗೆ ಗಡುವು ನೀಡಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ಮೊದಲು ನಾವೆಲ್ಲ ಬಾಂಗ್ಲಾಕ್ಕೆ ವಾಪಾಸ್ ಹೋಗುತ್ತಿದ್ದೇವೆ....ಬೇಗ ಟ್ರೈನ್ ಹಿಡೀಬೇಕು...’’<br />ಬ್ಲಾಂಗ್ಲಾ ದೇಶಿಯರೆಲ್ಲ ವಲಸೆ ಹೋಗಿರುವುದರಿಂದ ಬೆಂಗಳೂರು ಬಣ ಬಣ ಅನ್ನುತ್ತಿತ್ತು. ಎಲ್ಲಿ ನೋಡಿದರೂ ಖಾಲಿ ಖಾಲಿ ಜಾಗ. ಯಾರು ಎಲ್ಲಿ ಬೇಕಾದರೂ ಮನೆ ಕಟ್ಟಬಹುದು....ಕಾಸಿ ರೋಮಾಂಚನಗೊಂಡ.<br />‘‘ಮಗನಿಗೆ ಹೊಸ ಅಟ್ಲಾಸ್ ತಂದು ಕೊಡಬೇಕು. ಈಗ ಇರುವ ಭಾರತದಲ್ಲಿ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಬೇರೆ ಬೇರೆ ಇವೆ. ಇನ್ನು ಮುಂದೆ ಅಖಂಡ ಭಾರತವಾಗಿರುವುದರಿಂದ ಅಟ್ಲಾಸ್ ಬದಲಿಸಬೇಕಾಗುತ್ತದೆ...’’ ಎಂದು ಯೋಚಿಸಿ ಅಟ್ಲಾಸ್ ಅಂಗಡಿಗೆ ಹೋಗಿ ಮೋದಿ ಸರಕಾರದ ಅಟ್ಲಾಸ್ ಪುಸ್ತಕ ತೆಗೆದುಕೊಂಡ.<br /> ಮನೆಗೆ ವಾಪಾಸ್ ಬಂದು ಟಿವಿ ಆನ್ ಮಾಡಿ ಕ್ರಿಕೆಟ್ ನೋಡಿದರೆ ಅಲ್ಲಿ ಭಾರತೀಯ ಆಟಗಾರರು ಲಕ್ಷಾಂತರ ರನ್ ಮಾಡಿದ್ದಾರೆ. ಮತ್ತು ಧೋನಿ ಹೇಳುತ್ತಿದ್ದಾನೆ ‘‘ನಾವು ಬರೇ ಹತ್ತು ಓವರ್ನಲ್ಲಿ ಒಂದು ಲಕ್ಷ ರನ್ ಮಾಡಲು ಮೋದಿ ಅಲೆಯೇ ಕಾರಣ. ಮುಂದಿನ ದಿನಗಳಲ್ಲಿ ನಾವು ಕೋಟ್ಯಂತರ ರನ್ಗಳನ್ನು ಮಾಡಲಿದ್ದೇವೆ. ಬಿಸಿಸಿಐ ಅಧ್ಯಕ್ಷರಾಗಿ ಅಮಿತ್ ಶಾ ಏನಾದರೂ ಆಯ್ಕೆಯಾದರೆ, ರನ್ನಿನ ಹೊಳೆಯಲ್ಲಿ ದೇಶವನ್ನು ಮುಳುಗಿಸಲಿದ್ದೇವೆ. ರನ್ಗಳನ್ನೇ ಅಮೆರಿಕ, ಚೀನಾ, ಇಂಗ್ಲೆಂಡ್ಗಳಿಗೆ ಮಾರಿ ಭಾರತ ಶ್ರೀಮಂತ ರಾಷ್ಟ್ರವಾಗಲಿದೆ...’’<br />ಬಾಯಗಲಿಸಿ ಕಾಸಿ ಅದನ್ನೇ ನೋಡಿದ. ಮಧ್ಯಾಹ್ನ ನೋಡಿದರೆ ಸೂಸಿ ಬಿರಿಯಾನಿ ಮಾಡಿದ್ದಳು. ನೋಡಿದರೆ ರನ್ಗಳ ಬಿರಿಯಾನಿ.! ‘‘ಹೌದು ಕಣ್ರೀ...ಕ್ರಿಕೆಟ್ನಲ್ಲಿ ಈ ಭಾರಿ ಧೋನಿ ಸಂಗ್ರಹಿಸಿದ ರನ್ಗಳಿಂದ ಬಿರಿಯಾನಿ ಮಾಡಿದ್ದೇನೆ ರುಚಿ ನೋಡಿ ಹೇಳಿ...ರಾತ್ರಿಗೆ ವಿರಾಟ್ ಕೊಹ್ಲಿ ಅವರು ಸಂಗ್ರಹಿಸಿದ ರನ್ಗಳಿಂದ ಪಲಾವ್ ಮಾಡಲಿದ್ದೇನೆ....’’ ಕಾಸಿ ಬಟ್ಟಲನ್ನೇ ಅಚ್ಚರಿಯಿಂದ ನೋಡಿದ.<br />‘‘ಅಕ್ಕಿಯಿಂದ ಏನಾದರೂ ಐಟಂ ಮಾಡಬಾರದೆ...?’’ ಕಾಸಿ ಪತ್ನಿಗೆ ಕೇಳಿದ. ‘‘ಪ್ರಿಂಟರ್ ಸರಿಯಿಲ್ಲ ಕಣ್ರೀ...’’ ಸೂಸಿ ಉತ್ತರಿಸಿದಳು. ಪ್ರಿಂಟರ್ಗೂ ಅಕ್ಕಿಗೂ ಏನು ಸಂಬಂಧ?<br />‘‘ಅದೇ ಕಣ್ರೀ...ಮೋದಿ ಅಭಿವೃದ್ಧಿಯಲ್ಲಿ ಅಕ್ಕಿ ಗದ್ದೆಯಲ್ಲಿ ಬೆಳೆಯೋದಿಲ್ಲ. ಕಂಪ್ಯೂಟರ್ನಲ್ಲಿ ಕ್ಲಿಕ್ ಮಾಡಿದ್ರೆ ಪ್ರಿಂಟರ್ನಲ್ಲಿ ದರದರಾಂತ ಅಕ್ಕಿ ಸುರಿಯತ್ತೆ...ಪ್ರಿಂಟರ್ ಸರಿಯಾದ ತಕ್ಷಣ ನಿಮಗೆ ಬೇಕಾದ ಅಕ್ಕಿಯಿಂದ ಬೇಕಾದ ರೊಟ್ಟಿ ಮಾಡಿ ಕೊಡುವಾ...’’<br />‘‘ಅಕ್ಕಿ ಕಂಪ್ಯೂಟರ್ನಲ್ಲಿ ಮಾಡೋದಾದ್ರೆ...ದೇಶದ ರೈತರೆಲ್ಲ ಏನು ಮಾಡುತ್ತಿದ್ದಾರೆ...’’ ಕಾಸಿ ಕೇಳಿದ.<br />‘‘ಮಾಡೋದೇನು...ರೈತರನ್ನೆಲ್ಲ ನಮ್ಮ ಮೋದಿ ಸಾಹೇಬ್ರು ಪ್ರತಿ ಊರಿನ ಮಧ್ಯೆ ನಿಲ್ಲಿಸಿದ್ದಾರೆ....’’<br />‘‘ಅಂದ್ರೆ...ಊರು ಕಾಯೋಕಾ?’’<br />‘‘ಊರು ಕಾಯೋದೇನು ಬಂತು ಮಣ್ಣು...ಯಾವಾಗ ಮೋದಿ ಆಯ್ಕೆಯಾದರೋ ಆಗಲೇ ಅಳಿದುಳಿತ ರೈತರೆಲ್ಲ ನೇಣು ಹಾಕಿಕೊಂಡರು. ಮೋದಿ ಅಭಿವೃದ್ಧಿಯ ಭಾರತದಲ್ಲಿ ರೈತರಿರೋದು ಅವಮಾನ ಅಲ್ವಾ? ಅದಕ್ಕೆ. ರೈತರ ತ್ಯಾಗಕ್ಕಾಗಿ ಪ್ರತಿ ಊರಿನ ಮಧ್ಯೆ ಒಬ್ಬೊಬ್ಬ ರೈತರ ಬೃಹತ್ ಉಕ್ಕಿನ ಪ್ರತಿಮೆಯನ್ನು ಮೋದಿ ನಿರ್ಮಿಸಲಿದ್ದಾರೆ. ಹಾಗೆಯೇ ದಿಲ್ಲಿಯಲ್ಲಿ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗಿಂತಲೂ ದೊಡ್ಡ ರೈತನ ಪ್ರತಿಮೆಯನ್ನು ನಿರ್ಮಿಸಲಿದ್ದಾರಂತೆ. ಈ ಪ್ರತಿಮೆಗೆ ಗುಜರಾತ್ನ ಅದಾನಿ ಮತ್ತು ಮುಂಬಯಿಯ ಅಂಬಾನಿ ದುಡ್ಡು ಹಾಕ್ತಾರಂತೆ....’’<br />ಸ್ವಲ್ಪ ಹೊತ್ತು ತಡೆದು ಸೂಸಿ ಹೇಳಿದಳು ‘‘ನೋಡ್ರಿ...ಬೇಗ ಬೇಗ ಊಟ ಮಾಡಿ. ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಪಾಕಿಸ್ತಾನದ ಜೊತೆಗೆ ಮೋದಿ ಯುದ್ಧವನ್ನು ಘೋಷಣೆ ಮಾಡಿದ್ದಾರೆ. ಎಲ್ಲವನ್ನೂ ನೇರ ಪ್ರಸಾರ ಮಾಡುತ್ತಾರೆ...ದೇಶದ ಎಲ್ಲೇ ಕೋಮುಗಲಭೆ ನಡೆದರೂ ಅದನ್ನು ಮೋದಿ ಆಡಳಿತದಲ್ಲಿ ನೇರ ಪ್ರಸಾರವಂತೆ...ಟಿವಿ ಸೀರಿಯಲ್ ನೋಡಿ ಬೋರ್ ಹೊಡೆದಿದೆ. ಇನ್ನೇನಿದ್ದರೂ ಯುದ್ಧ, ಗಲಭೆಗಳನ್ನೇ ಲೈವ್ ಆಗಿ ನೋಡಿ ಮಜಾ ಪಡೆಯಬಹುದು...’’<br />ಕಾಸಿ ತನ್ನೆರಡು ಕಿವಿಗಳನ್ನು ಮುಚ್ಚಿ ‘‘ನಿಲ್ಲಿಸೂ.....’’ ಚೀರಿದ. ಅಷ್ಟರಲ್ಲಿ ಪತ್ನಿ ಕೂಗೋದು ಕೇಳಿಸಿತು ‘‘ಬೆಳಗಾಯಿತು ಎದ್ದೇಳ್ರೀ....ಅದೇನು ನಿದ್ದೆ ಕಣ್ಣಲ್ಲಿ ನಿಲ್ಲಿಸು ಅಂತ ಬೊಬ್ಬೆ ಹೊಡೀತೀರಿ...ಬನ್ನಿ...ಇವತ್ತು ಮೇ 16. ಫಲಿತಾಂಶ ಇನ್ನೇನು ಹೊರ ಬೀಳತ್ತೆ’’<br />ಕಾಸಿ ಕಣ್ಣು ಬಿಟ್ಟ ‘‘ಹಾಗಾದ್ರೆ...ನಾನು ನೋಡಿದ್ದು, ಕೇಳಿದ್ದು ಎಲ್ಲ ಕನಸಾ?’’ ನಿಟ್ಟುಸಿರು ಬಿಟ್ಟ. ಅಷ್ಟರಲ್ಲಿ ಪತ್ನಿ ಸೂಸಿ ಜೋರಾಗಿ ಕೂಗಿ ಹೇಳಿದಳು ‘‘ರೀ...ಮೋದಿಗೆ ಎಲ್ಲ ಕಡೆ ವಿಜಯ ಸಾಧಿಸ್ತಾ ಇದ್ದಾರೆ...’’</span></b></span></div>
chelayyahttp://www.blogger.com/profile/07284069495860642375noreply@blogger.com1tag:blogger.com,1999:blog-917944624704559944.post-74107891766307492632014-05-10T10:50:00.005-07:002014-05-10T10:50:51.189-07:00ನೀವು ಸೂಟ್ಕೇಸ್ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ...<div dir="ltr" style="text-align: left;" trbidi="on">
<span style="font-size: large;"><b><span style="color: blue;"> </span></b></span><a href="http://3.bp.blogspot.com/-lVRdTN2b78E/U25mzZOfsmI/AAAAAAAAALE/nkme6E9GF8Q/s1600/cartoon.jpg" imageanchor="1" style="clear: right; float: right; margin-bottom: 1em; margin-left: 1em;"><img border="0" src="http://3.bp.blogspot.com/-lVRdTN2b78E/U25mzZOfsmI/AAAAAAAAALE/nkme6E9GF8Q/s1600/cartoon.jpg" height="320" width="173" /></a><span style="font-size: large;"><b><span style="color: blue;">ಪತ್ರಕರ್ತ ಎಂಜಲು ಕಾಸಿಗೆ ಇದು ಕಷ್ಟಕಾಲ. ಯಾಕೆಂದರೆ ಆತನ ಐದು ವರ್ಷದ ಮಗನನ್ನು ಎಲ್ಕೆಜಿಗೆ ಸೇರಿಸಬೇಕಾದ ಸಮಯ ಬಂದಿದೆ. ಹಲವು ಶಾಲೆಗಳಿಗೆ ಈಗಾಗಲೇ ಭೇಟಿ ಮಾಡಿ ಬಸವಳಿದಿದ್ದ. ಮುಖ್ಯವಾಗಿ ಪತ್ರಕರ್ತ ಎಂಜಲು ಕಾಸಿಯ ದೊಡ್ಡ ಸಮಸ್ಯೆಯೇ ಅವನಿಗೆ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ. ತನಗೆ ಗೊತ್ತಿರುವ ಕನ್ನಡದಲ್ಲಿ ಅದೆಷ್ಟೋ ಇಂಟರ್ಯೂಗಳನ್ನು ಮಾಡಿದ ಪತ್ರಕರ್ತ ಎಂಜಲು ಕಾಸಿ ಇದೀಗ ತಾನೇ ಇಂಟರ್ಯೂ ಬರೆಯಬೇಕಾದ ಪರಿಸ್ಥಿತಿ.<br />ಅದು ಹೇಗೋ ಒಂದು ಖಾಸಗಿ ಶಾಲೆಯಲ್ಲಿ ಕಾಂಪೌಂಡ್ನೊಳಗೆ ಪ್ರವೇಶ ಸಿಕ್ಕಿತು. ರ್ಯಾಪಿಡೆಕ್ಸ್ ಪುಸ್ತಕದ ಸಹಾಯದಿಂದ ಹರುಕು ಮುರುಕು ಇಂಗ್ಲಿಷ್ ಕಲಿತು, ಶಾಲೆಯ ವಾಚ್ಮೆನ್ ಜೊತೆಗೆ ಇಂಗ್ಲಿಷ್ನಲ್ಲಿ ಅನುಮತಿ ಕೇಳಿದ್ದ. ಇಂಗ್ಲಿಷ್ ಕಿವಿಗೆ ಬಿದ್ದದ್ದೇ ವಾಚ್ಮ್ಯಾನ್ ತಕ್ಷಣ ಒಳಗೆ ಬಿಟ್ಟ. ಬರೇ ಕಾಂಪೌಂಡ್ ದಾಟಿದರೆ ಮುಗಿಯುತ್ತದೆಯೆ, ಜಗಲಿ ಹತ್ತಬೇಕು. ಅಲ್ಲಿಂದ ಶಾಲೆಯ ಒಳಗೆ ಪ್ರವೇಶ ಪಡೆಯಬೇಕು. ಅಲ್ಲಿಂದ ಪ್ರಿನ್ಸಿಪಾಲ್ ರೂಂ ಮುಟ್ಟಬೇಕು. ಇಷ್ಟೆಲ್ಲ ಸಾಹಸವನ್ನು ಅದು ಹೇಗೋ ಮಾಡಿ ಮುಗಿಸಿದ. ಅಷ್ಟರಲ್ಲಿ ಪ್ರಿನ್ಸಿಪಾಲ್ ತಮ್ಮ ಅಮೆರಿಕನ್ ಇಂಗ್ಲಿಷ್ನಲ್ಲಿ ಒದರಿದರು ‘‘ಮಿ. ಕಾಸಿ....ನಿಮಗೆ ಇಂಗ್ಲಿಷ್ ಬಂದರೆ ಸಾಲದು. ನಿಮಗೆ ಕನ್ನಡ ಗೊತ್ತಿರಬಾರದು. ನಮ್ಮ ಶಾಲೆಯ ಒಬ್ಬ ಎಲ್ಕೆಜಿ ವಿದ್ಯಾರ್ಥಿಯ ತಂದೆಗೆ ಕನ್ನಡ ಗೊತ್ತಿದೆ ಎನ್ನುವುದು ನಮ್ಮ ಶಾಲೆಗೆ ಶೇಮ್ ಶೇಮ್ ಪಪ್ಪಿ ಶೇಮ್...ಗೊತ್ತಾ?’’<br /> ಕಾಸಿ ಹಣೆ ಒರೆಸಿಕೊಂಡು, ತನ್ನ ರ್ಯಾಪಿಡೆಕ್ಸ್ ಇಂಗ್ಲಿಷ್ನಲ್ಲಿ ಹೇಳಿದ ‘‘ನನಗೆ ಕನ್ನಡ ಗೊತ್ತೇ ಇಲ್ಲ. ಕನ್ನಡ ಯಾವ ರಾಜ್ಯದ ಭಾಷೆ ಎನ್ನುವುದೂ ಗೊತ್ತಿಲ್ಲ...’’<br />ಪ್ರಿನ್ಸಿಪಾಲರಿಗೆ ಖುಷಿಯಾಯಿತು. ‘‘ನಿಮ್ಮ ಮಗನನ್ನು ಎಲ್ಕೆಜಿಗೆ ಸೇರಿಸಬೇಕಾದರೆ ನೀವು ಪರೀಕ್ಷೆ ಬರೆದು ಪಾಸಾಗಬೇಕು. ಹಾಗಾದಲ್ಲಿ ಮಾತ್ರ...’’<br />ಎಲ್ಲ ಪರೀಕ್ಷೆಗಳು ಮುಗಿಯಿತು ಎಂದರೆ ಇದೀಗ ಮತ್ತೆ ಹೊಸದಾಗಿ ಪರೀಕ್ಷೆ ಶುರುವಾಗಿದೆಯಲ್ಲ ಎಂದು ಕಾಸಿ ಕಂಗಾಲಾದ. ‘‘ಸಾರ್...ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಅಂತ...ನನ್ನ ಮಗನನ್ನು ಸೇರಿಸಬೇಕಾದರೆ ನನಗೆ ಯಾಕೆ ಬರೆ?’’<br />ಪ್ರಿನ್ಸಿಪಾಲ್ ಕಾಸಿಯ ಹರುಕು ಮುರುಕು ಇಂಗ್ಲಿಷ್ನ್ನು ಮೆಚ್ಚಿಕೊಂಡರು. ‘‘ನೋಡಿ...ಪರೀಕ್ಷೆ ನಿಮಗೆ ಮಾತ್ರ ಅಲ್ಲ, ನಿಮ್ಮ ಮಗುವಿಗೂ ಪರೀಕ್ಷೆಯಿದೆ. ಮೊದಲು ನಿಮಗೆ ಪರೀಕ್ಷೆ ಇರತ್ತೆ. ಅದರಲ್ಲಿ ನೀವು ಡಿಸ್ಟಿಂಕ್ಷನ್ ಪಡೆದರೆ, ಮತ್ತೆ ನಿಮ್ಮ ಪತ್ನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತದೆ. ಅವರೂ ಕೂಡ ಅದರಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದರೆ ಮತ್ತೆ ನಿಮ್ಮ ಮಗುವಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ನಿಮ್ಮ ಮಗು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದರೆ ಬಳಿಕ ನೀವು ನೀಡುವ ಸೂಟ್ಕೇಸ್ ಭಾರವನ್ನು ತೂಕ ಮಾಡಲಾಗುತ್ತದೆ. ಅದು ನಿಮ್ಮ ಮಗುವಿನ ಭಾರಕ್ಕೆ ಸರಿಯಾಗಿದ್ದರೆ ನಿಮ್ಮ ಮಗುವಿಗೆ ಎಲ್ಕೆಜಿಯಲ್ಲಿ ಅಡ್ಮಿಶನ್ ನೀಡಲಾಗುತ್ತದೆ...’’<br />‘‘ಮಗು ಇನ್ನೂ ಶಾಲೆಗೆ ಸೇರಿಯೇ ಇಲ್ಲ...ಪರೀಕ್ಷೆ ಯಾವುದರ ಬಗ್ಗೆ?’’ ಕಾಸಿ ಅಚ್ಚರಿಯಿಂದ ಕೇಳಿದ.<br />ಪ್ರಿನ್ಸಿಪಾಲ್ ನಕ್ಕ ‘‘ನಿಮಗಿನ್ನೂ ಇದರ ಬಗ್ಗೆ ಏನೂ ಗೊತ್ತಿಲ್ಲ ಎಂದಾಯಿತು. ಹೀಗೆ ಆದರೆ ನೀವು ಪರೀಕ್ಷೆ ಪಾಸಾದ ಹಾಗೆಯೆ. ನೋಡಿ...ನಿಮ್ಮ ಮಗುವಿಗೆ ಹತ್ತನೆ ತರಗತಿಯ ಹತ್ತು ಪ್ರಶ್ನೆಗಳು, ಪಿಯುಸಿಯ 12 ಪ್ರಶ್ನೆಗಳು ಮತ್ತು ಸ್ನಾತಕೋತ್ತರ ಪದವಿಯ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ನಿಮ್ಮ ಮಗು ಸಲೀಸಾಗಿ ಉತ್ತರಿಸಿದರೆ ಎಲ್ಕೆಜಿಗೆ ಸೇರಿಸಲಾಗುತ್ತದೆ...’’<br />‘‘ಇನ್ನೂ ಎಲ್ಕೆಜಿಗೆ ಸೇರುವ ಮಗುವಿಗೆ ಸ್ನಾತಕೋತ್ತರ ಪದವಿಯ ಪ್ರಶ್ನೆಯೆ?’’ ಕಾಸಿ ಸಿಡಿಲು ಬಡಿದ ಮರದಂತಾದ.<br />‘‘ಹೌದು ಕಣ್ರೀ...ನಮ್ಮ ಶಾಲೆ ಅತ್ಯುತ್ತಮ ಫಲಿತಾಂಶಕ್ಕೆ ಹೆಸರಾಗಿರುವ ಶಾಲೆ. ಹತ್ತು ರ್ಯಾಂಕುಗಳನ್ನು ಪಡೆದಿರುವ ಶಾಲೆ. ಎಲ್ಲ ಮಕ್ಕಳೂ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿರುವ ಶಾಲೆ...ಆದುದರಿಂದ ಇಷ್ಟೆಲ್ಲ ಪ್ರಶ್ನೆಗಳಿಗೆ ನಿಮ್ಮ ಮಗು ಸರಿಯಾದ ಉತ್ತರ ಬರೆಯಲೇ ಬೇಕು. ಆಗ ಮಾತ್ರ ಸೀಟು ಸಿಗುತ್ತೆ...’’ ಪ್ರಿನ್ಸಿಪಾಲ್ ಸ್ಪಷ್ಟವಾಗಿ ನುಡಿದರು.<br />‘‘ಅಲ್ಲ ಸಾರ್...ಎಲ್ಕೆಜಿಗೆ ಸೇರುವ ಮಗು ಉತ್ತರ ಬರೆಯುವುದು ಹೇಗೆ...?’’ ಕಾಸಿ ಕಂಗಾಲಾಗಿ ಕೇಳಿದ.<br />‘‘ಅದು ನಮಗೆ ಗೊತ್ತಿಲ್ಲ. ನಮ್ಮ ಕಾನ್ವೆಂಟ್ನಲ್ಲಿ ನಿಮಗೆ ಸೀಟು ಸಿಗಬೇಕಾದರೆ ನಿಮ್ಮ ಮಗು ಪಾಸಾಗಲೇ ಬೇಕು. ನೀವು ನಿಮ್ಮ ಮಗುವಿಗೆ ಟ್ಯೂಶನ್ ಕೊಡಿಸಿ. ಪರೀಕ್ಷೆಗೆ ಬೇಕಾದ ತಯಾರಿಯನ್ನು ಮಗುವಿಗೆ ಒಂದು ವರ್ಷ ಇರುವಾಗಲೇ ಮಾಡಿಸಬೇಕು. ಈಗ ಬಂದು ಏನು ಮಾಡುವುದು ಎಂದು ಕೇಳಿದರೆ ಹೇಗೆ? ನಮ್ಮ ಶಾಲೆಯಲ್ಲಿ ಪ್ರವೇಶ ಸಿಗಲಿಲ್ಲ ಎಂದರೆ ಕಸದ ಬುಟ್ಟಿ ಇದ್ದೇ ಇದೆಯಲ್ಲ...’’ ಪ್ರಿನ್ಸಿಪಾಲರು ಆಕ್ರೋಶದಿಂದ ಹೇಳಿದರು.<br />‘‘ಕಸದ ಬುಟ್ಟಿ....’’ ಕಾಸಿಗೆ ಅರ್ಥವಾಗಲಿಲ್ಲ.<br />‘‘ಅದೇರಿ...ಸರಕಾರಿ ಶಾಲೆ. ನಮ್ಮ ಶಾಲೆಗಳಲ್ಲಿ ರಿಜೆಕ್ಟ್ ಆಗಿರುವ ಮಾಲುಗಳನ್ನು ಎಸೆಯುವುದಕ್ಕಿರುವ ಕಸದ ಬುಟ್ಟಿಯೇ ಸರಕಾರಿ ಶಾಲೆ. ಅದಕ್ಕೆ ತೆಗೆದುಕೊಂಡು ಹಾಕಿ...’’ ಪ್ರಿನ್ಸಿಪಾಲರು ದಾರಿ ತೋರಿಸಿದರು.<br />ಕಾಸಿ ಆತಂಕಗೊಂಡ. ‘‘ಸಾರ್...ಮಗುವಿಗೆ ಹೊರಗೆ ಟ್ಯೂಶನ್ ಕೊಡೋದಾದ್ರೆ....ಶಾಲೆಗೆ ಯಾಕೆ ಸೇರಿಸೋದು...?’’<br />‘‘ನೋಡ್ರಿ...ದಡ್ಡ ಮಕ್ಕಳನ್ನು ನಾವು ಸೇರಿಸಿಕೊಳ್ಳಲ್ಲ. ಕಲಿತ ಮಕ್ಕಳನ್ನು ಮಾತ್ರ ತೆಗೆದುಕೊಳ್ಳೋದು. ನಮ್ಮ ಶಾಲೆಯ ಸರ್ಟಿಫಿಕೇಟ್ ಸಿಗಬೇಕಾದರೆ ನಿಮ್ಮ ಮಗು ಈಗಾಗಲೇ ಎಲ್ಲ ತಿಳ್ಕೊಂಡಿರಬೇಕು....ಇಂಗ್ಲಿಷ್ ಮಾಧ್ಯಮ ಎಂದರೆ ಸುಮ್ಮಗಾಗಲ್ಲ....ಅಂದ ಹಾಗೆ...ಮಗು ಪ್ರವೇಶ ಪರೀಕ್ಷೆಯಲ್ಲಿ ಪಾಸಾದರೂ ನೀವು ಸೂಟ್ಕೇಸ್ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ...’’<br />ಕಾಸಿ ನಿಂತ ನೆಲ ಕಂಪಿಸಿತು ‘‘ಸಾರ್ ಅದ್ಯಾವುದು...ಸೂಟ್ಕೇಸ್ ಪರೀಕ್ಷೆ...’’<br />ಪ್ರಿನ್ಸಿಪಾಲರು ವಿವರಿಸತೊಡಗಿದರು ‘‘ನೋಡ್ರಿ...ನಮ್ಮ ತಕ್ಕಡಿಯೊಂದಿದೆ. ಅದರಲ್ಲಿ ನೀವು, ನಿಮ್ಮ ಹೆಂಡತಿ ಮತ್ತು ನಿಮ್ಮ ಮಗು ಕುಳಿತುಕೊಳ್ಳಬೇಕು. ಮತ್ತು ಇನ್ನೊಂದು ತಟ್ಟೆಯಲ್ಲಿ ನಿಮ್ಮ ಭಾರದ ಸೂಟ್ಕೇಸ್ ಇಡಬೇಕು...’’<br />‘‘ಸೂಟ್ಕೇಸ್ನ್ನು ಏನು ಮಾಡುತ್ತೀರಿ ಸಾರ್...’’ ಕಾಸಿ ಅಚ್ಚರಿಯಿಂದ ಕೇಳಿದ.<br />‘‘ಸೂಟ್ಕೇಸನ್ನು ನಿಮಗೇ ವಾಪಾಸ್ ಕೊಡುತ್ತೇವೆ. ಅದರೊಳಗಿರುವ ಹಣವನ್ನು ನಾವು ತೆಗೆದುಕೊಳ್ಳುತ್ತೇವೆ...’’ ಪ್ರಿನ್ಸಿಪಾಲರು ವಿವರಿಸಿದರು.<br />‘‘ಅಂದರೆ ಸೂಟ್ಕೇಸ್ನೊಳಗೆ ನಮ್ಮಷ್ಟು ಭಾರ ತೂಗುವ ನೋಟುಗಳನ್ನು ಇಡಬೇಕೋ...’’ ಕಾಸಿ ಒಮ್ಮೆಲೆ ಎದ್ದು ನಿಂತ.<br />‘‘ಹೂಂ...ಎಲ್ಲವೂ ಒಂದು ಸಾವಿರ ರೂಪಾಯಿಯ ನೋಟಾಗಿರಬೇಕು....’’ ಪ್ರಿನ್ಸಿಪಾಲರು ಒತ್ತಿ ಹೇಳಿದರು.<br />ಕಾಸಿ ಎದ್ದು ನಿಂತ ‘‘ಸಾರ್ ಬರುತ್ತೇನೆ....ನಮಸ್ಕಾರ’’ ಅಚ್ಚ ಕನ್ನಡದಲ್ಲಿ ಹೇಳಿದ.<br />ಪ್ರಿನ್ಸಿಪಾಲ್ ಸಿಟ್ಟಾದರು ‘‘ಏನ್ರೀ...ನಿಮಗೆ ಕನ್ನಡ ಬರುತ್ತೆ. ನಿಮ್ಮ ಮಗುವನ್ನು ಸೇರಿಸಿಕೊಳ್ಳೋದಕ್ಕೆ ಆಗಲ್ಲ...ಗೆಟ್ ಔಟ್...’’<br />ಕಾಸಿ ಹೇಳಿದ ‘‘ಹೌದು. ನನಗೆ ಕನ್ನಡ ಬರುತ್ತೆ. ಈವರೆಗೆ ನನಗೆ ಕನ್ನಡ ಬರದ್ದಕ್ಕೆ ನನ್ನ ಬಗ್ಗೆ ಕೀಳರಿಮೆ ಇತ್ತು. ಇವತ್ತು ನಿಮ್ಮನ್ನು ನೋಡಿದ ಬಳಿಕ ನನಗೆ ಕನ್ನಡ ಬರತ್ತೆ, ಇಂಗ್ಲಿಷ್ ಬರಲ್ಲ ಎಂದು ಹೆಮ್ಮೆಯಾಗತ್ತೆ...’’ ಎಂದು ಅಂಗಳ ತಲುಪಿದ. ಅಲ್ಲಿ ನೋಡಿದರೆ ಅಂಗಳದಲ್ಲಿ ಬಿಸಿಲಲ್ಲಿ ಒಬ್ಬ ಬಡಪಾಯಿ ಮಹಿಳೆ ಭಿಕ್ಷೆ ಬೇಡುತ್ತಿತ್ತು. ‘‘ಏನಮ್ಮ...ಈ ಬಿಸಿಲಲ್ಲಿ ಕೂತು ಭಿಕ್ಷೆ ಬೇಡುತ್ತೀಯಲ್ಲ...’’ ಕಾಸಿ ಕೇಳಿದ.<br />‘‘ಮೊನ್ನೆ ಮೊನ್ನೆ ಆ ಶಾಲೆಯ ಜಗಳಿಯಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದೆ ಕಣಪ್ಪ....ಇದೀಗ ಸುಪ್ರೀಂಕೋರ್ಟ್ ಆದೇಶ ಆಗಿದೆ. ಜಗಳಿಯಲ್ಲೂ ಕೂರಬಾರದು. ಬೇಕಾದರೆ ಅಂಗಳದಲ್ಲಿ ಕೂತು ಭಿಕ್ಷೆ ಬೇಡಬಹುದು ಅಂತ...’’ ಮಹಿಳೆ ಹೇಳಿತು.<br />‘‘ಯಾರಮ್ಮ ನೀನು?’’ ಕಾಸಿ ಕೇಳಿದ.<br />‘‘ಇನ್ಯಾರೂ ಅಂತ ತಿಳ್ಕಂಡೆ? ನಾನಪ್ಪ ನಿನ್ನ ತಾಯಿ ಕನ್ನಡಮ್ಮ....’’</span></b></span></div>
chelayyahttp://www.blogger.com/profile/07284069495860642375noreply@blogger.com0tag:blogger.com,1999:blog-917944624704559944.post-48775580799390423962014-04-13T00:58:00.002-07:002014-04-13T00:58:41.790-07:00 ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://3.bp.blogspot.com/-Jz2e_L1Fx-Y/U0pDbn8zC9I/AAAAAAAAAKk/13KIcSDOnNk/s1600/bhatkal.jpg" imageanchor="1" style="margin-left: 1em; margin-right: 1em;"><img border="0" src="http://3.bp.blogspot.com/-Jz2e_L1Fx-Y/U0pDbn8zC9I/AAAAAAAAAKk/13KIcSDOnNk/s1600/bhatkal.jpg" height="239" width="320" /></a></div>
<span style="color: purple;"><span style="font-size: large;"><b> ವಾರ್ತಾಭಾರತಿ ದೈನಿಕದರವಿವಾರ - ಏಪ್ರಿಲ್ -13-2014ರ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ </b></span></span><br />
<span style="font-size: large;"><b><span style="color: blue;"><br /></span></b></span><span style="font-size: large;"><b><span style="color: blue;">ವಿಶೇಷ ಸುದ್ದಿ ಏನು ಇಲ್ಲ ಎಂದು ಸಂಪಾದಕೀಯ ವಿಭಾಗದಲ್ಲಿ ಪತ್ರಕರ್ತ ಎಂಜಲು ಕಾಸಿ ಕಂಗಾಲಾಗಿ ಕುಳಿತಿರಲಾಗಿ, ಅದೇ ಹೊತ್ತಿಗೆ ಸಂಪಾದಕರ ಕರೆಯೂ ಮರಣದ ಗಂಟೆಯಂತೆ ಬಾರಿಸಿತು ‘‘ಏನ್ರೀ...ಡೆಡ್ ಲೈನ್ ಹೊತ್ತಾಯಿತು...ಇನ್ನೂ ಲೀಡ್ ಸುದ್ದಿ ಬಂದಿಲ್ಲ....’’<br />‘‘ವಿಶೇಷ ಸುದ್ದಿ ಏನೂ ಇಲ್ಲ ಸಾರ್....ಇಂಟರ್ಯೂ ಮಾಡೋಣ ಅಂದ್ರೆ ಚುನಾವಣಾ ಆಯೋಗ ಬಿಡ್ತಾ ಇಲ್ಲ ಸಾರ್....’’ ಕಾಸಿ ತಡಬಡಿಸಿ ಉತ್ತರಿಸಿದ.<br />‘‘ಗುಪ್ತಚರ ಇಲಾಖೆಗೆ ಫೋನ್ ಮಾಡ್ರಿ... ಯಾಸಿನ್ ಭಟ್ಕಳನ ಕುರಿತಂತೆ ಏನಾದ್ರೂ ಸುದ್ದಿ ಇದ್ದೇ ಇರತ್ತೇ...ಅದನ್ನು ಅವರು ಗುಪ್ತವಾಗಿ ನಿಮ್ಮಿಂದಿಗೆ ಹಂಚಿಕೊಳ್ಳುತ್ತಾರೆ....’’ ಸಂಪಾದಕರು ಸಲಹೆ ನೀಡಿದ್ದೇ...ಪತ್ರಕರ್ತ ಎಂಜಲು ಕಾಸಿ ಗುಪ್ತಚರ ಇಲಾಖೆಗೆ ಫೋನ್ ಮಾಡಿದ.<br />ಅತ್ತಲಿಂದ ಮಾತು ಬಾಂಬಿನಂತೆ ತೂರಿ ಬಂತು ‘‘ಹಲೋ...ಇಂಟೆಲಿಜೆಂಟ್ಸ್ ವಿಭಾಗ...ಗುಪ್ತ್ ಚರ ಇಲಾಖೆ...ಯಾಸಿನ್ ಭಟ್ಕಳ ಮಾತಾಡ್ತಾ ಇದ್ದೇನೆ....ನಿಮಗೇನು ಬೇಕು...’’<br />ಕಾಸಿಯ ಮೈಯೆಲ್ಲ ಕಂಪಿಸಿತು ‘‘ಸಾರ್...ನೀವು ಯಾಸಿನ್ ಭಟ್ಕಳ ಅವ್ರಾ...ನೀವು ಗುಪ್ತಚರ ಇಲಾಖೆಯಲ್ಲಿ ಕುಳಿತು ಅದೇನು ಮಾಡ್ತಾ ಇದ್ದೀರಿ ಸಾರ್...’’ ಅಚ್ಚರಿಯಿಂದ ಕೇಳಿದ.<br />‘‘ನಾನು ಗುಪ್ತಚರ ಇಲಾಖೆಯ ಪತ್ರಿಕಾವಕ್ತಾರ ಕಣ್ರೀ....ಎಲ್ಲ ಪತ್ರಿಕೆಗಳಿಗೆ ಗುಪ್ತವಾಗಿ ನನ್ನ ಕುರಿತ ಸುದ್ದಿಗಳನ್ನು ಹಂಚುವುದೇ ನನ್ನ ಕೆಲಸ. ಇತ್ತೀಚೆಗೆ ಸುದ್ದಿಸಂಸ್ಥೆಗಳೆಲ್ಲ ಸುದ್ದಿಗಳಿಲ್ಲದೆ ಬರಗಾಲ ಎದುರಿಸುತ್ತಿದೆ. ಆದುದರಿಂದ ಸರಕಾರವೇ ನನ್ನನ್ನು ಪ್ರತಿ ದಿನ ಮುಖ್ಯ ಸುದ್ದಿಯನ್ನು ಕೊಡಲು ಗುಪ್ತಚರ ಇಲಾಖೆಯಲ್ಲಿ ನೇಮಕ ಮಾಡಿದೆ...ಲೀಡ್ ಸುದ್ದಿ ಇಲ್ಲದೆ ಕಂಗಾಲಾಗಿರುವ ಪತ್ರಿಕೆಗಳಿಗೆ ಸುದ್ದಿ ಹಂಚುವುದೇ ನನ್ನ ಕೆಲಸ ಕಣ್ರೀ...ಹೇಳಿ...ನಿಮಗೆ ಯಾವ ಥರ ಸುದ್ದಿ ಬೇಕು? ಲೀಡ್ ಸುದ್ದಿ ಬೇಕೋ...ಚುನಾವಣಾ ಸುದ್ದಿ ಬೇಕೋ...ಹವಾಮಾನ ಸುದ್ದಿ ಬೇಕೋ...ಒಳಗಿನ ಪುಟಕ್ಕೆ ತುಂಬಿಸಲು ಸುದ್ದಿ ಬೇಕೋ...ಮ್ಯಾಗಸಿನ್ಗೆ ವರ್ಣರಂಜಿತ ಲೇಖನ ಬೇಕೋ...ಅದೇನೇ ಬೇಕಾದರೂ ನಾನು ಕೊಡುತ್ತೇನೆ...’’<br />ಕಾಸಿಯ ಹೆಗಲ ಮೇಲಿರುವ ಭಾರವೆಲ್ಲ ಇಳಿದಂತಾಯಿತು ‘‘ಸಾರ್...ಫ್ರಂಟ್ ಪೇಜ್ಗೆ ಮುಖ್ಯ ಸುದ್ದಿ ಇಲ್ಲಾ ಸಾರ್...ಏನಾದರೂ...ಕೊಡಿ...’’<br />‘‘ಇದು ಮೂಲವ್ಯಾಧಿಯ ಸುದ್ದಿ...ಆದುದರಿಂದ ಸ್ವಲ್ಪ ಜಾಗರೂಕತೆಯಿಂದ ಮೂಲಗಳಿಂದ ಎಂದು ಬಳಸಿ ಈ ಸುದ್ದಿಯನ್ನು ನೀವು ನೀಡಬೇಕಾಗುತ್ತದೆ’’ ಯಾಸಿನ್ ಭಟ್ಕಳ ಹೇಳಿದ.<br />‘‘ಖಂಡಿತಾ ಸಾರ್...ನಾವು ಮೂಲ ವ್ಯಾಧಿ ಸುದ್ದಿಗಳನ್ನು ಮಾತ್ರ ಹಾಕೋದು ಸಾರ್. ಮೂಲಗಳಿಂದ ತಿಳಿದು ಬಂದಿದೆ, ಮೂಲಗಳು ತಿಳಿಸಿವೆ, ಮೂಲದಿಂದ ಬಂದಿದೆ...ಮುಖ್ಯವಾಗಿ ನಮಗೆ ಗುಪ್ತಚರ ಇಲಾಖೆಯ ಮೂಲವ್ಯಾಧಿ ಎಂದರೆ ತುಂಬಾ ಇಷ್ಟ ಸಾರ್...’’ ಕಾಸಿ ಹೇಳಿದ.<br />‘‘ಸರಿ ಹಾಗಾದರೆ ಬರೆದುಕೊಳ್ಳಿ...ನಾಗಸಾಕಿ, ಹಿರೋಷಿಮಾ ಸ್ಫೋಟದಲ್ಲಿ ತನ್ನ ಕೈವಾಡ ಇರುವುದು ನಿಜ ಎನ್ನುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ. ಈ ಸ್ಫೋಟ ನಡೆಸುವ ಒಂದು ದಿನದ ಹಿಂದೆ ಉಸಾಮ ಬಿನ್ ಜೊತೆಗೆ ಮಾತುಕತೆ ನಡೆಸಿದ ಭಟ್ಕಳ್, ಅಂತಹದೇ ಸ್ಫೋಟವನ್ನು ಗುಜರಾತ್ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದೂ ಮೂಲಗಳು ಹೇಳಿವೆ....’’<br />‘‘ಸಾರ್...ಅದ್ಭುತ ಸುದ್ದಿಸಾರ್...ಇದು ನಿಜವಾ ಸಾರ್...?’’ ಕಾಸಿ ರೋಮಾಂಚನದಿಂದ ಕೇಳಿದ.<br />‘‘ನಿಮಗೆ ನಿಜ ಬೇಕಾ, ಸುದ್ದಿ ಬೇಕಾ?’’ ಆ ಕಡೆಯಿಂದ ಭಟ್ಕಳ್ ಕೇಳಿದ. ‘‘ನಿಜ ಯಾರಿಗೆ ಬೇಕು ಸಾರ್? ನಮಗೆ ಸುದ್ದಿ ಬೇಕು...ನಿಮ್ಮ ಕುರಿತಂತೆ ಇನ್ನಷ್ಟು ಗುಪ್ತಚರ ಮೂಲಗಳನ್ನು ನಮ್ಮ ಕಡೆಗೆ ಬಿಟ್ಟುಬಿಡಿ ಸಾರ್...ನಾವು ಬದ್ಕೋತೀವಿ...’’ ಕಾಸಿ ಅಂಗಲಾಚಿದ.<br />‘‘ಇಂದು ವಾತಾವರಣ ತೀವ್ರ ಬಿಸಿಯೇರಿದ್ದು, ಇದರಲ್ಲಿ ತನ್ನ ಕೈವಾಡವಿರುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಆ ಕಡೆಯಿಂದ ಭಟ್ಕಳ್ ಹೇಳಿದ.<br />‘‘ಸಾರ್...ಇದು ಹವಾಮಾನ ವರದಿ ಕಾಲಂನಲ್ಲಿ ಹಾಕ್ಕೋಬಹುದು ಸಾರ್...ನಮಗೆ ಫ್ರಂಟ್ ಪೇಜ್ ಸುದ್ದಿ ಬೇಕು ಸಾರ್...’’<br />‘‘ನೋಡಿ...ನೀವು ಪಿಟಿಐ ಸಹಿತ ವಿವಿಧ ಸುದ್ದಿ ಸಂಸ್ಥೆಗಳಿಗೆ ಸದಸ್ಯರಾಗುವಂತೆ ನಿಮ್ಮ ಹತ್ತಿರದ ಆರೆಸ್ಸೆಸ್ ಕಚೇರಿಗೆ ಸದಸ್ಯರಾಗಿ ಅಥವಾ ನಿಮ್ಮ ಪತ್ರಿಕೆಗಳ ಹೆಸರನ್ನು ಅಲ್ಲಿ ನಮೂದಿಸಿ. ನಾವು ಎಲ್ಲರಿಗೂ ಕರೆದು ಸುದ್ದಿಗಳನ್ನು ಕೊಡಲು ಸಾಧ್ಯವಿಲ್ಲ. ಆರೆಸ್ಸೆಸ್ ಕಚೇರಿಯಿಂದಲೇ ಜೆರಾಕ್ಸ್ ಕಾಪಿಗಳು ಬೇಕಾದಷ್ಟು ಸಿಗುತ್ತವೆ. ಅಲ್ಲಿಂದಲೇ ಸಿಗುತ್ತದೆ...ನೀವು ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ....’’<br />‘‘ಆದರೆ ಆರೆಸ್ಸೆಸ್ ಕಚೇರಿಯವರು ಕೊಡೋದಕ್ಕಿಂತ ಇಂಟೆಲಿಜೆನ್ಸ್ ಕಚೇರಿ ಕೊಟ್ಟರೇನೇ ಅದಕ್ಕೆ ವ್ಯಾಲ್ಯೂ ಜಾಸ್ತಿ ಸಾರ್...’’ ಕಾಸಿ ಫೋನ್ನಲ್ಲೇ ಹಲ್ಲು ಕಿರಿದ.<br />‘‘ಯಾರು ಕೊಟ್ರೆ ನಿಮಗೇನ್ರೀ...ನೀವು ಮೂಲವ್ಯಾಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ....ಗುಪ್ತಚರ ಮೂಲಗಳು ಎಂದೇ ಬರೆಯಿರಿ. ‘‘ಮೋದಿಯ ವಿರುದ್ಧ ಸೊಳ್ಳೆಗಳ ಮೂಲಕ ಮಾರಕ ರೋಗವನ್ನು ಹಂಚಿ, ಹತ್ಯೆಗೆ ಯಾಸಿನ್ ಭಟ್ಕಳ ಸಂಚು ರೂಪಿಸಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಬರೆಯಿರಿ....’’<br />‘‘ಸಾರ್...ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?’’ ಕಾಸಿ ಅಚ್ಚರಿಯಿಂದ ಕೇಳಿದ.<br />‘‘ಹೌದು ಕಣ್ರೀ...ಆ ಸೊಳ್ಳೆಗಳಿಗೆ ಇಂಡಿಯನ್ ಮುಜಾಹಿದ್ನ ಮೂಲಕ ತರಬೇತಿ ಕೊಡಿಸಿ, ಅದನ್ನು ಮೋದಿಯ ಬಳಿಗೆ ಕಳುಹಿಸಿ ಅದರಿಂದ ಕಚ್ಚಿಸುವ ಒಂದು ದೊಡ್ಡ ಸಂಚನ್ನು ಯಾಸಿನ್ ಭಟ್ಕಳ್ ರೂಪಿಸಿದ್ದ. ಭಟ್ಕಳ್ ಬಂಧನದಿಂದ ಅದು ವಿಫಲವಾಯಿತು ಎಂದು ಗುಪ್ತಚರ ಮೂಲಗಳ ಅಧಿಕಾರಿಗಳು ತಿಳಿಸಿದ್ದಾರೆ....’’<br />‘‘ಸಾರ್... ಯಾಸಿನ್ ಭಟ್ಕಳ್ ಬಂಧನದ ಬಳಿಕ ಆ ಸೊಳ್ಳೆಗಳು ಏನಾಯಿತು ಸಾರ್? ಅವುಗಳನ್ನು ಬಂಧಿಸಲಿಲ್ಲವೆ?’’<br />‘‘ಅವುಗಳ ಹುಡುಕಾಟ ತೀವ್ರವಾಗಿದೆ. ಕೆಲವು ಸೊಳ್ಳೆಗಳು ತಪ್ಪಿಸಿಕೊಂಡು ಪಾಕಿಸ್ತಾನ ಸೇರಿವೆ. ಇನ್ನು ಕೆಲವು ಭಟ್ಕಳದಲ್ಲಿ ನೆಲೆಯೂರಿರುವ ಸಾಧ್ಯತೆ ಇದೆ. ಅದನ್ನು ಬಂಧಿ ಸಲು ವ್ಯಾಪಕ ಕಾರ್ಯಾಚರಣೆ ನಡೆದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಭಟ್ಕಳ್ ಆ ಕಡೆಯಿಂದ ಸ್ಕೂಪ್ ಸುದ್ದಿಯನ್ನು ಹೇಳಿದ.<br />ಕಾಸಿಗೆ ತುಂಬಾ ಖುಷಿಯಾಯಿತು ‘‘ಸಾರ್...ಒಂದಿಷ್ಟು ಕೃಷಿ ಮಾಹಿತಿಯನ್ನು ನೀಡಿ ಸಾರ್...’’<br /><br />‘‘ಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ರೋಗ ಬರಲು ಯಾಸಿನ್ ಭಟ್ಕಳ್ ರೂಪಿಸಿದ ಸಂಚೇ ಕಾರಣ ಎನ್ನುವುದು ಯಾಸಿನ್ ಭಟ್ಕಳ್ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...ಟೊಮೆಟೋ ಬೆಲೆ ಇಳಿಯುವುದಕ್ಕಾಗಿ ಭಟ್ಕಳ್ ಪಾಕಿಸ್ತಾನಿ ಕೃಷಿಕರ ಜೊತೆಗೆ ಸೇರಿ ಸಂಚು ರೂಪಿಸಿದ್ದು, ಇದರಿಂದಾಗಿ ಕೃಷಿಕರ ಮೂಲಕ ಸರಕಾರದ ವಿರುದ್ಧ ದಂಗೆ ಎಬ್ಬಿಸುವುದು ಭಟ್ಕಳ್ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ...’’ ಕಾಸಿ ಎಲ್ಲವನ್ನೂ ನೋಟ್ ಮಾಡಿಕೊಂಡ. ‘‘ಸಾರ್...ಈ ತಾವು ಪತ್ರಿಕೋದ್ಯಮದಲ್ಲಿ ಯಾವುದಾದರೂ ಡಿಗ್ರಿ ಮಾಡಿದ್ದೀರಾ...’’ ಕಾಸಿ ಅನಗತ್ಯ ಪ್ರಶ್ನೆಯೊಂದನ್ನು ಕೇಳಿದ.<br />‘‘ಹಾಗೇನಿಲ್ಲ ಕಣ್ರೀ...ಪತ್ರಿಕೋದ್ಯಮದಲ್ಲಿ ಡಿಗ್ರಿ ಮಾಡಿದವರಿಂದ ಇಂತಹ ಮೂಲವ್ಯಾಧಿ ಸುದ್ದಿಗಳು ಸಿಗಲು ಸಾಧ್ಯವಿಲ್ಲ. ಮುಖ್ಯವಾಗಿ ಮೂಲವ್ಯಾಧಿ ಪತ್ರಿಕೋದ್ಯಮದ ಬಗ್ಗೆ ಅಪಾರ ಅನುಭವ ಇರಬೇಕಾಗುತ್ತದೆ. ಗುಪ್ತಚರ ಇಲಾಖೆಗಳ ಮೂಲಗಳನ್ನು ಹುಡುಕಿಕೊಂಡು ಅಲ್ಲಿರುವ ಕೆಲವು ಜನಿವಾರದ ಮೂಲಗಳನ್ನು ಪತ್ತೆ ಹಚ್ಚಿ, ಅವರಿಂದ ಕೆಲವು ದೊಗಳೆ ಚಡ್ಡಿ ಮೂಲಗಳನ್ನು ಗುರುತಿಸಿ, ಆ ಚಡ್ಡಿಯೊಳಗೆ ಸುದ್ದಿಗಳನ್ನು ತಮ್ಮದಾಗಿಸಿಕೊಳ್ಳಲು ಅಪಾರ ಅನುಭವ ಬೇಕು ಕಣ್ರೀ...ಯಾವುದಕ್ಕೂ ನೀವು ನಾಳೆಯಿಂದ ಕಚೇರಿಯ ಪಕ್ಕದಲ್ಲಿರುವ ಶಾಖೆಗೆ ಬನ್ನಿ. ಅಲ್ಲಿ ನಾನೇ ನಿಮಗೆ ಇದರ ಕುರಿತಂತೆ ಪಾಠ ಹೇಳಿಕೊಡುತ್ತೇನೆ....’’ ಎಂದದ್ದೇ ಆ ಕಡೆಯಿಂದ ಫೋನ್ ಕಡಿಯಿತು.<br />‘‘ಸಾರ್...ಮುಖಪುಟಕ್ಕೆ ಲೀಡ್ ಸುದ್ದಿ ಸಿಕ್ಕಿತು...’’ ಎಂದು ಎಂಜಲು ಕಾಸಿ ಸಂಪಾದಕರ ಕೊಠಡಿಯೆಡೆಗೆ ಧಾವಿಸಿದ.</span></b></span></div>
chelayyahttp://www.blogger.com/profile/07284069495860642375noreply@blogger.com1